Showing posts with label Science. Show all posts
Showing posts with label Science. Show all posts

Friday, December 18, 2015

how to recover your 4 GB pendrive if it is showing as 970 MB volume

Hi Friends,

If you have used your 4 GB pen drive to burn a bootable image for operating system and later that pendrive is showing as 970 MB instead of 4GB, follow below steps to recover it back to its original size

1. Right click on your computer > Manage>  Storage> Disk Management

See how much Gb is shown for your pen drive.
It might be showing space in pendrive as 970MB and remaining as unallocated space.


Right click on unallocated space, if you get format option, you can format that and merge with the other volume to get total 4 GB
If you are not getting , go the software which you used to burn bootable image into the pendrive
Eg: poweriso >tools> cleanup USB pendrive

once that is done, you will get 4GB back


Regards
Prashasti


Tuesday, March 25, 2014

ಬೆಂಗಳೂರ್ಯಾಕೆ ಬಿಸಿ ಬಿಸಿ ?



ಉಷ್ಣಾಂಶ ಮೂವತ್ತೈದು ದಾಟಿ ಬೆಂದಕಾಳೂರಿನ ಜನರೆಲ್ಲಾ ಸೆಖೆ ಸೆಖೆಯೆಂದು ಬೊಬ್ಬೆ ಹಾಕುವಂತಾಗಿದೆ. ಮಾರ್ಚ್ ಮೂರನೇ ವಾರದಲ್ಲೇ ತಾಳಲಾರನೀ ಸೆಖೆ ಯಾವಾಗ ಬರುತ್ತೋ ಮಳೆಗಾಲ ಎನ್ನುವಂತಾಗಿದೆ. ಬೆಂಗಳೂರಂದ್ರೆ ಉದ್ಯಾನನಗರಿ ಇಲ್ಲಿ ಯಾವತ್ತೂ ಮೂವತ್ತು ದಾಟಿದ್ದೇ ಇಲ್ಲ ತಾಪ. ಈಗ ಕಾಲ ಕೆಟ್ಟೋಯ್ತಪ ಅಂತ ಹಿರಿಯರೆಲ್ಲಾ ಶಾಪ ಹಾಕುವಂತಾಗಿದೆ. ಬೇಸಿಗೆಯೆಂದ್ರೆ ಸೆಖೆ ಸಹಜವಪ್ಪಾ. ಆದ್ರೆ ಈ ಸಲ ಸ್ವಲ್ಪ ಜಾಸ್ತಿನೇ ಸೆಖೆ ಅನಿಸ್ತಿದೆ ಅಲ್ವಾ ಅನ್ನೋ ಅಭಿಪ್ರಾಯದ ಜೊತೆ ಬೆಂಗಳೂರಿನ ಸೆಖೆ ಹೀಗೆ ಇದ್ದಕ್ಕಿದ್ದಂಗೆ ಏರಿದ್ದೆಂಗೆ ಅನ್ನೋ ಪ್ರಶ್ನೆಯೂ ಕೆಲವರಲ್ಲಿ. ಈ ಪ್ರಶ್ನೆಗಳಿಗೊಂದು ಉತ್ತರ ಹುಡುಕೋ ಪ್ರಯತ್ನವೇ ಈ ಲೇಖನ.

ಬೆಂಗಳೂರಿನ ಸೆಖೆ ಜಾಸ್ತಿಯಾಗಿದ್ದಕ್ಕೆ ಹಲವು ಕಾರಣ ಕೊಡ್ತಾರೆ. ಅದರಲ್ಲಿ ಮೊದಲನೆಯದು ಹೀಟ್ ಐಲ್ಯಾಂಡ್ ಎಫೆಕ್ಟ್ ಅಥವಾ ಉಷ್ಣ ದ್ವೀಪ ಪ್ರಭಾವ.

ಉಷ್ಣದ್ವೀಪ ಪ್ರಭಾವ:
ನಗರವೊಂದರ ತಾಪ ಅದರ ಸುತ್ತಮುತ್ತಲಿರೋ ಹಳ್ಳಿಗಳಿಗಿಂತ ಜಾಸ್ತಿಯಿರೋದನ್ನ ಉಷ್ಣದ್ವೀಪ ಪ್ರಭಾವ ಅನ್ನುತ್ತಾರೆ. ಈ ಪದವನ್ನು  ೧೮೧೦ರಲ್ಲಿ ಮೊದಲು ಬಳಸಿದ್ದು ಲೂಕ್ ಹಾವರ್ಡ್ ಎಂಬ ಹವಾಮಾನ ತಜ್ಞ. ಹೌದು. ನಗರದಲ್ಲೇ ಉಷ್ಣಾಂಶ ಜಾಸ್ತಿಯಾಕಿರ್ಬೇಕು ಅಂದ್ರೆ ಅದಕ್ಕೆ ಮತ್ತೊಂದಿಷ್ಟು ಕಾರಣಗಳಿವೆ. ಮೊದಲನೆಯದು ಇಲ್ಲಿನ ಕಾಂಕ್ರೀಟೀಕರಣ. ಆ ಬಿಲ್ಡಿಂಗು, ಈ ಬಿಲ್ಡಿಂಗು, ರಸ್ತೆ, ಪುಟಪಾತು ಮತ್ತೆ ಬಿಲ್ಡಿಂಗು ಅಂತ ನಗರದ ಇಂಚಿಚೂ ಬಿಡದೇ ಮಣ್ಣೇ ಕಾಣದಂತೆ ಕಾಂಕ್ರೀಟಿನಿಂದ ಮುಚ್ಚಲಾಗ್ತಾ ಇದೆ. ನಗರೀಕರಣದ ಹೆಸರಲ್ಲಿ ಇರೋಬರೋ ಮರಗಳನ್ನೆಲ್ಲಾ ಕಡಿದು ಬೆಂಗ್ಳೂರನ್ನೇ ಒಂಥರಾ ಕಾಂಕ್ರೀಟ್ ಕಾಡಾಗಿಸ್ತಾ ಇದ್ದೀವಿ. ಇದರಿಂದಾಗ್ತಿರೋ ಅನಾಹುತಗಳು ಒಂದೆರಡಲ್ಲ. ಸಣ್ಣ ತರಂಗಾಂತರದ (short wave) ಶಾಖವನ್ನು ಬೆಳಗಿಂದ ಸಂಜೆಯವರೆಗೆ ಹೀರಿಕೊಳ್ಳೋ ಈ ಕಾಂಕ್ರೀಟ್ ಮೇಲ್ಮೈ, ಕಟ್ಟಡಗಳು ರಾತ್ರೆ ಹೊತ್ತು ನಿಧಾನವಾಗಿ ಈ ಶಾಖವನ್ನು ದೊಡ್ಡ ತರಂಗಾಂತರದ( long wave) ಶಾಖ ಶಕ್ತಿಯಾಗಿ ಹೊರಬಿಡುತ್ತವೆ. ಹಾಗಾಗಿ ರಾತ್ರಿ ತಣ್ಣಗಾಗಲು ಸಿಕ್ಕಾಪಟ್ಟೆ ಹೊತ್ತು ಬೇಕಾಗುತ್ತೆ.  ಮತ್ತೆ ಈ ಎತ್ತೆತ್ತರದ ಕಟ್ಟಡಗಳಿವೆಯೆಲ್ಲಾ ಅವುಗಳಿಂದ ಸೂರ್ಯನ ಕಿರಣಗಳು ಹಲವಾರು ಹಂತದಲ್ಲಿ ಪ್ರತಿಫಲನಗೊಳ್ಳಲು ಸಹಾಯವಾಗತ್ತೆ. ಈ ರೀತಿಯ ನಿರಂತರ ಪ್ರತಿಫಲನದಿಂದ ಶಾಖ ಬೇಗ ಜಾಸ್ತಿಯಾಗತ್ತೆ . ದೊಡ್ಡ ಕಟ್ಟಡಗಳ ಶಾಖ ಹೊರಬರೋಕೆ ಬೇಕಾದ ದೊಡ್ಡ ಸಮಯದಿಂದ ಸೂರ್ಯ ಮುಳುಗಿ ಸುಮಾರು ಹೊತ್ತಿನ ಮೇಲೂ ವಾತಾವರಣದ ಸೆಖೆ ಹಾಗೇ ಇರತ್ತೆ. ಇದನ್ನೇ ಅರ್ಬನ್ ಕಾನ್ಯಾನ್ ಎಫೆಕ್ಟ್ (urban canyon effect) ಎಂದೂ ಹೇಳುತ್ತಾರೆ. ಇನ್ನು ಈ ದೊಡ್ಡ ದೊಡ್ಡ ಕಟ್ಟಡಗಳು ಗಾಳಿಯ ಸಹಜ ಸಂಚಾರಕ್ಕೆ ಅಡ್ಡವಾಗಿ ನಗರದ ಉಷ್ಣ ಉಳಿದ ಪ್ರದೇಶದ ತಂಗಾಳಿಯೊಂದಿಗೆ ಮಿಶ್ರವಾಗಿ ನಗರವೂ ತಣ್ಣಗಾಗೋದನ್ನ ನಿಧಾನಿಸುತ್ತೆ. ಕಟ್ಟಡಗಳೇ ಬಿಸಿಯಾಗಿಸ್ತಿರೋದು ಒಂದು ಕತೆ. ಜೊತೆಗೆ ಈ ಕಟ್ಟಡಗಳೊಳಗಿರೋ ಜನರನ್ನು  ತಣ್ಣಗಿರೋಸೋಕೆ ಬೇಕಾದ ಏಸಿಗಳದ್ದು ಇನ್ನೊಂದು ಕತೆ ! ಈ ಏಸಿಗಳಲ್ಲಿರೋ ಕ್ಲೋರೋಪ್ಲೋರೋ ಕಾರ್ಬನ್(ಸಿ.ಎಫ್.ಸಿ) ಮತ್ತು ಹೈಡ್ರೋಫ್ಲೋರೋಕಾರ್ಬನ್ಗಳೆಂಬ ಅನಿಲಗಳು ನಮ್ಮ ಭೂಮಿಯನ್ನ ಸೂರ್ಯನ ನೇರಳಾತೀತ ಕಿರಣಗಳಿಂದ ತಡಿತಾ ಇರೋ ಓಜೋನ್ ಪದರಕ್ಕೆ ತೂತು ಕೊರೆಯೋದಲ್ದೇ ಉಷ್ಣಾಂಶ ಹೆಚ್ಚೋದಕ್ಕೂ ಕಾರಣವಾಗತ್ತೆ.

ಕಮ್ಮಿಯಾಗುತ್ತಿರೋ ಹಸಿರ ಹೊದಿಕೆ:
ಇನ್ನು ಈ ಕಾಂಕ್ರೀಟೀಕರಣದಿಂದ ನಾಶವಾದ ಪರಿಸರದ ಬಗ್ಗೆ. ಮರಗಳಿದ್ದರೆ ಅವುಗಳಿಂದ ಆವಿಯಾಗೋ ನೀರು ಒಂದು ತಣ್ಣನೆಯ ವಾತಾವರಣವನ್ನು ನಿರ್ಮಿಸುತ್ತೆ. ಜೊತೆಗೆ ಅವುಗಳ ದ್ಯುತಿಸಂಶ್ಲೇಷಣೆ(photo synthesis) ಸಮಯದಲ್ಲಿ ಹೀರಿಕೊಳ್ಳೋ ಇಂಗಾಲದ ಡೈ ಆಕ್ಸೈಡ್ ವಾತಾವರಣದಲ್ಲಿನ ಇಂಗಾಲದ ಅಂಶವನ್ನು ಕಡಿಮೆ ಮಾಡುತ್ತದೆ. ಈ ಇಂಗಾಲವೂ ಹಸಿರು ಮನೆ ಪರಿಣಾಮ ಉಂಟುಮಾಡಿ ಭೂತಾಪ ಹೆಚ್ಚುಮಾಡೋ ಅನಿಲ. ಅಂದರೆ ಭೂಮಿಗೆ ಬಿದ್ದ ಸೂರ್ಯನ ಕಿರಣಗಳು ಪ್ರತಿಫಲಿತವಾಗಿ ವಾಪಾಸ್ ಹೋಗೋದನ್ನು ಈ ಇಂಗಾಲದಿಂದಾದ ತಡೆಗೋಡೆ ತಡೆಯುತ್ತೆ. ಹಾಗಾಗಿ ಆ ಶಾಖ ಭೂಮಿಯಲ್ಲೇ ಉಳಿದು ಭೂಮಿಯನ್ನು ಇನ್ನೂ ಬಿಸಿಯಾಗುತ್ತೆ. ಈ ಹಸಿರುಮನೆ ಪರಿಣಾಮದಿಂದಾಗೇ ಭೂತಾಪ ಜಗದೆಲ್ಲೆಡೆ ಹೆಚ್ಚಾಗ್ತಿದೆ, ಹಿಮನದಿಗಳು ಕರಗ್ತಿವೆ, ಹವಾಮಾನ ವೈಪರೀತ್ಯಗಳಾಗ್ತಿವೆ ಅನ್ನೋದು ಬೇರೆ ಮಾತು.

ಹೆಚ್ಚಾಗ್ತಿರೋ ಇಂಗಾಲ:
ಮನೇಲಿ ಮೂರು ಜನ ಇದ್ರೆ ಎರಡು ಕಾರು, ಒಂದೋ ಎರಡೋ ಬೈಕಿರೋದು ಕಾಮನ್ನು ಅನ್ನೋ ಜಮಾನಕ್ಕೆ ಜನ ಬಂದ್ಬಿಟ್ಟಿದಾರೆ.ಮತ್ತೆ ಅಕ್ಕಪಕ್ಕದ ಮನೇಲಿದ್ದು , ಒಂದೇ ಆಫೀಸಿಗೆ ಹೋಗೋದಾದ್ರೂ ತಮ್ಮ ಪ್ರತ್ಯೇಕ ಕಾರುಗಳಲ್ಲಿ ಹೋದ್ರೇನೆ ಖುಷಿ ಈ ಬೆಂಗಳೂರಿಗರಿಗೆ ! ಒಂದು ದಿನ ಅವರ ಕಾರಲ್ಲಿ ಇವರು, ಇವರ ಕಾರಲ್ಲಿ ಅವರು ಒಟ್ಟಿಗೆ ಹೋಗೋ ಕಾರ್ ಪೂಲಿಂಗ್ ಮಾಡ್ಬೋದಲ್ವಾ ಅನ್ನೋದು ಎಲ್ಲರಿಗೂ ಗೊತ್ತಿದ್ದಿದ್ದೇ. ಆದ್ರೂ ಮಾಡೊಲ್ಲ. ಟ್ರಾಫಿಕ್ ಜಾಂ ಬಗ್ಗೆ ಎಲ್ಲರನ್ನು ದೂಷಿಸುತ್ತಾ ಹೊಗೆಯೆಬ್ಬಿಸಿ ಆ ಹೊಗೆ ಕುಡಿತಾ ಕೂರೋದ್ರಲ್ಲೇ ತೃಪ್ತಿ ಕೆಲೋ ಜನಕ್ಕೆ. ಈ ರೀತಿ ಹೆಚ್ತಾ ಇರೋ ವಾಹನಗಳಿಂದ ವಾಯುಮಾಲಿನ್ಯ ಹೆಚ್ಚಾಗ್ತಿರೋದಲ್ದೇ ಈ ಮಾಲಿನ್ಯದಿಂದ ಹೆಚ್ಚಾಗ್ತಿರೋ ಇಂಗಾಲದಿಂದ ಭೂತಾಪವೂ ಹೆಚ್ತಾ ಇದೆ.

ಇನ್ನು ಹೆಚ್ಚುತ್ತಿರೋ ತಾಪದ ಬಗ್ಗೆ ಒಂದೆರಡು ಅಂಕೆ ಸಂಖ್ಯೆ.ಬೆಂಗಳೂರಲ್ಲಿ ಇಲ್ಲಿವರೆಗೆ ದಾಖಲಾಗಿರೋ ಅತೀ ಹೆಚ್ಚಿನ ತಾಪಮಾನ ೩೮.೩ ಡಿಗ್ರಿಯಂತೆ. ಅದು ದಾಖಲಾಗಿದ್ದು ಈ ವರ್ಷ ಅಥವಾ ಹಿಂದಿನ ವರ್ಷದಲ್ಲಲ್ಲ.ಅದು ೧೯೩೧ರಲ್ಲಂತೆ ! ಹಿಂದಿನ ವರ್ಷ ಏಪ್ರಿಲ್ ೧೩
ರಂದು ೩೭.೧ ಡಿಗ್ರಿ ಮುಟ್ಟಿದ್ದ ತಾಪ ಈಗಾಗಲೇ ೩೬ ಮುಟ್ಟಿ ಹಿಂದೆನೆಲ್ಲಾ ದಾಖಲೆಗಳನ್ನು ಮುರಿಯುವತ್ತ ದಾಪುಗಾಲಿಡುತ್ತಿದೆ ! ಇನ್ನಾದ್ರೂ ನಾವು ಎಚ್ಚೆತ್ತು ಅಳಿದುಳಿರೋ ಹಸಿರ ಹೊದಿಕೆಯನ್ನುಳಿಸಿಕೊಂಡು, ಪ್ರಕೃತಿಸ್ನೇಹಿಯಾದ ಜೀವನ ಶೈಲಿಯನ್ನ ಅಳವಡಿಸಿಕೊಳ್ಳದಿದ್ರೆ ಇದೇ ಬಿಸಿಲಬೆಂಕಿಯಲ್ಲಿ ಸುಟ್ಟು ಕರಕಲಾಗೋದು, ಬೆಂದು ಸಾಯೋದು ಶತಸಿದ್ದ.ಮುಂದೊಂದು ದಿನ ಉತ್ತರಭಾರತದಲ್ಲಿ ಈಗಾಗಲೇ ಆಗುತ್ತಿರುವಂತೆ ಇವತ್ತು ಸೆಖೆಗೆ ಇಷ್ಟು ಜನ ಸತ್ತರು ಅನ್ನೋ ಸುದ್ದಿಯನ್ನು ಬೆಂಗಳೂರಲ್ಲೂ ಕೇಳುವ ದುರಂತ ಬರಬಹುದೇನೋ :-(  

Sunday, December 11, 2011

Some Things I hate with email providers


Rediffmail:

spams:
Here some spams or offer mails are marked with red colour. But they arrive directly to your Inbox! instead of going to Junk Mail Folder. Of course Junk mail folder is having plenty of spams which are ones which are marked spams by u. only relief is they provide option for blocking a sender along with selecting that kind of mail as spam.

