Welcome to Prashantavanam

Saturday, November 26, 2011

ಹೊದ್ದು ಮಲಗಿದ್ದೆನಾ

ಹೊದ್ದು ಮಲಗಿದ್ದೆನಾ ಎಂದಿನಂತೆ?
ಭದ್ರ ನನ್ನಯ ನಾಡು ಏಕೆ ಚಿಂತೆ
ಏನೋ ಸುರಿದಂತೆ ಸಪ್ಪಳಪು ಎಚ್ಚರಿಸಿ
ಹೊರಬಂದು ನೋಡಿದರೆ ಕಣ್ಣೀರಧಾರೆ
ಬಿಕ್ಕಿಹನೆ ವರುಣನೂ ಒಮ್ಮೆ ಮಿಡಿದು
ಮೂರು ವರ್ಷದ ಹಿಂದೆ ಸಾವ ನೆನೆದು|೧|

ಇಂದಿನಾ ದಿನದಲೇ ತಾಜನ್ನ ತೊಳೆದರು
ಗಾಜಂತೆ ಶುಭ್ರದ ಮನಗಳ ಒಡೆದರು
ಎಲ್ಲಿಂದ ತರಲಿ ನಾ ಆ ವೀರ ಯೋಧರ
ಬುದ್ಧಿಹೇಡಿಗಳೆದೆದುರು ಪ್ರಾಣ ತೆತ್ತವರ
ಅಂದಾದ್ರೂ ಸುರಿದಿದ್ರೆ ನನ್ನ ರೋಷವ ತೋರಿ
ಉಳಿಯುತಿತ್ತೇ ಪ್ರಾಣ , ಆ ಜೀವ ಹರಣ ? |೨|

ನಾನೆ ತೆಪ್ಪಗೆ ಇರುವೆ ನೀನಗೇಕೆ ಅಳು ಮಳೆಯೆ
ಸಾಯೊ ಜನರಿಹರೆಂದು ಪ್ರತಿನಿತ್ಯ ಅಳು ಸರಿಯೆ?
ಅಳು ಅವರಿಗಲ್ಲವೋ ನಾಳೆ ಕಾದಿಹ ನಿನಗೆ
ಪಕ್ಕದಲೆ ಹೊಕ್ಕಿರುವ ಹೊಂಚಿರುವ ಉಗ್ರರಿಗೆ
ಕಾಳೂ ಕಾಳಜಿಯಿಲ್ಲ ದೇಶಕ್ಕೆ ಜೀವ ನೀ
ಹೋಗಿರುವ ಅಣ್ಣನೇ ಮರೆತುಬಿಡೋ ಜನ್ಮ ನೀ|೩|

ಏಕೋ ನಿನಗೀ ಜನ್ಮ ಬಾಲ, ಅದು ಸಾಲ
ಇದು ಸಾಲ ಎಂದು ದೇಶವ ದೂರು
ಇಲ್ಲಿ ಸರಿಯಿಲ್ಲೆಂದು ಬೇರೆ ಕಡೆ ಹಾರು
ನಿನಗಾಗಿ ಸತ್ತವರು, ಸಾಯುತಿರುವರು ನೋಡ
ಗಡಿಯಲ್ಲಿ , ತಾಜಲ್ಲಿ, ಗುಂಡಿಗೆದೆಯೊಡ್ಡುತ್ತ
ಹಿಂದೆ ಹಾರುವ ಗುಂಡಿಗೂ ಗುಂಡಿಗೆಯ ಒಡ್ಡಿ
ಮೇಲೆತ್ತಿ ಹಿಡಿದಿಹರು ನಿನ್ನಂಥ ಬಂಡೆಗಳ
ದೇಶಪ್ರೇಮವೂ ಇಲ್ಲ, ಹನಿಯೂ ಕನಿಕರವಿಲ್ಲ
ನೆನೆಯೋ ಮತ್ತೊಮ್ಮೆ ಆ ಸೈನಿಕ
ಮರೆಯುದಿರು ರಕ್ಷಕನ ಕೊನೆಯ ತನಕ|೪|

3 comments:

  1. ಪ್ರಶಾಂತವನದಲ್ಲಿ ಮಡಿದ ಯೋಧರಿಗೆ ಮಿಡಿದ ನಮನ! ಚೆನ್ನಾಗಿದೆ ಕವನ :)

    ReplyDelete
  2. ಧನ್ಯವಾದಗಳು ಹೆಗ್ಡೇರೆ :-)

    ReplyDelete
  3. ಸ್ವಾಗತ ಪ್ರಶಾಂತವನಕ್ಕೆ :-)

    ReplyDelete