Showing posts with label ಹಾಸ್ಯ. Show all posts
Showing posts with label ಹಾಸ್ಯ. Show all posts

Saturday, November 5, 2016

ಕರೆಂಟಿಲ್ಲದ ಕಾರ್ತೀಕವೂ ಕನ್ನಡವಿಲ್ಲದ ಮಾಲ್ಗಳೂ

Karthika @Kundalahalli Nagalingeshwara temple
ಇವತ್ತು ನಮ್ಮ ಕೆ.ಇ.ಬಿಯವ್ರಿಗೆ ಅದೆಷ್ಟು ಒಳ್ಳೆಯ ಬುದ್ಧಿ ಬಂದು ಬಿಟ್ಟಿದೆ ಅಂತೀರಾ ? ನಮ್ಮ ನಾಗಲಿಂಗೇಶ್ವರ ದೇವಸ್ಥಾನದ ಕಾರ್ತೀಕ ಎಲ್ಲರೂ ನೋಡ್ಲಿ ಅಂತ ಇಡೀ ಏರಿಯಾದ ಕರೆಂಟು ತೆಗ್ದಿದಾರೆ ! ಬೀದೀಲಿ ಎಲ್ಲರ ಮನೆಯೆದ್ರಿಟ್ಟಿರೋ ದೀಪಗಳ್ನ ನೋಡೋದು ಅದೆಷ್ಟು ಚೆಂದ ಅಂತೀರಿ. ಕೆ.ಇ.ಬಿಯವರ ಈ ಸೌಂದರ್ಯಪ್ರಜ್ಞೆ ಒಂದು ಸಮುದಾಯದ ಪರವಾಗಿದೆ, ಉರುಸ್, ಚರ್ಚುಗಳ ಕಾರ್ಯಕ್ರಮಗಳಲ್ಲೂ ಇದೇ ತರ ಮಾಡಿ ಅವುಗಳನ್ನೂ ಚೆಂದಗಾಣಿಸಿಕೊಡಬಹುದು. ಆದರೆ ಆ ತರ ಮಾಡದ ಕೆ.ಇ.ಬಿಯವ್ರನ್ನ ನಾವು ಖಂಡಿಸ್ತೀವಿ, ಖಂಡಿಸ್ತೀವಿ ಅಂತ ಯಾವ ಬುದ್ಧಿಜೀವಿಗಳೂ ಈ ಕಡೆ ಬರದೇ ಇದ್ದಿದ್ದು ಯಾಕೋ ಬೇಸರ ತರಿಸ್ತಿದೆ. ಬಹುಷಃ ಯಾವ ಪ್ರಚಾರ, ಪತ್ರಿಕೆಗಳೂ ಬಾರದ ಪ್ರದೇಶ ಇದು ಅಂತ ಕೈಬಿಟ್ಟಿರಬೇಕು ಅಂತೊಂದಿಷ್ಟು ಗುಸುಗುಸುಗಳು ಕತ್ಲಲ್ಲೇ ಕೇಳಿಬರ್ತಿದ್ವು ಅಂತ ನಮ್ಮ ಪ್ರತಿನಿಧಿ ಗುಂಡಣ್ಣ ವರದಿ ಮಾಡ್ತಿದ್ದಾರೆ- ಕತ್ಲಳ್ಳಿ ನ್ಯೂಸ್, ಕುಂದ್ಲಳ್ಳಿ

ಕುಂದ್ಲಳ್ಳಿ ಅನ್ನೋಕೆ ಅವಮಾನ ಅಂತ ನಮ್ಮದು ಕಾಸ್ಮೋಸ್ ಅಂತನ್ನೋ ಜನರ ಹೆಮ್ಮೆಗೆ ಮುಕುಟವಿಟ್ಟಂತಿರೋ ಕಾಸ್ಮೋಸು ಮಾಲಿನಲ್ಲಿ ಈಗ ದೀಪಾವಳಿ ಸಂಭ್ರಮ. ಕೆಳ ಮಹಡಿಯಲ್ಲಿರೋ ಟ್ಯಾಕೋ ಬೆಲ್ಲು,ಫ್ಯಾಬ್ ಇಂಡಿಯಾ, ಪ್ಯಾಂಟಲೂನ್ಗಳಲ್ಲಿ ಕನ್ನಡದ ಲವಲೇಶವಿಲ್ಲ. ಸರಿಯಪ್ಪ ಅಂತ ಮೇಲಿನ ಮಹಡಿಯಲ್ಲಿ, ಅಲ್ಲೂ ಇಲ್ಲ. ಮೂರನೇ ಮಹಡಿ ? ಊಹೂಂ. ನಾಲ್ಕನೇ ಮಹಡಿಯಲ್ಲಿರೋ ಐನಾಕ್ಸಲ್ಲಾದ್ರೂ ಕನ್ನಡ ಚಿತ್ರಗಳಿರ್ಬೋದಾ ಅಂತಂದ್ರೆ ಒಂದೂ ಇರ್ಬಾರ್ದಾ ? ಹಿಂದಿ, ಇಂಗ್ಲೀಷುಗಳು ಹೋಗ್ಲಿ ಮಲೆಯಾಳಂ, ತಮಿಳು, ತೆಲುಗು ಚಿತ್ರಗಳಿಗೆಲ್ಲಾ ಮೂರ್ನಾಲ್ಕು ಶೋ. ಕನ್ನಡ ಚಿತ್ರನ ದುರ್ಬೀನಲ್ಲಿ ಹುಡ್ಕಿದ್ರೂ ಸಿಗ್ಬಾರ್ದಾ ? ನಾಲ್ಕೈದು ನಿಮಿಷ ಹುಡುಕಿದ್ಮೇಲೆ ಸಾಗರ, ಶಿವಮೊಗ್ಗ ಹೀಗೆ ಸುಮಾರಷ್ಟು ನಗರಗಳಲ್ಲಿ ಯದ್ವಾತದ್ವಾ ಓಡ್ತಿರೋ ಸಂತು ಸ್ಟ್ರೇಟ್ ಫಾರ್ವರ್ಡಿಗೆ ಎರಡು ದಿನಕ್ಕೊಂದು ಶೋ ಅಂತ ಗೊತ್ತಾಯ್ತು. ನಮ್ಮ ಬಿ.ಎಂ.ಟಿ.ಸಿಯ ಬಸ್ಸುಗಳಲ್ಲೇ ಕನ್ನಡ ಬರುತ್ತೆ ಸಾರ್. ಇನ್ನು ಮಾಲ್ಗಳಲ್ಲಿರೋ ಎಲ್.ಇ.ಡಿಗಳಲ್ಲಿ ಕನ್ನಡ ಬರಲ್ವಾ ಅನ್ನೋ  ಪ್ರಶ್ನೆಗೆ ಉತ್ತರ ಕೊಡೋಕೆ ಅಲ್ಲಿನ ನಾಲ್ಕು ಮಹಡಿಗಳಲ್ಲೂ ಯಾರಿರಲಿಲ್ಲ ಅಂತ ನಮ್ಮ ಪ್ರತಿನಿಧಿ ಇಳಾ ಮೇಡಂ ಸಿಟ್ಟಿಂದ ವರದಿ ಮಾಡಿದ್ದಾರೆ- ಕತ್ಲಳ್ಳಿ ನ್ಯೂಸ್, ಕಾಸ್ಮೋಸ್ ಮಾಲ್ ಅಲಿಯಾಸ್ ಕುಂದಲಹಳ್ಳಿ

ಇದೆಂತಾ ಮರ್ಲು ಮಾರ್ರೆ. ಊರಲ್ಲೆಲ್ಲಾ ಕರೆಂಟಿಲ್ಲ. ಇಲ್ನೋಡಿದ್ರೆ ಈ ನಮ್ನಿ ಕರೆಂಟ್ ವೈರ್ ನೇತಾಕಿರೂ. ದೀಪಾವಳಿ ಅಂತ ದೀಪ ಹಚ್ಚೋದು ಬಿಟ್ಟು ಹಿಂಗೆ ಕರೆಂಟು ವೈರು ನೇತಾಕೂದಾ ಅಂತ ಬೈಯ್ತಿದ್ದ ನಮ್ಮ ಮಂಜಣ್ಣ. ಅಲ್ದಾ ಮಂಜಣ್ಣ. ಇದು ಕರೆಂಟು ವೈರಲ್ದೋ. ಎಲೆಕ್ಟ್ರಿಕ್ ದೀಪ. ಹೊಸ ಫ್ಯಾಷನ್ನಿದು. ಈಗಿನ ಜನ ಬಲ್ಬು ಹಾಕಿದ್ರೆ ಕರೆಂಟು ವೇಸ್ಟು ಹೇಳಿ ಎಲ್.ಇ.ಡಿ, ಸಿ.ಎಫ್. ಎಲ್ಲು ಹೇಳಿ ಹಾಕ್ತ. ಆದ್ರೆ ಕೊನೆಗೆ ಹಿಂಗೆ ಕರೆಂಟ್ ವೇಸ್ಟ್ ಮಾಡ್ತ ಅಂತಂತಿದ್ಲು ಸರಿತಾ. ಹೇ ಇವ್ರು ನಮ್ಮೂರ ಪ್ರಶಸ್ತಿ, ರಂಜನ್ ಅಲ್ದನಾ ? ನಾವೂ ಇವ್ರು ಜತೆಗೊಂದು ಸೆಲ್ಫಿ ತೆಕ್ಕಳನ ಬಾರಾ ಅಂತ ಸರಿತಾ ವಿಷಯಾಂತರ ಮಾಡಿ ಸಮಾಧಾನ ಮಾಡೋವರೆಗೂ ಮಂಜಣ್ಣನ ಬೈಗುಳ ಮುಗಿದಿರಲಿಲ್ಲ. ದೇವಸ್ಥಾನದ ದೀಪಕ್ಕೆ ಎಣ್ಣೆ ಹಾಕೂದು ಎಣ್ಣೆ ವೇಸ್ಟು ಅಂಬ್ರು ಈ ಜನ. ಈಗ್ನೋಡಿರೆ ಬೀದಿಲಿರೋ ಕರೆಂಟೆಲ್ಲಾ ಇವ್ರೊಬ್ಬದ್ದೇ ಹೇಳೂ ಹಂಗೆ ಮಾಡ್ತ್ರಪ. ಹೇಳೂದು ಶಾಸ್ತ್ರ, ತಿನ್ನೂದು ಬದ್ನೇಕಾಯೇ ಅಂತ ಬಯ್ಕೊಳ್ತಾ ಕಾಸ್ಮೇಸ್ ಮಾಲಿನ ಝಗಮಗಿಸೋ ದೀಪಾಲಂಕಾರದ ಬಗ್ಗೆ ವರದಿ ಮಾಡಿದ್ದಾರೆ ನಮ್ಮ ಪ್ರತಿನಿಧಿಗಳಾದ ಸರಿತಾ ಸಾಗರ ಮತ್ತು ಮಂಜುನಾಥ್ ಮಂಗಳೂರು-ಕತ್ಲಳ್ಳಿ ನ್ಯೂಸ್, ಕುಂದಲಹಳ್ಳಿ

ನಮ್ಮೂರ ಟಿ.ವಿ ಪ್ರತಿನಿಧಿಗಳೇನೋ ಭೇಟಿಯಾಗಿದ್ರು. ಆದ್ರೆ ಕರೆಂಟು ಕಂಬಕ್ಕೆ ಕಲ್ಲೊಡೆಯಬೇಕು ಅನ್ನೋ ಪುಂಡುಡ್ರೂ ಮೊಬೈಲು ಬ್ಯಾಟರೀನೋ, ಇನ್ಯಾರದೋ ಮನೆಯ ಹಣತೆನೋ ಎತ್ಕಂಡು ಬಂದು ಕಲ್ಲೊಡೆಯಬೇಕಾದಂತಹ ಕತ್ಲು ಅವತ್ತು. ಬೇರೆ ದಿನದಲ್ಲೆಂತೂ ಬರಲ್ಲ. ಇವತ್ತಾದ್ರೂ ಆಫೀಸಿಗೆ ಬರ್ರಿ ಅಂತ ಕರದ್ರೂ ಅಂತ ಅಲ್ಲಿಗೆ ಹೋದ್ರೆ ಅಲ್ಲೂ ಕತ್ಲು. ಅದೇನು ರಾಜಕೀಯ ಪಕ್ಷದವರ ಚಾನಲ್ಲೇ ?  ದುಡ್ಡು ಹೇರಳವಾಗಿದ್ದು ೨೪ ಘಂಟೆ ಯು.ಪಿ.ಎಸ್ ಬ್ಯಾಕಪ್ ಇಡೋಕೆ ? ಇದ್ದೊಂದು ಯು.ಪಿ.ಎಸ್ ಆದ್ರೂ ಮಧ್ಯಾಹ್ನದಿಂದ ಕರೆಂಟಿಲ್ಲದ ದಿನದಲ್ಲಿ ಎಷ್ಟೊತ್ತು ಬಂದೀತು ? ಗುಂಡ, ಇಳಾ, ಸರಿತಾ ಮತ್ತು ಮಂಜಣ್ಣನ ರಿಪೋರ್ಟುಗಳನ್ನ ಒಪ್ಪವಾಗಿಸಿ ಒಂದು ನ್ಯೂಸ್ ಮಾಡೋಕೆ ಕರೆಂಟ್ ಯಾವಾಗ ಬರುತ್ತೋ ಅನ್ನೋ ಬೇಜಾರಲ್ಲಿ ನಮ್ಮ ಮ್ಯಾನೇಜರ್ ಪುಂಡಣ್ಣ ಅಲ್ಲೇ ತಿರುಗ್ತಾ ಇದ್ರು. ಅವ್ರ ಪ್ರತಿನಿಧಿಗಳು ಕತ್ಲು ಅಂತ ರಿಪೋರ್ಟೇ ಕೊಡದೆ ಹಂಗೇ ಮನೆಗೆ ಎಸ್ಕೇಪ್ ಆಗ್ಬುಟ್ರಾ ಅಂತ ತಲೆಕೆಡಿಸ್ಕೊಂಡಿದ್ದ ಅವ್ರಿಗೆ ನಮ್ಮನ್ನ ನೋಡಿ ಖುಷಿ ಆಯ್ತು. ಕರೆಂಟು ಬರೋ ತನಕ ಏನಾದ್ರೂ ಟೈಂ ಪಾಸ್ ಮಾಡ್ಬೇಕಲ್ಲ. ಇವತ್ತಿನ ನ್ಯೂಸನ್ನು ಪ್ರಸಾರ ಮಾಡದೇ ಮನೆಗೋಗಂಗಿಲ್ಲ. ಹಂಗೇ ಸುಮ್ಮನೇ ಕೂತ್ರೆ ಇಲ್ಲಿರೋರೆಲ್ಲಾ ಮನೆಗೋಗಿ ಬಿಡ್ತಾರೆ ಅನ್ನೋ ದೂರಾಲೋಚನೆ ಬಂದ ಪುಂಡಣ್ಣ ನಿಮಗೆಲ್ಲಾ ನೆರಳು ಬೆಳಕಿನ ಆಟ ತೋರುಸ್ತೀನಿ ಅಂತ ಬೇಡ ಬಿಡಿ ಅಂದ್ರೂ ಬಿಡದಷ್ಟು ಒತ್ತಾಯ ಮಾಡಿ ಒಳಗೆ ಕರ್ಕೊಂಡೋದ್ರು. ಪುಂಡಣ್ಣ ಮೂಲೆಯಲ್ಲೊಂದು ಮೊಬೈಲ ಬ್ಯಾಟರಿಯಿಟ್ಟು ಅದ್ರ ಬೆಳಕಿಗಡ್ಡ ತಮ್ಮ ಕೈಯನ್ನಿಟ್ಟು ನೆರಳಲ್ಲೇ ಆನೆ, ಮೊಲ, ಬೊಗಳೋ ನಾಯಿ, ಗಿಳಿ, ಅರಮನೆ ಎಲ್ಲಾ ಮಾಡ್ತಿದ್ರೆ ಎಲ್ರಿಗೂ ಬಾಲ್ಯದ ನೆನಪುಗಳ ಮೆರವಣಿಗೆ. ಅದ್ರ ಮಧ್ಯೆ ಒಂದಿಷ್ಟು ಮಾತು, ನಗೆಯಲ್ಲಿ ಕಳೆದು ಹೋಗಿದ್ದ ನಮಗೆ ಯಾವಾಗ ಇನ್ನೊಂದು ಘಂಟೆ ಕಳೆದುಹೋಯ್ತೋ, ಕರೆಂಟಿಲ್ಲದೇನೇ ಖುಷಿಯಾಗಿರೋ ಜನರ ಖುಷಿಗೆ ಭಂಗ ತರೋ ಉದ್ದೇಶದಿಂದ ಕೆ.ಇ.ಬಿಯವ್ರು ಯಾವಾಗ ಕರೆಂಟು ಕೊಟ್ರೋ ಗೊತ್ತಾಗಲಿಲ್ಲ.  ಈ ಮೊಬೈಲು, ಇಂಟರ್ನೆಟ್ಟು, ವಾಟ್ಸಾಪು, ಫೇಸ್ಬುಕ್ಕು, ಟ್ವಿಟ್ಟರುಗಳೆಂಬ ಕೃತ್ತಿಮ ಜಗತ್ತಲ್ಲೇ ಕಳೆದುಹೋಗೋ ನಾವು ಪರಸ್ಪರ ಮುಖ ಕೊಟ್ಟು ಮಾತಾಡದೇ ಎಷ್ಟು ಕಾಲವಾಗಿತ್ತೋ. ಅದಕ್ಕೊಂದು ಅವಕಾಶ ಮಾಡಿಕೊಟ್ಟ ಈ ಕರೆಂಟಿಲ್ಲದ ದಿನಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಕಮ್ಮಿ ಅನಿಸಿದ್ದು ಸುಳ್ಳಲ್ಲ. ಹಿಂಗೆ ಆಗಾಗ ಕರೆಂಟು ಹೋಗ್ತಾ ಇದ್ರೆ ಒಂದಿಷ್ಟು ಜೀವಗಳು ಹತ್ರವಾಗುತ್ತೆ ಅಂದ್ರೆ ಅದೇ ಒಳ್ಳೇದೇನೋ ಅನ್ಸಿದ್ದೂ ಸುಳ್ಳಲ್ಲ.
ನೆರಳು ಬೆಳಕಲ್ಲಿ ನಾಯಿಯನ್ನು ತೋರಿಸೋ ಪ್ರಯತ್ನ. ಫೋಟೋಗ್ರಫಿ ಕೃಪೆ: ನಂ ರೂಂ ಮೇಟು ಸಿದ್ದಾರೂಡ ಅವ್ರುದ್ದು