No Indication of spams
Plenty of fake mails like UK lottery, UNO money,Microsoft offer, Mail from Africa etc arrive frequently asking for information like Credit Card details etc. I always wonder how these cheters get my rediff id?

Problem in recovering old mails
I had a picture mailed to my rediff ID somewhat 5 years ago. Have stored it there only in inbox. WIth curiocity i tried to retrive those files from rediffmail. I could search/reach that file. But when i tried to open the file I was getting "Our Servers are facing problems in retrieving mail. Please try again later". Tried at differrent times thrice later. But same thing happened. So I gave up that effort

Mobile Version(Rediffmail NG)
These are the problems with using the rediffmail.com using mobile
1)When u type www.rediffmail.com instead of getting a place for entering mail id n password it takes to rediff.com screen. Have to Select mail option again there. If 1 wanted to select rediff.com he/she would have typed rediff.com itself directly. What's the  purpose in typing rediff.com and again selecting mail option which redirects to other screen ?
2) Sometimes it shows "You have no mails to show or Inbox is Empty" !!! You have to come back and visit that page again sometimes until it shows the mails in your Inbox.. I am not saying it happens always. But happens ..

Gmail
Absence of Select All Option while Deleting
Gmail shows 50 emails by default in its inbox at once. But when u are added to any group in social sites like fb and it has settings enabled for sending you messages whenever any user posts in that group.. It so happened that my crated a new gmail id and soon she was added to one such group in fb. She didn't check here mail for 2 months.. after that she was having 2000 mails from that group !!!

OMG. Then how to delete them? Gmail was not providing select all option. If it provided 50 messages could be deleted at once. That means selecting "select all and delete" 40 Times!. But its far better than selecting each one of 50 messages and then finally selecting Delete.. . .Horrible..

Yahoo
yahoo Group
Wanted to join yahoo Group. For that obviously u need to have a yahoo id. But somewhere got the option that 1 can use his gmail id.. then But email verification and password selection for that id etc are same as that of any sign up. Got Id and password. It said successful . After that went to that group agai using newly created ID. Then again it wont allows to join saying that u have to create a user name etc before coming. But that is created early by going to yahoo home.. .If there is problems like this Y they allow using gmail ?

Saturday, November 26, 2011

Guest Column : Fear


- By Vandana Mogasale

Fear, is a common emotion that we experience in our day to day life. But when asked to define generally we call it as being afraid of some thing. But from the view point of psychology, if we are talking about fear, we must also speak about anxiety. But defining these two terminologies are also is a difficult task.

Historically, fear was regarded as an emotional experience experienced when posed by an obvious source of danger. And anxiety was just an anticipation of something dangerous or dreadful.

But the recent theories tell us that fear or panic is a basic emotion that involves ‘fight or flight’ response of the sympathetic nervous system, allowing us to respond quickly when faced by any threat. Fear has three components-
1.      cognitive/ subjective components ( I feel afraid)
2.      physiological components ( increased heart rate and so on)
3.      behavioral components ( a strong urge to escape)
On the other hand, anxiety is a complex blend of emotions that is much more diffuse than fear.
Now you must be wondering why I have to speak about anxiety when I am explaining about fear. In order to understand the disorders associated with fear, talking about anxiety becomes important.

In Abnormal Psychology, we consider fear to be a normal phenomenon. Everybody has one or the other kind of fear. But this fear becomes abnormal when the fear is persistent and irrational. And this kind of persistent and disproportionate fear of some object or situation which represents little or no danger to the person is called as “Phobia”.

The International Classification of Diseases and Related Health Problems (ICD-10) by World Health Organization has classified phobias as F40 Phobic anxiety disorders

Diagnostic and Statistical Manual of Mental Disorder (DSM-IV) by American Psychiatric Association classifies phobia under axis -I Anxiety Disorders. Yet again DSM-IV categorizes phobias into three types:

·         Simple or Specific phobia - Fear of a specific object like Bugs, mice, snakes, bats; heights; water; storms; closed places
·         Social phobia - Fear of social settings involving evaluation, embarrassment, looking foolish
·         Agoraphobia - Fear of being in public places.

Etiology or Causes:
Different theorists present different view points regarding the cause of phobia. According to Sigmund Freud’s Psycho Dynamic School, Phobias result from the un-displayed anxiety of our unconscious motives or desires that symbolizes these motives.

According to Behavioral School, Phobia is a learned or conditioned response. Children learn to fear objects by observation or imitation of the elders. If they are reinforced, then they are maintained.

Some biological findings show that the 1st degree relatives of the patients having phobia are at a higher risk (3- 4 times) of developing this disorder. A person may inherit fearful temperament through genetics. But it is yet to be proved whether children really inherit phobic response or imitate the behavior leant from parents.

Treatment
Use of psychotherapies coupled with drug therapy has yielded more effective results rather administered alone.

Psycho analytic therapy helps in lessening the internal conflicts as well as loosening defense mechanisms.
Behavior therapies are very widely used in the treatment of phobias and they are proved to be very effective. Cognitive Behavior Therapy, Relaxation Technique, Modeling and Systematic Desensitization are used. These techniques have yielded maximum number of success.

About author:  
 Vandana M.
Is a Pschyologist who did her Msc in Clinical  Pschyology. Now working as a lecturer in  CSC Mangalore

Friday, November 4, 2011

ವಿಶ್ವ ಸಂಸ್ಥೆ ಹೆಸರಲ್ಲಿ ಮತ್ತಿತರ ಮಿಂಚೆ ಮೋಸಗಳು!!!

ಶೀರ್ಷಿಕೆ ನೋಡಿ ಆಶ್ಚರ್ಯ ಆಗ್ತಾ ಇದೆಯಾ? ಜೊತೆಗಿರುವ ಚಿತ್ರಗಳನ್ನು ನೋಡಿ.. ವಿಶ್ವಸಂಸ್ಥೆಯಿಂದ ಎಂಬ ಸಂದೇಶವನ್ನು ಒಳಪಟ್ಟಿಯಲ್ಲಿ ನೋಡಿ ಒಮ್ಮೆ ಆಶ್ಚರ್ಯವಾಯಿತು.. ಅದು spam ಗೆ ಹೋಗದೇ ಒಳಪೆಟ್ಟಿಗೆಗೇ ಬಂದಿದೆಯೆಂದು ಒಮ್ಮೆ ಆಶ್ಚರ್ಯವಾಯಿತು..(ಚಿತ್ರ೧)



ತೆಗೆದು ನೋಡಿದರೆ "ನಿಮಗೆ ಬರಬೇಕಾದ ಸಂಬಳ ಬಂದಿದೆಯಾ?" ಎಂಬ ಸಂದೇಶ.(ಚಿತ್ರ-೨) ತಕ್ಷಣ ನಿಮ್ಮ ಹೆಸರು, ವಿಳಾಸ, ಪಾಸಪೋರ್ಟು ನಂಬರ್, ಮೊಬೈಲು, ಸ್ಥಿರ ದೂರವಾಣಿ ನಂಬರುಗಳೊಂದಿಗೆ ಪ್ರತಿಕ್ರಯಿಸಿ ಎಂಬ ಒಕ್ಕಣೆ ಬೇರೆ. ಅವರು ಕೊಟ್ಟಿದ್ದ ವೆಬ್ ಕೊಂಡಿ ಸರಿಯಾಗೇ ಇದೆ(ಚಿತ್ರ-೩).. ಸಂಶಯ ಶುರು ಆಯ್ತು..

ನಾನು ವಿಶ್ವಸಂಸ್ಥೆಗೆ ಯಾವ ರೀತಿಯಲ್ಲೂ ಸಂಬಂಧ ಪಟ್ಟವನಲ್ಲ..ಅಂತಹದರಲ್ಲಿ ಅವರೇಕೆ ನನಗೆ, ಯಾತಕ್ಕಾಗಿ ಸಂಬಳ ಕೊಡಬೇಕು? ಮೊಬೈಲ್ ನಂಬರು, ಇತರೆ ಮಾಹಿತಿಗಳನ್ನ ದುರುಪಯೋಗಪಡಿಸಿಕೊಳ್ಳುವ ಯಾವುದೋ ವ್ಯವಸ್ಥಿತ ಜಾಲ ಅದಿರಬೇಕು ಅಂತ ಆ ಮಿಂಚೆಯನ್ನು ನಾಶ ಮಾಡಿದೆ. ಅದಕ್ಕೂ ಮೊದಲು ಯಾವ ಸಂಬಳ ಎಂಬ ಉತ್ತರ ಕಳಿಸಿದೆ. ಯಾವ ಪ್ರತಿಕ್ರಿಯೆಯೂ ಬರಲಿಲ್ಲ.. ನಿಮಗೂ ಇಂಥಹ ಸಂದೇಶ ಬರಬಹುದು.. ಅವರು ಕೇಳಿದ ಮಾಹಿತಿ ಕೊಟ್ಟು ಮೋಸ ಹೋಗದಿರಿ..

Wednesday, October 12, 2011

ಉಸಿರಾಟದಿಂದ ವಿದ್ಯುತ್

ಉಫ್, ಉಫ್ ಅಂತ ಗುಂಡ ಊದುತಾ ಇದ್ದ.. ಏನೋ ಬರ್ತಡೇ ಬತ್ತಿ ಊದಕ್ಕೆ ಅಂತ ಈ ಮಕ್ಳಾಟದ ಕೊಳವೇಲಿ ಪ್ರಾಕ್ಟೀಸ್ ಮಾಡ್ತಿದೀಯ ಅಂತ ಅಲ್ಲಿಗೆ ಬಂದ ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ. ಹೇ, ಊರಲ್ಲಿ ಅಮ್ಮ ಒಲೆಗೆ ಕೊಳವೇಲೆ ಊದೋದು ನೆನಪಾಯ್ತಾ ಮಾರ್ರೆ.. ಎಷ್ಟು ಪ್ರೀತಿ ಅಮ್ಮನ ಮೇಲೆ ಅಂತ ಬಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಇಳಾ ಬಂದು ನೋಡ್ತಾಳೆ, ಗುಂಡನ ಬಾಯಲ್ಲಿ ಒಂದು ಪ್ಲಾಸ್ಟಿಕ್ ಕೊಳವೆ, ಸ್ಟ್ರಾ ಅರ್ಧಕ್ಕೆ ಕತ್ತರಿಸಿದಂಗೆ, ಅದರ ತುದಿಗೆ ಸಣ್ಣ ಪ್ಲಾಸ್ಟಿಕ್ ಬುಟ್ಟಿ. ಅದರ ಮೇಲೆ ಅಲ್ಲಲ್ಲ ಗಾಳೀಲಿ ಪ್ಲಾಸ್ಟಿಕ್ ಚೆಂಡು..ವಾ! ಬರ್ನೋಲಿ ನಿಯಮ ಅಂತ ಕೂಗಿದ್ಲು.. ಹಾಂ.. ಎಲ್ಲಿ ಗರ್ನಲ್?..ಅಂತ ತಿಪ್ಪ ಒಂದ್ರೌಂಡು ಕೂತಲ್ಲಿಂದ ಹಾರಿದ.. ಎಲ್ಲ ನಕ್ರು..ಓಯ್ ಗರ್ನಲ್ಲಲ್ಲ ಮಾರ್ರೆ.. ಅವ್ಳು ಹೇಳಿದ್ದು ಗಾಳೀಲಿ ತೇಲಾಡೋ ಬಗೆಗಿನ ಬರ್ನೋಲಿ ನಿಯಮದ ಬಗ್ಗೆ ಅಂದ ಮಂಜ..

 ಹೌದು.. ಉಸಿರಾಟದಿಂದ ವಿದ್ಯುತ್ತು ತಯಾರು ಮಾಡ್ಬೋದಂತೆ. ಅದ್ನ ಓದಿದ ಮ್ಯಾಲಿಂದ ನಂಗೆ ಇದ್ರ ಮ್ಯಾಲೆ ಸ್ಯಾನೆ ಪಿರುತಿ ಹುಟ್ಟೈತೆ ಅಂದ ಗುಂಡ.. ತನ್ನ ಪ್ಲಾಷ್ ಬ್ಯಾಕ್ ಆಟಿಕೆ ತೋರಿಸುತ್ತಾ..ಹೌದೆನ್ಲಾ? ಕೆಲವರ ಬಾಯಿಂದ ವಿಚಿತ್ರ ವಾಸ್ನೆ ಬರ್ತಾ ಇರ್ತೈತೆ. ಹತ್ರಕ್ಕೆ ಹೋದವ್ರು ದೂರ ಓಡೋಗಂಗೆ.. ನಾನೂ ಕಂಡಿವ್ನಿ ಅಂದ ತಿಪ್ಪ.. ಮಂಜಂಗೆ ಮೀನು ಸಂತೆ ದಿನ ಬೆಳಿಗ್ಗೆ ಬಸ್ಸಿಗೆ ಹೋಗಿದ್ದು ನೆನ್ಪಾತು. ಇಳಾಗೆ ಪಕ್ಕದ್ಮನೆ ಆಂಟಿಯ ಬೆಳ್ಳುಳ್ಳಿ ಎಫೆಕ್ಟು ನೆನ್ಪಾತು. ಆದ್ರೆ ಅದ್ರಿಂದ ಕರೆಂಟು ತಯಾರು ಮಾಡದು ಹೆಂಗೆ ಅಂತ ಮಾತ್ರ ಅವ್ರಿಗೆ ಹೊಳಿಲೇ ಇಲ್ಲ. ಕೊನೆಗೆ ಗುಂಡಂಗೇ ಕೇಳಿದ್ರು ಅದು ಹೆಂಗೆ ಅಂತ. ಇದು ನೋಡ್ರಾ ಅಮೇರಿಕದ ವಿನಕಂನ್ಸಿನ್ ವಿಶ್ವವಿದ್ಯಾಲಯದವ್ರು ಕಂಡು ಹಿಡ್ದಿದ್ದು ಅಂತ ತನ್ನತ್ರ ಇದ್ದ ಚಿತ್ರ ತೆಗ್ದು ತೋರ್ಸಿದ.

