Tuesday, April 14, 2020

ಏಪ್ರಿಲ್ ೧೪ ರಂದು ಕರೋನಾ ವಿರುದ್ಧ ಹೋರಾಡಲು ದೇಶದ ಜನತೆಗೆ ಕರೆಕೊಟ್ಟ ಪ್ರಧಾನಿಯವರ ಭಾಷಣದಲ್ಲಿನ ಸಪ್ತ ಸೂತ್ರಗಳು

೧. ನಿಮ್ಮ ಮನೆಯಲ್ಲಿರೋ ಹಿರಿಯ ಜೀವಗಳನ್ನು ಜಾಗೃತೆಯಿಂದ ನೋಡಿಕೊಳ್ಳಿ. ಅವರಿಗೆ ಈಗಾಗಲೇ ಯಾವುದಾದರೂ ರೋಗಗಳಿದ್ದರೆ ಅವರಿಗೆ ಕೊರೋನಾ ಸೋಂಕು ತಗುಲದಂತೆ ಇನ್ನೂ ಹೆಚ್ಚಿನ ಎಚ್ಚರಿಕೆಯಿಂದ ನೋಡಿಕೊಳ್ಳಿ.
೨. ಲಾಕ್ ಡೌನ್ ಮತ್ತು ಸೋಷಿಯಲ್ ಡಿಸ್ಟೆಂಸಿಂಗ್ ಗಳನ್ನು ಪಾಲಿಸಿ. ಮನೆಯಲ್ಲೇ ಮಾಡಿದ ಫೇಸ್ ಕವರ್, ಮಾಸ್ಕ್ ಗಳನ್ನು ಬಳಸಿ
೩. ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಯುಷ್ /ಆರೋಗ್ಯ ಇಲಾಖೆಯವರು ಹೇಳಿದ ಸೂಚನೆಗಳನ್ನು ಪಾಲಿಸಿ. ಬಿಸಿನೀರು ಕುಡಿಯೋದು ಇತ್ಯಾದಿ
೪. ಕರೋನಾ ಸಂಕ್ರಮಣದ ಹರಡುವಿಕೆಯನ್ನು ತಡೆಯಲು "ಆರೋಗ್ಯಸೇತು" ಮೊಬೈಲ್ ಆಪನ್ನು ಡೌನ್ ಲೋಡ್ ಮಾಡಿ ಮತ್ತು ಇತರರಿಗೂ ಅದನ್ನು ಡೌನ್ ಲೋಡ್ ಮಾಡಲು ಹೇಳಿ.
೫. ಎಷ್ಟಾಗತ್ತೋ ಅಷ್ಟು ಬಡ ಕುಟುಂಬಗಳಿಗೆ, ಅವರ ದೈನಂದಿನ ಊಟಕ್ಕೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.
೬. ನಿಮ್ಮ ವ್ಯಾಪಾರ, ಉದ್ದಿಮೆಗಳಲ್ಲಿ ಸ್ವಲ್ಪ ಮಾನವೀಯತೆಯನ್ನು ತೋರಿ. ಯಾರನ್ನೂ ಕೆಲಸದಿಂದ ತೆಗೆಯಬೇಡಿ.
೭. ದೇಶದಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿರುವ ಪೋಲೀಸ್, ಡಾಕ್ಟರುಗಳು, ನರ್ಸುಗಳನ್ನು ಗೌರವಿಸಿ.

ಕೊರೋನಾ ವಿರುದ್ಧ ಹೋರಾಡೋಕೆ ಈ ಸಪ್ತಪದಿಯನ್ನು ೩ ಮೇನ ವರೆಗೆ ಪಾಲಿಸಿದರೆ ಕೊರೋನಾ ವಿರುದ್ಧ ನಮ್ಮ ಹೋರಾಟದಲ್ಲಿ ಜಯ ಸಾಧ್ಯ. ಎಲ್ಲಿದ್ದೀರೋ, ಅಲ್ಲೇ ಇರಿ. ಸುರಕ್ಷಿತವಾಗಿರಿ.