Wednesday, June 29, 2016

ಜಸ್ಟ್ ಮಿಸ್ಸು

ಟ್ರಿಪ್ಪೊಂದರಲ್ಲಿ ಕಂಡ ಸುಮ್ನೇ ಇಷ್ಟವಾಗಿದ್ದ ಹುಡುಗಿ ಆಫೀಸ್ ಬಸ್ಸಲ್ಲಿ ಸಡನ್ನಾಗಿ ಪ್ರತ್ಯಕ್ಷಳಾಗಿದ್ದಷ್ಟೇ ಅಲ್ದೇ ಪಕ್ಕದ ಸೀಟಲ್ಲಿ ಬಂದು ಕೂತ್ರೆ ? ಗುಂಡಣ್ಣನ ಎಂದಿನ ನಗು ಮಾಯವಾಗಿತ್ತು ! ಮನದಲ್ಲೊಂದು ಮೊಹಬ್ಬತ್ತ ಸೌಧಕ್ಕೆ ಅಡಿಪಾಯ ಬಿದ್ದಿತ್ತು.
ತಿಂಡಿನಾದ್ರೂ ಮಿಸ್ ಮಾಡ್ಕೊಳ್ತಿದ್ದ ಗುಂಡಣ್ಣ ಅವ್ಳು ಬರೋ ಬಸ್ಸನ್ನ ಮಾತ್ರ ಮಿಸ್ ಮಾಡ್ಕೊಳ್ತಿರಲಿಲ್ಲ. ಮುಂಚೆನೇ ಹತ್ತಿದ್ದ  ಅವಳೂ ಪಕ್ಕದಲ್ಲಿ ಯಾರನ್ನೂ ಕೂರಗೊಡದೆ ಗುಂಡಣ್ಣನ ಬರುವಿಕೆಯನ್ನೇ ಕಾಯುವಂತಿರುತ್ತಿದ್ದಳು. ಏನೋ ಹೇಳ್ಬೇಕು ಅಂತ ಅವನು. ಇವ ಹೇಳಲಿ ಅಂತ ಅವಳು . ನಾಳೆ ಫೆಬ್ರವರಿ ಹದಿನಾಲ್ಕು ಅನ್ನೋ ಹೊತ್ತಿಗೆ ಗುಂಡಣ್ಣನ ಟೀಂ ಚೇಂಜಾಗೋ ಸಮಯ ಬಂದಿತ್ತು.  ಮಾರನೇ ದಿನದಿಂದ್ಲೇ ಬೇರೆ ಬಿಲ್ಡಿಂಗಲ್ಲಿ ಕೆಲ್ಸ. ಇವತ್ತು ಏನಾದ್ರೂ ಮಾಡಿ ಅವ್ಳತ್ರ ಮಾತಾಡ್ಲೇ ಬೇಕು ಅಂದ್ಕೊಂಡ್ರೂ, ಏನು ಮಾತಾಡೋದು ಅಂತ ಯೋಚ್ನೆ ಮಾಡ್ತಾ ಬರೋ ಹೊತ್ತಿಗೆ ಬಸ್ ಬಂದಾಗಿತ್ತು. ಅವ್ಳೇನೋ ಬಸ್ಸಲ್ಲಿದ್ಲು. ಆದ್ರೆ ಕೈಯಲ್ಲಿದ್ದ ಮೊಬೈಲಲ್ಲಿ ಯಾರ ಜೊತೆಗೋ ಮಾತು.ಅವ್ಳ ಮಾತು ಮುಗಿಯೋ ಹೊತ್ತಿಗೆ ಆಫೀಸ್ ಬಂದಿತ್ತು. ಗುಂಡಣ್ಣ ಏನೋ ಹೇಳೋಕೆ ಪರದಾಡ್ತಿದ್ದನ್ನ ನೋಡಿದ್ದ ಅವಳು ಅದೇನಿರಬಹುದೆಂದು ಊಹಿಸಿದ್ರೂ ಏನು ಅಂತ ಅನೇಕ ಸಾರಿ ಸಂಜ್ಝೆ ಮಾಡಿದ್ಲು. ಅವ ಹೇಳೋಕೆ ಪ್ರಯತ್ನ ಮಾಡಿದಾಗೆಲ್ಲಾ ಧೈರ್ಯ ಸಾಕಾಗ್ತಿರಲಿಲ್ಲ. ಈ ಸರ್ಕಸ್ಸಲ್ಲಿದ್ದಾಗ ಆಫೀಸ್ ಬಂದಿತ್ತು. ಕೊನೆಗೂ ಧೈರ್ಯ ಮಾಡಿ ನಿಮ್ಮ ನಂಬರ್ ಕೊಡ್ತೀರಾ ಅಂದ. ಹೂಂ. ಸೇವ್ ಮಾಡ್ಕೊಳ್ಳಿ ಅಂತಂದ್ರೆ ಮೊಬೈಲಿಗೆ ಕಿಸೆಗೆ ಕೈ ಹಾಕಿದ್ರೆ ಮೊಬೈಲಿಲ್ಲ. ಅವ್ಳತ್ರ ಅಂದ್ಕೊಂಡಿದ್ದು ಹೇಳೇ ಬಿಡೋ ಉಮ್ಮೇದಿನ ಗಡಿಬಿಡಿಯಲ್ಲಿ ಮೊಬೈಲು ಮನೇಲೇ ಮರೆತು ಬಿಟ್ಟಿದ್ದ. ಇವ ತಡಕಾಡುತ್ತಿದ್ದನ್ನ ನೋಡಿದ ಅವಳು ಹೋಗ್ಲಿ ನಾನೇ ಮಿಸ್ ಕಾಲ್ ಕೊಡ್ತೀನಿ ಬಿಡಿ. ಹೇಳಿ ನಿಂ ನಂಬರ್ರು ಅಂತ ಬಸ್ಸಿಳಿದು ಮುಂದೆ ಹೊರಟ್ಳು. ಅವ್ಳು ಅದ್ನ ಟೈಪ್ ಮಾಡಿ ಇನ್ನೇನು ಕಾಲ್ ಒತ್ಬೇಕು. ಅಷ್ಟರಲ್ಲಿ ಅವ್ಳ ಮೊಬೈಲು ಸ್ವಿಚ್ಛಾಫ್ ! ದರಿದ್ರ ಬ್ಯಾಟ್ರಿ ಆಗ್ಲೇ ಡೌನಾಗ್ಬೇಕೆ ? ಅದ್ಯಾವ್ದೋ ಎಸ್ಕಲೇಷನ್ ಆಗಿದ್ಯಂತೆ ಕಣೆ ಅಂತ ಒಡ್ತಿದ್ದ ಪಕ್ಕದ ಸಹೋದ್ಯೋಗಿ ಜೊತೆಗೆ ಇವ್ಳೂ ಓಡ್ಬೇಕಾಗಿ ಬಂದಿತ್ತು. ಗುಂಡಣ್ಣನ ಆಸೆಗಳು ಜಸ್ಟ್ ಮಿಸ್ಸಾಗಿತ್ತು !

ಮನೇಲಿ ಮರ್ತು ಬಂದಿದ್ದ ತನ್ನ ಮೊಬೈಲಿಗೆ ಬಯ್ಯಲಾ, ಬ್ಯಾಟ್ರಿ ಡೌನಾದ ಅವ್ಳ ಮೊಬೈಲಿಗೆ ಬಯ್ಯಲಾ ಅನ್ನೋ ಆಲೋಚನೆಯಲ್ಲೇ ತಿಂಗಳೊಂದು ಕಳೆದೋಗಿತ್ತು ! ಮಿಸ್ಸಾದವ್ಳಿಗೆ ತಲೆ ಕೆಡಿಸಿಕೊಳ್ಳೋದು ಬೇಡ ಅಂತ್ಕೊಳ್ಳೋ ಸಂದರ್ಭದಲ್ಲೇ ಫೇಸ್ಬುಕ್ಕಿನ ಫ್ರೆಂಡ್ ಸಜೆಷನ್ನಲ್ಲಿ ಅವ್ಳ ಹೆಸ್ರು ಬಂದಿತ್ತು !! ಇನ್ನೇನು Add Friend ಕೊಡ್ಬೇಕು. ಅಷ್ಟರಲ್ಲಿ ನೆಟ್ ಢಮಾರ್ ! ಹೊತ್ತಲ್ಲದ ಹೊತ್ತಲ್ಲಿ ಕರೆಂಟ್ ತೆಗ್ಯೊ ಕೆಇಬಿಯವ್ರಿಂದ ಮತ್ತೊಂದು ಜಸ್ಟ್ ಮಿಸ್ಸು !

ಕರೆಂಟ್ ಬಂದ ಮೇಲೆ ಹುಡ್ಕೇ ಹುಡ್ಕಿದ. ಸಿಗ್ಲಿಲ್ಲ ಅವ್ಳು. ಅವ್ಳ ಫೋಟೋ ಕಂಡ ಖುಷಿಯಲ್ಲಿ ಫೇಸ್ಬುಕಲ್ಲಿ ಅವ್ಳ ಮೊದಲ ಹೆಸ್ರು, ಕೊನೆ ಹೆಸ್ರು ಏನಿದೆ ಅಂತ ನೋಡ್ಕೊಳ್ಳೋದೇ ಮರೆತಿದ್ದ. ಅದ್ಕೆ ಬಯ್ಕೊಳ್ಳೋದ್ರಲ್ಲಿ ಮತ್ತೆ ಹದಿನೈದು ದಿನ ಕಳೆದೋಗಿತ್ತು ! ಅವಳ ಹೆಸರ ಅಂದಾಜಿನ ಮೇಲೆ ಆಫೀಸಿನ ಐಡಿಗಳಲ್ಲಿ ಹುಡುಕುತ್ತಾ ಕೊನೆಗೂ ಅವಳಿರಬಹುದೆಂಬ ಐಡಿ ಹುಡುಕಿದ್ದ. ಇದ್ರಲ್ಲಾದ್ರೂ ಹುಡ್ಕೋಣ ಅಂತ ಪಿಂಗ್ ಮಾಡಿದ.
ಇವ: ಹಾಯ್
ಅವಳು: ಹಾಯ್
ಇವ: ನೀವು ರೂಟ್ ನಂ ೧೪೦ರ ಇವರಲ್ವಾ ?
ಅವಳು:ಹೌದು. ನೀವು ?
ಇವ: ನಾನು ಇವ. ಟ್ರಿಪ್ಪಲ್ಲಿ ಸಿಕ್ಕವ. .. ಬರ್ದೇ ಬರದ. ಇನ್ನೇನು ಎಂಟರ್ ಒತ್ಬೇಕು ಅನ್ನೋ ಅಷ್ಟು ಹೊತ್ತಿಗೆ ಲ್ಯಾಪ್ತಾಪ್ ರೀಬೂಟ್ !!! ನಿಮ್ಮ ಲ್ಯಾಪ್ಟಾಪ್ ೧೫ ನಿಮಿಷದಲ್ಲಿ ರೀಬೂಟ್ ಆಗತ್ತೆ ಅಂತ ಬಂದ ಸಂದೇಶದಲ್ಲಿನ ನಿಮಿಷಗಳು ಕಡಿಮೆ ಆಗ್ತಿದ್ದನ್ನ ಗಮನಿಸೇ ಇರ್ಲಿಲ್ಲ. ಐಡಿ ಸಿಕ್ಕಿದ್ದೇನೋ ಹೌದು. ಆದ್ರೆ ಸೇವ್ ಮಾಡ್ಕೊಂಡಿಲ್ವೆ ? ತಾನ್ಯಾರು ಅಂತ ಹೇಳಿದ್ರೆ ಆ ಕಡೆ ಅವ್ರಾದ್ರೂ ಸೇವ್ ಮಾಡ್ಕೊಳ್ತಿದ್ರೇನೋ ? ಆದ್ರೆ ಅದೂ ಜಸ್ಟ್ ಮಿಸ್ ! ರಿಬೂಟಾದ ಲ್ಯಾಪ್ಟಾಪ್ ಆನೇ ಆಗ್ಬಾರ್ದೇ ? ತಾಂತ್ರಿಕ ದೋಷವಿದೆ , ಐಟಿಯವ್ರನ್ನ ಸಂಪರ್ಕಿಸಿ ಅಂತ ಸಂದೇಶ ಕೊಡ್ತಾ ಇದ್ರೆ ಮತ್ತೊಂದು ಜಸ್ಟ್ ಮಿಸ್ಸಿಂದ ಬೇಸತ್ತ ಗುಂಡಣ್ಣ ಆ ಲ್ಯಾಪ್ಟಾಪನ್ನ ಮರೆತು ಹೋದ ಮೊಬೈಲ ಸಮೇತ ನೆಲಕ್ಕೆ ಕುಕ್ಕುವಷ್ಟು ಸಿಟ್ಟಾಗಿದ್ದ !

ಇನ್ನೂ ಒಂದಿಷ್ಟು ದಿನ ಹೋಯ್ತು.ಅವಳಿದ್ದ ಬಿಲ್ಡಿಂಗಿಗೇ ತನ್ನ ಪ್ರಾಜೆಕ್ಟ್ ಬದಲಾದಾಗ ಗುಂಡಣ್ಣನ ಖುಷಿಗೆ ಸಾಟಿಯಿಲ್ಲ. ಬ್ಯಾಟ್ರಿ ಫುಲ್ಲಾಗಿರೋ ಮೊಬೈಲು, ಲ್ಯಾಪ್ಟಾಪೊಂದಿಗೆ, ಅವಳು ಬರೋ ಸಮಯದ ಬಸ್ಸಿಗೆ ಸರಿಯಾಗಿ. ಮತ್ತೊಂದಿಷ್ಟು ಜಸ್ಟ್ ಮಿಸ್ಸುಗಳಿಗೆ ರೆಡಿಯಾಗಿ :-) 

Tuesday, December 10, 2013

ನಗು

ಮೆಚ್ಚುನಗು, ಪೆಚ್ಚುನಗು, ಕೆಚ್ಚು ನಗು, ಹುಚ್ಚು ನಗು,ಮನ ಬಿಚ್ಚಿ ನಗು.. ಅಬ್ಬಬ್ಬಾ ಅದೆಷ್ಟೊಂದು ಪರಿ ನಗು ? ಆನಂದ, ಅತ್ಯಾನಂದ, ಮಹದಾನಂದ, ಅದ್ಭುತಾನಂದ ಹೀಗೆ ಹಲ ಪರಿಯ ಖುಷಿಯಾದಾಗಲೆಲ್ಲಾ ತುಂಟಿಯಂಚಿನಲ್ಲಿ ಮೂಡಿ, ಕಣ್ಣಂಚಲ್ಲಿ ಮಿನುಗುತ್ತಲ್ಲ.. ಅದೇ ನಗು. ಏನಪ್ಪಾ ಇದು ಈ ಪರಿ ಪೀಠಿಕೆ ಅಂದ್ರಾ ? ಹೆ.ಹೆ ಇವತ್ತು ಬರೆಯೋಕೆ ಹೊರಟಿರೋ ಲೇಖನ ಅದೇ ಕಣ್ರಿ. ನಗು. ಅಂದಂಗೆ ಇಲ್ಲಿರೋ ಪಾತ್ರ, ವ್ಯಕ್ತಿ, ಸನ್ನಿವೇಷಗಳನ್ನೆಲ್ಲಾ ಸಿಕ್ಕಾಪಟ್ಟೆ ಸೀರಿಯಸ್ಸಾಗಿ ತಗೋಬೇಡಿ. ಸುಮ್ನೇ ಓದಿ, ನಕ್ಕು ಬಿಡಿ.

ನಗು ಬಾರದ ಕಾಮಿಡಿಗಳಿಗೆಲ್ಲಾ ಬಿದ್ದು ಬಿದ್ದು ನಗಬೇಕಾದ ಅನಿವಾರ್ಯತೆಯ ನಟ ಭಯಂಕರರನ್ನೂ, ನಟಿಮಣಿಯರನ್ನೂ ನೋಡಿಯೇ ನಗು ಬತ್ತಿ ಹೋಗುತ್ತಿರೋ ಸಂದರ್ಭದಲ್ಲಿ, ಕಾಮಿಡಿ ಟೈಂ ಅಂತ ಮಾಡಿ ನಗಿಸೋಕೆ ಪ್ರಯತ್ನ ಪಟ್ಟೂ ಪಟ್ಟೂ ಸುಸ್ತಾಗಿ ಕೊನೆಗೆ ಹಳೆಯ ಚಿತ್ರದ ತುಣುಕುಗಳ್ನೇ ನಗೆಯ ಸರಕುಗಳಾಗಿ ಉಪಯೋಗಿಸಬೇಕಾದ ಅನಿವಾರ್ಯತೆಯಲ್ಲಿ, ಎದುರಿಗೆ ನಗೆಯ ಮುಖವಾಡ ತೊಟ್ಟಿದ್ರೂ ಒಳಗಡೆ ಏನು ಬತ್ತಿ ಇಡ್ತಿದಾನೋ ಅಂತ ಇವ್ನೂ, ಎಷ್ಟು ಬೇಗ ನನಗಿಂತ ಚೆನ್ನಾಗಿ ಬೆಳೆದು ಬಿಟ್ನಲ್ಲ, ಇವ್ನ ಹೆಂಗೆ ಹಣಿಯೋದು ಅನ್ನೋ ಆಲೋಚನೆಯ ಮಧ್ಯೆಯೂ ಹಿ.ಹಿ.ಹಿ ಅಂತ ಹಲ್ಕಿರಿಯೋ ಅವನು..ಹೀಗೆ ನೂರೆಂಟು ಮುಖವಾಡಗಳ ನೋಡಿ ನೋಡಿ ಮಗುವಿನ ಮುಗ್ದ ನಗುವಿನಂತ ಶುದ್ದ ನಗು ಇನ್ನೂ ಉಳಿದಿದ್ಯಾ ಎಲ್ಲಾದ್ರೂ ಅನಿಸಿಬಿಡತ್ತೆ. ಪರರ ಹಾಸ್ಯ, ಅಪಹಾಸ್ಯ, ಕುಚೇಷ್ಟೆ ಮಾಡೋದ್ರಲ್ಲೇ ಕೆಲವರು ಅಪರಿಮಿತ ನಗುವನ್ನು ಕಂಡರೆ, ತಮ್ಮ ರೂಪ, ಆಕಾರ, ಮರೆವುಗಳನ್ನೇ ಹಾಸ್ಯದ ಅಕ್ಷಯ ಪಾತ್ರೆಯಾಗಿಸೋದು ಇನ್ನು ಕೆಲವರ ದೊಡ್ಡಗುಣ.

ನಗುನಗುತಾ ನಲಿ, ನಲಿ ಏನೇ ಆಗಲಿ ಅಂತ ಅಣ್ಣಾವ್ರು ಹಾಡಿದ್ರೆ , ನಮ್ಮ ಗಣೇಶ ನಗೂ ನಗು ನಗೂ ನಗು ನಗೂ ನಗೂ ನಗು.. ಅಂತ್ಲೇ ಅರಮನೆಯಲ್ಲಿ ಜೋಕರಾಗಿ ನಗಿಸೋಕೆ ಬರ್ತಾರೆ.
ನಗುವ ಗುಲಾಬಿ ಹೂವೆ ಅಂತ ಅಂಬರೀಷ್ ನಗುನಗುತ್ತಲೇ ವಿಷಾದದ ಭಾವಕ್ಕೆ ತಳ್ಳಿದ್ರೆ, ವಿಷ್ಣು ಭಾಯ್ ಆಪ್ತರಕ್ಷಕನ ರಾಜನ ನಗು, ಗೆಳೆಯನ ಹಾಸ್ಯದಲ್ಲಿ ಮಿಂಚುತ್ತಾರೆ.
ಉಮೇಶ್, ಜಹಾಂಗೀರ್, ಸಿಹಿಕಹಿ ತಮ್ಮನ್ನೇ ಹಾಸ್ಯ ಮಾಡ್ಕೊಂಡ್ರೆ, ಬೀಚಿ, ಪ್ರಾಣೇಶ್, ರಮೇಶ್ರಂತರ್ವು ಚುಚ್ಚದ್ರಲ್ಲೇ ನಗು ತರಿಸ್ತಾರೆ. ತುಟಿ ಬಿಚ್ಚದಿದ್ದರೂ, ಮಾತೊಡೆಯದಿದ್ದರೂ ಕಣ್ಣುಗಳಲ್ಲೇ ನಗು ಬೀರೋದು ಒಂದು ಪರಿಯಾದ್ರೆ ನಾಚೊ ನಗು, ಆತ್ಮವಿಶ್ವಾಸದ ನಗು, ಜಗದಲ್ಲಿ ನನ್ನ ಬಿಟ್ಟರಿಲ್ಲವೆಂಬ ಹಮ್ಮಿನ ನಗು, ಅಸಹನೆಯ ನಗು.. ಹೀಗೆ ಹನುಮನ ಬಾಲದಂತಹ ಪಟ್ಟಿ ನಗುವಿನ ಪರಿಯದು.

ನಗೋದ್ರಿಂದ ಏನೇನು ಪ್ರಯೋಜನ ಅಂತೊಂದು ಲೇಖನ ಓದ್ತಾ ಇದ್ದೆ. ಅದನ್ನ ಓದಿದ್ರೆ ನಿಮಗೂ ನಗು ಬರ್ಬೋದು ಅನಿಸ್ತು. ಅದರಲ್ಲಿದ್ದ ಅಂಶಗಳ್ನ ಹಾಕ್ತಿದೀನಿ ನೋಡಿ.
೧)ನಗೋದ್ರಿಂದ ದೇಹಕ್ಕೆ ಭಾರೀ ಅನುಕೂಲ: ಹೌದಂತೆ. ಸಿಟ್ಟು ಮಾಡ್ಕೊಂಡಾಗ ೪೩ ಸ್ನಾಯುಗಳ್ನ ಉಪಯೋಗಿಸಿದ್ರೆ ನಕ್ಕಾಗ ಬರೀ ೧೭ ಸ್ನಾಯುಗಳ್ನ ಮಾತ್ರ ಉಪಯೋಗಿಸ್ತೀವಿ. ಈ ತರ ದೇಹಕ್ಕೆ ಕಮ್ಮಿ ಶ್ರಮ ಕೊಟ್ರೂ ಮನಸ್ಸಿಗೆ ಖುಷಿಯಾಗುತ್ತೆ. ಪಕ್ಕದ ಪರಿಸರದಲ್ಲಿರೋರಿಗೂ ಒಳ್ಳೇದು. ಹೌದಪ್ಪಾ ಹೌದು. ಬೇಜಾರಾಯ್ತು ಅಂತ ಪಕ್ಕದಲ್ಲಿರೋರ ಮೇಲೆಲ್ಲಾ ಹರಿಹಾಯ್ತಾ, ಬೈಯ್ತಾ ಹೋದ್ರೆ ನಮ್ಮ ಬೇಜಾರು, ಸಿಟ್ಟು ಪರಿಹಾರ ಆಗ್ಬೋದು(??) ತಕ್ಷಣಕ್ಕಾದ್ರೂ . ಆದ್ರೆ ಪಕ್ಕದ ಪರಿಸರ ಕೆಟ್ಟು ಅವರೂ ತಿರುಗಾ ನಮ್ಮ ಮೇಲೆ ಹರಿಹಾಯ್ತಾರೆ. ಬಯ್ಯೋದು, ಹೊಡೆಯೋದು.. ಎಲ್ಲಾ ದೇಹಕ್ಕೆ ಅಷ್ಟು ಒಳ್ಳೇದಲ್ಲ ಅಲ್ವಾ ? (ಕಿಸೆಗೂ). ಮತ್ತೆ ಈ ಸಿಟ್ಟು ಮಾಡ್ಕೊಳ್ಳೋದ್ರಲ್ಲಿ ಬಳಕೆ ಆಗೋ ಸ್ನಾಯುಗಳು ಯಾವ ತರಹದ ಸಿಟ್ಟು ಅಂತೆಲ್ಲ ಅಲ್ಲಿ ಹಾಕಿಲ್ಲ ಮತ್ತೆ. ಸಿಟ್ಟು ಮಾಡ್ಕೊಂಡು ಅಟ್ಟಿಸ್ಕೊಂಡು ಹೋಗೋದು, ಹೊಟ್ಟೆ ಹಿಡಿದುಕೊಂಡು ಉರುಳಾಡಿಕೊಂಡು ನಗೋದು ಎಲ್ಲಾ ಎಷ್ಟು ಸ್ನಾಯುಗಳ್ನ ಬಳಸತ್ತೆ ಅಂತಲೂ ಹೇಳಿಲ್ಲ ಮತ್ತೆ. ಹೆ ಹೆ.