ಈ ಚಿತ್ರದಾಗೆ lung simulator ಅಂತ ಐತಲಾ.. ಅದು ನಮ್ಮ ಶ್ವಾಸಕೋಶದಂಗೆ ಕೆಲ್ಸ ಮಾಡ್ತೈತೆ. ನಾವು ಉಸ್ರು ತಗಂಡಾಗ, ಬಿಟ್ಟಾಗ ಇದ್ರ ತುದೀಗೈತಲ.. ಆ ಹಳ್ದೀದು.. ಅದು ಅಲುಗಾಡತ್ತೆ ಅನ್ನೋದ್ರಲ್ಲಿ.. ಶೇಖ್ ಅ ಬಾಬ ಬಬ ಶೇಖ್ ಅ ಬಾಬ ಬಬ ಸಯ್ಯಾ ಸಯ್ಯಾ.. ಅಂತ ತಿಪ್ಪ ಹಾಡಕ್ಕೆ ಶುರು ಹಚ್ಕಂಡ.. ಓಯ್ ಸೆಖೆ ಬಾಬ ಸುಮ್ನಿರ್ರಿ ಪ್ಲೀಸ್.. ಮುಂದೇಳಿ ಮಿ. ರೌಂಡ್ ಅಂದ್ಲು ಇಳಾ. ಅದನ್ನು polivinylidene flouride(pvdf) ಅನ್ನೋ ವಸ್ತು ಇಂದ ಮಾಡಿರ್ತಾರೆ ಅಂದ ಗುಂಡ. ಈಗ ನಮ್ಮ ಉಸಿರಾಟದ ವೇಗ ಎಷ್ಟು ಮಾರ್ರೆ? ಹತ್ತತ್ರ ಸೆಕೆಂಡಿಗೆ ೨ ಮೀಟರ್. ಆದರೆ ಅಷ್ಟರಿಂದ ವಿದ್ಯುತ್ ತಯಾರಿಸದು ಹೆಂಗೆ ಅಂದ ಮಂಜ.ಒಳ್ಳೆ ಪ್ರಶ್ನೆ ಮಂಜು. ಮುಂಚೆ ಇದೇ ದೊಡ್ಡ ಸಮಸ್ಯೆ ಆಗಿದ್ದು. ಆದರೆ ಇದು ಪ್ಲಾಸ್ಟೀಕ್ ತರದ್ದು .. ಮಿಲಿ ಮೀಟರನಷ್ಟು ಸೂಕ್ಷ್ಮದ್ದು.ಇದರಿಂದಾಗೇ ಕಂಪನಗಳನ್ನ ವಿದ್ಯುತ್ತಿಗೆ ಪರಿವರ್ತಿಸಿ ಕನಿಷ್ಟ ಮಿಲಿ ವ್ಯಾಟಿನಷ್ಟು ವಿದ್ಯುತ್, ಜಾಸ್ತಿ ವೇಗದ ಉಸಿರಾಟವಿದ್ದಾಗ ೬ ವ್ಯಾಟಿನವರೆಗೂ ವಿದ್ಯುತ್ ಉತ್ಪಾದನೆ ಆಗ್ತಾ ಇದೆ ಈಗ. ಅದನ್ನ ಇನ್ನೂ ಉತ್ತಮ ಪಡಿಸೋ ಪ್ರಯತ್ನ ನಡೀತಾ ಇದೆ . ಕೊಳವೆ ಗಾಳೀಲಿ ಚೆಂಡು ಹಾರ್ತಿದ್ದಿದ್ದು ನೋಡ್ಲಿಲ್ವಾ ಸ್ವಲ್ಪ ಮುಂಚೆ? ಅಂದ ಗುಂಡ.

ಆದ್ರೆ ಇದ್ನ ಮೂಗಿಗೆ ಕಟ್ಕೊಂಡು ನಡ್ಯೋದು ಅಸಹ್ಯ ಅನಿಸತ್ತಪ ನಂಗೆ ಅಂದ ತಿಪ್ಪ. ಕಿವಿ ಇಂದ ವೈರು ಇಳಿದು ಬರೋದು ಫ್ಯಾಷನ್ ಆಗತ್ತೆ ಅಂತ ಈಗ ೧೫ ವರ್ಶದ ಹಿಂದೆ ಯಾರಾದ್ರೂ ಕನ್ಸು ಕಂಡಿದ್ರಾ ತಿಪ್ಪಾ ಅಂದ್ಳು ಇಳಾ.ತಿಪ್ಪನ ಡೌಟೇನೋ ಸ್ವಲ್ಪ ಸರೀನೆ ಉಂಟು..ಎಲ್ಲಿ ಬಳಸ್ಬೋದು ಇದನ್ನ ಈಗ ಅಂದ ಮಂಜ. ಈಗ ವಿದೇಶದಲ್ಲೆಲ್ಲಾ ರೋಗಿಗಳ ದೇಹಸ್ತಿತಿ ಅಳೀತಾ ಇರ್ಲಿ, ಏನಾದ್ರೂ ಏರು ಪೇರು ಆದ್ರೆ ತಕ್ಷಣ ತಿಳಿಸ್ಲಿ ಅಂತ ವೈರ್ಲೆಸ್ ಮೂಲಕ ಸಂವಹಿಸೋ ಉಪಕರಣಗಳನ್ನ ಅಳವಡಿಸಿರ್ತಾರೆ ಗೊತ್ತಾ? ಹಾ ಓದಿದ್ದೆ. use of wireless technology for health moitoring ಅಂತ ಅಂತ ನೆನಪಿಸಿಕೊಂಡ್ಲು ಇಳಾ.. ಹಾ. ಅವುಗಳ ಶಕ್ತಿ ಹೇಗೆ ಬರುತ್ತೆ ಅಂದ..ಬೇರೆ ಕಡೆ ಹಾಕೋ ಅಂತ ಲೀಥಿಯಮ್ ಐಯಾನ್ ಬ್ಯಾಟ್ರಿ ಅಂತೂ ದೇಹದೊಳಗೆ/ಚರ್ಮದೊಳಗೆ ಇಟ್ಟಿರೋ ಈ ತರದ ಉಪಕರಣಗಳಿಗೆ ಹಾಕಕ್ಕಾಗಲ್ಲ ಅನ್ಸತ್ತೆ..ಪದೇ ಪದೇ ಅದು ಖಾಲಿ ಆದ್ರೆ ತೆಗ್ಯದು,ಹಾಕದು ದೊಡ್ಡ ರಗ್ಳೆ ಅಲ್ವಾ ಅಂದ ತಿಪ್ಪ.. ಕರೆಕ್ಟು ತಿಪ್ಪ. ಈಗ ಬಂದೆ ನೀ ಟ್ರ್ಯಾಕಿಗೆ. ತಾನಾಗೆ ಮರುಪೂರಣ ಆಗೋ ಅಂತದ್ದು ಹಾಕ್ಬೇಕು ಅಂದ್ರೆ ರಕ್ತದಲ್ಲಿನ ಸಕ್ಕರೆ ಅಂಶದಿಂದ ಶಕ್ತಿ ಪಡೆಯೋ ಜೈವಿಕ ಕೋಶಗಳನ್ನ ಬ್ಯಾಟರಿ ಆಗಿ ಉಪಯೋಗಿಸಬಹುದು ಅಂದ ಮಂಜ.ಅವಯವಗಳ ಚಲನೆಯಿಂದ ಶಕ್ತಿ ಪಡೆಯೋ piezoelectric ಕೋಶಗಳನ್ನು ಬಳಸಬಹುದು, ವೈರ್ಲೆಸ್ ಮೂಲ್ಕ ಶಕ್ತಿ ಕಳಿಸಬಹುದು ಅವಕ್ಕೆ ಅಂದ್ಲು ಇಳಾ.ಅಲ್ಲೇ ಇರದು ಸಮಸ್ಯೆ. ಇದೂ ಕೂಡ ಹಾಳಾಗೇ ಹಾಳಾಗತ್ತೆ.. ಅವಾಗ ಮತ್ತೆ ಮತ್ತೆ ತೆಗ್ಯದು ಹಾಕದು ಸಮಸ್ಯೆ ಅಲ್ವಾ ಅಂದ ತಿಪ್ಪ. ಈ ಕೋಶಗಳನ್ನು ದೇಹದ ಒಳಗಿಡೋ ಬದ್ಲು ಹೊರಗಡೆ ತಾನಾಗೆ ಮರುಪೂರಣ ಆಗೋ ತರ ಇಟ್ರೆ ಅಂದ ಗುಂಡ.. ಆಗ ಎಲ್ರಿಗೂ ಗುಂಡ ಏನು ಹೇಳಕ್ಕೆ ಹೊರಟಿದ್ದಾನೆ ಅಂತ ಪ್ಲಾಶ್ ಆಯ್ತು.. ಅದೇ.. ಇದು ಅಂದ್ರು ಎಲ್ಲಾ ಒಟ್ಟಿಗೆ
ಮೂಲ:
 Energy and environment science journal:http://pubs.rsc.org/en/Content/ArticleLanding/2011/EE/C1EE02241E

Thursday, October 6, 2011

ಅಗಲಿದ ಚೇತನಗಳಿಗೆ ನಮನ


ಬೆಳಗ್ಗೆ ಎಂದಿನಂತೆ fb ಗೆ ಬರ್ತಿದ್ದಂತೆಯೇ ಕಂಡ ಮೊದಲ ಪೋಸ್ಟು.. "ಮತ್ತೂರು ಕೃಷ್ಣಮೂರ್ತಿಗಳು,ಸ್ಟೀಪ್ ಜಾಬ್ಸ್ ಆತ್ಮಕ್ಕೆ ಶಾಂತಿ ಸಿಗಲಿ.." ವಿಜಯದಶಮಿಯ ದಿನವೆಂದರೆ ಕೆಟ್ಟದ್ದರ ಒಳ್ಳೆಯದರ ವಿಜಯದ ಸಂಕೇತವೆಂಸು ಪ್ರತೀತಿ.ಆದರೆ ಅಂದೇ ಇಬ್ಬರು ಅಪ್ರತಿಮ ಸಾಧಕರ ಸಾವಿನ ಸುದ್ದಿ ಕೇಳುವಂತಾಯಿತಲ್ಲ ವಿಧಿಯೇ ಅನಿಸ್ತು.. ಸುದ್ದಿ ಸುಳ್ಳಾಗಿರಬಹುದೇ ಅನ್ನೋ ಮನದ ಮೂಲೆಯ ಆಸೆಯಿಂದ ಒಮ್ಮೇ ನೆಟ್ಟಲ್ಲಿ ಹುಡುಕಿದೆ.. ಅದರ ತುಂಬೆಲ್ಲಾ ಸ್ಟೀವ್ ಜಾಬ್ಸನದೇ ಸುದ್ದಿ.. ಮತ್ತೂರು ಕೃಷ್ಣಮೂರ್ತಿಗಳ ಸುದ್ದಿ ತಿಳಿಯಲು ಮತ್ತೂರು ಗೆಳೆಯನಿಗೆ ಸಂದೇಶ ಕಳಿಸಾಯಿತು..ಎಲ್ಲೆಲ್ಲೂ ಬರೀ ಬೇಸರದ ಪೋಸ್ಟುಗಳು.. ಯಾಹೂ, ibn, times news ಹೀಗೆ ಎಲ್ಲೆಲ್ಲೂ ಸ್ಟೀವ್ ಜಾಬ್ಸ್ ಮರಣದ ವಾರ್ತೆ, fb, google + ಹೀಗೆ ಸಾಮಾಜಿಕ ತಾಣಗಳಲ್ಲೂ ಅವರಿಗೆ ನೆನಪಿನ ಕಂಬನಿ, ಫೋಟೋಗಳು, ವೀಡಿಯೋಗಳು,ಕೊಂಡಿಗಳು, ಅವರ ppt ಗಳು, ನುಡಿಮುತ್ತುಗಳು.. ಹೀಗೆ ಏನುಂಟು.. ಏನಿಲ್ಲ.. ಆ ಎರಡೂ ಮಹಾಚೇತನಗಳಿಗೆ ನನ್ನದೂ ಒಂದು ಈ ಮೂಲಕ ಪದಾಂಜಲಿ

ನೆನಪುಗಳು ಹಿಂದೆ ಜೀಕ್ತಾ ಜೀಕ್ತಾ ಸುಮಾರು ಎರಡೂವರೆ ವರ್ಷದಷ್ಟು ಹಿಂದಕ್ಕೆ ಹೋಗಿವೆ. ವರ್ಷ ppt ಮಾಡೋದು ಹೇಗೆ ಅಂತ ಸ್ಟೀವ್ ಜಾಬ್ಸನ ನೋಡಿ ಕಲೀರಿ ಅಂತ ನಮ್ಮ ಕಾಲೇಜಿನ ಪ್ರೊಫೆಸರ್ ಹೇಳಿದ್ರು . ದೊಡ್ಡ ಪರದೆ, ಅದರ ಮುಂದೆ ಕಿರಿದಾದ ಮನುಷ್ಯ. ಪರದೆಗೆ ಹೊಂದೋ ಕಪ್ಪು ಬಣ್ಣದ ಬಟ್ಟೆ.. ಪರದೆಯ ಮೇಲೆ ಜಾಬ್ಸ್ ಹೇಳುತ್ತಿದ್ದಂತೆಯೇ ಮೂಡುತ್ತಿದ್ದ ದೃಶ್ಯಗಳು.. ವಾಕ್ಯಗಳು.. ಅದೂ ತೀರಾ ಬೇಕಾಗುವಂತದ್ದು ಮಾತ್ರ.. ಆಪಲ್ ಅಂತ ಜಾಬ್ಸ್ ಪರದೆಯ ಮುಂದೆ ಕೈನೀಡಿದರೆ ಅವನ ಕೈಮೇಲೆ ನಿಖರವಾಗಿ ಬಂದು ಕೂರುತ್ತಿದ್ದ ಸೇಬಿನ ಚಿತ್ರ.. ಎಂತಾ ನಿಖರತೆ, ಪ್ರತೀ ಸಲವೂ ಎಷ್ಟೊಂದು ಪೂರ್ವತಯಾರಿ.. ಎಲ್ಲವೂ ಮೇಳೈಸಿ ಅವನ ಪ್ರಸ್ತುತಿಯನ್ನು ನೋಡೋದು ಒಂದು ರಸಕಾವ್ಯದಂತೆ ಭಾಸವಾಗುತ್ತಿತ್ತು.. ಹಾಗೆ ನೋಡನೋಡುತ್ತಲೆ ನನ್ನ ಪಾಲಿಗೊಬ್ಬ ನಾಯಕನಾಗಿದ್ದ ಸ್ಟೀವ್ ಜಾಬ್ಸ್.



 
೧೯೫೫ ರಲ್ಲಿ ಜನಿಸಿದ ಸ್ಟೀವ್ ಜಾಬ್ಸ್ ಪ್ರಖ್ಯಾತರಾಗಿದ್ದು ಅವರ ವಿಶಿಷ್ಟ ಪ್ರಸ್ತುತಪಡಿಸುವ ಶೈಲಿಗೆ, ಅವರು ಸ್ಥಾಪಿಸಿದ ಆಪಲ್ ಗೆ. ಐಪೋಡ್, ಐಪ್ಯಾಡ್,, ಐಟ್ಯೂನ್, ಆಪಲ್ ಆಪರೇಟಿಂಗ್ ಸಿಸ್ಟಮ್, ಆಪಲ್ ಮಾಕ್ ಕಂಪ್ಯೂಟರಗಳು, ನೋಟ್ ಬುಕ್.. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಉಳ್ಳವರ ಆಸ್ತಿ, ಸಂಶೋಧಕರ ಸಹಾಯಕ ಅಷ್ಟೇ ಆಗಿದ್ದ ಕಂಪ್ಯೂಟರ್ ತಂತ್ರಜ್ನಾನವನ್ನು ಜನಸಾಮಾನ್ಯರ ಬಳಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಆಪಲ್ ಹೆಸರು ಕೇಳಿರದ (ಯುವ)ಕಂಪ್ಯೂಟರ್ ಬಳಕೆದಾರರೇ ಇಲ್ಲವೆಂದರೆ ಅತಿಶಯೋಕ್ತಿಯಾಗಲಾರದೇನೊ ಅನ್ನುವಷ್ಟರ ಮಟ್ಟಿಗೆ ನಮಗೆಲ್ಲಾ ಆಪಲ್ ಹವಾ ಹಬ್ಬಿಸಿದ ಮಹಾಶಯ ಈ ಸ್ಟೀವ್ ಜಾಬ್ಸ್. ಇನ್ನು ಈತನ ಪ್ರಸ್ತುತಪಡಿಸುವ ಶೈಲಿ(presentation style) ಗೆ ನಾನಂತೂ ಮರುಳಾಗಿ ಹೋಗಿದ್ದೆ.ಅವನ ಬಗ್ಗೆ ಹಲವಾರು ದಂತಕಥೆಗಳಿವೆ.ಜೀವನದ ರೀತಿಯೂ ಸ್ಪೂರ್ತಿದಾಯಕ. ಪ್ರಸ್ತುತಿ ಅಂದ ಹಾಗೆ ಅವರ ೧೯೭೪ರ ಆಪಲನ್ನು ಗ್ರಾಹಕರಿಗೆ ಪರಿಚಯಿಸಿದ ರೀತಿಯ ಬಗ್ಗೆ ಓದಿದ್ದು ನೆನಪಾಗುತ್ತಿದೆ.. ಜನವರಿ ೨೪, ೧೯೭೪.. ದೊಡ್ಡ ವೇದಿಕೆ. ಮಧ್ಯೆ ನಿಂತ ಸ್ಟೀವ್ ಜಾಬ್ಸ್. ತನ್ನ ಆಪಲ್ ಕಂಪ್ಯೂಟರ್ ಇಂಕ್ ಅನ್ನು ಅವರಿಗೆ ಪರಿಚಯಿಸೋದು ಅವನ ಉದ್ದೇಶ. ಅವನು ತಂದಿದ್ದು ಒಂದು ಸಣ್ಣ ಚೀಲ.. ನೀವು ನೋಡಿದ್ದನ್ನು ನಂಬಲೇಬೇಕು ಇಂದು ಎಂದ ಜಾಬ್ಸ್..ಅಲ್ಲದೇ ಇದರ(ಕಂಪ್ಯೂಟರ್ ನ) ಶಕ್ತಿಯೆಲ್ಲವೂ ಈಗಿನ ibm ಕಂಪ್ಯೂಟರ್ ಡಬ್ಬಿಯ ೧/೩ ರಷ್ಟು ಸಣ್ಣ ಸ್ಥಳದಲ್ಲಿ. ಹೇಳಿದ್ದು ಸಾಕು ನೀವೆ ನೋಡುವಿರಂತೆ.. ಮುಂದೆ ಪರದೆಯ ಮೇಲೆ ಮೂಡೋ ಚಿತ್ರಗಳೆಲ್ಲಾ ಚೀಲದೊಳಗೆ ಇರೋದ್ರಿಂದ ಆಗುತ್ತೆ ಅಂದ..ಸರಿ, ಅಲ್ಲೇ ಪಕ್ಕದಲ್ಲಿಟ್ಟಿದ್ದ ಚೀಲದಿಂದ ತಾನು ಪ್ರಸ್ತುತ ಪಡಿಸಬೇಕಾಗಿದ್ದ ಪೆಟ್ಟಿಗೆ ತೆರೀತಾನೆ. ಅದಕ್ಕೊಂದು ಡಿಸ್ಕ್ ಹಾಕಿ(ಆಗೆಲ್ಲಾ ಈಗಿನಂತೆ ಪೆನ್ ಡ್ರೈವು, ಪ್ಲಾಷ್ ಡ್ರೈವುಗಳು ಇರಲಿಲ್ಲವಲ್ಲ..)ಅದನ್ನು ಚಾಲು ಮಾಡಿದ. "chariots of fire" ಚಿತ್ರದ ದೃಶ್ಯಗಳು ಮೂಡಲಾರಂಭಿಸಿತು.. spread sheet ನಲ್ಲಿ ಕಟ್ಟಡಗಳ ದೃಶ್ಯಗಳು, ಚೆದುರಂಗದ ಆಟ, ಮಾಕ್ ಬಗ್ಗೆ ಕನಸು ಕಾಣ್ತಿರೋ ಸ್ಟೀವ್ ಜಾಬ್ಸನದೇ ಚಿತ್ರಗಳು ಮೂಡಲಾರಂಭಿಸಿತು.. ಆ ಕಾಲಕ್ಕೆ ಆ ಸಣ್ಣ ಯಂತ್ರದ ಅಷ್ಟೆಲ್ಲಾ ಕೆಲಸಗಳು ಪವಾಡದಂತೆಯೇ ಕಂಡಿರಲು ಸಾಕು.. ಅದು ಇಲ್ಲಿಗೇ ಮುಗಿಯಲಿಲ್ಲ. ಆ ಕಂಪ್ಯೂಟರ್ ಮಾತನಾಡಲಾರಂಭಿಸಿತು.. "ಹಲೋ, ನಾನು ಮಾಸಿಂಟೋಶ್.. (ಮ್ಯಾಕ್). ಆ ಚೀಲದಿಂದ ಹೊರಬರೋಕೆ ಖುಶಿ ಆಗ್ತಾ ಇದೆ. ನನ್ನ ತಂದೆಗೆ ಸಮಾನನಾದ ಈ ವ್ಯಕ್ತಿ, ಸ್ಟೀವ್ ಜಾಬ್ಸ್ ನನ್ನ ನಿಮಗೆ ಪರಿಚಯಿಸಲು ಹೆಮ್ಮೆ ಆಗ್ತಾ ಇದೆ..".. ಪ್ರಚಂಡ ಕರತಾಡನ.. ಹಲ್ಲುಬಿಟ್ಟು ನಗದೇ ಇರಲು ಅವನು ಎಷ್ಟು ಪ್ರಯತ್ನ ಪಟ್ಟರೂ ವಿಜಯದ ಆ ಮಂದಹಾಸ ತುಟಿ ದಾಟಿಯೇ ಬಿಟ್ಟಿತು.. ಭವಿಷ್ಯಕ್ಕೆ ಹೊಸ ರೂಪ ಕೊಡೋ ನಾಯಕನ ಆಗಮನದ ಸಂತಸದಲ್ಲಿ.. 