೨)ನಗೋದು ಮನುಷ್ಯನಿಗೆ ಮಾತ್ರ ಸಾಧ್ಯವಾಗೋವಂತ ಒಂದು ವರ(?): ಯಾಕೋ ಇದ್ನ ಓದೇ ನಗು ಬಂತು ನನಗೆ. ಅಲ್ಲಾ ಸ್ವಾಮಿ ಹಲ್ಲು ಕಿರೀಯೋ ಕೋತಿಗಳ್ನ, ಚಿಂಪಾಂಜಿಗಳ್ನ ನೋಡೇ ಇಲ್ವಾ ? ಮನುಷ್ಯನಂತೆ ನಗಬಲ್ಲ ಮತ್ತೊಂದು ಪ್ರಾಣಿ "ಹೈನಾ" ಅಂತ ಜೀವಶಾಸ್ತ್ರದಲ್ಲಿ ಓದಿದ್ದು ಮರ್ತೇ ಹೋಯ್ತ ಇವನಿಗೆ ಅನುಸ್ತು . ಅವಗಳ ಭಾವ ಅರ್ಥ ಆಗಲ್ಲ ಅಂದ ಮಾತ್ರಕ್ಕೆ ಅವು ಸುಮ್ನೆ ಹಲ್ಲು ಕಿರಿಯತ್ತೆ, ನಾವು ಮಾತ್ರ ಸಾಚಾ ನಗು ಬೀರೋದು ಅನ್ನಬೋದಾ ? ಹೆ ಹೆ. ಒಳ್ಳೆ ಕತೆ ಆಯ್ತು ಇದು.

೩)ಮಹಿಳೆಯರು ಜಾಸ್ತಿ ನಗುತ್ತಾರೆ : ಹಿ ಹಿ. ಇದು ನಿಜ ಇಅರಬಹುದೇನೋ. ಮಾತಾಡೋದೂ ಅವ್ರೇ ಜಾಸ್ತಿ. ಆಪಾದನೆ ಅಂತಲ್ಲ ಮೇಡಂಗಳೇ, ನೋಡಿದ್ದು, ಕೇಳಿದ್ದು ಅಷ್ಟೇ. ಕಂಪ್ಲೇಂಟಲ್ಲ, ಕಾಂಪ್ಲಿಮೆಂಟು ಅಂತ್ಲೇ ಇಟ್ಕೊಳಿ.  ಮಾತಿನ ಮಧ್ಯೆ ಮನೆಯ, ಆಫೀಸಿನ, ಮಕ್ಕಳ ಸುದ್ದಿ, ತರಲೆ ನೆನಪಿಸಿಕೊಂಡು ನಗೋದು ಕಾಮನ್ನೇ. ಇದ್ರ ಬಗ್ಗೆನೂ ಸಂಶೋಧನೆ ಮಾಡಿದ ಯೇಲ್ ಅನ್ನೋ ವಿಶ್ವವಿದ್ಯಾಲಯದವರು(ಅದು ಎಲ್ ಬಂತು ಅಂದ್ರಾ ? ನಂಗೂ ಗೊತ್ತಿಲ್ಲ ಬಾಸ್ . ಹಿ.ಹಿ.) ಮಹಿಳೆಯರು ದಿನಕ್ಕೆ ೬೨ ಬಾರಿ ನಗ್ತಾರೆ. ಗಂಡಸರು ಬರೀ ೮ ಬಾರಿ ನಗ್ತಾರೆ ಅಂತಂದಿದಾರೆ. ಗಂಡಸರ ನಗು, ಅಳು ಎಲ್ಲಾ , ಬಾರಿನಲ್ಲೆ. ಅಲ್ಲಿಗೆ ಈ ಸಂಶೋಧಕರು ಹೋಗಿರಲಿಕ್ಕಿಲ್ಲ ಅದಕ್ಕೇ ಹೀಗೆ ಅಂತ ಈ ಸಂಶೋಧನೆ ಸುದ್ದಿ ಕೇಳಿದ ನಮ್ಮ ಪೋಲಿಬಾರಿನ ಕುಮಾರ್ ಕುಹಕ ನಗು ಬೀರ್ತಾ ಇದ್ರು. ಮಗುವಿನ ಮುಗ್ದ ನಗು ಅಂದ ತಕ್ಷಣ ನೆನಪಾಯ್ತು. ಮಗು ಹುಟ್ಟಿದ ತಕ್ಷಣ ಅಳೋದಕ್ಕೆ ಶುರು ಮಾಡುತ್ತೆ ಅನ್ನೋದು ಎಲ್ರಿಗೂ ಗೊತ್ತಿದ್ರೂ ಮಗು ಹುಟ್ಟಿದ ಎರಡು ಘಂಟೆಗಳಲ್ಲೇ ಮೊದಲ ನಗು ಬೀರುತ್ತೆ ಅನ್ನೋದು ಗಮನಕ್ಕೆ ಬರದೆ ಹೋಗುತ್ತೆ.

೪)ಬೇರೆ ಬೇರೆ ತರದ ನಗುಗಳಿವೆ. ಇದು ಮಾತ್ರ ೧೦೦% ಹೌದ್ರಿ ಸರ. ಹೆಹೆ, ಹಹ, ಹಾಹಾಹಾ ಅಂತ ತರಹೇವಾರಿ ನಗೋರನ್ನು, ಸೂರೇ ಕಿತ್ತು ಹೋಗೋ ಪರಿ ನಗೋರನ್ನು, ಹಕ್ ಹಕ್ ಅಂತ ಬಿಕ್ಕಳಿಕೆ ಬಂದ ಹಾಗೆ ನಗೋರನ್ನ. ನಕ್ರೆ ಮಾನಗೇಡು ಅಂತ್ಲೋ , ನಗುವುದು ಸಭ್ಯತೆ ಅಲ್ಲ ಅಂತ್ಲೋ ನಗುವನ್ನು ತಗೆಹಿಡಿಯಕ್ಕೆ ಪ್ರಯತ್ನ ಪಟ್ರೂ ಅದು ನಿಯಂತ್ರಣಕ್ಕೆ ಸಿಗದೇ ನಗೋರನ್ನೂ, ಏನೋ ಕಿತಾಪತಿ ಮಾಡಿದ ಖುಷಿಯಲ್ಲಿ ಮೀಸೆಯಂಚಲ್ಲಿ, ಹುಳ್ಳ ಹುಳ್ಳಗೆ, ಮುಖಕ್ಕೆ ಕೈಯೋ, ಕರ್ಚೀಪೋ ಅಡ್ಡ ಇಟ್ಟುಕೊಂಡು ನಗೋದನ್ನೂ ನೋಡಿರ್ತೀವಿ. ನಗುವಲ್ಲಿ ಎಷ್ಟು ತರ ಇದೆ ಅಂತ ಸುಮ್ನೆ ಗೂಗಲ್ಲಲ್ಲಿ ಕೊಟ್ಟೆ. ಒಂದು ಸೈಟು ೨೩ ಅಂದ್ರೆ ಮತ್ತೊಂದು ೧೯ ಅಂತು. ಮತ್ತೊಂದ್ರ ಪ್ರಕಾರ ಬರೀ ಎಂಟಂತೆ. ಮತ್ತೊಂದು ಹೇಗೆ ನಗೋದು ಅಂತ ಹೇಳ್ಕೊಡ್ತೀನಿ ಬಾ ಅಂತಿತ್ತು.. ಯಪ್ಪಾ ಶಿವನೆ , ಎಂತಾ ಕಾಲ ಬಂತು ಅಂತ ನಗು ಬಂತು. ನಗು ಕ್ಲಬ್ಬು ಅಂತ ಮಾಡ್ಕೊಂಡು ಬೆಳಬೆಳಗ್ಗೆ ಎಲ್ಲಾ ಸೇರಿ ಬಿದ್ದು ಬಿದ್ದು ನಗೋದು ಈ ಪೇಟೆಗಳಲ್ಲಿ ಹೊಸ ಆರೋಗ್ಯವರ್ಧಕ ವಿಧಾನ. ಮನೆಯವರ ಜೊತೆ ನಗುನಗುತ್ತಾ ನಾಲ್ಕು ಒಳ್ಳೆ ಮಾತಾಡಿದ್ರೆ ಆಗಲ್ವಾ ಗುರು ? ಫೇಸ್ಬುಕ್ಕಲ್ಲಿ, ಅಲ್ಲಿ ಇಲ್ಲಿ ಹೀಗೆ ಬೀದಿಯವ್ರಿಗೆ ಮಾತ್ರ ಇವ್ರ ಈ ನಗು. ಮನೆಗೆ ಹೋದ ತಕ್ಷಣ ಉಗ್ರನಾರಾಯಣರು ಅಂತ ಕೆಲವರ ಹಿಂದೆ ಬಿಟ್ಟು ನಗ್ತಿದ್ದ ಗುಂಡ.  ನಿನ್ನಿಂದ ಆಗಲ್ಲ ಬಿಡು, ಹಿ ಹಿ. ನೀನು ಹೀಗೆ  ಬಂದೇ ಬರ್ತೀಯ  ಅಂತ ಗೊತ್ತಿತ್ತು. ಬಂದ್ಯಾ, ಬಾ ಬಾ ಅನ್ನೋ ಆತ್ಮವಿಜೃಂಭಣೆಯ ನಗು.. ಓಹೋ, ಉಗ್ರ ಪ್ರತಾಪಿ ಎಂಬ ಅಣ್ಣಾವರ ಬಭ್ರುವಾಹನನ ಹೀಯಾಳಿಕೆ ನಗು, ನಗುವೆಂದರೆ ನರಸಿಂಹರಾಜ್ ಅನ್ನುವಂತಿದ್ದ ಹೊಟ್ಟೆ ಹುಣ್ಣಾಗಿಸುವಂತಹ ನಗು, ಧೀರೇಂದ್ರ ಗೋಪಾಲ್, ಹೊನ್ನವಳ್ಳಿ ಕೃಷ್ಣರಿಂದ ಶುರುವಾಗಿ ಕಾಶೀನಾಥ್,ಟೆನ್ನಿಸ್ ಕೃಷ್ಣ, ಸಾಧುಕೋಕಿಲ, ಜಗ್ಗೇಶ್,ಕೋಮಲ್, ಬುಲೆಟ್ ಪ್ರಕಾಶ್, ಚರಣ್ , ಮಾಸ್ಟರ್ ಆನಂದ್, ಪಾಪ ಪಾಂಡು ವರೆಗೆ ಮುಂದುವರೆದು ಬಂದಿರೋ ಚಿತ್ರ ವಿಚಿತ್ರ ಪರಿಯ ನಗು. ಕನ್ನಡವೊಂದೇ ಅಲ್ಲದೇ ಹಿಂದಿಯ ಜಾನಿ ಲಿವರ್, ತೆಲುಗಿನ ಬ್ರಹ್ಮಾನಂದಂ ತನಕ ಚಿತ್ರವೆಂದರೆ ನಗು,ನಗಿಸೋರು ಇದ್ದೇ ಇರಬೇಕೆಂಬ ಅಘೋಷಿತ ನಿಯಮ ಬಂದಿದೆ ಅಂದ್ರೆ ಲೆಕ್ಕ ಹಾಕಿ . ನಗುವೊಂದು ಹಿಟ್ ಮಂತ್ರವೇ ಆಗಿ ಹೀರೋವೂ ರೊಚ್ಚಿಗೆ ಬಿದ್ದವನಂತೆ ನಗಿಸಲು ಅವಸ್ಥೆ ಪಡೋದ್ನ ನೋಡಿದ್ರೆ ನಗ್ಬೇಕೋ ಅಳ್ಬೇಕೋ ಗೊತ್ತಾಗಲ್ಲ.

೫)ನಗುವೇ ಸೌಂದರ್ಯ: ನಿಜವಾಗ್ಲೂ ಕಣ್ರಿ. ಐಶ್ವರ್ಯ ರೈ ನೋಡಿ. ಸೌಂದರ್ಯ ಅವರನ್ನೇ ನೋಡಿ. ನಕ್ಕಾಗ ಅವ್ರು ಏನ್ ಚಂದ. ದೇವಾನುದೇವತೆಗಳ ಫೋಟೋನೇ ನೋದ್ರಿ, ಅಭಯ ಹಸ್ತ ಇದೆ ಅಂದ್ರೆ ಅವ್ರು ನಗ್ತಿರ್ತಾರೆ. ಅಂದಂಗೆ ಫೋಟೋ ಹೊಡೆಯುವಾಗ್ಲೂ ಇಸ್ಮಾಯಿಲ್ ಅಂತ್ಲೇ ಹೇಳೋದು. ನಗ್ತಿದ್ದಾಗ್ಲೇ ಯಾಕೆ ಫೋಟೋ ತೆಗಿಬೇಕು ಅಂತ್ಲೂ ಕೆಲವರು ಅಂದ್ಕೊಂಡಿರಬಹುದು. ಈ ನಗು ಅನ್ನೋದು ಒಂತರಾ ಸಾಂಕ್ರಾಮಿಕ ಕಣ್ರಿ. ಯಾರಾದ್ರೂ ನಗೋದ್ನ ನೋಡಿದ್ರೆ ನಾವು ಪರರ ನಗುವಿನ ಕಾರಣ ತಿಳಿದಿದ್ರೂ ನಗೋಕೆ ಶುರು ಮಾಡ್ತೀವಿ. ಪಕ್ಕದಲ್ಲಿದ್ದವ ಬಿದ್ದು ಬಿದ್ದು ನಗ್ತಾ ಇದ್ರೆ, ನಮ್ಮ ತುಟಿಯಂಚಲ್ಲಾದ್ರೂ ನಗು ಮೂಡೇ ಮೂಡತ್ತೆ. ಈ ನಗೂನೆ ಮುಂದಿನ ಕಾಲಕ್ಕೆ ಸೆರೆಹಿಡಿದು ಭದ್ರಪಡಿಸೋಕೆ, ಫೋಟೋ ನೋಡಿದಾಗಲೆಲ್ಲಾ ಈ ನಗುವಿನ ಸವಿ ಮತ್ತೆ ಮತ್ತೆ ಮೂಡ್ತಾ ಇರ್ಲಿ ಅಂತ್ಲೇ ನಗಿರಪ್ಪಾ ಸ್ವಲ್ಪಾಂತ ಹೇಳ್ಬೋದೇನೋ.

೬) ನಗುವಿನಿಂದ ಆರೋಗ್ಯ ವರ್ಧಿಸುತ್ತೆ: ಇದು ಇಲಿನಾಯ್ಸ್ ವಿಶ್ವವಿದ್ಯಾಲಯದ (ಇಲ್ಲಿ noice ಅಲ್ಲ ಮತ್ತೆ. ಹೆ ಹೆ) ಸಂಶೋಧನೆ.  ನಗ್ತಾ ನಗ್ತಾ ಇದ್ರೆ, ಆ ನಗುವಲ್ಲೇ ನೋವುಗಳು ಕರಗಿ ಹೋಗಿ, ಚಿಂತೆಗಳು , ದುಗುಡಗಳು ಕರಗಿಹೋಗಿ ಮನಸ್ಸು ಶಾಂತವಾಗುತ್ತೆ. ಜಾಸ್ತಿ ನಗ್ತಾ ಇರೋರ ನಗು ಹಿಂದೆ ಎಷ್ಟೋ ಆಳದ ನೋವುಗಳಿರುತ್ತೆ . ಆದ್ರೆ ಅದ್ನ ತೋರಿಸಿಕೊಳ್ದೇ ಅವ್ರು ಎಲ್ಲರಂತೆಯೇ ಇರ್ತಾರೆ ಅಂತಾನೊಬ್ಬ ವೇದಾಂತಿ. ಈ ವೇದಾಂತವೇ ಅತಿಯಾಗಿ  ವಾಂತಿಯಾಗೋ ಮೊದ್ಲು ಮುಂದಿನದ್ರ ಬಗ್ಗೆ ನೋಡೋಣ.

೭)ಸುಖೀ ಕುಟುಂಬಗಳೆಲ್ಲಾ ನಗುವಿನ ಮೇಲೇ ನಿಂತಿದೆ: ನಂಗೆ ಮದ್ವೆ ಆಗದೇ ಕುಟುಂಬದ ಬಗ್ಗೆ ಮಾತಾಡೋ ಹಾಗಿಲ್ಲದಿದ್ರೂ (ಹಿ ಹಿ) ಅಪ್ಪ, ಅಮ್ಮ , ಅಣ್ಣ, ತಂಗಿ, ನೆಂಟರು .. ಅಂತೆಲ್ಲಾ ಲೆಕ್ಕಕ್ಕೆ ತಗೊಂಡು ಕುಟುಂಬ ಅನ್ನೋ ದೊಡ್ಡ ಲೆಕ್ಕದಲ್ಲಿ ಈ ಬಗ್ಗೆ ಹೇಳ್ಬೋದೇನೋ. ಮನೆಗೆ ಬಂದ ಅಪ್ಪ, ಅಮ್ಮ ದಿನಾ ಮುಖ ಗಂಟು ಹಾಕಿಕೊಂಡ್ರೆ ಬಯ್ತಾ ಇದ್ರೆ ಮಕ್ಕಳಲ್ಲಿ ಅಪ್ಪ ಬಯ್ತಾ, ಅಪ್ಪ ಭೂತ ಅನ್ನೋ ಭಯಾನಕ ಭಾವಗಳು ಮೂಡಬಹುದು !! ನಗುನಗುತ್ತಾ ಗೆಳೆಯರಂತಿರೋ ಅಪ್ಪ ಅಮ್ಮ ಯಾರಿಗೆ ತಾನೇ ಇಷ್ಟ ಆಗಲ್ಲ. ನಗು ತುಂಬಿ ತುಳುಕ್ತಿರೋ ಮನೆ ಸಹಜವಾಗೇ ಸುಖಿಯಾಗಿರತ್ತೆ.