 ಕಂಪೆನಿಯಂದರೆ ಅದು ಒಬ್ಬ ಸೂಪರಮ್ಯಾನ್ ಕಟ್ಟಿ ಬೆಳೆಸಿ, ಎಲ್ಲ ಕೆಲಸ ಪೂರೈಸೋ ಮ್ಯಾಜಿಕ್ ಅಲ್ಲ. ಅಲ್ಲಿ ಸಾವಿರಾರು ಜನರ ಶ್ರಮ ಇದೆ. ಆದರೆ ibm, microsoft ಗಳ ಮಧ್ಯೆ ತನ್ನದೇ ಒಂದು ಕಂಪೆನಿ ಕಟ್ಟಿ. ಬೆಳೆಸಿ ಮೊದಲ ಸ್ಥಾನಕ್ಕೆ ಏರಿಸುವುದು ಹುಡುಗಾಟವಲ್ಲ. ನಮಗೇನು ಬೇಕೆಂಬುದನ್ನು ನಮಗಿಂತ ಮೊದಲೇ ಅರಿತ ಮಹಾನುಭಾವ ಜಾಬ್ಸ್.. ಕಿವಿಯಿಂದ ವೈರು ಹರಿದುಬರೋದು ಒಂದು ಫ್ಯಾಷನ್ ಆಗತ್ತೆ ಅಂತ ಈಗ ೨೦ ವರ್ಷದ ಹಿಂದೆ ಊಹಿಸೊಕ್ಕೆ ಸಾಧ್ಯನಾ? ಒಮ್ಮೆ ಆಪಲನಿಂದ ಹೊರಬಂದಿದ್ದ ಜಾಬ್ಸ ಬರುವಾಗ ಹೊಸ ಕನಸು ತಂದರು. ಕೇವಲ ತಂತ್ರಜ್ನಾನಕ್ಕೆ ಸೀಮಿತವಾಗಿದ್ದ ಅದನ್ನು media ಕ್ಕೂ ವಿಸ್ತರಿಸಿದರು. ಮೊದಲು ಕಂಪೆನಿ , ಆಮೇಲೆ ನಾನು ಅನ್ನೋ ಅವರ ಮನೋಭಾವ ಆದರ್ಶಪ್ರಾಯ. ಅದಕ್ಕೇ ಅವರ ppt ದೊಡ್ಡದಾಗಿ ಪರದೆಯ ಮುಂದೆ ಇರುತ್ತೆ, ಮುಂದಿರೋ ಜಾಬ್ಸ್ ವಾಮನಮೂರ್ತಿಯಂತೆ.. ಕಿತ್ತು ತಿನ್ನೋ ಕ್ಯಾನ್ಸರ್ ಜಾಬ್ಸನ ಜೀವನವನ್ನು ಕೆಲ ವರ್ಷಗಳ ಹಿಂದೆಯೇ ಕಿತ್ತು ತಿನ್ನೋದರಲ್ಲಿತ್ತು.. ಅದರ ವಿರುದ್ದ ಹೋರಾಡಿ ಇಷ್ಟು ವರ್ಷ ಜಯಿಸಿದ ಹೋರಾಟಗಾರ ಆತ. . ಕೊನೆಗೂ ವಿಧಿ ಬರಹವನ್ನು ಮೀರಲಾಗಲಿಲ್ಲ.. ಅದೇ ಕ್ಯಾನ್ಸರ್ ಅವರನ್ನು ಬಲಿ ತೆಗೆದುಕೊಂಡಿತು.. ಭಾರತದ ಮೂಲೆಯಲ್ಲಿರುವ ನಮ್ಮಂತಹ ಯುವಕರ ಬಗೆಗೆ ನಿಮಗೆ ಗೊತ್ತಿರದೇ ಇರಬಹುದು ಜಾಬ್ಸ್.. ಆದರೆ ನಿಮ್ಮ ಬಗ್ಗೆ ನಮಗೆ ಬಹಳ ಗೊತ್ತು.. ಹಲವು ಸ್ಪೂರ್ತಿ ನೀಡಿದ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ಭಗವಂತನಲ್ಲಿ ಬೇಡುತ್ತೇನೆ.. ಸ್ಟೀವ್ ಜಾಬ್ಸ್ ಬಗ್ಗೆ ಶ್ರದ್ದಾಂಜಲಿ ಕಳಿಸುವವರು rememberingsteavejobs@apple.com ಗೆ ಕಳಿಸಬಹುದು ಅಂತ ಆಪಲ್ ತನ್ನ ವೆಬ್ ಸೈಟಲ್ಲಿ ಹೇಳಿದೆ..
ಮತ್ತೂರು ಕೃಷ್ಣಮೂರ್ತಿಗಳು ಜ್ನಾನವೃದ್ದರು. ವಯೋವೃದ್ದರು. ಅವರ ಬಗ್ಗೆ ಮೊದಲೇ ಬರೆದರೆ ಮುಂದಿನದು ಸ್ವಾರಸ್ಯ ಕಳೆದುಕೊಳ್ಳಬಹುದು ಅಂತ ಆಮೇಲೆ ಬರೆದಿದ್ದೇನೆ.. ತಪ್ಪಾಗಿದ್ದರೆ ಕ್ಷಮಿಸಿ. ಇವರು ಪ್ರಖ್ಯಾತ ಗಮಕ ಗಾಯನ ವಿದ್ವಾಂಸರು, ಬೆಂಗಳೂರಿನ ಭಾರತೀಯ ವಿದ್ಯಾಭವನದ ಮುಖ್ಯಸ್ಥರಾಗಿದ್ದವರು.ಪದ್ಮಶ್ರೀಯಂತಹ ಪ್ರಶಸ್ತಿ ಪುರಸ್ಕೃತರು.. ಇನ್ನು ಇನ್ನಿತರೆ ಬಿರುದು ಸನ್ಮಾನಗಳಿಗೆ ಲೆಕ್ಕವೇ ಇಲ್ಲ.. .ಅವರ ಕರ್ನಾಟಕ ಭಾಗವತ ಕಂಸವಧೆಯನ್ನು ಕೆಳಗಿನ ಕೊಂಡಿಯಲ್ಲಿ ತಾವು ವೀಕ್ಷಿಸಬಹುದು. www.youtube.com/watch?v=L-BqA9yp_kU.. ನಮ್ಮ ಶಿವಮೊಗ್ಗ ಜಿಲ್ಲೆಯವರೇ ಆದ ಇವರ ನಿಧನದಿಂದ ಗಮಕ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಬಗ್ಗೆಯೂ ಎಷ್ಟು ಬರೆದರೂ ಕಡಿಮೆಯೇ.. ನಿಮ್ಮ ಅಪ್ರತಿಮ ಸಾಧನೆಗೆ ಮತ್ತೊಮ್ಮೆ ನಮನಗಳು ಗುರುವರ್ಯ..
 

Wednesday, September 28, 2011

ಮಸುಕಾದ way2sms ನೊಂದಿಗೆ ನೆನಪಾಗೋ ಕಳೆದ ಕೊಂಡಿಗಳು

"ಹರ್ ಏಕ್ ಪ್ರೆಂಡ್ ಜರೂರಿ ಹೋತಾ ಹೈ" ಅಂತ ಏರ್ಟೆಲ್ ಕಂಪ್ನಿ ಹಾಡು ಹಾಡ್ತಾ ಉದಾಸನಾಗಿ ಕೂತಿದ್ದ ಗುಂಡ. ಏನಾಯ್ತೋ ಗುಂಡ ಯಾರು ಕೈಕೊಟ್ರೋ ಅಂತ ಅಲ್ಲಿಗೆ ಬಂದ ಟಾಂಗ ತಿಪ್ಪ ಅಲಿಯಾಸ್ ತಿಪ್ಪೇಶಿ. ಎಲ್ಲಾ ಹಾಳಾಗಿ ಹೋಯ್ತು Do Not Disturb Directory(DND) ಅಂತ ಬಂದು ಹಾಳಾಗಿ ಹೋಯ್ತು ನನ್ನ ಕಥೆ ಅಂತ ಗೋಳಾಡಿದ. ಹೇ. ಮೊಬೈಲು ಕಂಪೆನಿ ಅವ್ರು, ಟೆಲಿ ಮಾಕ್ರೆಟಿಂಗ್ ಅವ್ರು ಕರೆ ಮಾಡಿ ತಲೆ ತಿನ್ನೋದನ್ನ ತಪ್ಸೋಕೆ ಅಂತಲ್ವಾ ಅದ್ನ ಮಾಡಿದ್ದು ಮಿ.ರೌಂಡ್ ಅಂತ ಬಂದ್ಲು ಇಳಾ ದೇವಿ ಅಲಿಯಾಸ್ ಇಳಾ. ಹೌದು ಮಾರ್ರೆ ನೀವು ಐದು ಲಕ್ಷ ಗೆದ್ದಿದ್ದೀರಿ.. ತಗೋಳೋಕೆ ಇದಕ್ಕೆ ಕರೆ ಮಾಡಿ.. ಗೋಲ್ಡ್ ಲೋನ್ ಬೇಕಾ ಅಂತೆಲ್ಲ ಸಂದೇಶ ಕಳ್ಸೂದ ಮಾರ್ರೇ.. ಮೊನ್ನೆ ನಮ್ಮಜ್ಜಯ್ಯನ ಮೊಬೈಲಿಗೆ ನಿಮ್ಮ ಜೀವನ ಸಂಗಾತಿಯನ್ನು ಹುಡುಕಬೇಕಾ ಅಂತ ಸಂದೇಶ ಕಳ್ಸಿದ್ರು ಮಾರ್ರೆ.. ಇದು ಬಂದಿದ್ದು ಒಳ್ಳೇದಾಯ್ತು.. ಅಂತದ್ರಲ್ಲಿ ಅದಕ್ಕೆ ಶಾಪ ಹಾಕೂದ ಗುಂಡೂ ಅಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಹೌದು ಕಣ್ರೋ.. ಹೂಂ ಹೌದು. .ನಾನೂ ಅದಕ್ಕೆ ನನ್ನ ಹೆಸ್ರು ಸೇರ್ಸಬೇಕೂಂತ ಇದೀನಿ ಅಂದ್ಳು ಉಮಾ.. ಆ ಕೆಲ್ಸ ಮಾತ್ರ ಮಾಡ್ಬೇಡ ಮಹಾತಾಯಿ .. ಆಮೇಲೆ ನಾನು ನಿಮ್ಗೆಲ್ಲಾ way2sms ಇಂದ ಸಂದೇಶ ಕಳ್ಸೋಕು ಆಗಲ್ಲ.. ಈಗಿನ ತರ ಅಂದ ಗುಂಡ.. ಓ ಇಲ್ಲೇ ಎಲ್ಲೋ ಗುಂಡನ ದುಃಖಕ್ಕೆ ಮೂಲ ಇದೆ ಅಂತ ಅವ್ರೆಲ್ರಿಗೂ ಡೌಟು ಶುರು ಆಯ್ತು..





           ಮೆದುಳಿಗೆ ಹುಳ ಬಿಟ್ಟುಸ್ಕೊಂಡು ಸುಮ್ನೆ ಕೂರಕ್ಕೆ ಆಗತ್ತಾ?. ಕೇಳೇ ಬಿಟ್ರು.. ಅಲ್ಲಾ way2sms ಇಂದ ಭಾರತದ ಯಾವ ಮೊಬೈಲಿಗಾದ್ರೂ ಸಂದೇಶ ಕಳ್ಸಬೋದು ಅಂತಿದ್ದೆ..ನಮ್ಗೆಲ್ಲಾ ದಿನಾ ಸಂದೇಶ ಕಳ್ಸುತಿದ್ಯಲ ನೀನು.. ಕೊನೆಗೆ via way2sms ಅಂತ ಯಾಕೆ ಹಾಕ್ಕೊತಿದ್ದೆ.. ಆ ತಾಣದ ಭಕ್ತಾನ ನೀನು ಅಂದ್ಳು ಉಮಾ.. ಎಲ್ಲಾ ನಗಾಡಿದ್ರು.. ಯಾಕೆಂತ ಅವ್ಳಿಗೆ ಮೊದ್ಲು ಗೊತ್ತಾಗ್ಲಿಲ್ಲ. ಅಲ್ಲ ಕಣೇ ಆ ತಾಣದಿಂದ ಯಾರಿಗೆ ಬೇಕಾದ್ರೂ ಸಂದೇಶ ಕಳ್ಸಬೋದು.. ಬಂದ ಸಂದೇಶ ಕಳ್ಸಿದೋರ ಸಂಖ್ಯೆಯಿಂದನೇ ಬಂದಂಗೆ ಇರುತ್ತೆ. .ಕೊನೆಗೆ ನೀ ಹೇಳಿದಂಗೆ via ಇರುತ್ತಷ್ಟೆ. ಅದರಿಂದ ೨೦ ಜನರಿಗೆ ಒಟ್ಗೆ ಸಂದೇಶ ಕಳ್ಸಬೋದು.. ಗುಂಡ ದಿನಾ ಅದ್ರಿಂದನೇ ಕಳ್ಸುತಿದ್ದ ಅಲ್ವೇನೋ ಗುಂಡಾ ಅಂದ ತಿಪ್ಪ. ಮಾತಾಡಿ ಒಳ್ಳೇ ಬಕ್ರಾ ಆದ್ನಲಾ ಅಂತ ಉಮಾಗೆ ಬೇಜಾರಾಯ್ತು..ಕಳ್ಸುಬೋದು ಅಲ್ಲ ಕಣ್ಲಾ ಕಳ್ಸುಬೋದಿತ್ತು ಅಂದ ಗುಂಡ..ಎಲ್ರೂ ಒಳ್ಳೆ ಸಸ್ಪೆನ್ಸ್ ಥ್ರಿಲ್ಲರ್ ಶುರು ಆದಂಗೆ ಗುಂಡನ್ನೇ ನೋಡಕ್ಕಿಡಿದ್ರು..