೮)ನಗುವಿನಿಂದ ಸೀತ ದೂರ ಓಡುತ್ತೆ !!. ಇದೊಂತರ ಭಯಂಕರ ನಗು ತರುಸ್ತಾ ಇದೆ. ನಗ್ತಾ ನಗ್ತಾ ಇದ್ರೆ, ಮೂಗಿಗೆ ಸೋರೋದು ಮರ್ತು ಹೋಗಿ ಶೀತ ವಾಸಿಯಾಗುತ್ತೆ ಅಂದ್ರಾ ? ಹೆ ಹೆ. ಹಂಗಲ್ಲ. ನಗೋದೇನು ಬೇಡಂತೆ. ಸುಮ್ನೆ ಮುಖ ಮೇಲೆತ್ತಿ ಹಲ್ಲು ಎಷ್ಟು ಬೆಳ್ಳಗಿದೆ ಅಂತ ತೋರಿದ್ರೆ ಸಾಕಂತೆ ಎಂಡೋಫ್ರಿನ್ ಎಂಬ ಹಾರ್ಮೋನ್ಗಳು ಬಿಡುಗಡೆ ಆಗತ್ತಂತೆ. ಎಂಡೋರ್ಫಿನ್ ಅಂದ್ರೆ ಅದು ಸಂತೋಷದ ಅನುಭವ ಕೊಡೋ ಹಾರ್ಮೋನು. ಅದೇ ತರಹ ಟೆನ್ಸನ್ನು ಕಡಿಮೆ ಮಾಡೊ ಸೆರೋಟಿನಿನ್ ಅನ್ನೋ ಹಾರ್ಮೋನ್ ಕೂಡ ಬಿಡುಗಡೆ ಆಗತ್ತಂತೆ !ನಗ್ತಾ ನಗ್ತಾ ಇದ್ರೆ ಚಿಂತೆ ಕಮ್ಮಿ ಆಗತ್ತೆ ಅನ್ನೋದು ಸುಮ್ನೆ ಅಲ್ಲ ಸ್ವಾಮಿ. ಇನ್ನು ಶೀತದ ವಿಷ್ಯ. ಪ್ರತಿ ಸಲ ಹಲ್ಲು ಕಿರಿಯೋದ್ರಿಂದ ಬಿಳಿ ರಕ್ತಕಣಗಳು ಉತ್ಪಾದನೆ ಆಗತ್ತಂತೆ ಇದರಿಂದ ಶೀತ ದೂರ ಓಡತ್ತಂತೆ !. ಇದು ಎಷ್ಟರ ಮಟ್ಟಿಗೆ ಕಾಗೆ ಅಂತ ಆ ಸಂಶೋಧಕರಾಣೆ ಗೊತ್ತಿಲ್ಲ ಗುರು. ಹಿ ಹಿ.  ಬಿಳಿ ಹಲ್ಲು ತೋರಿಸಿದ ತಕ್ಷಣ ಬಿಳಿ ರಕ್ತಕಣಗಳು ಉತ್ಪಾದನೆ ಆಗದಿದ್ರೆ ದ್ವಾರಪಾಲಕರು ರಕ್ತ ಕಣದ ಫ್ಯಾಕ್ಟರೀನೇ ಇಡ್ಬೋದಲ್ವಾ ಅನ್ನೋ ಖತರ್ ನಾಕ್ ಐಡಿಯಾ ಮಾಡಿದ್ರಾ ? ಟ್ರೈ ಮಾಡೋದ್ರಲ್ಲಿ ತಪ್ಪೇನಿಲ್ಲ ಅನಿಸುತ್ತೆ. ಹೆ ಹೆ. ಅಂತೂ ನಗುವಿನ ಅಷ್ಟಲಾಭಗಳನ್ನ ಓದೋ ಹೊತ್ತಿಗೆ ಆಕಳಿಸಿ ನಿದ್ರೆ ತೆಗೆದಿರಬಹುದಾದ, ಬೈಕಂಡಿರಬಹುದಾಗ, ಓದೋ ಕರ್ಮ ಬೇಡವೆಂದು ಅಲ್ಲಲ್ಲಿ ಹಾರಿಸಿ ಕೊನೆಯ ಪ್ಯಾರಾಕ್ಕೆ ಬಂದಿರಬಹುದಾದ ಎಲ್ಲರಿಗೂ ಒಮ್ಮೆ ಧ.ವಾ. ಓದ್ತಾ ಓದ್ತಾ ಕೆಲವಾದ್ರೂ ನಿಮಗೆ ನಿಮ್ಮ ಬಾಲ್ಯದ, ಮೋಜಿನ ಪ್ರಸಂಗಗಳ, ನಗುವಿನ ನೆನಪು ತಂದು ನಕ್ಕು ನಗಿಸಿರಬಹುದು. ಕಲ್ಪನೆಗಳ ಏಣಿ ಏರಿಸಿರಬಹುದು. ಹಾಗಾಗಿದ್ದರೆ ನನ್ನ ಶ್ರಮ ಧನ್ಯ. ಮತ್ತೊಮ್ಮೆ ಸಿಗೋಣ..

Saturday, May 12, 2012

ಅವೆಂಜರ್ಸ್

ನಮ್ಮ ಗುಂಡಣ್ಣ ಮತ್ತು ಗ್ಯಾಂಗು ಅವೆಂಜರ್ಸ್ ನೋಡ್ಕೊಂಬಂದಿದ್ರು. ಅವತ್ತು ರಾತ್ರಿ ಎಲ್ಲಾ ಅವ್ರಿಗೆ ಅದೇ ಧ್ಯಾನ. ನಾನೇ ಕನ್ವರ್ ಲಾಲ್ ಅನ್ನೋ ಸ್ಟೈಲಲ್ಲಿ ನಾನೇ ಐರನ್ ಮ್ಯಾನ್ ಅಂತ ಹಾಡೂ ಕ(ಕು)ಟ್ಟಿದ್ದ ಗುಂಡ. ಅಸೈನುಮೆಂಟು ಮಾಡದ ತಪ್ಪಿಗೆ ಉಗಿಸ್ಕೊಳ್ಳೋದು ಯಾರು ಅಂತ ಕೊನೇ  ಕ್ಲಾಸಿಗೆ ಬಂಕಾಗಿ ಮಾಮು ಕ್ಯಾಂಟೀನ್ ಕಡೇ ಓಡ್ತಿರೋವಾಗ್ಲೇ ಅವ್ನ ಸಹಚರರು(?) ತಡ್ಯೋ ಗುಂಡ ಎಲ್ಲಿಗೆ ಓಡ್ತೀಯ ಅಂತ ಕೂಗಿ ನಿಲ್ಸಿದ್ರು. ಕೊನೆಗೆ ಯಥಾಪ್ರಕಾರ ಗುಂಡ ಮತ್ತು ಪಾಟ್ರಿ ಪ್ರಯಾಣ ಲಾನ್ ಕಡೆ ಸಾಗ್ತು. ಮುಂದೆನಾಯ್ತು ಅಂತೀರಾ ? ಓವರ್ ಟು ಕಾ...ಲೇಜ್ ಲಾನು..

ನಿನ್ನೆ ಫಿಲಿಮ್ಮು ಭಯಂಕರ ಇತ್ತು ಮಾರ್ರೆ. ಆ ನಾಯ್ಕ ಸುತ್ತಿಗೆ ತಿರುಗ್ಸಿ ಗಾಳಿ ಬರ್ಸೋದೇನು, ಅದ್ರಿಂದಲೇ ಮಿಂಚು ಬರೋದೇನು ಅಂತ ನಮ್ಮ ಮಂಗ್ಳೂರು ಮಂಜ ಹೇಳ್ತಿರೋವಾಗ್ಲೇ .. ಅದೇನು ಚೆನಾಗಿತ್ತಾ.. ನಂಗೆಂತು ಐರನ್ ಮ್ಯಾನೇ ಇಷ್ಟ ಅಪಿ. ಅದೇನು ಗ್ಯಾಜೆಟ್ಸು, ಎಷ್ಟು ಬುದ್ದಿ, ಎಷ್ಟು ಚುರುಕು.. ಕೆಂಪು ಕೆಂಪಾಗಿ ನೋಡೋಕು ಎಷ್ಟು ಚೆನಾಗಿದ್ದ.. ವಾ ಅಂದ್ಲು ಪ್ರಿಯಾ. ಅಲ ಲಲಲಾ.. ಅವ್ನ ಜೊತೆ ಇರ್ತಿದ್ದ ಹುಡ್ಗಿ ನೋಡಿ ಹೊಟ್ಟೇನೂ ಉರ್ದಿರ್ಬೇಕು ಅಕ್ಕೋರ್ಗೆ ಅಂತ ಕಾಲೆಳ್ದ ತರ್ಲೆ ತಿಪ್ಪ ಅಲಿಯಾಸ್ ತಿಪ್ಪೇಶ. ಎಲ್ಲಾ ಗೊಳ್ ಅಂದ್ರು.  ನೋಡಿ ಮಿ.ರೌಂಡ್.. ನಿಮ್ಮ ಫ್ರೆಂಡು ಹೆಂಗೆ ಕಾಲೆಳಿತಾನೆ ನಂಗೆ ಅಂತ  ಮುಖ ಊದುಸ್ಕೊಂಡ್ಲು ಪ್ರಿಯಾ. ಹೋಗ್ಲಿ ಬಿಡೆ,  ಈ ತಿಪ್ಪಂಗೆ ಹಳೇ ಹಳ್ಸಿದ ಪೀಸುಗಳೇ ಇಷ್ಟ ಆಗೋದು. ಅದ್ರಲ್ಲಿ ಒಬ್ಬ ಬಾಣ ಬಿಡ್ತಾ ಇದ್ದ ನೋಡು.. ಅವ್ನು ಇಷ್ಟ ಆಗಿರ್ಬೋಕು ಅಲ್ವಾ ಅಂತ ತಿಪ್ಪಂದೇ ಕಾಲೆಳೆದ್ಲು ಸಾರಿಕಾ ಅಲಿಯಾಸ್ ಸಾರಿ. ಈಗ ಬೆಪ್ಪಾಗೋ ಸರದಿ ತಿಪ್ಪಂದು, ತಿಪ್ಪಂಗೆ ಹಳ್ಸಿದ ಪೀಸು ಅಂತ ಹೇಳಿದ್ದು ಕೇಳಿ ನಗೋ ಸರದಿ ಬೇರೆ ಅವ್ರುದ್ದು.

ಕೊನೆಗೆ ಸಾರಿ ತಿಪ್ಪಾ. ಬೇಜಾರಾಯ್ತ ಅಂತ ಉಲುದ್ರು ಎಲ್ಲಾರು ಸಾರಿ ದಾಟೀಲೆ. ಅವ್ನುಂದು ಬರೀ ಬಾಣ ಅರ್ಲಲೇ ಅದು ಬಾಂಬ್ ಬಾಣ.. ಹೆಂಗೆ ಬೆಂಕಿ ಬರೋದು ಅದ್ರಿಂದ ನೋಡಿದ್ರಾ ಅಂದ ತಿಪ್ಪ. ಇಲ್ಲ ಅಂದ್ರೆ ಫಿಲ್ಮ ನೋಡೇ ಇಲ್ಲ ಅಂತ ಮರ್ಯಾದೆ ಹೋಗುತ್ತೆ ಅಂತಾನಾದ್ರೂ ಎಲ್ರೂ ಹೂಂ ಅಂದ್ರು. ಅಲ್ಲಾ, ಈ ಬಾಣ ಬಿಡೋ ಐಡಿಯಾನ ನಮ್ಮ ರಾಮಾಯಣ, ಮಹಾಭಾರತ ನೋಡಿ ಕದ್ನಾ ಈ ಫಾರಿನ್ ಡೈರೆಕ್ಟು ಅಂತ ನನಗೆ ಡೌಟು ಉಂಟು ಮಾರ್ರೆ ಅಂದ ಮಂಜ. ಎಲಾ ಮಂಜ, ಹೌದಲಲೇ, ನಮ್ಗ್ಯಾರಿಗೂ ಈ ಐಡಿಯಾ ಹೊಳಿಲೇ ಇಲ್ಲ ನೋಡ. ಭೇಷ್ ಮೆಗಾಮೈಂಡ್ ಅಂದ ಗುಂಡ.. ಎಲ್ಲಾ ಮೆಗಾಮೈಂಡ್ ಮಂಜಂಗೆ ಜೈ ಅಂದ್ರು..

ಈ ಫಿಲುಮ್ಮು ಬಂದಾಂಗಿಂದ ಎಲ್ಲಾ ಕಡೆ ಇದ್ರುದ್ದೆ ಹಾವ್ಳಿ. ಫೇಸ್ಬುಕ್ಕಲ್ಲೆಂತು ಕೇಳಂಗೆ ಇಲ್ಲ ಅಂದ್ಳು ಸಾರಿ. ಹೌದಮ್ಮಿ. ನಮ್ಮ ಶಕ್ತಿಮಾನ್, ಆರ್ಯಮಾನ್, ಕ್ರಿಷ್, ಜೀ ಮ್ಯಾನ್ .. ಹಿಂಗೆ ಭಾರತೀಯ ಸೂಪರ್ ಹೀರೋಗಳ್ನೆಲ್ಲಾ ಹಾಕಿ ಇದೇ ತರ ಒಬ್ಬ ಮಾಡಿದ್ದ. ಅದ್ನ ನೋಡಿ ಶಾನೆ ಖುಶಿ ಆತು. ನಮ್ಮಿಂಡಿಯಾನೇ ಗ್ರೇಟ್ ಅಂದ ತಿಪ್ಪ.. ಹೌದ್ಲ ತಿಪ್ಪ. ಆದ್ರೆ ತ್ರಿಮೂರ್ತಿಗಳು , ಹನುಮಂತ , ರಾಮ ಹಿಂಗೆ ದೇವಾನುದೇವತೆಗಳುದ್ದೂ ಇದೇ ತರ ಮಾಡವ್ರಲ್ಲೋ .. ಹಿಂಗೇ ಬಿಟ್ರೆ ಮುಂದೆ ಸಿಂಗಪ್ಪ, ಮೇಡಮ್ಮು, ಅರ್ಜಿ ಎಲ್ಲಾ ಸೇರ್ಸಿ ಮಾಡ್ತಾರೇನಪ ಅಂದ ಗುಂಡ. ಹೂಂ ಕಣ್ರ್ರೊ. ಇಂತ ರೀಲ್ ಲೈಫುಗಳ್ನೆಲ್ಲಾ ಸೇರ್ಸಿ ಮಾಡೋ ಬದ್ಲು ರಿಯಲ್ಲಾಗಿರೋರನ್ನೇ ಮಾಡಿದ್ರೆ ಹೆಂಗೆ ಅಂದ್ಲು ಪ್ರಿಯಾ.. ಹೂಂ ಅದೂ ಸರೀನೆ, ನಾವೊಂದು ಮಾಡಿ ಫೇಸ್ಭುಕ್ಕಿಗೆ ಎತ್ತಾಕನ(ಅಪ್ಲೋಡಿಗೆ ಇವ್ರ ಕೋಡು!! ) ಅಂದ್ಳು ಸಾರಿ.

ಹೂಂ ಕಣ್ಲಾ ಮಜಾ ಇರ್ತೈತೆ. ನಮ್ಮ ಹಫೀಸ್ ಹಜಾಮ, ಸೈಕಲ್ ಶಾಪ್ ಸಂತು, ಪಾನೀಪೂರಿ ಪ್ರವೀಣ ಇವ್ರುನ್ನೆಲ್ಲಾ ಸೇರ್ಸಿದ್ರೆ ಹೆಂಗ್ರೋ ಅಂದ ತಿಪ್ಪ. ಇದು ಕಾಮಿಡಿ, ಇದಕ್ಕೆ ನಾವು ನಗ್ಬೇಕಾ ? ಹೆ ಹೆ ಅಂದ್ಲು ಪ್ರಿಯಾ. ಅಲ್ಲ ಪ್ರಿಯಾ. ಅವ್ನುಂದೂ ಒಂದು ಪಾಯಿಂಟ್ ಉಂಟು(? !) . ಹಫೀಸಿಂದು ಕತ್ರೀನೆ ಆಯುಧ. ಏನೇ ಅಡ್ಡ ಬಂದ್ರು ಅದನ್ನ ಕಟ್ ಮಾಡುತ್ತೆ ಅದು . ಅದೇ ಕತ್ರಿನ ಭಯಂಕರ ತಿರುಗ್ಸಿದ್ರೆ ಬೀಸೋ ಗಾಳೀಲಿ ಅವ್ನು ಹೆಲಿಕಾಪ್ಟರ್ ತರಾ ಮೇಲಕ್ಕೆ ಹೋಗ್ತಾನೆ  !! ಅಂದ ಮಂಜ. ಭಲೇ ಮೆಗಾಮೈಂಡ್.. ಸೈಕಲ್ ಶಾಪ್ ಸಂತೋಷಣ್ಣಂದು ಟೈರುಗಳೇ ವೆಪನ್ನು. ಅದನ್ನ ಯಾರ ಕುತ್ಗೆಗಾದ್ರೂ ಬಿಗಿ. ಗಾಳಿ ತುಂಬುಸ್ತಾ ಹೋದಂಗೆ ಆಕಾಶದಲ್ಲಿ ಹಾರ್ಬೋದು, ಅದ್ರ ಒಳಗೆ ಕುತ್ಕೊಂಡ್ರೆ ಯಮ ವೇಗದಲ್ಲಿ ಉರುಳ್ಕೊಂಡು ಹೋಗ್ಬೋದು ಅಂದ ಗುಂಡ. ಹೂಂ ಶಭಾಷ್ ಅಂದ್ರು ಎಲ್ರೂ. . ಪ್ರವೀಣ್ ಅವ್ರುದ್ದು ಏನು ಕತೆ ಅಂದ್ಲು ಸಾರಿ. ಅವ್ನುದ್ದು ಯಾವ್ದೇ ವಸ್ತುನಾದ್ರೂ ಸಣ್ಣ ಮಾಡಿ ಪೂರಿ ಒಳಗೆ ತುಂಬ್ಸೋ ಪವರ್ರು ಅಂದ ತಿಪ್ಪ.. ಎದಿಗಿರೋದು ಕೆರೇನೆ ಆದ್ರೂ , ಟೊಮೆಟೋ ಲಾರಿನೇ ಆದ್ರೂ ಅವ್ನು ಒಂದು ಸಲ "ಜೈ ಪಾನಿ" ಅಂತ ಮಂತ್ರ ಹಾಕಿದ್ರೆ ಸಾಕು ಪೂರಿ ಒಳ್ಗೆ ಬಂದು ಕೂರ್ತೈತಿ ಅಂದ ತಿಪ್ಪ.. ಭಲೇ ಭಲೇ ಅಂದ್ರು ಎಲ್ಲಾ.

ಹೂಂ ಕಣ್ರೋ. ಆದ್ರೆ ಅದ್ರಲ್ಲಿ ಒಬ್ಬ ಸುತ್ಗೆ ಅವ್ನು ಇದ್ನಲ್ಲ ಅದಕ್ಕೆ ಯಾರನ್ನ ಹಾಕೋದು ಅಂದ್ಲು. ಮೋಚಿ ಮಾದೇಶನ್ನ ಹಾಕಣನ. ಅವ್ನು ಕುಟ್ಟೋ ಏಟಿಗೆ ಹದ ಮಾಡೋ ಚರ್ಮ ಏನು, ಅಂಗಡೀನೇ ನಡುಗ್ತೈತೆ. ಅವ್ನಿಗೆ ಬೇರೇದನ್ನೂ ನಡುಗ್ಸೋ ಪವರ್ ಕೊಡೋನ ಅಂದ ಗುಂಡ. ಬಿಳೀ ಶರಟವ್ರನ್ನೂ ನಡುಗ್ಸೋ ಪವರ್ರಾ ಅಂದ ತಿಪ್ಪ.. ವಿಷಯಾಂತರ ಮಾಡ್ತಿರೋದಕ್ಕೆ ಎಲ್ಲಾ ಗುರಾಯ್ಸಿದ್ರು ಅವ್ನಿಗೆ. ಹೂಂ. ಅದ್ರಲ್ಲಿರೋ ಡುಮ್ಮನ ಬದ್ಲು ನಮ್ಮ ಗುಂಡನ್ನೇ ಇಟ್ರೆ ಹೆಂಗೆ ಮಾರ್ರೆ ಅಂದ ಮಂಜ. ಹೂಂ, ಇವ್ನಿಗೆ ಏನು ತಿಂದ್ರೂ ಜೀರ‍್ಣ ಆಗ್ತೈತೆ. ಕೆಲೋ ಸಲ ಸಾನೆ ರೈಸಾಗ್ತಾನೆ. ಹಂಗೇ ರೈಸಾಗೋ(ಬೆಳ್ಯೋ) ಪವರ್ರೂ ಕೊಡನ ಅಂತ ಅಲ್ಲೇ ಕಾಲೆಳ್ದ ತಿಪ್ಪ. ಓಯ್ ನನ್ ಕಾಲೇ ಎಳಿತೀಯ ತಡಿ ಅಂತ, ಹಂಗಾರೆ ಅದ್ರಲ್ಲಿರೋ ಮತ್ತೊಬ್ಬ ನಕ್ಷತ್ರದವ್ನ ಬದ್ಲು ನಿನ್ನ ಇಡನ. ನಕ್ಷತ್ರಿಕ ಅಂತಲೇ ಹೆಸ್ರೂ ಇಡ್ಬೋದು . ಒಳ್ಳೇ ಮ್ಯಾಚಿಂಗು ಅಂದ ಗುಂಡ. ವಾವ್.. ಸೂಪರ್ ಅಂದ್ರು ಎಲ್ಲಾ.

ಹಿಂಗೇ ಅವೆಂಜರ್ಸ್ ನ ಲೋಕಲ್ ಅವತಾರಕ್ಕೆ ತಯಾರಿ ನಡಿತಿರೋ ಹೊತ್ಗೆ ಪೀರಿಯಡ್ ಬೆಲ್ಲಾಗಿದ್ದು ಕೇಳ್ತು. ಅಂತೂ ಗೆದ್ದೆ ಅಂದ ಗುಂಡ. ಅದ್ಕೆ ಕಣ್ಲಾ ನಿನ್ನ ಪೆದ್ಗುಂಡ ಅನ್ನೋದು. ಇವತ್ತು ಕೊನೇ ಪೀರಿಯಡ್ ಇರ್ಲೇ ಇಲ್ಲ. ಸುಮಾ ಮಿಸ್ಸು ಚಕ್ಕರ್ರು ಅಂದ ತಿಪ್ಪ.. ಹೂಂ ಕಣ್ರಿ ಮಿಸ್ಟರ್ ರೌಂಡ್.. ಅದ್ನ ಹೇಳಕ್ಕೆ ಅಂತಲೇ ನಿಮ್ಮನ್ನ ಕರೀತಿದ್ರೆ ನೀವು ಓಡಿ ಹೋಗೋದ ಅಂದ್ಲು ಪ್ರಿಯಾ.. ಮಾರ್ರೆ, ನಮ್ಮೀ ಲೋಕಲ್ ಕತೇನ ಕೋತಿ ರೇಟ್ ಮಾಡ್ಸಿದ್ರೆ ಹೆಂಗೆ ಅಂದ ಮಂಜ. ಅದೆಂತ ಕೋತಿ ರೇಟು ಅಂತ ಯಾರಿಗೂ ಅರ್ಥ ಆಗ್ಲಿಲ್ಲ.. ಅದು ಕೋತಿ ರೇಟಲ್ಲೋ, ಕಾಪಿ ರೈಟ್.. ಭಾರತದಲ್ಲಿದಿಯಾ.. ಇಲ್ಲಿ ತರ ಇಂಗ್ಲೀಷ್ ಕಲಿ ಮೊದ್ಲು, ಆಮೇಲೆ ಫಾರಿನ್ನಿಗೆ ಹಾರುವಂತ ಅಂತ ಕಾಲೆಳ್ದ ತಿಪ್ಪ. ಮಂಜನ ಮುಖ ಹುಳ್ಳಗಾಯ್ತು. ಹೂಂ ಕಣೋ, ಹೆವಿ ಕಥೆ ತಯಾರ್ ಮಾಡಿದೀವಿ. ಇದನ್ನ ತಗಂಡೋದ್ರೆ ರೈಟಲ್ಲ ಲಾತ ಕೊಟ್ಟು ಕಳುಸ್ತಾರೆ ಅಷ್ಟೆ..ನಡಿ ನಡಿ ಅಂದ ಗುಂಡ.. ಎಲ್ಲಾ ನಗೊಂದ್ರೊಂದಿಗೆ ಅವ್ರ ನಗೆಪಯಣ ಬಸ್ಟಾಂಡತ್ತ ಸಾಗಿತು..    

Wednesday, April 25, 2012

ಆಲೂ ಪುರಾಣ

ಮಸಾಲೆ ದೋಸೆ !! .. ಆ.. ಆಗ್ಲೇ ಬಾಯಲ್ಲಿ ನೀರಾ ? ನಿಮ್ಮಂಗೆ ನಂಗೂ.. ನಾನು ಸಣ್ಣೋನಿದ್ದಾಗ ಮನೇಲಿ ಮಸಾಲೆ ದೋಸೆ ಮಾಡ್ತಾರೆ ಅಮ್ಮ ಅಂದ್ರೆ ಭಾರಿ ಖುಷಿ ಪಡ್ತಿದ್ದೆ. ಅದ್ರಲ್ಲೂ ಅದ್ರಲ್ಲಿ ಆಲೂಗಡ್ಡೆ ಪಲ್ಯ ಇರುತ್ತೆ ಅನ್ನೋದಕ್ಕೆ. ಹೊರಗಡೆ ಹೋಟ್ಲಿಗೇನಾದ್ರೂ ಕರ್ಕೊಂಡೋದ್ರೂನೂ ದೋಸೆ ಹೇಳಿದ್ರೆ ಮಸಾಲೆ ದೋಸೇನೆ ಹೇಳ್ತಿದ್ದ ನೆನ್ಪು. ಸಾಗರದ ಸುಖಸಾಗರ, ಪೈಸ್ ಪರಿವಾರ, ಪವಿತ್ರ ಹೋಟ್ಲು.. ಹಿಂಗೆ ಮಸಾಲೆ ದೋಸೆ ಅಂದ್ರೆ ಮೂಗು, ಬಾಯಿಗೆ ಭಾರಿನೇ ನೆನ್ಪಾಗುತ್ತೆ. ಒಮ್ಮೆ ಪೂನಾಕ್ಕೆ ಹೋದಾಗ ಅಲ್ಲಿ ಹೋಟೆಲ್ ಒಂದ್ರಲ್ಲಿ ವೆಜ್ ಯಾವ್ದು ಅಂತ ಗೊತ್ತಾಗ್ದೆ ಮಸಾಲೆ ದೋಸೆ ತಗೊಂಡಿದ್ದು, ಅದ್ರ ಖಾರ ಹೆಚ್ಚಾಗಿ ಹೊಟ್ಟೆ ಎಲ್ಲಾ ಉರಿ ಎದ್ದಿದ್ದೂ ನೆನ್ಪಾಗತ್ತೆ. ದೆಲ್ಲಿಗೆ ಹೋದಾಗ ಅಲ್ಲಿ ಕರ್ನಾಟಕ ಡಾಬಾದಲ್ಲಿ ಹುಳಿ ಹುಳಿ ಇಡ್ಲಿ, ದೋಸೆ ತಿಂದು ಏನಂದ್ರು ನಮ್ಮ ಕರ್ನಾಟಕದ ನೆನ್ಪು ಭಾರಿ ಕಾಡಿದ್ದೂ ಉಂಟು.   ಇವತ್ಯಾಕೆ ಇದ್ದಕ್ಕಿಂದಂಗೆ ಆಲೂಗಡ್ಡೆ ನೆನ್ಪಾಯ್ತು ಅಂತೀರಾ ? ಫುಲ್ಲು ಮಳೆ. ಬೆಚ್ಚಗೆ ಏನಾದ್ರೂ ಇದ್ದಿದ್ರೆ ಚೆನ್ನಾಗಿರೋದು ಅಂತ  ಬಾಯಿ ಅಂದ್ಕೊಳ್ಳೋ ಹೊತ್ಗೆ ನೆನ್ಪಾಗಿದ್ದು ಇದು.. ಹಂಗೇ ಸ್ವಲ್ಪ ಹಸಿಬಿಸಿ ನೆನ್ಪುಗಳ್ನ ಹಂಚ್ಕೊಳ್ಳೋಣ ಅನಿಸ್ತು. ಬರೀತಿದೀನಿ .. ಓದಿ

ಸೊಲಾನಮ್ ತುಬೆರೋಸಮ್(Solanum Tuberosum) ಅನ್ನೋ ಸಸ್ಯಶಾಸ್ತ್ರೀಯ ಹೆಸರಿನ ಆಲೂಗಡ್ಡೆ ಮೊದಲು ಸ್ಪೇನಿಂದ ಯುರೋಪಿಗೆ ೧೬ನೇ ಶತಮಾನದ ಸುಮಾರಿಗೆ , ತದನಂತರ ಹಾಗೇ ಭಾರತಕ್ಕೆ ಬಂದಿರಬಹುದು ಎಂಬ ಅಂದಾಜು ಕೆಲವು ವಿದ್ವಾಂಸರದು. ಪ್ರಪಂಚದಲ್ಲಿ ಮನುಷ್ಯ ಅಂದಾಜು ೩೩ ಕೇಜಿ ಆಲೂಗಡ್ಡೆ ತಿಂತಾನಂತೆ ವರ್ಷಕ್ಕೆ .. ಇದು ನಾನು ಹೇಳಿದ್ದಲ್ಲ ಕಣ್ರ‍ಿ. ಇಲ್ಲೇ ಓದಿದ್ದು. ಅಬ್ಬಾ ಅಂದ್ರಾ ? ನಂಗೂ ಮುಂಚೆ ಹಾಗೇ ಅನಿಸ್ತಿತ್ತು. ಆದ್ರೆ ಯಾವಾಗ ಬೆಂದಕಾಳೂರಿನ ಪೀಜಿಗೆ ಬಂದ್ನೋ ಆಗ ಬರೀ ೩೩ ಆ ಅನ್ಸೋಕೆ ಶುರು ಆಯ್ತು .. ಯಾಕೆ ಅಂದ್ರಾ. .ಓದಿ ನೋಡಿ

ನಮ್ಮ ಪೀಜಿ ಅಡಿಗೆಭಟ್ಟಂಗೆ ಆಲೂಗಡ್ಡೆ ಮನೆದೇವ್ರ ಅಂತ ಸುಮಾರು ಸಲ ಅಂದ್ಕೊಂಡಿದೀನಿ. ಉದಾಹರಣೆಗೆ ಇವತ್ತು ಮಾಡಿದ್ದ ತಿಂಡಿ ಆಲೂ ಪೋಹ. ಅಂದ್ರೆ ಆಲೂಗಡ್ಡೆ ಅವಲಕ್ಕಿ!!! ಅವಲಕ್ಕಿ ಮಾಡಿ ಅದಕ್ಕೆ ಒಗ್ಗರಣೆಗೆ ಕೊತ್ತಂಬರಿ, ಮೆಣಸಿನಕಾಯಿ ಹಾಕೋ ಬದ್ಲು ಆಲೂಗಡ್ಡೆ ಹಾಕಿದ್ರೆ ಆಲೂ ಪೋಹ ರೆಡಿ! ನಿನ್ನೆ ಆಲೂ ಪರೋಟ. ಪೂರಿ ಮಾಡಿದ್ರೆ ಆಲೂ ಸಬ್ಜಿ, ಉಪ್ಪಿಟ್ಟಿಗೂ ಆಲೂ ಇಲ್ದಿದ್ದ್ರೆ ರುಚಿ ಇಲ್ಲ ಅಂತಾನೆ ಅವ್ನು !! ರಾತ್ರೆಗೆ ಆಲೂ ಸಬ್ಜಿ ಅಥವಾ ಗೋಬಿ ಸಬ್ಜಿ ಅಥವಾ ಚನಾ.. ಬಾಯಲ್ಲಿ ನೀರೂರಕ್ಕೆ ಶುರು ಆಯ್ತಾ ? ಯಾವುದೂ ಆಲೂ ಇಲ್ಲದೇ ಇಲ್ಲ. ಇನ್ನು ಮಧ್ಯಾಹ್ನ ಊಟಕ್ಕೆ ಅಂತ ಪಕ್ಕದ ಹೋಟ್ಲಿಗೆ ಹೋದ್ರೆ ಅಲ್ಲೂ ಆಲೂ ಪಲ್ಯ.. ಅಥವಾ ಪೂರಿಗೆ ಆಲೂ ಸಾಗು !!!

ಈ ರೀತಿ ಆಲೂ ತಿನ್ನೋದು ಒಳ್ಳೇದಲ್ಲ ಕಣೋ ಅಂತಾರೆ ಅಮ್ಮ. ಆದ್ರೆ ಏನು ಮಾಡೋಣ ? ನಮ್ಮ ಪೀಜಿ ಕುಕ್ಕು.. ಅದೇ ಮುಂಚೆ ಹೇಳಿದ್ನಲ್ಲಾ ಅವ್ನೆ.. ಒಡಿಸ್ಸಾದವನು. ಆಲೂಗಡ್ಡೆ ಒಂದೇ ತರಕಾರಿ ಅಂತ ಅಂದ್ಕೊಂಡಿದಾನೋ ಏನೋ ಗೊತ್ತಿಲ್ಲ. ಅಪರೂಪಕ್ಕೆ ನುಗ್ಗೇಕಾಯಿ, ಬದನೇಕಾಯಿ ಕಾಣಿಸಿದ್ರೂ ಆಲೂಗಡ್ಡೆ ಕಾಯಮ್ಮು ಎಲ್ಲದ್ರಲ್ಲೂ. ಏನಪಾ ಹಿಂಗೆ ಅಂದ್ರೆ.. ನಮ್ಮನೇಲಿ ದಿನಕ್ಕೆ ೨ ಕೆ.ಜಿ ಆಲೂ ನಾನೊಬ್ನೆ ತಿಂತೀನಿ. ಆಲೂ ತಿಂದ್ರೆ ಬಾಡಿ ಬರುತ್ತೆ ಗೊತ್ತಾ ಅಂತ ಸಲ್ಮಾನ್ ಖಾನ್ ಪೋಸ್ ತೋರಿಸ್ತಾನೆ. ಆ ಖಾನ್ ಸಾಹೇಬ್ರು ಏನು ತಿಂದ್ರೋ ಗೊತ್ತಿಲ್ಲ. ಆದ್ರೆ ದಿನಾ ಈ ರೀತಿ ತಿಂತಿಂದು ಬಾಡಿ ಬರದಿದ್ರೂ  ... ಬರುತ್ತೆ. . ಅದ್ರ ಬಗ್ಗೆ ಹೇಳದಿದ್ರೇನೆ ವಾಸಿ !

 ಅಮ್ಮ ಅಂದ ಕೂಡ್ಲೇ ನೆನ್ಪಾಯ್ತು. ಅಮ್ಮ ಆಲೂಗಡ್ಡೆ ಹುಳಿ(ಸಾಂಬಾರ್) ಚೆನ್ನಾಗಿ ಮಾಡ್ತಾರೆ. ನಮ್ಮತ್ತೆ ಆಲೂಗಡ್ಡೆ ಹಾಕಿ ಮಾಡೋ ಮೊಸರು ಬಜ್ಜಿ ರುಚಿ ಸೂಪರೋ ಸೂಪರು. ಆಲೂಗಡ್ಡೆ ಜೊತೆಗೆ ನನ್ನ ಅಪ್ಪನ ಫ್ಲಾಷ್ ಬ್ಯಾಕ್ ನೆನ್ಪೂ ಇದೆ. ನಾನು ಸಣ್ಣಕ್ಕಿದ್ದಾಗ ಹಿಂಗೆ ಚಳಿ ಇದ್ದ ರಾತ್ರೇಲಿ ಅಪ್ಪ ಇದು ನೋಡು ಸಮೋಸ ಅಂತ ಕೊಡ್ಸಿದ್ರು. ಆಗ ಸಾಗರಕ್ಕೆ ಬಂದ ಮೊದಲ ಸಮೋಸ ಸರ್ದಾರ್ಜಿ ಅವರೇ ಆಗಿದ್ರೇನೋ ಅಂದ್ಕೊಂಡಿದ್ದೆ !! ಈಗ ಬಿಡಿ ಹಾದಿ ಬೀದೀಲಿ ಮಸಾಲ ಪುರಿ ಸಿಗೋ ಸುಮಾರು ಕಡೇಲೆಲ್ಲಾ ಸಮೋಸ ಸಿಗುತ್ತೆ.. ಹೈದರಾಬಾದಲ್ಲೆಂತೂ ಅದು ಭಯಂಕರ ಕಾಮನ್ ಅನ್ಸಿತ್ತು.ಅಲ್ಲಿ ಚಾರ್ ಮಿನಾರ್ ಹತ್ರ ಸೌತೆಕಾಯಿ ಮಾರಿದಂಗೆ ಹತ್ರುಪಾಯಿಗೆ ೪ ಸಮೋಸ ಮಾರ್ತಾ ಇರ್ತಾರೆ. ಆಲೂ ಬಗ್ಗೆ ಬರದು ಆಲೂ ಬೋಂಡದ ಬಗ್ಗೆ ಬರಿದೇ ಇದ್ರೆ ಹೇಗೆ. ಮೆಣಸಿನಕಾಯಿ ಬೋಂಡ ಖಾರ..ಅಂತ ಇಷ್ಟಪಡದೇ ಇದ್ದೋರಿಗೂ, ಇಷ್ಟಪಟ್ಟೋರಿಗೂ ಆಲೂ ಬೋಂಡಾ ಅಂದ್ರೆ ಇಷ್ಟಾನೆ. ಈಗಲೂ ಸುಮಾರು ಕಡೆ ಮದುವೆ ಇತ್ಯಾದಿ ಕಾರ್ಯದ ಮನೆಗಳಲ್ಲಿ ಆಲೂ ಬೋಂಡಾ ಮಾಡ್ತಾರೆ..  ಹೀಗೆ ಆಲೂಗಡ್ಡೆ ಬಗ್ಗೆ ಬರೆದಷ್ಟೂ ಇದೆ ಕಣ್ರಿ.  ಅವೆಲ್ಲಾ ಆಲೂ ತಿಂದ ಸುಮಾರು ಹೊತ್ತಿನ ಬಳಿಕ ನೆನಪಾಗೋ ಗಾಳಿಯಂತೆ ಯಾವಾಗ್ಯಾವಾಗ್ಲೋ ನೆನಪಾಗ್ತಾ ಇರುತ್ತೆ !!

ನಮ್ಕಡೆ ಎಲ್ಲಾ ವಾಯು ಅಂತ ಸುಮಾರು ಜನ ಆಲೂಗಡ್ಡೆ ತಿನ್ನೋದೆ ಇಲ್ಲ. ತಿಂದ್ರೂ ಅದಕ್ಕೆ ಜೀರಿಗೇನೂ ಅಥವಾ ಬೇರೆ ಏನಾದ್ರೂ ಪರಿಹಾರ ಯೋಚ್ನೆ ಮಾಡೇ ಇರ್ತಾರೆ. ಆದ್ರೆ ಸದ್ಯಕ್ಕಂತೂ ಆಲೂಗಡ್ಡೆ ಮರ್ತು ಊಟನೇ ಇಲ್ಲ ಅನ್ನೋ ಹಾಗಿದೆ. ಅತಿಯಾದ್ರೆ ಅಮೃತನೂ ವಿಷ ಅಂತಾರಲ್ವಾ ? ಹಾಗಾಗಿ ಆಲೂಗಡ್ಡೆ ಬಿಟ್ಟು ಬೇರೆ ಹೋಳು ಹಾಕ್ಕೊಳೋದು, ಕುಕ್ಕಿಗೆ ಪುಸಲಾಯಿಸಿ ಬೇರೆ ಸಬ್ಜಿ ಮಾಡ್ಸೋದು ಹೀಗೆ ತರಾವರಿ ಉಪಾಯ ಮಾಡ್ಬೇಕಾಗಿದೆ !  ಮನೆಗೆ ಹೋದ್ರೂ ಆಲೂಗಡ್ಡೆ ಬಿಟ್ಟು ಬೇರೆ ಏನಾರು ಮಾಡ್ಕೊ, ತಂಬಳಿ ಮಾಡು, ಚಟ್ನಿ ಮಾಡು, ಸಾರು ಮಾಡು. ಹುಳಿ ಮಾಡಿದ್ರೂ ಆಲೂಗಡ್ಡೆ ಮಾತ್ರ ಹಾಕ್ಬೇಡ ಹೇಳೇ ಹೇಳೋದು ಅಮ್ಮಂಗೆ !!

Saturday, November 12, 2011

ಬೈಲೂರ ಬಸ್ಸು ಹತ್ತಿ

ಮನೇಲಿ ಕಾರ್ಯಕ್ರಮ ಇದೆ, ಬರಲೇ ಬೇಕು ಅಂತ ಕರೆದಿದ್ರು ಅನ್ಸತ್ತೆ. ಹನ್ನೊಂದೂಕಾಲಿಗೆ ಹಸಿರು ಬಣ್ಣದ ಬಸ್ಸು ಬರತ್ತೆ , ಅದ್ರಲ್ಲಿ ಬಾ ಅಂತ ಸೂಚನೆ. ಸರಿ, ವಿಶ್ವಾಸದ ಮೇಲೆ ಕರೆದ ಮೇಲೆ ಬಿಡೋಕಾಗತ್ತಾ? ಹೂಂ ಜೈ ಅಂತ ಹನ್ನೊಂದ್ಘಂಟೆಗೇ ಬಸ್ಟಾಂಡಲ್ಲಿ ಹಾಜರು.ಎಲ್ಲಿಳ್ಯದು, ಯಾವ ಬಸ್ಸು ಎಂತನೂ ಗೊತ್ತಿಲ್ಲ. ಫೋನಲ್ಲಿ ಕೇಳಿದ್ದಷ್ಟೆ. ಹೋಗ್ಬೇಕಾಗಿರೋ ಊರ ಹೆಸ್ರನ್ನೇಳಿ ಕಂಡಕ್ಟ್ರಣ್ಣಂಗೆ ಕೇಳ್ದಾಗ "ಬೇಲೂರು ಗಾಡಿ ಬರತ್ತೆ ಹನೊಂದು ಕಾಲಿಗೆ. ಅದ್ರಲ್ಲೋಗಿ" ಅಂದ. ನಾ ಹೋಗ್ಬೇಕಾಗಿದ್ದು ಸೈದೂರು ದಾರಿ. ಬೇಲೂರಿಗೂ ಸೈದೂರಿಗೂ ಎಲ್ಲಿಂದೆಲ್ಲಿ ಸಂಬಂಧ ಅಂತ ಅರ್ಥ ಆಗ್ಲಿಲ್ಲ.ಹಂಗಂತಾ? ಗಣೇಶ ಸ್ಟೈಲಲ್ಲಿ ತಲೆ ಕೆರ್ಕಳಕೆ ಆಗತ್ತಾ? ಅದೂ ಬಸ್ಟಾಂಡ್ ಬೇರೆ :-)