            ಮುಂದುವರಿಸಿದ ಗುಂಡ..ಈಗ DND ನಲ್ಲೀ ದಾಖಲಾಗಿರೋರಿಗೆ ಅದ್ರಿಂದ ಗ್ರೂಪ್ ಸಂದೇಶ ಇರ್ಲಿ ಖಾಲಿ ಸಂದೇಶಾನೂ ಕಳ್ಸೋಕಾಗಲ್ಲ. ರಾತ್ರೆ ಒಂಭತ್ತರಿಂದ ಬೆಳಗ್ಗೆ ೯ರ ವರ್ಗೆ ಗ್ರೂಪ್ ಸಂದೇಶ ಕಳ್ಸೋಕಾಗಲ್ಲ.. ಒಳ್ಳೇ ಗೋಳಾಯ್ತು ಇವ್ರುದ್ದು ಅಂದ.. ಓ ಅದಾ ಸಮಸ್ಯೆ.. ಅದನ್ನೇ ಯಾಕೆ ನಂಬ್ಕೋತೀಯ? 160by2.com, indyarocks ಹಿಂಗೆ ಸುಮಾರು ಇದ್ಯಲ್ಲಾ.. ಅಂದ ತಿಪ್ಪೇಶಿ.. ಎಲ್ರದ್ದೂ ಇದೇ ಕಥೆ ಅಂಬ್ರು ಮಾರ್ರೇ.. ಅಮ್ದ ಮಂಜ.. ಅಷ್ಟಕ್ಕೂ ಅಷ್ಟೆಲ್ಲಾ ತಲೆ ಕೆಡಿಸ್ಕೋ ಬೇಕಾ.. ನಿಮ್ಮತ್ರ ಎಲ್ಲಾ ಮೊಬೈಲಿರೋದು ಯಾಕೆ? ಅದ್ರಲ್ಲಿರೋ ಉಚಿತ ಸಂದೇಶ ಯಾಕೆ? ಸಿಂಪಲ್ ಆಗಿ ಇರೋದಕ್ಕೆ ತುಂಬಾ ತಲೆ ಕೆಡಿಸ್ಕೋತೀರಿ ಬಿಡ್ರಿ ಅಂದ್ಳು ಇಳಾ.. ಇವಂದು ತರ್ಕಾರಿ ಅಲ್ಲಲ್ಲಾ ಸರ್ಕಾರಿ ಮೊಬೈಲಮ್ಮ... ಮುನ್ನೂರು ಸಂದೇಶ ಉಚಿತ ಗೊತ್ತಾ ಅಂದ ತಿಪ್ಪೇಶಿ.. ಏ ಅದೆಂಗೆ ಸಾಧ್ಯ? TRAI ಅದೇ Telephone Regulatory Authority of India ಅವ್ರು ದಿನಕ್ಕೆ ೧೦೦ ಸಂದೇಶ ಮಾತ್ರ ಅಂತ ನಿಯಮ ತಂದಿಲ್ವಾ ಮೊನ್ನೆ ೨೭ರಿಂದ.. ಕಾಗೆ ಹಾರಿಸ್ಬೇಡ ತಿಪ್ಪು ಅಂದ್ಲು ಉಮಾ..ಕರೆಕ್ಟು ಉಮಾ.. ನಂಗೆ ತಿಂಗ್ಳಿಗೆ ಮುನ್ನೂರು ಸಂದೇಶ ಉಚಿತ ಅಷ್ಟೆ.ಅಂತದ್ರಲ್ಲಿ ನಿಮಗೆಲ್ಲಾ ದಿನಾ ಸಂದೇಶ ಹೇಗೆ ಕಳಿಸ್ಲಿ?.ಏನಿಲ್ಲಾ ಅಂದ್ರೂ ೫೦ ಜನ ಇದಾರೆ ನಂಗೆ ಫ್ರೆಂಡ್ಸ್..ಇದ್ದಿದ್ದೊಂದು ಆಧಾರ ಈ way2sms ಊ ಹೋಯ್ತು ಅಂತ ನಾ ತಲೆಬಿಸಿ ಮಾಡ್ಕಂಡಿದ್ರೆ ಈ ತಿಪ್ಪ ಕಾಲೆಳಿತಿದಾನೆ ಅಂತ ಮುಖ ಸಪ್ಪೆ ಮಾಡ್ಕಂಡ ಗುಂಡ..
 
ಸಂದೇಶ ಕಳಿಸ್ಲಿಲ್ಲ ಅಂದ್ರೆ ಪ್ರಪಂಚ ಏನು ಮುಳುಗೋಗಲ್ಲ ತಕ ಅಂದ ತಿಪ್ಪ.ಏ ತಿಪ್ಪ ಸುಮ್ನಿರ್ರಿ ಸಾಕು.. ಗೆಳೆಯರ್ನ ಕಳ್ಕಳೋ ದುಃಖ ಏನೂಂತ ನಿಮ್ಗೇನ್ರೀ ಗೊತ್ತು.. ನನ್ನ ೪ನೇ ಕ್ಲಾಸ್ಮೇಟು ನಂದಿನಿ ಅಂತಿದ್ಲು.. ೫ನೇ ಕ್ಲಾಸಿಗೆ ನಾನು ಬೇರೆ ಸ್ಕೂಲು. ಅವಳುದೂ ಬೇರೆ ಸ್ಕೂಲಾಯ್ತು.. ಅವತ್ತಿಂದ ಇವತ್ತಿನವರ್ಗೂ ಅವ್ಳು ಸಿಕ್ಕಿಲ್ಲ ಗೊತ್ತಾ..ಎಷ್ಟೋ ಸಲ ಅಂದ್ಕೋತೊರ್ನೀನಿ.. ಅವಾಗ್ಲೇ ಮೊಬೈಲಿದ್ದಿದ್ರೆ.. ಸಂದೇಶ ಕಳ್ಸಿಕೋತ ಇನ್ನೂ ಸ್ನೇಹ ಉಳಿಸ್ಕೋಬೋದಿತ್ತು ಅಂತ.. ಹೌದು ಕಣೆ ಉಮಾ.. ನಾ ಎಂಟ್ನೆ ಕ್ಲಾಸಲ್ಲಿದ್ದಾಗ ಉಡುಪೀಲಿ ಒಂದು ಕ್ಯಾಂಪಿಗೆ ಹೋಗಿದ್ದೆ.. ಅಲ್ಲಿ ಇದ್ದಷ್ಟು ದಿನಾ ಪ್ರಶಾಂತಿ ಹೇಳೋಳು ಒಳ್ಳೇ ಗೆಳತೀ ಆಗಿದ್ಲು.. ಹೋಗೋ ದಿನ ಅವ್ಳ ಮನೆ ಅಡ್ರೆಸ್ ಕೊಟ್ಟು ಕಾಗದ ಬರೀತಿರು ಅಕಾ ಅಂದಿದ್ಲು.. ಆಮೇಲೆ ನಾ ಬರೀತಿದ್ದೆ. ತಿಂಗ್ಳಾದ ಮೇಲೆ ಅವ್ಳ ಉತ್ರ ಬರೂದು.. ಕೆಲೋ ಸಲ ಅವ್ಳೇ ಬರ್ಯೂದು.. ಅದು ಯಾರ್ಯಾರ ಕೈಗೆ ಸಿಕ್ಕೂದೋ.. ಆನೆ ಮೂತಿಯವಂಗೆ ಗೊತ್ತು.. ಈಗಿನ ಕಾಲ್ದಲ್ಲಿ ಹಂಗೆ ತಿಂಗ್ಳೆಲ್ಲಾ ಕಾಯೂಕಾತ್ತ.. ಹಂಗಾಗಿ ಈಗ ಎಂತುದು ಇಲ್ಲೆ.. ಆಗ್ಲೇ ಮೊಬೈಲಿದ್ದಿದ್ರೆ ಚೆಂದಿತ್ತು ಕಾಣಿ ಅಂದ್ಳು ಉಮಾ.. 
 

       ಹೌದು ಮಾರ್ರೆ ನಾ ಪಿಯುಸಿ ರಜ್ದಲ್ಲಿ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಅಂತ ಸೇರ್ಕಂಡಿದ್ದೆ.ಅಲ್ಲಿ ಮಂಜು ಅಂತ ಬರ್ತಿದ್ದ. ಅವ್ನು, ನಾನು ಭಯಂಕರ ಮಾತಾಡ್ತಿದ್ವಿ.. ಬಟ್ಲರೋ.. ಕುಟ್ಲರೋ.. ಎಂತದೋ ಒಂದು.. ಆದ್ರೆ ನಂಸರ್ರು ಹೆಚ್ಚೆಚ್ಚು ಮಾತಾಡ್ರಿ ಅಂತ ನಮ್ಗೆ ಇನ್ನೂ ಪ್ರೋತ್ಸಾಹ ಕೊಟ್ತಿದ್ರು.. ಹಿಂಗೆ ಕೋರ್ಸ್ ಮುಗ್ಯೋ ಹೊತ್ಗೆ ಭರ್ಜರಿ ದೋಸ್ತಾಗಿದ್ವಿ ಮಾರ್ರೆ.. ದೋಸ್ತಾನ-೨ ಅನ್ನು ಅಂತ ಟಾಂಟ್ ಕೊಟ್ಟ ತಿಪ್ಪ.. ಎಲ್ಲ ಒಮ್ಮೆ ನಕ್ರು..ಮಂಜನ ಮುಖ ಹುಳ್ಳಗಾಯ್ತು.. ಕೊನೆಗೆ .. ಹಂಗೆಲ್ಲ ಇಲ್ಲ ಮಾರ್ರೆ.. ಕೊನೆಗೆ ಅವ್ನು ಅವ್ನ ಮೊಬೈಲು ನಂಬರ್ಕೊಟ್ಟ.. ನಾನು ನಮ್ಮನೇ ಲ್ಯಾಂಡ್ಲೈನು ನಂಬರ್ ಕೊಟ್ಟೆ.. ಎಲ್ರೂ ಬಿದ್ದು ಬಿದ್ದು ನಗಕಿಡಿದ್ರು ಈಗ.. ಅವಾಗ ನನ್ನತ್ರ ಮೊಬೈಲಿರ್ಲಿಲ್ಲ ಮಾರ್ರೆ.. ಇದ್ದಿದ್ದು ಹೇಳಿದ್ರೆ ಹಿಂಗೆ ನಗೂದ ನೀವು? ಅಂದ ಮಂಜ..

        ಹೌದು ಕಣ್ರೀ.. ನಾನು ಹೊನ್ನೇಮರಡು,ಜೋಗ,ಮುಪ್ಪಾನೆ,ದಬ್ಬೆ ಫಾಲ್ಸ್, ಕಾನೂರು ಕೋಟೆ, ಹಿಂಗೆಲ್ಲಾ ಜೋಗದತ್ರ ತಿರ್ಗಕ್ಕೆ ಶಿವಮೊಗ್ಗದ ಯೂಥ ಹಾಸ್ಟೆಲಿಂದ ಹೋಗಿದ್ದೆ.. ಅವಾಗೊಬ್ಬ ಪರಿಚಯ ಆಗಿದ್ದ..ಫುಲ್ ಮಜಾ ಮಾಡಿದ್ವಿ ಅವಾಗ ಅಂದ ಗುಂಡ.. ಯಾವಾಗ ಹೋಗಿದ್ಯೋ ಪಾಪಿ ನಮ್ಮನ್ನ ಬಿಟ್ಟು ಅಂತ ಎಲ್ರೂ ಒಂದೊಂದು ಬಿಟ್ರು.... ಆಮೇಲೆ ಕೊನೆಗೇನಾಯ್ತು ಹೇಳು ಅಂದ್ರು ಸ್ವಲ್ಪ ಸಮಾಧಾನ ಮಾಡ್ಕೊಂಡು..ಅದು ಮೊದಲ್ನೆ ಸೆಮ್ಮಿನ ಕಥೆ ಕಣ್ರೋ.. ಅವ ನಂಬರ್ ಕೊಟ್ಟಿದ್ದ.. ಎರ್ಡು ಮೂರು ದಿನಕ್ಕೊಂದೊಂದು forward ಸಂದೇಶ ಹಾಕ್ತಿದ್ದ..ಆದ್ರೆ ನನ್ನತ್ರ ಸಂದೇಶನೇ ಇರ್ತಿರ್ಲಿಲ್ವಲಾ.. ಎಲ್ಲೋ ತಿಂಗ್ಳಿಗೆ ಒಂದೊಂದು ಹಾಕ್ತಿದ್ದೆ.. ಈಗ ಅವ್ನು ಸಂದೇಶನೇ ಕಳ್ಸಲ್ಲ ಕಣ್ರೋ.. ನನ್ನ ಮರ್ತಿರ್ಬೇಕು ಅನ್ಸತ್ತೆ ಅಂತ ಮತ್ತೆ ಬೇಜಾರು ಮಾಡ್ಕಂಡ ಗುಂಡ.


       ಕರೆ ಮಾಡ್ಬೋದಿತ್ತಲ್ಲ ಅಂದ್ಳು ಇಳಾ.. ಆ ನಂಬರಿಗೆ ಮಾಡಿದ್ರೆ ಬೇರೆ ಯಾರೋ ಎತ್ಕೋತಾರೆ.... ಬಹುಶ ನಂಬರ್ ಬದಲಾಯಿಸಿರ್ಬೇಕು.. ಅದ್ಕೇ ಹೇಳೋದು ಅಪರೂಪಕ್ಕಾದ್ರೂ ಸಂದೇಶ ಕಳ್ಸುತಿರಬೇಕು ಅಂತ.. ಕಂಜೂಸಿ, ನಿನ್ನ ತರ್ಕಾರಿ ಮೊಬೈಲು ಸಿಮ್ಮು ತೆಗ್ದು ಬೇರೆ ಹಾಕ್ಕ ಮೊದ್ಲು ಅಂದ ತಿಪ್ಪ..ಏ ಹಂಗೆಲ್ಲಾ ಎಸ್ಯಕ್ಕಾಗಲ್ಲ.. ನಮ್ಮನೇಗೆ ಮಾಡಕ್ಕೆ ಅದೇ ಬೇಕು.. ಸಿಮ್ ತೆಗ್ಯದು ಹಾಕದು ಗೋಳೇ ಬ್ಯಾಡ ಅಂತ ನಾನು way2sms ನಿಂದ ಕಳ್ಸೋಕೆ ಶುರು ಮಾಡಿದ್ದು ಅಂದ ಗುಂಡ... ಓ ಸರಿ ಸರಿ ಅಂತ ಏರ್ಟೆಲ್ ಹಾಡು ಹಾಡೋಕೆ ಶುರು ಮಾಡಿದ್ಲು ಉಮಾ.. ನೋಡಿ ಈ ಹಾಳು ನೆಟ್ವಕ್ರೋರು ಹಬ್ಬದ ದಿನ , ಅದ್ರ ಹಿಂದಿನ ದಿನ ಎಲ್ಲ ಸಂದೇಶ ಕಳ್ಸೋಕೆ ಬಿಡೋಲ್ಲ.. ಅದಕ್ಕೂ ದುಡ್ಡು ಹೆರೀತಾರೆ.. ಆದ್ರೆ ಅದ್ರಲ್ಲಿ ಆ ಗೋಳು ಇರ್ಲಿಲ್ಲ.. ಈಗ ಹೆಚ್ಚಿನವ್ರೆಲ್ಲಾ DND ಗೆ ಸೇರ್ಕಂಡು ಬಿಟ್ಟಿರೋದ್ರಿಂದ ಅವ್ರಿಗೆಲ್ಲಾ ಸಂದೇಶ ಕಳ್ಸೋಕೆ ಆಗಲ್ಲ ಕಣೋ.. ಎಲ್ಲಿ ಈಗಿರೋ ಗೆಳೆಯರನ್ನೂ ಕಳ್ಕೋತೀನೋ ಅಂತ ಬೇಜಾರಾಕ್ತಿದೆ ಕಣ್ರೋ ಅಂತ ಮತ್ತೆ ಹಳೇ ಮೂಡಿಗೇ ಬಂದ.. dual sim ಫೋನ್ ತಗೋ ಅಂದ್ಳು ಇಳಾ.. ಮತ್ತೊಂದು ಹೊಸ ಫೋನಿಟ್ಕ ಹೊಸ ಸಿಮ್ಮಿಗೆ ಅಂದ ಮಂಜ.. ಈಗಿರ ಫೋನಿಗೆ ಹೊಟ್ಟೆ ತುಂಬ್ಸೋಕೆ ಆಗಲ್ಲ.. ಅಂತದ್ರಲ್ಲಿ ಎರಡೆರಡು.. ಅದಕ್ಕೆ ಚಾರ್ಜು.. ದುಡ್ಡು.. ಇದೆಲ್ಲಾ ನನ್ಕೈಯಲ್ಲಿ ಆಗಲ್ಲಪ್ಪಾ ಅಂದ ಗುಂಡ.. ಹೂಂ.. ಕಾಲೇಜಿಗೂ ಬರ್ಬಾರ್ದು.. ಹಾಜರೀನೂ ಸಿಗ್ಬೇಕು ಅಂದಗಾಯ್ತು ನಿನ್ನ ಕಥೆ.. ಆ ಪರಮಾತ್ಮನೇ ನಿಂಗೆ ದಾರಿ ತೋರಿಸ್ಬೇಕು.. ನಡೀರೋ ಹೋಗೋಣ ಅಂತ ಎದ್ದ ತಿಪ್ಪ... ಏ ತಡೀರಿ ಮಾರ್ರೆ.. ಗುಂಡ ಹೇಳೂದ್ರಲ್ಲೂ ಪಾಯಿಂಟು ಉಂಟು.. ಏನಾದ್ರೂ ಹೊಸದು ಯೋಚ್ನೆ ಮಾಡ್ವ ತಡೀರಿ ಅಂದ ಮಂಜ.. ಎಲ್ರ ಕಣ್ಣೂ ತಲೆ ಮೇಲೆ ಹಾರಿಹೋದ ಗುಂಪು ಗಿಣಿಗಳ ಮೇಲೆ ಬಿತ್ತು.. ಹಂಗೆ ನೆನಪದೋಣಿ ಹಿಂದೆ ಜೀಕುತ್ತಾ ಜೀಕುತ್ತಾ ಎಲ್ರಿಗೂ ತಮ್ಮ ಕಳೆದಕೊಂಡಿಗಳ ನೆನಪು ಕಾಡಹತ್ತಿತು..