ಹನ್ನೊಂದು ಕಾಲಾಯ್ತು. ಬಂದಿರ್ಲಿಲ್ಲ ಬಸ್ಸು. ಬಿಸಿಲು ಬೇರೆ ಏರ್ತಾ ಇತ್ತು. ಬಸ್ಟಾಂಡಲ್ಲೊಂದು ಅಂಗಡಿ ಎದ್ರಿದ್ದ ನೆರಳಲ್ಲಿ ಜಾಗ ಖಾಲಿ ಇತ್ತು. ನಂತರನೇ ನೆರಳನರಸಿ ಸುಮಾರು ಜನ್ರಿದ್ರು ಬಿಡ್ರಿ.. ಕಾದ ತಗಡ ಶೀಟು. ಕೆಳಗೆ ನಾನು. ಕೇಳಬೇಕೆ? ಸೆಖೆ ಹೊಡ್ತ. ಬೆವ್ರೊರ್ಸದು, ಗಡಿಯಾರ ನೋಡದು ಇದೇ ಕೆಲ್ಸ ಆಯ್ತು. ಹನ್ನೊಂದು ಇಪ್ಪತ್ತೈದು. ಅಲ್ಲಿದ್ದೋರಲ್ಲಿ ಅನ್ಸತ್ತೆ ಊರಿಗೋಗೋರೂ ಇದ್ರು ಹೇಳೋದು ಅವರ ಮಾತಿಂದ ಗೊತ್ತಾಯ್ತು. ಇದ್ದಿದ್ರಲ್ಲಿ ಅದೊಂದು ಸಮಾಧಾನ. ಅದೇ ಊರಿಗಂತೂ ಹೋಗ್ತಾರೆ. ಅವ್ರ ಮನೇಗೆ ಹೋಗ್ಬೋದು ಅಂತ ಮನ್ಸು ಹೇಳಕ್ಕಿಡೀತು. ಆದ್ರೂ ಕೇಳಕ್ಕೆ ಬಾಯಿ ಬರ್ಲಿಲ್ಲ. ಫಿಲ್ಮಲ್ಲಿ ಹೀರೋಗೆ ಹೀರೋಯಿನ್ ಎದ್ರು ಮಾತು ಬರಲ್ವಲ ಹಂಗೆ ಅಂದ್ಕಂಡ್ರಾ? ಥೋ..ಅವ್ರೆಲ್ಲಾ ವಯಸ್ಸಾದವ್ರು :-)

ತಡ್ಯಕ್ಕಾಗ್ದೇ ಕಾಲು ಮತ್ತೆ ಕಂಡಕ್ಟ್ರಪ್ಪನ ಹತ್ರನೇ ಎಳ್ಕಂಡೋಯ್ತು. ಅಲ್ಲೊಬ್ಬ ಹೋತಲ್ರಿ ಬಸ್ಸು ಹನ್ನೊಂದು ಕಾಲಿಗೇನೆ ಅಂದ. ಏ ಇಲ್ಲ ಕಣ್ರಿ, ಇಲ್ಲೇ ಕಾಯ್ತಿದೀನಿ ಅರ್ಧ ಘಂಟೆ ಆಯ್ತು ಅಂದೆ. ಥೋ. ಬೇಲೂರು ಬಸ್ಸು ಬಸ್ಟಾಂಡಿಗೆ ಬಂದೂ ಆಯ್ತು. ಹೋಗೂ ಆಯ್ತು ಅಂದ ಇನ್ನೊಬ್ಬ.ಮುಂದಿನ ಬಸ್ಸು ಒಂದೂಕಾಲಿಗೆ ಅಂದ ಮತ್ತೊಬ್ಬ. ಥೋ, ಒಳ್ಳೇ ಕೆಲ್ಸ ಆಯ್ತಲ ಅಂತ ಮತ್ತೆ ಮಾಮೂಲಿ ತಗಡು ಕೆಳಗೆ ಬಂದೆ. ಅಲ್ಲಿದ್ದೋರು ಗೌರ್ಮೆಂಟು ಬಸ್ಟಾಂಡ್ಕಡೆಗೆ ಹೊಂಟ್ರು. ನಮ್ಮ ಸಾಗರದಲ್ಲಿ ಗೌರ್ಮೆಂಟು ಬಸ್ಡಿಪೋ ಆಗಿದ್ದೀತ್ತೀತ್ಲಗೆ. ಹಂಗಾಗಿ ಕೆಲೋ ಊರಿಗೆ ದಿನಕ್ಕೊಂದೋ, ಎರಡು ಬಸ್ಸಷ್ಟೇ ಹೋಗದು.

ಅಲೆಲೆಲೆ, ಶಿಮೋಗ ಕಡೇ ಇಂದ ಹಸ್ರು ಬಸ್ಸು ಬಂದಗಾಯ್ತು. ಓ, ಬೇಲೂರು ಅಲ್ಲಲ್ಲ ಬೈಲೂರು ಬಸ್ಸು. ಅದೇ. ಇವತ್ತಿಪ್ಪತ್ತು ನಿಮ್ಷ ಲೇಟು ಅವ. ಬರ್ತಿದ್ದಂಗೆ ಫುಲ್ಲು ರಷ್ಷಾಯ್ತು. ಸೀಟು ಸಿಕ್ಕಿದ್ದಕ್ಕೂ ಕಾದಿದ್ದಕ್ಕೂ ಸಾರ್ಥಕ ಆಯ್ತು. ಅಂತೂ ಬಂತಲ್ಲಪಾ, ಒಂದೂಕಾಲ್ವರೆಗೆ ಕಾಯದು ತಪ್ತು ಹೇಳಿ ಖುಷಿ ಆಗಿದ್ದೊಂದೇ ಬಂತು. ಎಂತಕೆ ಅಂದ್ರಾ? ಡ್ರೈವರು ಗಾಡೀನ ತಗಂಡೋಗಿ ಗ್ಯಾರೇಜತ್ರ ನಿಲ್ಸಿ ಬಿಡೋದ? ಇದ್ನ ಸ್ವಲ್ಪ ವೆಲ್ಡಿಂಗ್ ಮಾಡಿ ಸ್ವಾಮಿ ಅಂತ. ತಗಳಪಾ, ಏಜೆಂಟ್ರೂ ಬಂದ್ರು ಟಿಕೇಟು ಬುಕ್ಕು ಹಿಡ್ಕಂಡು. ಗಾಡಿ ಹೊಂಡ್ಸದು ಲೇಟಾಗಿ ಇರೋ ಜನಾನು ಬಸ್ಸಿಂದ ಓಟ ಕಿತ್ರೆ ಹೆಂಗೆ ಹೇಳೋ ಡೌಟು ಬಂತೇನೋ ಅವ್ರಿಗೆ. ಎಲ್ಲಾ ನೂರರ ನೋಟು, ಹತ್ತರ ನೋಟು ಕೊಡೋರು. ಎಷ್ಟು ಜನಕ್ಕೆ ಅಂತ ಅವ ಚಿಲ್ರೆ ಕೊಡ್ತಾನೆ.ಜೇಬು ತಡಕೀ ತಡಕೀ ಸುಸ್ತಾಗೋದ್ನೇನೂ ಅವ್ನೂ. "ದಿನಾ ಬರೋರಿಗೆ ಚಿಲ್ರೆ ತರೋಕಾಗಲ್ವಾ" ಅಂತ ಕೆಲ ಹುಡುಗ್ರಿಗೆ ಬಯ್ದ. ವಯಸ್ಸಾದವ್ರೂ ಅದೇ ಕೆಲ್ಸ ಮಾಡಿ ಒಂದು ಸ್ಮೈಲು ಕೊಟ್ರು.. :-)

ಗಾಡಿ ಮುಂದೆ ಹೋಗತ್ತೆ, ಹಿಂದೆ ಬರತ್ತೆ.. ಅದೆಷ್ಟು ದಿವ್ಸದ್ದು ವೆಲ್ಡಿಂಗುಳ್ಸಿಕೊಂಡಿದ್ನೇ ಪುಣ್ಯಾತ್ಮ. ಎಲ್ಲಾ ಒಂದೇ ದಿನ, ಅದೂ ನಾ ಹತ್ತಿದ ದಿನವೇ ಆಗ್ಬೇಕೆ. ಮೊದ್ಲೇ ಬಸ್ಸೂ ಕಾದು ಹೋಗಿದೆ. ಒಳಗೆ ಕೂತು ಗಡಿಯಾರ ನೋಡೋ ನಮ್ಮ ಪಾಡು..ತಣ್ಣಗಿರೋ ನಿಮಗೆಲ್ಲಾ ಈ ಸಂಕಟ ಅರ್ಥ ಆಗ್ದೇ ಇರ್ಬೋದು. .. ಬೆಂಗ್ಳೂರಿಂದ ಒಮ್ಮೆ ಬೇರೆ ಎಲ್ಲಿಗಾರೂ ಸಾಧಾರಣ ಸರ್ಕಾರಿ ಬಸ್ಸಲ್ಲಿ ಹೋಗಿ. ಅದೂ ಮಧ್ಯಾಹ್ನ ಹನ್ನೊಂದೂ ಮುಕ್ಕಾಲು ಘೋರ ಬಿಸ್ಲಿರೋ ಹೊತ್ತಿಗೆ. ಆ ಬಸ್ಸು ಹೊರಡೋಕಿಂತ ಕಾಲು ಘಂಟೆ ಮುಂಚೆ ಅದ್ರಲ್ಲಿದ್ರೇನೆ ನಿಮ್ಗೆ ನಾ ಈಗೇಳ್ತಿರೋ ಸುಖ ಏನು ಹೇಳಿ ಅರಿವಾಗೋದು.. ಸ್ವಲ್ಪ ಓವರ್ ಆಯ್ತಾ? :-) ಸರಿ, ಉತ್ತರ ಕರ್ನಾಟಕದಷ್ಟು, ಅಥವಾ ದೆಲ್ಲಿಯಷ್ಟು ಸೆಖೆ ಇಲ್ಲಿಲ್ಲ ಬಿಡಿ, ಪುಣ್ಯ.. :-)

ಅಂತೂ ಹೊರಡ್ತು ಬಸ್ಸು. ಬಸ್ಸು ಹೊರಟ ಮೇಲೆ ಏಜೆಂಟನದೇನು ಕೆಲಸ. ಅವ ಇಳ್ಕಂಡ. ಇದ್ರಲ್ಲೆಂತಾ ವಿಶೇಷ ಅಂದ್ರಾ? ಅವ ಸುಮಾರು ಜನ್ರಿಗೆ ಚಿಲ್ರೆ ಕೊಟ್ಟಿರ್ಲಿಲ್ಲ ಮಾರ್ರೆ :-) ಕಂಡೆಕ್ಟರು ಬರ್ತಿದ್ದಂಗೆ ಹಿಡ್ಕಂಡ್ರು ಜನ. ನಂಗೆ ಎಂಟು ರೂಪಾಯಿ, ನಂಗೆ ಮೂವತ್ತು ಹೇಳಿ. ಆ ಪುಣ್ಯಾತ್ಮ ಏಜೆಂಟು ಟಿಕೇಟ್ಮೇಲೂ ಬರ್ದಿರ್ಲಿಲ್ಲ. ಕಂಡೆಕ್ಟ್ರಿಗೂ ಹೇಳಿರ್ಲಿಲ್ಲ. ಹಂಗಂತಾ ಚಿಲ್ರೆ ಕೊಡ್ದೇ ಇರಕ್ಕಾಗತ್ತಾ? ಕೊಡಕ್ಕೋಗಿ ಯಾರಿಗಾದ್ರೂ ಹೆಚ್ಚು ಕೊಟ್ರೆ ಕಂಡಕ್ಟರು ದಿವಾಳಿ ಕೊನೆಗೆ.ಯಾರ್ಯಾರಿಗೆ ಅಂಥ ಕೊಡದು. ಪುಕ್ಸಟೆ ಸಿಕ್ಕದು ಅಂದ್ರೆ ನಂಗೊಂದು, ಮನೆಗೊಂದು ಅನ್ನೋ ತರದವ್ರು ಎಲ್ಲ ಕಡೆಗೋ ಇರ್ತಾರಲ್ಲ ಮಾರ್ರೆ:-)

ಏಜೆಂಟಿಗೆ ಫೋನು ಹಚ್ಚಿದರೆ ಅವ ತೆಗೀತಾನೆ ಇಲ್ಲ. ಕರೆದರೂ ಕೇಳದೆ ಕಾಲರ್ ಟ್ಯೂನ್. ಥೋ, ಬಸ್ಸು ನಿಲ್ಸು ಮಾರಾಯ ಅಂದ ಡ್ರೈವರಿಗೆ. ಇದೊಳ್ಳೆ ತಾಪತ್ರಯ ಆತಲ. ಕೊನೆಗೂ ಎತ್ತಿದ ಆ ಏಜೆಂಟ. ಡ್ರೈವರಿಂದ ಹಿಂದೆ ಎರಡನೇ ಸೀಟಲ್ಲಿರೋ ಬುರ್ಖಾಗೆ ೩೦ , ಉದ್ದ ಸೀಟಲ್ಲಿರೋ ಯಜಮಾನ್ರಿಗೆ ೮ ಅಂದ. ಏಜೆಂಟಿಗೆ ಅರ್ಥ ಆಗ್ಲಿಲ್ಲ. ಫೋನು ಅವ್ರಿಗೇ ಕೊಟ್ಟ ಕಂಡೆಕ್ಟರು. ಏ, ಪಕ್ಕದ ಅಜ್ಜಿಗೆ ಕೇಳಿ, ಮುಂದಿನ ಅವ್ರಿಗೆ ಕೇಳಿ , ಇವ್ರಿಗೆ ಕೇಳಿ ಅಂತ ಹಲವಾರು ಸಾಕ್ಷಿ ಹೇಳಿ ನೀವು ಹಿಂಗೆಲ್ಲಾ ಮೋಸ ಮಾಡ್ಬೋದಾ ಅಂತ ಮಿನಿ ಲೆಕ್ಚರು ತಗಂಡ್ರು ಅವ್ರು. ಇತ್ಲಗೆ ಕಂಡಕ್ಟ್ರನ ಕರೆನ್ಸಿ ಪುಕ್ಸಟೆ ಖಾಲಿ ಆಗ್ತಿದೆ. ಆ ಕಡೆ ಏಜೆಂಟಿಗೆ ಏನು ಆಗ್ತಿದ್ಯೋ ಗೊತ್ತಾಗ್ಲಿಲ್ಲ. ಸ್ವಲ್ಪ ಹೊತ್ತು ಪುಕ್ಕಟೆ ಮನೋರಂಜನೆ ಆಯ್ತು ಕೆಲೋರಿಗಂತೂ. ಕೊನೆಗೆ ಕೊಡ್ತಾರೆ ಬಿಡಮ್ಮಾ ಅಂತ ಸಮಾಧಾನ ಮಾಡಿದ್ವಿ.

ನಾ ಹೊರಟಿದ್ದ ಬಸ್ಸನ್ನ ಅದ್ರ ಹಿಂದಿನ ಬಸ್ಸು ಸೈಡಾಕಿ ಅದೇ ಬೇಗ ಹೋಗದು, ನಾ ಹೊರಟ ಬಸ್ಸೇ ದಾರೀಲಿ ಕರ ಹಾಕದು(ಪಂಕ್ಚರ್ ಇತ್ಯಾದಿ), ಇಲ್ಲ ಅದಕ್ಕೇ ಟ್ರಾಫಿಕ್ ಜ್ಯಾಮಾಗದು ಇಂತದ್ದೆಲ್ಲಾ ನೋಡಿದೀನಿ. ಅದ್ರೆ ಪುಣ್ಯ ಅಂತದ್ದೇನೂ ಆಗ್ಲಿಲ್ಲ ಇವತ್ತು. ಒಳ್ಳೇ ತಣ್ಣನೆ ಗಾಳಿ ಸವೀತಾ ಅನ್ಸತ್ತೆ ಮನೆಗೆ ಆರಾಮಾಗಿ ಹೋಗಿ ಮುಟ್ಟಿದ್ವಿ. ಎದ್ರಿಗಿನ ಅಡಕೆ ಮರ ಗಾಳಿಗೆ ಒಲಿತಾ ಇತ್ತು. ನಮ್ಮುಖನೂ ಸಂತೋಷದಿಂದ ನಲಿತಾ ಇತ್ತು :-) :-)

ಬಂದಿದೆ ನೋಡ ಚಳಿಗಾಲ

ಬಂದಿದೆ ನೋಡ ಚಳಿಗಾಲ
ಮಫ್ಲರು ಸುತ್ತಲು ಸತ್ಕಾಲ
ಏಳು ಘಂಟೆಗೂ ಏಳಲಾಗದು
ಹೊದ್ದು ಮಲಗಲು ಹಣವಣಿಕೆ|೧|

ದಾರಿ ಕಾಣದು ದೂರದವರೆಗೆ
ಮುಂಜಾನೆಯ ಮಂಜಿನ ಹೊದಿಕೆ
ಹೆಪ್ಪುಗಟ್ಟುತಿದೆ ಕೊಬ್ಬರಿಯೆಣ್ಣೆಯು
ಸೂರಿಲ್ಲದವರದೇನು ಕಥೆ?|೨|

ಬೆಳಬೆಳಗ್ಗೆಯೇ ಸೈಕಲ್ತುಳಿಯಲು
ಸೆಟೆದು ನಿಲ್ಲುವುದು ಕೈ ರೋಮ
ಕಾಲೇಜನ್ನು ನಾ ತಲುಪುವವರೆಗೆ
ಚಳಿಯನು ತಡೆಯೋ ಹೇ ರಾಮ|೩|

ಬೈಕೋಡಿಸಲು ಹೋದರೆಂತೂ
ಮರಗಟ್ಟಿ ಬಿಡುವುದೇನೋ ಕೈ
ಜೀವನವಿದುವೇ ಹಾಲ್ಪೇಪರವಗೆ
ಆದ್ದರಿಂದ ಅವರೆಲ್ಲಕೂ ಸೈ|೪|

ನಂಬದಿಗೆರಡು ಕಂಬಳಿ ಚಳಿಯೋ
ನಿಂಬದಿಗೆಷ್ಟು ಮಹರಾಯ?
ಶೀತ, ಥಂಡಿಗಳದೆಲ್ಲೆಡೆ ಹಾವಳಿ
ಅದಕ್ಕೆ ಬೋಳ್ಕಾಳ್ಕಷಾಯ|೫|

ಸ್ನಾನ ದ್ವೇಷಿಗಳಿಗಿನ್ನೊಂದು ನೆವ
ನೀರು ಕಾದಿಲ್ಲ, ಬಹಳ ಚಳಿ
ಪೈಪು ಹೆಪ್ಪುಗಟ್ಟುವುದುತ್ತರಲಿ
ಬಹಳ ಕಾಲ ನೀರೇ ಇಲ್ಲ|೬|

ಒಡೆವ ಮೈ, ತುಟಿ ತಡೆಯುವುದೆಂದು
ಸವರೋ ಕ್ರೀಮ್ಗಳು ಹಲವಾರು
ಕೊಬ್ಬರಿಯೆಣ್ಣೆಯ ಮುಂದಿನ್ನಿಲ್ಲ
ಮರಳಾರೋಗ್ಯದ ಬಳಿ ಸೇರು|೭|
 

Wednesday, August 31, 2011

fbಗೆ ಬಂದ ಫಕೀರಣ್ಣ

ನಿಮಗೆ ಪಾಗಲ್ ಫಕೀರ ಇವರಿಂದ ಹೊಸ ಮಿತ್ರತ್ವದ ಕೋರಿಕೆ ಬಂದಿದೆ ಅಂತ ಒಂದು ಸಂದೇಶ ಗುಂಡ fb ತೆರೆದಾಗ ಕಾಣಿಸ್ತಿತ್ತು. ಇದ್ಯಾರಪ್ಪಾ ಅಂತ ತಕ್ಷಣಕ್ಕೆ ಹೊಳಿಲೇ ಇಲ್ಲ ಗುಂಡನ ತಲೇಗೆ. ಹೈಸ್ಕೂಲ್ ಗೆಳೆಯ ಟಾಂಗ್ ತಿಪ್ಪನೂ ಆನ್ಲೈನು ಇದ್ದ. ಅವ್ನಿಗೆ ಕೇಳ್ದ. ಯಾರೋ ಇದು ಪಾಗಲ್ ಫಕೀರ ಅಂದ್ರೆ, friend request ಕಳ್ಸವ್ರಲ್ಲಾ ಅಂತ. ಬೋ ದೊಡ್ಡ ಸಾಯಿತಿ ಅಲ ನೀನು ಯಾರೋ ಫ್ಯಾನಿರ್ಬೇಕು ಬಿಡ್ಲಾ ಅಂತ ಕಾಲೆಳ್ದ ತಿಪ್ಪ. ಏ ಸುಮ್ಕಿರು ಗುರು. ಸಾಯಿತಿ ಅಲ್ಲ ಸಾಹಿತಿ ಅದು, ಆದ್ರೆ ನಾನು ಅದಲ್ಲ. ಏನೋ ಚಿಲ್ರೆ ಪಲ್ರೆ ಬರಿತೀನಿ ಅಂತ ಹೊಟ್ಟೆಯುರಿ ನಿಂಗೆ .. ಗೊತ್ತಿಲ್ದಿದ್ರೆ ಸುಮ್ನೆ ನಿನ್ನ city villle ಆಡು, ನನ್ನ ಕಾಲೆಳಿಬೇಡ ಅಂದ ಗುಂಡ. ಅಷ್ಟೊತ್ತಿಗೆ ಒಂದು ಸಂದೇಶ ಬಂತು .. ಏ ಗುಂಗುರು ಗುಂಡ, ನಾನಮ್ಮಿ ಪುಟ್ನಳ್ಳಿ ಪಕೀರಣ್ಣ. ಇಸ್ಕೂಲಲ್ಲಿ ನಿನ್ನ ಸೀನೆರು.. ಏಟಪಾ ಕಳ್ಸದು ನಿಂಗೆ ಕೋರ್ಕೆ ನಾ? ಪುಲ್ ಬಿಸಿ ಬಿಡಪಾ ನೀನು. ದೊಡ್ ಮನಸಾ ಆದೆ ಅಂತ ಒಂದೇ ಉಸರಲ್ಲಿ ಬಯ್ಯಕ್ಕೆ ಹಿಡಿದ. ಗುಂಡಂಗೆ ತಡ್ಯಕ್ಕಾಗ್ದೆ ಸಾಯ್ಲತ್ಲಗೆ ಅಂತ accept friend ಅಂತ ಕೊಟ್ಟು ಸ್ಯಾನೆ ತಲೆಬಿಸಿಯಾಗಿ ತಾನೇ offline ಹೋದ. ಆಮೇಲೆ ಗುಂಡಂಗೆ ನೆನ್ಪಾತು. ಕಾಮಣ್ಣನಬ್ಬಕ್ಕೆ ತಂಗೆ ಡಬ್ಬ ಕೊಟ್ಟು ತಾನು ಗಾಡಿ ಅಡ್ಡಾಕಿ ಬೈಸ್ಕತ್ತಿದ್ದ ಜಾರು ಚಡ್ಡಿ ಫಕೀರಣ್ಣ, ಕೌಳಿ ಮಟ್ಟಿ ಒಳಗೆ ಎಲ್ಲಿ ಮುಳ್ಳು ಕಮ್ಮಿ ಐತೆ ಅಂತ ತಕ್ಷಣ ನುಗ್ಗಿ ನಮ್ಗೂ ತಂದ್ಕೊಡ್ತಿದ್ದ ಫಕೀರಣ್ಣ, ನಾನು ಕಿಲಾಸು ಬಾಗ್ಲು ತೆಗಿಯಕ್ಕೋಗಿ ಚಿತ್ರಾನ್ನದ ಡಬ್ಬಿ ಬೀಳಿಸ್ಕಂಡಾಗ ತನ್ನ ಡಬ್ಬಿ ಕೊಟ್ಟ ಫಕೀರಣ್ಣ.. ಹಿಂಗೆ ನೂರು ನೆನ್ಪು ಸುಳೀತು. ಸ್ಯಾನೆ ಬೇಜಾರಾತು.. ಅಂಥವಂಗೆ ಬ್ಯಾಸರ ಮಾಡಿದ್ನಲ ಅಂತ. ಮತ್ತೆ online ಬಂದ ಗುಂಡ sorry ಕೇಳ್ಬೇಕು ಮೊದ್ಲು ಅಂತ..

ಆನ್ಲೈನು ಇರೋರ ಪಟ್ಟೀಲಿ ನೋಡಿದ್ರೆ ಶಾರೂಖ್ ಖಾನ್ ಶರ್ಟ್ ತೆಕ್ಕಂಡು "ಡರ್ ದೇ ಡಿಸ್ಕೋ" ಹಾಡಿಗೆ ಕೊಟ್ಟಿದ್ದ ಪೋಸ್ ಚಿರ್ತದೋರು ಯಾರೋ ಇದ್ರು. ನೋಡಿದ್ರೆ ಅದು ಫಕೀರಣ್ಣ. ಅವಾಗ ಗೊತ್ತಾಗ್ಲಿಲ್ಲ ಫಕೀರಣ್ಣ.. ಮನ್ಸಿಗೆ ಹಚ್ಕಬ್ಯಾಡ. ಎಂಥ ಇದು ಪೋಟ.. ಇಶ್ಶೀ ಅಂದ ಗುಂಡ.ಬ್ಯಾಸ್ಗೆ ಸೆಖೆ ಅಂತ ಹಾಕ್ಕಂಡಿವ್ನಮ್ಮಿ ಅಂದ. ಆದ್ರೆ ಈಗ ಮಳೆ ಹೊಯ್ತಾ ಐತಲಾ ಅಂದ ಗುಂಡ.ಓ ಹೋದಲಾ. ಮಳೇಲಿ ನೆಂದು ಫೇಮಸ್ ಆಗ್ಯಾವ್ನಲಾ ನಂ ಗಣೇಸ ಅವ್ನ ನೆನ್ಪಿಗೆ ಉಳ್ಸಕಂಡಿವ್ನಿ ಅಂದ. ಎಲ್ಲಿ ಶಾರೂಖು ಎಲ್ಲಿ ಗಣೇಶ ಅಂತ ಗುಂಡಂಗೆ ಚೂರೂ ಅರ್ಥ ಆಗ್ಲಿಲ್ಲ.ಅಷ್ಟರಲ್ಲೆ ಕೆಳಗೆ notification ಬಂತು. .ಪಾಗಲ್ ಫಕೀರ್ ಅವ್ರು ತಿಪ್ಪೇಶ, ಇಳಾ ಮತ್ತಿತರ ೬೦ ಜನರೊಂದಿಗೆ ಗೆಳೆಯರಾಗಿದ್ದಾರೆ ಅಂತ. ಗುಂಡಂಗೆ ಒಂದ್ಸಲ ತಲೆ ಗಿರ್ರಂತು.. ಏನು ಫಕೀರಣ್ಣ ಈ ಪಾಟಿ ಫಾಸ್ಟು ನೀನು ಅಂದ. ಅದಕ್ಕೆ ಗುಂಡ ಅನ್ನದು ನಿಂಗೆ fb ಗೆ ಬಂದು ತಿಂಗಳಾನುಗಟ್ಲೆ ಆಗೈತೆ ನೀನು ಆದ್ರೂ ೫೦೦ ಚಿಲ್ರೆ ಗೆಳೆಯರಷ್ಟೆ ನಿಂಗೆ. ನಂದು ನೋಡು ಒಂದು ತಿಂಗಳಲ್ಲೇ ೫೦೦ ಅಂದ. ಅವನ ಪ್ರೊಫೈಲಿಗೆ ಹೋಗಿ ನೋಡಿದ್ರೆ ಹೌದು ಅದು. ಏನಣೋ RJ ರಾಧಿಕಾ , ಬೆಳ್ಗೆರೆ ಸಾಹೆಬ್ರು, ಸಿಂಹ ಸಾರು .. ಹಿಂಗೆ ದೊಡ್ಡ ಕುಳಗಳೆಲ್ಲಾ ನಿನ್ನ ಗೆಳೆಯರ ಪಟ್ಟಿಲವ್ರೆ. ಎಲ್ಲರೂ ನಿಂಗೆ ಗೊತ್ತೈತಾ? ಭಾರಿ ದೊಡ್ ಮನಸಾ ಆದೆ ಬಿಡು ನೀನು ಅಂದ ಗುಂಡ. ಕೆಲೋರೆಲ್ಲ ಯಾರು ಅನ್ನೋದು ಆ ಸಿವನಾಣೆಗೂ ನಂಗೆ ಗೊತ್ತಿಲ್ಲ. ನಿನ್ನಂಗೆ ಪ್ರತಿಯೊಬ್ರಿಗೂ "ನೀವ್ಯಾರು? ಮೊದ್ಲು ನನ್ನ ಕಂಡಿದ್ರಾ? .. " ಅಂತೆಲ್ಲಾ ಪ್ರಶ್ನೆ ಕೇಳಕಿಲ್ಲ ನಾನು. ನಾನೆ ಕೆಲೋರಿಗೆ request ಕಳುಸ್ತೀನಿ. ೧೫-೨೦ mutual friends ಹೆಂಗಿದ್ರೂ ಇತ್ತಾರೆ. ಕನಿಷ್ಟ ೩-೪ .. ಆಗ ಅವ್ರೇ ಒಪ್ಕೋತಾರೆ. ಸ್ನೇಹ ಬೆಳ್ಸೋದೆ fb ಕೆಲ್ಸ ಗುಂಡು, ಇದೆಲ್ಲಾ ನಿಂಗೆ ತಿಳ್ಯಾಕಿಲ್ಲ ಅಂದ ಫಕೀರಣ್ಣ. ಹಂಗಾರೆ ಪರಸ್ಪರ ಪರಿಚಯ, ಅವ್ರು ಬಗ್ಗೆ , ಅವರ ಬರ್ದಿದ್ದೋ-ಹೇಳಿದ್ರ ಬಗ್ಗೆ ಓದಿರದು ಹಿಂಗೆ ಎಂಥದೂ ಇಲ್ದೇ ಅದೆಂಗೆ ಗೆಳೇರಾತಾರೆ ಅಂತ ಗುಂಡಂಗೆ ಕೊನಿಕೂ ಅರ್ಥ ಆಗ್ಲಿಲ್ಲ.ಅಟೋತಿಗೆ ಊಟಕೆ ಆತು. ಎದ್ದ ಗುಂಡ.

ಮಾರ್ನೇ ದಿನ ಮತ್ತೆ ನೋಡ್ತಾನೆ city ville,farm ville ಹಿಂಗೆ ಹಲವಾರು ಆಟದ, App ಗಳ ಕೋರಿಕೆ ಬಂದಿತ್ತು. ಎಲ್ಲಾ ಫಕೀರಣ್ಣಂದೇ ಕರಾಮತ್ತು. ಫಕೀರಣ್ಣ farm ಅಲ್ಲಿ ಪಾಪರಾಗವ್ನೆ. ದುಡ್ಡು ಕೊಡಿ ಅಂತ ಒಂದು, ಅವ್ನು ಅಷ್ಟು ಗೆದ್ದ ಅಂತ ಮತ್ತೊಂದು.. ಹಿಂಗೆ.. ಗುಂಡಂಗೆ ಬ್ಯಾಂಕವ್ರು ಸಾಲ ತಕಳಿ ಅಂತ ಮೊದ್ಲು ಪೂಸಿ ಹೊಡಿತಾರೆ ಆಮೇಲೆ ರೋಡಿಗಳ್ನ ಕರ್ಕೋಂಬತ್ತಾರೆ ಅಂತ ತಿಪ್ಪ ಹೇಳಿದ್ದು ಜ್ಞಪ್ತಿಗೆ ಬಂತು.. ಬ್ಯಾಡಪ್ಪ ಇದೆಲ್ಲಾ ಸಹವಾಸ ಅಂತ ಅದ್ನೆಲ್ಲಾ ತೆಗ್ದು ಹಾಕಿದ. ಸ್ವಲ್ಪ ಹೊತ್ತು ಬಿಟ್ಟು mycalender ಅಂತ ಮತ್ತೆ ಬಂತು. ಈಗಿರೋ ವ್ಯವಸ್ಥೆ ಚೆನಾಗೈತಲಾ? ಅದೇ ದಿನ ಅವತ್ತಿನ ಹುಟ್ಟಿದಬ್ಬ ತೋರಿಸ್ತೈತಲಾ ಅನುಸ್ತು ಗುಂಡಂಗೆ. ಆದ್ರೂ ಇರ್ಲಿ ಅಂತ ಒಳಗೆ ಹೋದ. ನೋಡಿದ್ರೆ ಅದು ನಿಮ್ಮ ಖಾಸಗಿ ಮಾಹಿತಿ ಎಲ್ಲಾ ನಾವು ಉಪಯೋಗಿಸಕ್ಕೆ ನೀವು ಒಪ್ಕತೀರಾ ಅಂತು.. ಈ fb ನವ್ರು ನಾ ಹೇಳ್ದೇ ಇದ್ರು ನಂ ಮಾಹಿತಿ ಮಾರ್ದವ್ರು ಮುಂಚೆ ಒಂದಪಾ. ಈಗ ನಾನೇ ಮಾರಿ ಅಂತ ಬೀದಿಲಿ ಹೋಗ ಮಾರಿನ ಒಳಾಕೆ ಕರ್ಯದಾ ಅಂತ ಸಿಟ್ಟೆಲ್ಲಾ ಬಂತು ಗುಂಡಂಗೆ. ಅದನ್ನೂ ತೆಗ್ದ. ಮತ್ತೊಂದು ನಿಮಿಸಕ್ಕೆ ಸಂದೇಶ ಬಂತು ಫಕೀರಣ್ಣಂದು ನಾನು ನೀನು video chat ಮಾಡುವ ಅಂತ. ಹೇ ಫಕೀರಣ್ಣ, ನಂದು ಸ್ಲೋ ನೆಟ್ಟಲೇ. video chat ಮಾಡಕ್ಕೆ ೧ mbps ಸ್ಪೀಡ್ ಬೇಕು ಅಂದ ಗುಂಡ. ಹೋ, ಅದು ನಾ ಕಳಿಸಿದ್ದಲ್ಲ, ತಾನಾಗೆ ಬಂತು ಹ್ಯಾಗೆ ಹೇಳಿ ಗೊತ್ತಿಲ್ಲ ಅಂದ ಫಕೀರಣ್ಣ. ಗುಂಡಂಗೆ ಹಿಂದೆ ಒಂದಿನ ನಾನು chat phone ಬಳಸ್ತಾ ಇದ್ದೆ ಅಂತ ಮಂಗಳೂರು ಮಂಜನ ಸಂದೇಶ ಬಂದಿದ್ದು ನೆನ್ಪಾತು. ನಮಗೆ ಗೊತ್ತಿಲ್ದೇ ಏನೇನು ಮಾಡ್ತಿರ್ತಾರಪಾ ಈ ಜನ ಅಂತ ಹಿಡಿ ಶಾಪ ಹಾಕ್ದ ಗುಂಡ

ಗುಂಡ ಮಾರ್ನೇ ದಿನ ಅವ್ನ ಮಿಂಚಂಚೆ ತೆರೆದು ನೋಡ್ತಾನೆ. ೧೫೦ ಹೊಸ ಸಂದೇಶಗಳು ಅಂತ. ಒಂದ್ಸಲ ಶಾಕ್ ಆಯ್ತು. ಅದೆಲ್ಲಾ "ಗುಂಡಳ್ಳಿ ಸ್ಕೂಲ್ ಗೂಂಡಾಗಳು" ಅನ್ನೋ ಗ್ರೂಪಿಂದು. ಕೊನೆಗೆ ಮೂಲೆಲೊಂದು ಸಂದೇಶ ಇತ್ತು. ಫಕೀರಣ್ಣ ನಿಮ್ನ ಇಂಥಾ ಗ್ರೂಪ್ಗೆ ಹಾಕವ್ನೆ ಅಂತ. fb ಗೆ ಬಂದು ಆ ಗ್ರೂಪ್ಗೆ ಹೋದ ಗುಂಡಣ್ಣ. ಅದ್ರಲ್ಲಿ ಅವ್ನ ಇಸ್ಕೂಲು ಚಡ್ಡಿ ದೋಸ್ತರೆಲ್ಲಾ ಇದ್ರು. ಸಂದೇಶ ನೋಡಿದ್ರೆ ರಂಜಾನ್ಗೆ ಶುಭಾಶಯ ಅಂತ ಹಾಕಿದ್ದ ಫಕೀರಣ್ಣ. ಅದನ್ನೇ ಎಲ್ರೂ ಕಾಪಿ ಮಾಡಿ ಅಂಟ್ಸಿದ್ರು.. ಜೊತೆಗೆ ಕೆಲೋರು ನಿಮ್ಗೂ ಅಂತ ಕಮೆಂಟು ಬರ್ದಿದ್ರು.. ಹೀಗೆ ಒಂದೇ ಹಬ್ಬದ ೧೫ ಪೋಸ್ಟ. ಇರೋ ೩೦ ಜನ ಮೆಂಬರ್ಗಳಿಗೆ ಆ ಹಬ್ಬ ಈ ಹಬ್ಬ, ಊಟ ಆಯ್ತಾ,ಏನು ಮಾಡ್ತಾ ಇದೀರ ಎಲ್ಲಾ?, ಆಫಿಸಿಗೆ ಹೋಗ್ತಾ ಇದೀನಿ, ಈಗ ಬಂದು ಮುಟ್ಟಿದೆ.. .ಇಂಥದ್ದೇ ಬೇಜಾನು ಬೇಜಾರಾಗೋಷ್ಟು ಟೈಂಪಾಸು ಮಾತು ಕತೆಯಾಗಿ ೧೫೦ ಸಂದೇಶ ಬಂದಿತ್ತು ಗುಂಡಂಗೆ. ಮೊದ್ಲು ಆ ಗ್ರೂಪ್ ಸೆಟ್ಟಿಂಗ್ ಗೆ ಹೋಗಿ mail alert ತೆಗ್ದು ಸಮಾಧಾನ ಮಾಡ್ಕಂಡ. ಸ್ವಲ್ಪ ಹೊತ್ತಿಗೆ ಗುಂಡಳ್ಳಿ ಗಣಪತಿ ಹಬ್ಬ ಅಂತ event invitation ಬಂತು ಗುಂಡಣ್ಣಂಗೆ. ಸರಿ , ಬರ್ತೀನಿ ಅಂತ ಕುಕ್ಕಿದ ಅದ್ನ. ಅದ್ರ ಬೆನ್ನಲ್ಲೇ ಗುಂಡಳ್ಳಿ ಗಣಪತಿ ಹಬ್ಬ ಅಂತ ಮತ್ತೆ ಬರೋದೆ. ನೋಡಿದ್ರೆ ಒಂದೇ event ಗೆ ನಾಕು ಸಲ ಕರ್ದಿದ್ದ ಗುಂಡಣ್ಣನ್ನ. ಏನ್ಲಾ ಫಕೀರಣ್ಣ, ಒಂದಕ್ಕೆ ನಾಕು ಸಲ ಕರ್ಯದಾ ನೀನು? ಒಂದಪಾ ಕರ್ದ್ರೆ ಬರಾಕಿಲ್ಲನು ನಾನು ಅಂದ ಗುಂಡ. ಇಲ್ಲಪಾ? message ಕೆಲ ಸರಿ delivery ಆಗಕಿಲ್ಲ ನೋಡು, ಹಂಗೆ ಆದ್ರೆ ಅಂತ ಮತ್ತೆ ಕರದ್ನಪಾ.. ಹಿ ಹಿ ಅಂದ ಫಕೀರಣ್ಣ. ಈ ಫಕೀರಣ್ಣನ ಹೆಸ್ರು ಕರೆಕ್ಟಾಗೆ ಐತೆ ಪಾಗಲ್ ಅಂತ. . ಇನ್ನೂ ಸ್ವಲ್ಪ ಹೊತ್ತು ಹೋದ್ರೆ ನಾನೂ ಅದೇ ಆಗದು ಅಂತ ಗಾಡಿಬಿಟ್ಟ ಗುಂಡ..

ಈಕ್ಷಕರೆ ಇಲ್ಲಿಗೆ fb ಪುರಾಣ ಮುಗೀತು.. ನಿಮ್ಗೂ ಇಂಥ ಪಾಗಲ್ಗಳು ಸಿಗ್ಬೋದು, ಅಥ್ವಾ ನೀವೆ ಇಂಥೋರು ಆಗಿರ್ಬೋದು..

ಏ ಕಟ್ ಕಟ್.. fb ಹೊಸಬನ ಅದ್ವಾನದ ಬಗ್ಗೆ ಹೇಳ ಅಂದ್ರೆ ನೀನೆ ಅದ್ವಾನ ಮಾಡ್ತೀಯಲ್ಲೋ.. ಕೇಳುಗರೆ, ನಿಮಗೆ ನಮ್ಮ ಪ್ರಸಂಗ ಹೇಗನಿಸ್ತು ಅನ್ನೋದನ್ನ ಬರ್ದು ಕಳಿಸಿ. ನಿಮಗೆಲ್ಲಾ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.. ಇಂತಿ ಪಾಪಣ್ಣ ಆನ್ಲೈನ್ ವಾಣಿ..