Thursday, September 15, 2011

೧೦೮

ಏನಾರು ಕೆಲಸ ಮಾಡೋಕೆ ಹೋದ್ರೆ ನೂರೆಂಟು ಸಮಸ್ಯೆಗಳು ಥೋ.. ಅಂತ ಗುಂಡ ಗೊಣಗ್ತಾ ಇರ್ಬೇಕಾದ್ರೆ ಅವ್ನ ಸ್ನೇಹಿತರೆಲ್ಲಾ ಅಲ್ಲಿಗೆ ಬಂದ್ರು.. ಏನು ಗುಂಡು..ಕಷ್ಟ ಬಂದಾಗ ಅದ್ರ ಎದ್ರುಸುದು ಬಿಟ್ಟು ಎಣಿಸ್ತಾ ಕೂರೂದ? ಅದು ನೂರ ಎಂಟರ ಕರ್ಮ ಅಲ್ಲ. ನೂರೆಂಟು ಬಾಳ ಒಳ್ಳೆ ಸಂಖ್ಯೆ ,ಗೊತ್ತುಂಟಾ? ಅದಕ್ಕೆ ಶಾಪ ಹಾಕೂದ ನೀನು. ನೋಡು ನಾವು ಜಪ ಮಾಡೂದೆಲ್ಲ ಎಷ್ಟೆಷ್ಟು? ೨೮, ೫೪, ೧೦೮.. ಹೀಗೆ ಅಲ್ಲದಾ?ದುರ್ಗಾದೇವೀದೂ ನೂರೆಂಟು ಹೆಸ್ರುಂಟು ದುರ್ಗಾಸಪ್ತಶತಿ ಯಲ್ಲಿ. ನೂರೆಂಟು ಮೋದಕ ಗಣೇಶಂಗು ಭಾರಿ ಇಷ್ಟ ಅಂತೆ ಮಾರ್ರೆ.. ಬೆಂಗ್ಳೂರು ಕುಮಾರು ಸ್ವಾಮಿ ಲೇಯೌಟಲ್ಲಿ ನೂರೆಂಟು ಗಣಪನ ದೇವಸ್ಥಾನವೂ ಉಂಟು ಗೊತ್ತುಂಟೋ ಅಂದ ಮಂಗಳೂರು ಮಂಜ. ಹೌದೌದು ಭಾಳ ಒಳ್ಳೆ ಸಂಖ್ಯೆ.. ಮೊನ್ನೆ ದಾರೀಲಿ ಆಕ್ಸಿಡೆಂಟಾಗಿ ಬಿದ್ದಿದ್ದ ಪರಮೇಶಿನ ಸಿರಿ ರಾಮುಲು ಗಾಡೀಲೆ ಎತ್ಕೊಂಡೋಗಿದ್ದು.. ಅದೇ ೧೦೮.. ಅದಿಲ್ದಿದ್ರೆ ಅವನ ಗತಿ ದೇವರೇ ಗತಿ ಅಂದ ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ.

 ಸುಮ್ನಿರಿ ತಿಪ್ಪ..ಬರೀ ತಮಾಷೆನೇ ಆಯ್ತು. ನೂರಾ ಎಂಟಕ್ಕೆ ಗಣಿತದಲ್ಲಿ ಎಷ್ಟು ಮಹತ್ವ ಉಂಟು ಗೊತ್ತುಂಟಾ? Regular pentagon ಅಂದ್ರೆ ಸಮ ಪಂಚಭುಜಾಕೃತಿಯಲ್ಲಿ ಒಳಗಿರೋ ಕೋನಗಳೆಲ್ಲಾ ೧೦೮ ಡಿಗ್ರಿ. ೧೦೮ ಕ್ಕೆ ಒಟ್ಟು ೧೨ ಭಾಜಕಗಳು. ಆ ೧೨ರಿಂದಲೇ ಭಾಗಿಸಲ್ಪಡೋದು ಅದರ ವಿಶೇಷತೆ.ಅದಕ್ಕೆ ಅದನ್ನ refactorable number ಅಥವಾ ಪುನರ್ವಿಭಾಜಕ ಸಂಖ್ಯೆ ಅಂತಾರೆ. ೧೦೮ ಕ್ಕೆ regular number, semi perfect number, tetranacci number, harsha number ಅಂತೆಲ್ಲಾ ಕರೀತಾರೆ ಗೊತ್ತಾ ಅಂದ್ಳು.. ಅವ್ಳು ಹೇಳಿದ್ದು ಯಾರಿಗೆ ಅರ್ಥ ಆಯ್ತೋ ಇಲ್ವೋ ಗೊತ್ತಾಗ್ಲಿಲ್ಲ ಹೌದಾ? ಅಂದ್ರು.. ಅದೂ ಹೇಳ್ದಿದ್ರೆ ಇನ್ನೂ ಕೊರಿತಾಳೆ ಅಂತ.


 ಕೃಷ್ಣನಿಗೆ ನೂರಾ ಎಂಟು ಜನ ಗೋಪಿಯರಿದ್ರಂತೋ ಅಂತ ಶುರು ಮಾಡದ ತಿಪ್ಪ. ನಂ ಬುದ್ದನಿಗೆ ೧೦೮ ಪ್ರಶ್ನೆ ಕೇಳಿದ್ನಂತೆ ಭೋದಿಸತ್ವ ಮಹಾಮುನಿ ಅಂದ್ಳು ಇಳಾ. ಝೆನ್ ಮುನಿಗಳು ೧೦೮ ಮಣಿಗಳಿರೋ ಸರ ಸುತ್ಕೋತಾರಂತೆ ಕೈಗೆ ಅಂದ ಗುಂಡ ತಾನೂ ಏನೂ ಕಮ್ಮಿ ಇಲ್ಲ ಅನ್ನೋ ತರ. ನಿಮಗೆ ಬೇರೆ ಅವ್ರನ್ನ ಹೊಗಳೋದೆ ಆಯ್ತು.. ಇದರ ಮಹತ್ವ ನಮ್ಮ ವೇದಾಂತಿಗಳಿಗೆ ಮೊದಲೇ ಗೊತ್ತಿತ್ತಂತೆ ಅಂದ ಮಂಜ. ಅದು ಹ್ಯಾಗೆ ಮಾರ್ರೆ ಅಂದ್ರು ಎಲ್ಲಾ? ಈಗ ನ್ವಾಡಿ.. ಸೂರ್ಯನಿಂದ ಭೂಮಿಗಿರೋ ದೂರನ ಸೂರ್ಯನ ವ್ಯಾಸದಿಂದ ಭಾಗಿಸಿದ್ರೆ ಬರೋದು ಎಷ್ಟು ಗೊತ್ತುಂಟಾ ಅಂದ. ಯಾರ್ಗೂ ಗೊತ್ತಿರ್ಲ್ಲಿಲ್ಲ. ಅದು ೧೦೮, ಅದೇ ತರ ಚಂದ್ರನಿಂದ ಭೂಮಿಗಿರೋ ದೂರನ ಚಂದ್ರನ ವ್ಯಾಸದಿಂದ ಭಾಗಿಸಿದ್ರೆ ಬರೋ ದೂರನೂ.. ೧೦೮ ಅಂದ್ರು ಎಲ್ರೂ ಒಟ್ಟಿಗೆ.. ಒಮ್ಮೆ ನಗು.. ಅದಕ್ಕೇ ನೂರಾ ಎಂಟಕ್ಕೆ ವೇದಾಂತದಲ್ಲಿ ಮಹತ್ವ ಅಂದ ಮಂಜ.. ಆದ್ರೂ ನಗು ಕಮ್ಮಿ ಆಗ್ಲಿಲ್ಲ..



 ಅದು ಶಾಂತ ಆಗೋದ್ರೊಳಗೆ ಇಳಾ ಹೇಳಿದ್ಳು. ನಾನೊಂದು ಸಂಶೋಧನೆ ಮಾಡಿದ್ದೀನಿ. ಸಂಖ್ಯಾಶಾಸ್ತ್ರ ಉಪಯೋಗಿಸ್ಕಂಡು.. ಅದೂ ನೂರಾ ಎಂಟರ ಬಗ್ಗೆ ಅಂದ್ಳು. ಎಲ್ರೂ ಸುಮ್ನಾದ್ರು. ಅವ್ಳೇ ಹೇಳಿದ್ಲು. ೧೦೮ ನ one not eight ಅಂತ ಬರೀತಿವಲ್ಲಾ. ಅದ್ರ a=1 , z=26 ಅಂತ ಎಣಿಸ್ಕೊಂಡು ಕೂಡಿದ್ರೆ ಅದರ ಮೊತ್ತ ೧೦೪ ಬರುತ್ತೆ. ಎಷ್ಟು ಹತ್ರ ಅಲ್ವಾ ಅಂದ್ಳು.. ಭೇಷ್ ಅಂದ್ರು ಎಲ್ಲಾ. ಅಷ್ಟೇ ಅಲ್ಲ. ನಮ್ಮ ಕನ್ನಡದಲ್ಲೂ ನ್=೩೬, ರ್=೪೩, ಟ್=೨೬. ಎಲ್ಲಾ ಕೂಡಿದ್ರೆ ೧೦೬. ಆದ್ರೆ "ನೂರಾ ಎಂಟು" ಅಂತ ಬರ್ದು ಸ್ವರಗಳನ್ನೂ ಲೆಕ್ಕಕ್ಕೆ ತಗಂಡ್ರೆ ಅಂದ್ರೆ ಆ=,=,=,=,ಅಂ=೧೫.. ಒಟ್ಟು ೧೪೪ ಬರುತ್ತೆ. ++= . ಅದೇ ರೀತಿ ೧++=.. ಎರಡೂ ಒಂದೇ ಆಯ್ತಲ್ವಾ.. ನಮ್ಮ ಹೇಗಿದೆ ನನ್ನ ಸಂಶೋಧನೆ ? ನಮ್ಮ ಹಿಂದೆ ಇಂಥದ್ದು ಎಷ್ಟೋ ಇರುತ್ತೆ ನಾವೇ ನೋಡಿರಲ್ಲ ಅಂದ್ಲು.. ಇದಕ್ಕೆ ಎಲ್ರೂ ಒಮ್ಮೆ ಚಪ್ಪಾಳೆ ಹೊಡುದ್ರು.. ನಮ್ಮ ದಶಮಾನ ಪದ್ದತಿಯಲ್ಲಿ ಒಂಭತ್ತಕ್ಕೆ ಹೆಚ್ಚು ಬೆಲೆ. ಅದಕ್ಕೆ ಮೊತ್ತ ೯ ಬರೋ ತರದ ೧೦೮ ಸಂಖ್ಯೆಗೆ ಮಹತ್ವ ಇರ್ಬೋದು ಅಂತ ನನ್ನ ಭಾವನೆ.. ಏನಂತೀರ ಮಂಜು ಅಂದ್ಳು




ನಮ್ಮ ಆಯುರ್ವೇದದ ಪ್ರಕಾರ ದೇಹದಲ್ಲಿ ೧೦೮ ಸ್ಪರ್ಶ ಕೇಂದ್ರಗಳಿದ್ಯಂತೆ. ಇದನ್ನು ಚೀನಾದ ಯುದ್ದ ಕಲಾ ಶಾಲೆಗಳೂ ಒಪ್ಪುತ್ತಂತೆ. ಕರಾಟೆಗೂ ೧೦೮ಕ್ಕೂ ಸಂಬಂಧ ಇದ್ಯಂತೆ. ಅಂದ ೧೦೮ ಕ್ಕೆ ಮತ್ತೆ ಭಾರತೀಯತೆಯ ಸ್ಪರ್ಶ ಕೊಡ್ತಾ ಮಂಜ. ಕರಾಟೆ , ಚೀನಾ ಅಂದ ತಕ್ಷಣ ನೆನ್ಪಾಯ್ತು ನೋಡು.. ಜಪಾನ್ ನಲ್ಲಿರೋ ಬೌದ್ದ ದೇವಾಲಯಗಳಲ್ಲಿ ವರ್ಷದ ಕೊನೇ ದಿನ ಹಳೇ ವರ್ಷಕ್ಕೆ ವಿಧಾಯ ಹೇಳಕ್ಕೆ ಮತ್ತೆ ಹೊಸದನ್ನ ಬರಮಾಡಿಕೊಳ್ಳಕ್ಕೆ ಅಂತ ೧೦೮ ಸಲ ಘಂಟೆ ಬಡೀತಾರಂತೆ ಅಂದ ಗುಂಡ.. ಯಾಕ್ಲಾ ನಮ್ಕಡೇ ಘಂಟೆ ಹೊಡ್ದು ಸತ್ಯ ಹೇಳ್ತೀನಿ, ಸುಳ್ಳು ಹೇಳಾಕಿಲ್ಲ, ತಪ್ಪು ಮಾಡಾಕಿಲ್ಲ ಅಂತಾರಲ ಹಂಗಾ ? ಅಂದ ತಿಪ್ಪ.. . ಆ ತರ ಅಲ್ಲಲೇ, ಅವ್ರ ಪ್ರಕಾರ ನಿರ್ವಾಣ ಹೊದ್ಬೇಕಿದ್ರೆ ೧೦೮ ಮಾಯೆಗಳಿಂದ ಬಿಡುಗಡೆ ಹೊಂದ್ಬೇಕಂತೆ..ಪ್ರತೀ ಹೊಸ ವರ್ಷಕ್ಕೂ ಅದನ್ನ ನೆನಪಿಸೋ ಸೂಚಕ ಅಂತೆ ಕಣ್ಲಾ ಅದು ಅಂದ ಗುಂಡ. ಎಲ್ಲ ಓ ಅಂದ್ರು




ನಮ್ಮ ಕೆಂಪು ಟೋಪಿ ಕಂಪ್ಯೂಟ್ರು ಒಕ್ಕೂಟುದೋರು... ಅಂತ ಗುಂಡ ಶುರು ಮಾಡ್ತಿದ್ದಂಗೆ ಸ... ಪಕ್ಸನಾ ಅಂದ ತಿಪ್ಪ. ಹೇ ಅದಲ್ಲಲೇ ಶುದ್ದ ಕನ್ನಡ ವಿರೋಧಿ ನೀನು.. ಅದೇ redhat ಕಣ್ಲಾ.. ಅವ್ರು ಶುರು ಮಾಡಿರೋ developer ಗಳ ಸಂಘದ ಹೆಸ್ರೂ ೧೦೮ ಕಣ್ಲಾ ಅಂದ ಗುಂಡ. .ಯಾಕೋ ಅಂದ್ರೆ ಉತ್ರ ಇಲ್ಲ ಗುಂಡನತ್ರ.. ಏನೋ ಹೇಳಕ್ಕೋಗಿ ಸಿಕ್ಕಾಕಂಡಂಗೆ ಆತು ಈಗ ಗುಂಡಂಗೆ.. ಎಲ್ಲ ನಗಕ್ಕೆ ಹಿಡುದ್ರು. ಏ ಮರ್ತೇ ಹೋಗಿತ್ತು. ನಮ್ಮನೆ ಕರೆಂಟು ಬಿಲ್ಲು ಬಂದೈತೆ. ಥತ್ ತರೇಕಿ.. ಅದೂ ಈ ಸಲ ೧೦೮ ರೂಪಾಯಿ ನೋಡ್ರಿ.. ಕಟ್ಬೇಕು ಇವತ್ತು.. ಅಗ್ಲೇ ೮ನೇ ತಿಂಗ್ಳ ಹತ್ತನೇ ದಿನ ಆಗೋಯ್ತು. .ಥೋ ಹೋಗ್ಬೇಕು ಈಗ ಆಗ್ಲೇ ಹತ್ತು ಘಂಟೆ ೮ ನಿಮಿಷ ಆಗೇ ಹೋಯ್ತು.. ನಿಮ್ಮತ್ರ ಮಾತಾಡ್ತಾ ಆಡ್ತಾ ಟೈಮೇ ನೆಪ್ಪಾಗ್ಲಿಲ್ಲ ಅಂತ ಹೊಂಟ ಅಲ್ಲಿಂದ ಕಾಲ್ಕಿತ್ತ ಗುಂಡ. ಏ ಗುಂಡ ನಿಧಾನ ಹೋಗೋ.. ೧೦೦ ರಲ್ಲಿ ಹೋಗಿ ೧೦೮ರಲ್ಲಿ ಬರ್ಬೇಡ ಮತ್ತೆ ಅಂತ sms ಜೋಕ್ ಹಾರ್ಸಿದ ತಿಪ್ಪ.. ಎಲ್ಲಾ ನಗಕಿಡಿದ್ರು.. ನಿಧಾನ ಹೋಗೋ , ರಸ್ತೆ ನೋಡ್ಕಂಡು ಹೋಗೋ.. ಪಕ್ಕದಲ್ಲಿದ್ದೋರ್ನೂ ನೋಡ್ಕಂಡು ಹೋಗೊ..ಫಾಸ್ಟ ಬರ್ತಿರೋ ೧೦೮ ನೋಡ್ಕಂಟು ಹೋಗು, ಅದ್ರಲ್ಲಿ ಬರ್ದಿದ್ದಂಗೆ ನೋಡ್ಕಂಡು ಹೋಗೋ.. ಅಂತ ರಾಗ ಶುರುವಾಯ್ತು...

Tuesday, September 13, 2011

when u have deleted ur GPRS settings in the cell

You can try the following options..

1) sms < model number> to 58355. Its free.. eg:- NOKIA 2700 Then the corresponding operator (Airtel, bsnl or whatever) will send the settings to your cell

2) Put another sim into ur cell. Remove it and Insert your sim again.. You will have the settings in place..

3) Call the Customer Care and tell them to send the settings..

Thursday, August 18, 2011

ನಾವು ತಿಂದ ಕ್ಯಾಪ್ಸೂಲುಗಳು ಕರಗೋದೇಗೆ?

ನಂಗೂ ಇದೇ ಸಂದೇಹ ಬಂದಾಗ ಮೊದಲನೇ ಪಾಠಶಾಲೆನ ಕೇಳ್ದೆ. ಅವ್ರು ನಂಗೂ ಸರಿ ಗೊತ್ತಿಲ್ಲ. ಮೊನ್ನೆ ಕತ್ತರಿಸಿದ ಕ್ಯಾಪ್ಸೂಲ್ ಕವರು ನೀರಲ್ಲಿ ಬಿದ್ದು ಅರ್ಧ ಕರಗಿತ್ತ ಮಗ್ನೆ ಅಂದ್ರು.. ಸರಿ ಅಂತ ನೆಟ್ಟಣ್ಣನ್ನ ಕೇಳಿದ್ರೆ ಸುಮಾರು ಮೀನೆಣ್ಣೆ ಬಗ್ಗೆ ಮಾಹಿತಿ ಒಗ್ದ. ಅದಕ್ಕೂ ಇದಕ್ಕೂ ಎಂತಾ ಸಂಬಂಧ ಇಶ್ಶೀ ಅಂತೀರಾ? ನೀವು ಅಂದ್ಕೊಂಡ ಹಾಗಿಲ್ಲ ಓದಿ ಮುಂದೆ

ಕೆಲವೊಂದು ಮಾತ್ರೆಗಳಲ್ಲಿರೋ ಅಂಶಗಳು ಇಂಥಲ್ಲೇ ಜೀರ್ಣವಾಗ್ಬೇಕು ಅಂತಿರುತ್ತೆ. ಅಂದ್ರೆ ಹೊಟ್ಟೇಲಿ,ಕರುಳಲ್ಲಿ ಹೀಗೆ. ಹೊಟ್ಟೆಯ ಆಮ್ಲ ಗುಣದಿಂದ ಮಾತ್ರೆಲಿರೋ ಅಂಶಗಳು ಹಾಳಾಗ್ಬೋದು ಅಥವಾ ಬೇರೆ ರೀತಿ ಪ್ರತಿಕ್ರಿಯೆಗಳು , ವಿಚಿತ್ರ ವಾಸನೆಗಳು ಬರ್ಬೋದು. ಹಾಗಾದ್ರೆ ಕರುಳಲ್ಲಿ ಜೀರ್ಣ ಆಗ್ಬೇಕಾದ ಮಾತ್ರೆನ ಕರುಳಿಗೆ ಹೇಗೆ ತಲುಪಿಸೋದು.. ತಿಂದಿದ್ದೆಲ್ಲಾ ಹೊಟ್ಟೆ ಮೂಲಕನೇ ಕರುಳಿಗೇ ಹೋಗ್ಬೇಕಲ್ಲಾ? ಅದಕ್ಕೇ ಅಂತನೇ enteric coating ಅನ್ನೋ ತಂತ್ರ ಇರೋದು. ಅದೇನಪಾ ಅಂದ್ರೆ ಮಾತ್ರೇನ ಪ್ರತ್ಯಾಮ್ಲದಿಂದ ಮುಚ್ಚೋದು(cover).enteric ಅಂದ್ರೆ ಕರುಳು ಅಂತನೇ ಅರ್ಥ. ಹಾಗಾಗಿ ಕರುಳಲ್ಲಿ ಜೀರ್ಣ ಆಗೋ ಮಾತ್ರೆ ಅಲ್ಲಿಗೇ ಹೋಗುತ್ತೆ. ಅಲ್ಲಿರೋ ಪ್ರತ್ಯಾಮ್ಲಗಳಲ್ಲಿ ಕರಗಿ ಅದರಲ್ಲಿನ ಅಂಶಗಳ್ನ ಬಿಡುಗಡೆ ಮಾಡುತ್ತೆ. ನಾವು ನೋಡೋ ಕ್ಯಾಪ್ಲೂಸ್ಗಳ ಕೋಟಿಂಗ್ ಇದೇನೆ. ಇದನ್ನ ಮೇಣಗಳು, ಹಲ ತರದ fatty acid ಗಳಿಂದ ಮಾಡಿರ್ತಾರೆ..

ವೀಕ್ಷಕರೇ ಆಗ್ಲೇ ಮೀನಿನ ವಾಸ್ನೆ ಅಂದ್ನಲಾ.. ಈಗ ನೆನ್ಪಾಯ್ತು ನೋಡಿ.. ಸುಮಾರು ಕಂಪನಿಗಳು ಮೀನೆಣ್ಣೇನ ತಮ್ಮ ಮಾತ್ರೆಗಳಲ್ಲಿ ಉಪಯೋಗಿಸ್ತಾರೆ. ಆದ್ರೆ ಅದು ಹೊಟ್ಟೆಗೆ ಹೋದಾಗ ಬಾಯಿಂದ ಮೀನಿನ ಕೊಳೆತ ವಾಸನೆ ಬರೋದು ಇತ್ಯಾದಿ ಆಗ್ತಿತ್ತಂತೆ. ಅದಕ್ಕೆ ಅದಕ್ಕೂ ಈ ಎಂಟರಿಕ್ ಅಂಟು ಉಪಯೋಗಿಸ್ತಾರಂತೆ.. ನಿಂಗೂ ?

ಏ ಕೆಂಚಾ ನಿಲ್ಸಾ.. ಎಲ್ಲ ಟಿ.ವಿ ಆಫ್ ಮಾಡಕತ್ತಿದ್ರು.. ಕಟ್ ಕಟ್.. ವೀಕ್ಷಕರೇ ನಮ್ಮ ಸಂಚಿಕೆ ಹೇಗಿತ್ತು? ಮತ್ತೆ ಭೇಟಿಯಾಗೋಣ ಶುಭರಾತ್ರಿ ಎನ್ನುತ್ತಾ ಪಾಪಣ್ಣ ಆನ್ಲೈನ್ ಟಿ.ವಿ.

ಮಾಹಿತಿ ಮೂಲ: ಗೂಗಲ್, ವಿಕಿಪೀಡಿಯ

Composition of coatings
1)methyl acrylate-methacrylic acid copolymers
2)cellulose acetate succinate
3)hydroxy propyl methyl cellulose phthalate
4)hydroxy propyl methyl cellulose acetate succinate (hypromellose acetate succinate)
5)polyvinyl acetate phthalate (PVAP)
6)methyl methacrylate-methacrylic acid copolymers
7)Sodium alginate and stearic acid

Friday, August 12, 2011

ವಿಮಾನಯಾನ: ವಿಷಯಾನ

ಶೀರ್ಷಿಕೆ ನೋಡಿ ನಾನು ಪೋಲಿಸರು ಹತ್ತಿಸುತ್ತಾರೆ ಅನ್ನೋ ವಿಮಾನದ ಬಗ್ಗೆ ಮಾತಾಡ್ತಾ ಇದ್ದೀನಾ ಅಂತ ಕೆಲವ್ರಿಗೆ ಸಂದೇಹ ಬಂದ್ರೂ ಬಂದಿರ್ಬೋದು. ಇಲ್ಲಾ ಸ್ವಾಮಿ. ನಾ ಹೇಳ್ತಿರೋದು ಜನ್ರು ಬೇಗ ಹೋಗ್ಬೇಕೋ, ದೂರ ಹಾರ್ಬೇಕು ಅಂತ ಬಳಸೋ ವಿಮಾನದ ಬಗ್ಗೇನೆ. ಅದು ಅಪಘಾತವಾಗಿ ಸುಮಾರು ಜನ ಸಾಯ್ತಾರೆ.ಆದ್ರೆ ಅದ್ರಲ್ಲಿನ ಪ್ರತೀ ಪ್ರಯಾಣವೂ ಹೇಗೆ ವಿಷಯಾನ ಆಗತ್ತೆ ಅಂತ ಕುತೂಹಲ ಕಾಡೋಕೆ ಶುರು ಆಯ್ತಾ? ಹಾಗಾದ್ರೆ ಮುಂದೆ ಓದಿ.
ಕಾಸ್ಮಿಕ್ ಕಿರಣಗಳು ಅಂತ ನೀವು ಕೇಳಿರಬಹುದು.ಅಂತರಿಕ್ಷದಲ್ಲಿ ಸಂಚರಿಸ್ತಾ ಇರೋ ಶಕ್ತಿಭರಿತವಾ ಹೀಲಿಯಂ ಅಯಾನುಗಳು, ಪ್ರೋಟಾನುಗಳು ಇತ್ಯಾದಿಗಳಿಗೆ ಹಾಗೆನ್ನುತ್ತಾರೆ. ಅವು ನಮ್ಮ ಭೂಮಿಯ ಕಡೇನೂ ಬರ್ತಿರುತ್ತೆ. ಆದ್ರೆ ನಮ್ಮ ಹೀರೋ ಸೂರ್ಯನ ಮತ್ತು ಭೂಮಾತೆಯ ಆಯಸ್ಕಾಂತೀಯ ಕ್ಷೇತ್ರಗಳು ಅವನ್ನು ಭೂಮಿಯಿಂದ ದೂರ ತಳ್ಳೋಕೆ ಪ್ರಯತ್ನ ಮಾಡ್ತಾ ಇರುತ್ತೆ. ಹೆಚ್ಚು ದೂರ ಕ್ರಮಿಸಿದಂತೆ, ಭೂಮಿಯ ವಾತಾವರಣದಿಂದಲೂ ಆ ಕಿರಣಗಳ ತೀವ್ರತೆ ಸ್ವಲ್ಪ ಕಮ್ಮಿ ಆಗುತ್ತೆ.ಹಂಗಂತಾ ನಾವ್ಯಾಗ್ಲೂ ಸುರಕ್ಷಿತರಲ್ಲ ಸ್ವಾಮಿ.ಸೂರ್ಯನೇ ಕೆಲವೊಮ್ಮೆ ಸೌರಜ್ವಾಲೆಗಳ ಮೂಲಕ ಕಾಸ್ಮಿಕ್ ಕಿರಣಗಳಿಗೆ ಪುಷ್ಟಿ ನೀಡೋದುಂಟು. ಸೂರ್ಯನಿಗೂ ಸೂರ್ಯಚಕ್ರ ಅಂತ ಇರುತ್ತೆ. ಪ್ರತೀ ಹನ್ನೊಂದು ವರ್ಷಕ್ಕೆ ಪುನರಾವರ್ತನೆ ಆಗತ್ತೆ. ತೀಕ್ಷ್ಣ ಅವಧಿ ಅಂದರೆ ಸೂರ್ಯನಲ್ಲಿ ನಡೆಯೋ ಚಟುವಟಿಕೆಗಳೆಲ್ಲಾ ಚೆನ್ನಾಗಿ ನಡೆದು ಅದರಿಂದ ಪ್ರಬಲ ಆಯಸ್ಕಾಂತೀಯ ಕ್ಷೇತ್ರ ನಿರ್ಮಾಣ ಆಗೋ ಸಮಯ. ದುರ್ಬಲ ಅಂದ್ರೆ ಇದಕ್ಕೆ ವ್ಯತಿರಿಕ್ತ. ಈ ರೀತಿ ದುರ್ಬಲವಾದಾಗ ತೀಕ್ಣವಾಗಿದ್ದಾಗ ತಡೆಯೋದಕ್ಕಿಂತ ೪೦ ಪ್ರತಿಶತ ಕಮ್ಮಿ ತಡೆಯುತ್ತೆ. ಇಷ್ಟೆಲ್ಲಾ ಪೀಠಿಕೆ ಆದ ಶೀರ್ಷಿಕೆಯ ವಿಷಯಕ್ಕೆ ಬರೋಣ.

ಮುಂಚೇನೆ ಓದಿದ್ರಿ ವಾತಾವರಣದಲ್ಲಿ ಹೆಚ್ಚೆಚ್ಚು ಮೇಲೆ ಹೋದಂತೆಲ್ಲಾ ಕಾಸ್ಮಿಕ್ ಕಿರಣಗಳ ತೀವ್ರತೆ ಜಾಸ್ತಿ ಆಗತ್ತೆ ಅಂತ.ನಮ್ಮ ಪ್ರಯಾಣಿಕರ ವಿಮಾನಗಳು ಸಾಮಾನ್ಯವಾಗಿ ೧೦೦ ಕಿ.ಮೋ ರಷ್ಟು ಎತ್ತರಕ್ಕೆ ಹಾರುತ್ತೆ ಅಂತಾರೆ ತಜ್ಞರು.ಅಂದ್ರೆ ಈ ವಿಕಿರಣಗಳ ಪ್ರಭಾವವೂ ನೆಲದಲ್ಲಿದ್ದಕ್ಕಿಂತ ೧೦೦ ಪಟ್ಟು ಹೆಚ್ಚು ಅಂತಾರೆ ಅವರು.ಈ ರೀತಿ ವಿಕಿರಣಗಳಿಗೆ ಒಗ್ಗಿಕೊಳ್ಳೋದ್ರಿಂದ ಕ್ಯಾನ್ಸರ್ ನಂತಹ ಕಾಯಿಲೆ ಬರ್ಬೋದು. ಮಕ್ಕಳ , ಗರ್ಭದಲ್ಲಿರೋ ಕಂದಮ್ಮಗಳ ದೇಹ ಹೆಚ್ಚು ಸೂಕ್ಷ್ಮವಾಗಿರುತ್ತೆ . ಹಾಗಾಗಿ ಅವಕ್ಕೆ ಇನ್ನೂ ಅಪಾಯ ಅಂತಾರೆ ಅವ್ರು.ಈಗ ಪ್ರಭಾವ ಕಾಣದಿದ್ರೂ ಇನ್ನು ಕೆಲವರ್ಷದಲ್ಲಿ ಕಾಣುತ್ತೆ ಅಂತಾರೆ ಅವ್ರು.
ಹಾಗಂದ ಮಾತ್ರಕ್ಕೆ ಒಂದೋ,ಎರಡೋ ಬಾರಿ ಪ್ರಯಾಣ ಮಾಡಿದ್ರೆ,ಅಪರೂಪಕ್ಕೆ ಮಾಡೋರಿಗೂ ಕ್ಯಾನ್ಸರ್ ಬರೊತ್ತೆ ಅಂತ ಅರ್ಥಾನ ಅಂದ್ರೆ ಉತ್ರ ಖಂಡಿತ ಇಲ್ಲ.ನೀವು ೧೦೦ ಸಾರಿ(ಅಂದಾಜು ಸಾವಿರ ಘಂಟೆ) ದೂರದ ವಿಮಾನ ಪ್ರಯಾಣ ಮಾಡಿದ್ರೆ ಒಂದು ವರ್ಷದಲ್ಲಿ ನೀವು ನೆಲದಲ್ಲಿ ಪಡೆಯೋ ವಿಕಿರಷ್ಟದಷ್ಟು ಪಡೀತಿರಿ. ಈ ವಿಕಿರಣದಿಂದ ಕ್ಯಾನ್ಸರ್ ಸಾಧ್ಯತೆ ೧% ಜಾಸ್ತಿ ಆಗ್ಬೇಕಿದ್ರೂ ನೀವು ವರ್ಷಕ್ಕೆ ೧೦೦೦ ಘಂಟೆಗಳಂತೆ ೩೦ ವರ್ಷ ಪ್ರಯಾಣ ಮಾಡ್ಬೇಕಂತೆ!! ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಇದೆ ಅಂತ ಮರೀಬೇಡಿ. ಇಂಥ ಚಿಲ್ರೆ ವಿಕಿರಣಗಳಿಂದ ಹೆಚ್ಚು ಅನಾಹುತ ಆಗದಂಗೆ ಅದೂ ತಡಿಯತ್ತೆ. ಆದ್ರೂ ಗರ್ಭಿಣಿಯರು ನಿಮ್ಮ ಗರ್ಭದಾರಣೆ ಸಮಯದಲ್ಲಿ ೨೦೦ ಘಂಟೆಗಿಂತ ಹೆಚ್ಚು ಪ್ರಯಾಣ ಮಾಡ್ಬೇಡ್ರಮ್ಮ.. ಇದ್ನ ನಾನು ಹೇಳ್ತಿರೋದಲ್ಲ. ಕೆನಡಾದ ಡಾ ಲೀವಿಸ್ ತಂಡ ಹೇಳ್ತಿರೋದು.. ಸರಿ ಏನೋ ಅಂದ್ಕಂಡಿದ್ದೆ, ಏನೂ ಆಗ್ಲಿಲ್ಲ ಅಂದ್ರಾ? ನೀವು ಏನೇ ಅನ್ನಿ ನಿಮ್ಮನ್ನ ಖುಷಿಪಡ್ಸೋದು ಉದ್ದೇಶನೇ ಹೊರ್ತು ಅಳ್ಸೋದಲ್ಲ...

ಎಂ ಕೆಂಚಾ, ಕೊದ್ರಿದ್ದು ಸಾಕು ನಿಲ್ಲಿಸ್ಲಾ... ವೀಕ್ಷಕರೇ ನಿಮ್ಗಿದು ಹೇಗನಿಸ್ತು ಅಂತ ಬರೆದು ಕಳ್ಸಿ. ಮತ್ತೊಮ್ಮೆ ನಿಮಗೆಲ್ಲಾ ಹಬ್ಬದ ಹಾರ್ದಿಕ ಶುಭಾಷಯ ಕೋರುತ್ತಾ ಪಾಪಣ್ಣ ಆನ್ಲೈನ್ ಟೀವಿ

ಸ್ಪೂರ್ತಿ: Health Canada Website : hc-sc.gc.ca
B.J. Lewis et al, Cosmic radiation Exposure on Canadian-Based Commercial Airline Routes, Radiation Protection Dosimetry
ಚಿತ್ರಗಳು: ಗೂಗಲ್

Tuesday, August 9, 2011

ಲಾಸ ಲವ್ಸ್ ಲವೋಟಿ

ಹಿಂಗೆ ಒಂದು ಮಧ್ಯಾಹ್ನ "ಲಾಸ ಲವ್ಸ್ ಲವೋಟಿ, ಲಾಸ ಲವ್ಸ್ ಲವೋಟಿ.." ಅಂಥೇನೋ ಕೈಲಾಸ ಅಲಿಯಾಸ್ ಲಾಸ ಹಾಡ್ತಾ ಖಾಲಿ ಕ್ಲಾಸಲ್ಲಿ ಕೂತು ಹಾಡ್ತಾ ರೆಕಾರ್ಡ್ ಬರೀತಿರ್ಬೇಕಾದ್ರೆ ಅವ್ನ ಕೆಲ ಗೆಳೆಯರೂ ಅವನ್ನ ಹುಡುಕ್ಕಂಡು ಅಲ್ಲಿಗೇ ಬಂದ್ರು. ಮುಟ್ಟಿದೆಲ್ಲಾ ಲಾಸಾಗಿ, ಹೆಸ್ರಲ್ಲಿರ ಕೈನೂ ಲಾಸಾಗಿ ಲಾಸ ಆಗಿರೋನು ಇವತ್ಯಾಕೆ ಇಷ್ಟು ಖುಷಿಯಾಗಿದಾನೆ ಅಂದ ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ. ಲಾಸ ಲವ್ಸ್ ಲಂಗೋಟಿ ಅಂತಿರ್ಬೇಕು ಮಾರ್ರೆ ಅಂದ ಮಂಜ ಅಲಿಯಾಸ್ ಮಂಗಳೂರು ಮಂಜು.ಎಲ್ಲಾ ಗೊಳ್ಳಂತ ನಕ್ರು. ಪಾಪ ಯಾಕರ್ವ ಜೀವ ತಿಂಬೂದು ನೀವು ಮಿ.ಮಂಜು? ಲವೋಟಿ ಅಂದ್ರೆ ಎಂಥ ಹೇಳಿ ಕಾಂಬ ಈಗ ಅಂದ್ಳು ಇಳಾ ಅಲಿಯಾಸ್ ಇಳಾದೇವಿ.ಈಗ ಮಂಜನ ಮುಖ ಹುಳಿಯಾಯ್ತು. ತಿಪ್ಪಂದೂ.


ಕೊನೆಗೆ ಲಾಸನೇ ಹೇಳ್ದ ಲವೋಟಿ ಅಲ್ಲ ಅದು ಲವೋಟಿಕ್ಸ್. ಅಂದ್ರೆ ಮನುಷ್ಯ ಮತ್ತು ರೋಬೋಗಳ ನಡುವಿನ ಸಂಬಂಧ ಅಂತ. ಇನ್ನೂ ಹೇಳ್ಬೇಕು ಅಂದ್ರೆ ಪ್ರೀತಿ ಮಾಡೋ ರೋಬೋಟ್ ಅಂಥ.ಇದನ್ನ ಕಂಡುಹಿಡಿದದ್ದು ಸಿಂಗಾಪುರದ ಹೂಮನ್ ಸಾಮಿ ಅನ್ನೋ ಸಂಶೋಧಕ ಅಂದ. ಏ ಅವ್ನು ಮೊಹ್ಮದ್ ಸಾಮಿ ನೆಂಟ್ರ ಅಂದ ಕ್ರಿಕೆಟ್ ಪ್ರಿಯ ತಿಪ್ಪ. ಅಲ್ಲಾ, ಗೋಕುಲಾಷ್ಟಮಿ ಇಮಾಮಿ ಸಾಬಿ ಮಗ, ಎಂಥಾ ಕೇಳ್ತಿ ಸುಮ್ನಿರ ಅಂದ್ಳು ಸರು. ಎಲ್ಲಾ ತಣ್ಣಗಾದ್ರು. ಕೊನೆಗೆ , ಅದು ರಜನೀಕಾಂತ್ ಚಿತ್ರದ "Am chitti, the robot, Memory 1 Tera Byte,Speed 1 Tera Hertz" ಅನ್ನೋ ತರದ್ದಾ ಮಾರಾಯ ಅಂದ ಮಂಜು.

ಏ ಆ ತರದ್ದೆಲ್ಲಾ ಇನ್ನೂ ಬಂದಿಲ್ಲ. ಇವ ಹೇಳೋದು ಯಾವ್ದೋ ಬಾರ್ಬಿ ತರದ ಸಣ್ಣ ರೋಬೋ ಗೊಂಬೆ ಇರ್ಬೇಕು ಅಂದ್ಳು ಸರು ಅಲಿಯಾಸ್ ಸರಸ್ವತಿ. ನೀ ಹೇಳದು ಸ್ವಲ್ಪ ಸರಿ ಅಷ್ಟೆ ಸರು.ಇದು ಸಣ್ಣದೇ ಆದ್ರೆ ನೀವಂದ್ಕಂಡೆ ಒಂದ್ಕಡೇ ಬಿದ್ಗೊಂಡಿರೋ ಬಾರ್ಬಿ ತರ ಅಲ್ಲ.ಅದಕ್ಕೆ ಎದ್ರಿಗಿರೋರ ಪ್ರೀತಿ ಅರ್ಥ ಆಗುತ್ತೆ. ಪ್ರತಿಯಾಗಿ ಅದೂ ಪ್ರೀತಿ,ಖುಷಿ, ಸಿಟ್ಟು, ಅಸೂಯೆ, ಆಶ್ಚರ್ಯ ಎಲ್ಲಾ ತೋರ್ಸತ್ತೆ ಅಂದ. ಯಾರೂ ತುಟಿ ಪಿಟಕ್ಕನ್ನಲಿಲ್ಲ. ಇನ್ನೂ ಹೇಳೋ ಪ್ಲೀಸ್ ಅನ್ನೋ ತರ ಲಾಸನ್ನೇ ನೋಡಕ್ಕತ್ತಿದ್ರು.
ಮನುಷ್ಯನಲ್ಲಿ ಜೈವಿಕ ಕ್ರಿಯೆಗಳನ್ನೆಲ್ಲಾ ಹೆಚ್ಚು ಮಾಡೋದು, ಕಮ್ಮಿ ಮಾಡೋದು ಯಾವ್ದು ಅಂದ ಲಾಸ. ಹಾರ್ಮೋನು ಅಂದ್ರು ಎಲ್ಲಾ, ಹಾರ್ಮೋನಿಯಂ ಪೆಟ್ಗೆಯ ತಾರಕ ಶ್ರುತೀಲಿ.ಹಾ ಸರಿ. ಮನುಷ್ಯರಲ್ಲಿ ಆಕ್ಸಿಟೋಸಿನ್, ಡೋಪಮೈನ್, ಸೆರಟೋನಿನ್, ಎಂಡಾರ್ಪಿನ್ ಅನ್ನೋ ಪ್ರೀತಿಯ ಹಾರ್ಮೋನ್ಗಳಿರುತ್ತೆ. ಅದೇ ರೀತಿ ರೋಬೋಟ್ ನಲ್ಲಿ ಅದಕ್ಕೆ ತತ್ಸಮನಾದ ಕೃತಕ ಹಾರ್ಮೋನ ಹಾಕಿದ್ರಾಯ್ತು ಅಂದ ಲಾಸ. ಅದನ್ನ ಹೆಚ್ಚು ಕಮ್ಮಿ ಮಾಡಿದ್ರಾಯ್ತು , ರೋಬೋಟ್ ರೆಡಿ ಅಂದ ಎಲ್ಲಾ ತಿಳಿದೋನಂತೆ ತಿಪ್ಪ. ಅದು ಸರಿ, ಮಾನಸಿಕ ಅಂದ್ಯಲಾ , ಎದ್ರುಗಿರೋರ ಮನಸ್ಸಲ್ಲೇನಿದೆ ಅಂಥ ಹೇಗೆ ತಿಳಿಯೂದು ಅಂದ್ಳು ಇಳಾ? ಎದ್ರಿಗಿರೋರ ಮೆದುಳಿನ MRI ಸ್ಕಾನ್ ಮಾಡಿದ್ರೆ ?ಅಂದ ಮಂಜ.ಅವರ ಧ್ವನಿ, ಹಾವ ಭಾವ,ಮುಖಭಾವದಿಂದ್ಲೂ ಮಾಡಬೋದೇನೋ ಅಂತ ಸೇರಿಸಿದ್ಲು ಸರು. ವೆರಿ ಗುಡ್. ಸಾಮಿ ತನ್ನ ೧೧ ಪೇಪರ್ ಅಲ್ಲಿ ಹೇಳಿದ್ದೂ ಇದೇ ತರದ ವಿಧಾನನ ಅಂದ ಲಾಸ. ಮಂಜಂಗೆ ಮತ್ತು ಸರೂಗೆ ತಾನೇ ಸಾಮಿ ಅನ್ನ ಹಂಗೆ ಖುಷಿ ಆಯ್ತು.




ಸರಿ ಇವೆಲ್ಲಾ ರೋಬೋಟ್ ನಲ್ಲಿ ಹ್ಯಾಂಗ್ ಒಟ್ಟಾತ್ತು ಅಂದ್ಳು ಇಳಾ. ನಮ್ಮ ದೇಹದಲ್ಲಿ Endocrine,exocrine ಅಂತ ೨ ವ್ಯವಸ್ಥೆ ಇರೋಲ್ವ ಅದೇ ತರ ಇಲ್ಲೂ ಅಂದ ಲಾಸ. ಸಾಮಾನ್ಯವಾಗಿ ಇಂಥ ರೋಬೋಗಳಲ್ಲೆಲ್ಲಾ ಕೃತಕ ಬುದ್ದಿಮತ್ತೆ(artificial intelligence) ತುಂಬಿರ್ತಾರೆ ಅಲ್ವಾ ಅಂದ್ಳು ಸರು.ಹೌದು. ಇದ್ರೊಳಗೆ ಸಂಕೀರ್ಣ ಸರ್ಕೀಟ್ ಗಳು. ಹೊರಗೆ ಸ್ಕಾನರ್, ಮೈಕ್ರೋಫೋನ್, LED ಗಳು ಅಂದ. ಓ ಮುನ್ನಾಭಾಯಿ ಗೆ ಎಲ್ಲಾ ಕೆಲ್ಸ ಮಾಡ್ಕೋಡೋ ಸರ್ಕಿಟ್ ನಂತೆ ಇಲ್ಲೂ ಇದೆ ಸರ್ಕಿಟ್ ಅಂದ ತಿಪ್ಪ. ಎಲ್ಲಾ ಮತ್ತೆ ನಕ್ಕರು ಈಗ

ಓ ಈಗ ಗೊತ್ತಾಯ್ತು ನಿನ್ನ ಹಾಡಿನ ಅರ್ಥ. ನೀ ಹೇಳಿದ್ದು ಲವೋಟಿನೆ. ಹೆಣ್ಣು ರೋಬೋ ಅಂತ ನೀ ಹಂಗೆ ಹೆಸ್ರಿಟ್ಟಿದೀಯ. ಆದ್ರೆ ನೀವಿಬ್ರು ಪ್ರೀತಿ ಹೆಂಗೆ ಮಾಡ್ತೀರಿ ಅಂದ್ಳು ಇಳಾ. ಲಾಸನ ಮುಖ ನಾಚಿಕೆಯಿಂದ ಕೆಂಪಾಯ್ತು. ಅವನ ಮಗ್ಗುಲಲ್ಲಿದ್ದ ಗೊಂಬೆಯಿಂದ ನೇರಳೆ ಬಣ್ಣ ಬರಕಿಡೀತು. ಎಲ್ರಿಗೂ ಆಶ್ಚರ್ಯ ಆಯ್ತು ಅದೆಂತಾ ಅಂತ. ಹಿಂಗೇ ಅಂದ ಲಾಸ. ಯಾರಿಗೂ ಅರ್ಥ ಆಗ್ಲಿಲ್ಲ. ಇದರಲ್ಲಿ LED ಗಳು ಇರ್ತವೆ. ತನ್ನೊಡೆಯನ್ನ ಬೇರೆ ಯಾರಾದ್ರೂ ಮಾತಾಡ್ಸಿದ್ರೆ ಇದಕ್ಕೆ ಅಸೂಯೆ ಆಗಿ ಈ ತರ ಬೆಳಕು ಬಿಡತ್ತೆ. ಇದಕ್ಕೆ ಪ್ರೀತಿ ಆದ್ರೆ ಹಾರ್ಟ್ ಕಲರ್ ಕೆಂಪು ತೋರ್ಸತ್ತೆ. ಹಿಂಗೆ ನೀಲಿ,ಹಸಿರು, ಬೇರೆ ಬೇರೆ LED , vibration ಎಲ್ಲಾ ಇದೆ ಅಂದ. ಆದ್ರೆ ನೀ ಹ್ಯಾಗೆ ಅದಕ್ಕೆ ಪ್ರೀತಿ ತೋರಿಸ್ತೀಯ ಅಂತ ಸರು ಅದ್ರ ತಲೆ ನೇವರಿಸಕ್ಕೆ ಹಿಡಿದ್ಳು ಮುದ್ದಿನ ನಾಯಿ ತರ.
ಅದ್ರ ಬಣ್ಣ ಕೆಂಪಾಯ್ತು. ಹಿಂಗೇ ಅಂದ್ರು ಎಲ್ರೂ. ಕೆಂಪಾಗೋ ಸರದಿ ಈಗ ಸರೂದು. ಸರಿ ಹೀಗೆ ಮಾತಾಡ್ತಾ ಇದ್ರೆ ಲ್ಯಾಬ್ ಗೆ ಲೇಟಾಗತ್ತೆ , ಎಲ್ರೂ ರೆಕಾರ್ಡ ಬರದಾಯ್ತ ಅಂತ ತನ್ನ ಸಿಂಗಾಪುರದ ಗೊಂಬೆ ಅಲ್ಲಲ್ಲಾ ರೋಬೋನ ಬ್ಯಾಗೊಳಗಿಟ್ಟ ಲಾಸ.


ಗೆಳೆಯರೇ ಈ ಲೇಖನ ನಿಮಗೆ ಹೇಗನ್ನಿಸಿತು? ಇದರ ಬಗ್ಗೆ ಮುಂಚೆ ಓದಿದ್ರಾ? ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತ

ಮಾಹಿತಿ ಮತ್ತು ಚಿತ್ರ ಕೃಪೆ: www.lovotics.com,www.extremetech.com, Google