( ಈಗ ಚಿಕ್ಕದೊಂದು ವಿರಾಮ).. ಜಂಡೂ ಬಾಮ್.. ಎಲ್ಲಾ ತರದ ತಲೆನೋವಿಗೂ ರಾಮಬಾಣ ... !!! :-)

Friday, August 5, 2011

ಹಳ್ಳೀಗ್ಬಂದ ಗುಂಡಣ್ಣ ಮತ್ತು ಆನ್ಲೈನ್ ಕೋರ್ಸು

ಪಟ್ಣದಿಂದ ಜಗ್ಗಣ್ಣನ ಮಗ ಗುಂಡಣ್ಣ ಬತ್ತವ್ನಂತೆ. ಅದೆಂತದೋ ಕಾಂಪೂಟ್ರಂತ ಡಬ್ಬ ತತ್ತವ್ನಂತೆ ಅನ್ನೋ ಸುದ್ದೀನ ಊರೆಲ್ಲಾ ಟಾಂ ಟಾಂ ಮಾಡ್ತಿದ್ದ ಜಮೀನ್ದಾರ ಜಗ್ಗಣ್ಣನ ಮನೆ ಕೆಲ್ಸದ ಕಿಟ್ಟಪ್ಪ. ಊರಿಗೆ ಬರೋ ಮಗೀನ ತತ್ತಾರಲಾ ಅಂತ ಧಣೀರೆ ಕಿಟ್ಟಪ್ಪಂಗೆ ಗಾಡಿ ಕಟ್ಕಂಡು ಹೋಗಕ್ಕೆ ಹೇಳಿದ್ರು. ಕಿಟ್ಟಪ್ಪ ರಾಜ್ಕುಮಾರ್ನ ಅಣ್ಣತಂಗಿ ಸಿನೀಮಾದಾಗೆ ನೋಡಿದ್ನಂತೆ. ಅದ್ರಲ್ಲಿ ಪಟ್ಣದ ಹೀರೋ ತನ್ನಳ್ಳಿಗೆ ಬಂದಾಗ ಅವನ ಕೋಟು ಬೂಟೇನು ,ಅವಂಗೆ ಹಾರ ತುರಾಹಿ ಹಾಕೋದೇನೂ.. ಅಬ್ಬಬ್ಬಾ ಅಂದ್ಕಂಡಿದ್ದ. ಅದೇ ತರ ಚಿಕ್ಕೆಜಮಾನ್ರೂ ಬತ್ತಾರೆ ಅಂತ ಕನ್ಸು ಕಾಣ್ತಾ ಇದ್ದ. ಮುಖ, ಮೈಮೇಲೆಲ್ಲಾ ಯಾರೋ ನೀರು ಹುಯ್ದಂಗಾಗಿ ಕಣ್ಬಿಟ್ಟ. ಯಾವನ್ಲೇ ಅವ ಕೆಸ್ರು ಹಾರಿಸಿದವ.. ಅಂತ ಬಾಯ್ತುದೀವರ್ಗೂ ಬಂದಿತ್ತು.ನೋಡಿದ್ರೆ ಪಟ್ಣದ ಬಸ್ಸು ಹಾರ್ನು ಹೊಡಿತಾ ಐತೆ. ಯಾವುದೋ ಪಟ್ಣದ ಹುಡ್ಗಿ ಇಳಿತಾ ಐತೆ.
ಅದೆಂತದೋ ಪ್ಯಾಂಟು, ಶರ್ಟು, ಕನ್ನಡಕ ಹಾಕ್ಕೊಂಡು. ಒಂದ್ಕಿವಿಗೆ ರಿಂಗು ಬೇರೆ. ಈಗಿನ ಹುಡ್ಗೀರು ಹಿಂಗೆ ಇರ್ಬೇಕು, ಆದ್ರೂ ಕೂದಲು ಬಿಟ್ಕಂಡು , ಕಿವಿಗೆ ರಿಂಗೆಲ್ಲಾ ಹಾಕ್ಕಂವ್ಳಲ್ಲಾ ಅಂತ ಸಮಾಧಾನ ಮಾಡ್ಕಂಡ. ಅಷ್ಟರಲ್ಲೇ ಆ ಹುಡ್ಗಿ ಇವ್ನ ಹತ್ರವೇ ಬಂದು ಜಮೀನ್ದಾರ ಜಗ್ಗಣ್ಣ ಅವ್ರ ಮನೇ ಇಂದ ನನ್ನ ಕರ್ಕೊಂಡೋಗಕ್ಕೆ ಯಾರೋ ಬರ್ತಾರೆ ಅಂದಿದ್ರು. ನೀವ್ಯಾರ್ನೂ ನೋಡಿದ್ರಾ ಅಂದ್ಳು.

ಕಿಟ್ಟಪ್ಪಂಗೆ ಶಾನೆ ಗಾಬ್ರಿ ಆತು. ಕೊನೆಗೆ ಪಟ್ಣದಿಂದ ಗುಂಡಣ್ಣ ಇವತ್ತು ಬರಾಕಿಲ್ಲೇನೋ, ಇವ್ಳ್ನೇ ಕರ್ಕಂಬಾ ಅಂತ ಹೇಳೋಕೆ ಧಣೀರು ಮರ್ತಿರ್ಬೇಕು ಅಂದ್ಕಂಡ. ನೋಡೋಕೆ ಹುಡ್ಗಿ ಹಂಗಿದ್ರೂ ಧ್ವನಿ ಹುಡ್ಗನಂಗೈತಲಾ ಅಂತ ಆಶ್ಚರ್ಯ ಆತು. ಆದ್ರೂ ಅದೆಲ್ಲಾ ಕೇಳೋದು ಸರಿಗಿರಾಕಿಲ್ಲ ಅನುಸ್ತು. ಸರಿ ತಂಗಿ ಅವ ನಾನೇಯ. ಹತ್ತು ಗಾಡಿ ಅಂದ. ಆ ಹುಡ್ಗಿ ಸುತ್ತ ಎಲ್ಲಾ ನೋಡಿ ತನ್ನೇ ಕರೀತಿರದು ಅಂತ ಗೊತ್ತಾದ ಮೇಲೆ ನಾ ಯಾರು ಅಂತ ಗೊತ್ತಾಗ್ಲಿಲ್ವಾ? ಕಿಟ್ಟಪ್ಪನೋರೇ ಅಂತು. ಕಿಟ್ಟಪ್ಪಂಗೆ ಕೊನೆಗೂ ಜ್ನಪ್ತಿಗೆ ಬರಲೇ ಇಲ್ಲ. ಅದು ಕಿಟ್ಟಪ್ಪಾ ನಾನು ಗುಂಡು ಅನ್ನೋದೆ? ಕಿಟ್ಟಪ್ಪ ತಲೇ ತಿರುಗಿ ಬೀಳೋದೊಂದು ಬಾಕಿ. ಎಂಥಾ ಕಾಲ ಬಂತು ದೊರೆ. ಏನೀ ವೇಷ ಅಂದ. ಇದು ಫ್ಯಾಷನ್ ಕಿಟ್ಟಪ್ಪ ನಿಂಗೆದೆಲ್ಲಾ ತಿಳ್ಯಕಿಲ್ಲಾ, ನಡೀ ಮನಿಗೆ ಅಂದ.


ಮನೇಲಿ ಮಗ ಬತ್ತಾನೆ ಅಂತ ಈರವ್ವ ಆರ್ತಿ ತಟ್ಟೆ ಹಿಡ್ಕಂಡು ಕಾದಿದ್ಲು. ಕಿಟ್ಟಪ್ಪ ನೋಡಿದ್ರೆ ಯಾರೋ ಗೌರೀನ ಕರ್ಕಂಬತ್ತವ್ನೆ. ಅಯ್ಯೋ ಅದರ ವ್ಯಾಷನಾ? ಇಶ್ಶೀ.. ಬರ್ಲಿ ಸರೀ ಮಂಗಳಾರತಿ ಮಾಡ್ಬೇಕು ಅಂತ ಕಾಯ್ತಾ ಇದ್ರು. ಬಂದವ್ನೇ ಹಾಯ್ ಮಮ್ ನಾನು ನಿನ್ಗುಂಡು ಅಂತ ನಮಸ್ಕಾರ ಮಾಡದೇ ಅದು. ಬಾಯ್ಬಿಟ್ಕಳ ಕತೆ ಈಗ ಈರಮ್ಮಂದು. ಮಗೀನ ನೋಡ್ದೇ ೨ ವರ್ಶ ಆತು. ಅಂದೆಂಥದೋ ಕಂಪ್ನಿ , ಅದ್ಕೆಂತದೋ ತಯಾರಿ ಹೇಳಿ ಅವ ಮನೆ ಕಡೀಗಿ ಬರ್ಲಿಲ್ಲ. ಈಗಿದ್ಯಾವ್ದೋ ಮೂದೇವಿ ಮಮ್ಮಂತಾಳಲ್ಲಾ ಅಂತ್ಕಳ ಹೊತ್ಗೆ ಜಗ್ಗಣ್ಣ ಬಂದ್ರು. ಅವ್ರು ೨ ತಿಂಗ್ಳಿಂದೇ ಮಗೀನ ನೋಡ್ಕಂಬಂದಿದ್ರು. ಹಂಗಾಗಿ ಇವ್ನೇ ಕಣೇ ನಂ ಗುಂಡ ಅಂದ್ರು ಈರವ್ವಂಗೆ. ಎಷ್ಟು ಓದ್ತೀಯೋ ಮಗ್ನೇ, ಕ್ಷೌರ ಮಾಡ್ಸಕ್ಕೂ ಟೇಮಿಲ್ಲನೋ ನನ್ನ ರಾಜಾ ಅಂತೇಳಿ ನಾಯಿ ಕಣ್ಣು, ನರೀ ಕಣ್ಣಿಂದೆಲ್ಲಾ ದಿರುಷ್ಟಿ ತೆಗೆದ್ಳು.

ಬಂದವ್ನೇ ಸ್ನಾನನೂ ಮಾಡ್ಲಿಲ್ಲ. ತಿಂಡೀನೂ ತಿನ್ಲಿಲ್ಲ. ಅದೆಂಥದೋ ಡಬ್ಬಿ ತೆಗದ್ನಪ್ಪಾ ಮಗರಾಯ. ಎಲ್ಲಾ ಬಿಚ್ತಾ ಇದೇ ಕಿಟ್ಟಪ್ಪಾ ಕಂಪ್ಯೂಟ್ರು ಅಂದ. ಕಿಟ್ಟಪ್ಪಂಗೇನು ತಿಳೀತದೇ? ಬಾಯ್ಬಿಟ್ಕಂಡು ನೋಡ್ದ. ಅಷ್ಟರಲ್ಲಿ ಈರವ್ವ ಬಂದು ಮಗನ ಕಿವೀ ಹಿಡ್ಕಂಡು ಒಳಕ್ ಕರ್ಕಂಡೋದ್ರು. ನೀ ಊರಿಗೇ ಇಂಜೆನೇರು ಆದ್ರೂ ನಂಗೆ ಮಗಾನೆ. ತಿಂಡಿ ತಿಂದು ಅಮೇಲೆ ಎಂತಾರು ಮಾಡ್ಕ ಹೋಗು ಅಂದ್ಳು. ಮಗ ಬತ್ತಾನೆ , ಇಷ್ಟ ಅಂತ ರೊಟ್ಟಿ, ಗುರೆಳ್ಳು ಚಟ್ನಿ ಮಾಡಿದ್ಳು. ಮಧ್ಯಾಹ್ನಕೆ ಕೋಳಿ ಕಜ್ಜಾಯ ಮಾಡ್ತೀನಿ ಅಂತ ಅವ್ಳು ಹೇಳಿದ ಮಾತ್ನೂ ಕಿವಿಗಾಕ್ಕಳ್ದೇ ಗಡಿಬಿಡೀಲೆ ತಿಂಡಿ ತಿಂದ ಮಗರಾಯ. ಅದೆಂತದೋ ವೈರುಗಳನ್ನೆಲ್ಲಾ ಜೋಡ್ಸಿ. ಒಂದು ವೈರುನ ಕರೆಂಟು ತಾವ ಕೊಟ್ನಪ. ಅದೆಂತದೋ ಗುಂಡಿನೆಲ್ಲಾ ಅದ್ಮಿದ್ಮೇಲೆ ಯಾವುದೋ ಗುಡ್ಡದ ಚಿತ್ರ ಬಂತು. ಮಗ ಟೀ.ವೀಲಿ ಕಾಣ್ತೈತಲ್ಲಾ ಅದು ಯಾವ ಗುಡ್ಡನೋ ಅಂದ ಜಗ್ಗಣ್ಣ. ಅಪ್ಪೋ ಅದು ನನ್ನ ಮಾನಿಟರು, ಟೀವಿ ಅಲ್ಲ. ನೀ ನೋಡ್ತಿರದು ವಾಲ್ ಪೇಪರು ಗುಡ್ಡ ಅಲ್ಲ ಅಂದ. ಜಗ್ಗಣ್ಣಂತೆ ತಾನು ಇಸ್ಕೂಲ್ ನಾಗೆ ಮಾನಿಟರ್ ಆಗಿದ್ದು ಜ್ನಪ್ತಿಗೆ ಬಂತು. ಅದು ಇದೇನಾ ಅಂತ ಹೆಂಡ್ತೀ ಎದ್ರಿಗೆ ಕೇಳೋಕಾತದಾ? ನೀ ಒಳ್ಗೆ ನಡಿಯಬೇ. ನಾ ಮಗೀನತ್ರ ಮಾತಾಡ್ಬೇಕು ಅಂತ ಬೈದು ಒಳೀಕೆ ಕಳ್ಸಿದ. ವರ್ಷಗಟ್ಲೇ ಆದ್ಮೇಲೆ ಮನೀಗೆ ಬಂದ ಮಗಿ ಜೊತಿಗೆ ಮಾತಾಡೋಕೂ ಬಿಡಂಗಿಲ್ಲ ಇವ್ರು ಅಂತ ಶಾಪ ಹಾಕ್ತ ಒಳಗೋದ್ಳು ಈರವ್ವ.
ಜಗ್ಗಣ್ಣಂಗೆ ನ್ಯೂಸು ಪೇಪರು ಗೊತ್ತಿತ್ತೇ ಹೋರ್ತು ಇದೆಂತದೋ ಒಲೇ ಪೇಪರು ಅಂತ ಅರ್ಥ ಆಗ್ಲಿಲ್ಲ.

ರಾತ್ರೆ ಆತು. ಬೋರ‍ೊ ಬೋರು ಅಂತಾನೆ ಗುಂಡಣ್ಣ. ಒನ್ನೊಂತಪಾ ನಾ ನಾಳೇನೆ ವಾಪಸ್ ಹೊಂಟೆ ಅಂತಾನೆ. ಈರವ್ವಂಗೆ ಯಾವ್ದೋ ಶನಿ ಮೆಟ್ಕಂಡೈತೆ ಅಂತ ಹೆದ್ರಿಕೆ ಶುರು ಆತು. ಯಾವ್ದೋ ಮೋಹಿನಿ ಇರ್ಬೇಕು ಅಂತ್ಲೂ ಅನಿಸ್ತು. ನಾಳೇನೆ ಪೂಜಾರ್ತಾವ ಹೋಗಿ ತಾಯಿತ ಮಾಡ್ಸತೀನಿ. ಅಲ್ಲೀತಂಕ ಕಾಪಾಡೇ ಕಾಳಮ್ಮ ಅಂತ ಕೈಮುಗ್ದಲು. ಕೊನೆಗೇ ಗುಂಡಣ್ಣ ಅಪ್ಪಂತಾವ ಹೇಳ್ದ. ಅಪ್ಪ ಇಲ್ಲಿ ಇಂಟರ್ನೆಟ್ಟು ಇಲ್ಲ. ಹಂಗಾಗಿ ನಂಗೆ ಬೋರಾಗತ್ತೆ. ನಾಳೆ ಬ್ರಾಡುಬ್ಯಾಂಡು ಹಾಕ್ಸಣ ಅಂದ. ಜಗ್ಗಣ್ಣಂಗೆ ಮದ್ವೆ ಬ್ಯಾಂಡು ಗೊತ್ತಿತ್ತೇ ಹೊರ್ತು ಮಗ ಹೇಳೋ ಬ್ಯಾಂಡು ಯಾವ್ದೂ ತಲಿಗೋಗ್ಲಿಲ್ಲ. ಆದ್ರೂ ಸರಿ ಮಗ ಅಂದ. ಗುಂಡಣ್ಣ ಸ್ವಲ್ಪ ಸಮಾಧಾನ ಆದಂಗೆ ಕಾಣ್ತು. ಈರವ್ವ ಮತ್ತೆ ಎಲ್ಲಮ್ಮಂಗೆ ಕೈ ಮುಗುದ್ಲು.


ಬೆಳಗಾತು. ನಿಮ್ಕಡೇ ಬ್ರಾಡ್ಬಬ್ಯಾಂಡ್ ಕೊಡಕೇ ಬರಾಕಿಲ್ಲ. ನಿಮ್ಮೊಬ್ರಿಗೇ ಪಟ್ಣದಿಂದ ಲಾಯಿನು ತರ್ಸಾಕೆ ಆಗಕಿಲ್ಲ ಅಂದ ಫೋನೆಕ್ಸಚೇಂಜ್ ಎಂಕ್ಟೇಶ. ಗುಂಡಣ್ಣಂಗೆ ತನ್ಮೊಬೈಲು ನೆನ್ಪಾತು. ಅರೇ ಇಸ್ಕಿ, ಇದಲ್ಲೇ ಮಾಡ್ಬೋದಲ್ಲಾ. ನೀನು ನೆಟ್ಟು ಕೊಡ್ದಿದ್ರೆ ಕುದ್ರೆ ಜುಟ್ಟು, ಕತ್ತೆ ಬಾಲ ಅಂತ ಎಂಕ್ಟೇಶಂಗೆ ಶಾಪ ಹಾಕಿ ಮನೆಗೆ ಬಂದ. ಮನೇ ಹತ್ರನೇ ಟವರ್ ಆಗಿ ನೆಟ್ವರ್ಕು ಚೆನ್ನಾಗಿ ಸಿಕ್ತಿತ್ತು. ಮೊನ್ನೆ ಅಷ್ಟೇ ಹಾಕ್ಸಿದ್ದ ದುಡ್ಡಿತ್ತು. ಸರಿ ಅಂತ ಮೊಬೈಲಲ್ಲೇ ನೆಟ್ಟು ಹಾಕ್ಸಿ ಅದ್ರಿಂದ ಒಂದು ವೈರು ಕಂಪ್ಯೂಟ್ರಗೆ ಕೊಟ್ಟ. ಅವತ್ತು ಮುಗ್ದೇ ಹೋತು.೨-೩ ದಿನ ಆತು. ಸರಿಯಾಗಿ ಊಟಕ್ಕೂ ಬರಾಕಿಲ್ಲ, ತಿಂಡೀನೂ ತಿನ್ನಾಕಿಲ್ಲ. ಆ ಪೆಟ್ಗೆ ಎದ್ರು ಕೂತ್ಕಂಡು ಏನ್ಮಾಡ್ತಾನೆ ಅಂತ ಈರವ್ವ, ಜಗ್ಗಣ್ಣ ಇಬ್ರಿಗೂ ದಿಗಿಲಾತು. ಕೇಳಿದ್ರೆ ಗೆಳೆಯರ ಜೊತೆಗೆ ಮಾತಾಡ್ತೀವ್ನಿ ಅಂತಿದ್ದ. ಅದೆಂತದೋ ಚಿತ್ರಗಳು. ಅದ್ನೇ ನೋಡಿ ನಗ್ತಿರಿದ್ದ. ತಲೆ ಮೇಲೆ ಕೈಹೊತ್ಕತಿದ್ದ. ಈರವ್ವಂಗೆ ತಾಯಿತದ ನೆನಪಾತು. ತಕ್ಷಣ ಹೋಗಿ ತಾಯಿತ ತಂದು ಮಗನ ಕೈಗೆ ಕಟ್ಟಿದ್ಲು. ಆದ್ರೂ ಸರಿ ಆಗ್ಲಿಲ್ಲ. ಮನೀಗಿರ ಜನ್ರ ಜತೆ ಮಾತಾಡದು ಬಿಟ್ಟು ಮಗ ಹಿಂಗಾ ಮಾಡದು ಅಂತ ಈರವ್ವಂಗೆ ಶಾನೆ ಕ್ವಾಪ ಬಂತು.

.
ಮಾರ್ನೇ ದಿನ ಬೆಳಗ್ಗೆ ಗುಂಡಣ್ಣ, ಅಪ್ಪಂತವ ಹೇಳ್ದ. ನಾ ಆನ್ ಲೈನು ಕೋರ್ಸು ಮಾಡ್ತೀನಿ ಅಂತ. ಜಗ್ಗಣ್ಣಂಗೆ ಕರೆಂಟು ಲೈನು, ತಾ ಹೊಡ್ದಿದ್ದ ಲೈನು ಜ್ನಪ್ತಿಗೆ ಬಂತು. ಕಿಟ್ಟಪ್ಪ ಅಲ್ಲೇ ನಿತ್ಕಂಡು ಕಿಸೀತಿದ್ದ ಏನೋ ನೆನ್ಕಂಡಗೆ. ಜಗ್ಗಂಣ್ಣಂಗೆ ಕಣ್ಣಿಗೆ ಖಾರದ ಪುಡಿ ಹಾಕ್ದಂಗಾತು. ಕಿಟ್ಟಪ್ಪಂಗೆ ಬೈದು ಹೊಲತ್ತಾವ ಬೇಲಿ ಸರಿ ಮಾಡಕ್ಕೆ ಕಳ್ಸಿದ. ಅದೆಂತದಾ ಮಗಾ ಅಂತ ಧ್ಯೈರ್ಯ ಮಾಡಿ ಕೇಳೇ ಬಿಟ್ಟ. ಮಂಗತಾವ ಎಂಥಾ ಮರ್ವಾದೆ. ಅಲ್ವರಾ? ಅದು ಒಂಥರಾ ವಿದ್ಯೆ ಅಪ್ಪಯ್ಯಾ. ಮನೇಲಿ ಕೋತ್ಕಂಡೇ ಕಲಿಬೋದಂತೆ , ಅದ್ನೆಲ್ಲಾ ಮಾಡಿದ್ರೆ ಕಂಪ್ನೀ ಅವ್ರು ಕರ್ದು ಕೆಲ್ಸ ಕೊಡ್ತಾರಂತೆ ಅಂತ ತನ್ನ ಗೆಣಿಕಾರ ಈರೇಶಿ ನಿನ್ನೇ ಅಷ್ಟೇ ಹೇಳಿದ್ನ ಹಂಗೇ ಹೇಳ್ದ. ಈಗಾಗ್ಲೇ ಯಾವ್ದೋ ಕೆಲ್ಸ ಸಿಕ್ಕೈತೆ ಅಂದಿದ್ಯಲ್ಲಾ ಮಗ್ನೇ. ಅವ್ರು ಕರಿಯ ತಾವ ಎರ್ಡು ತಿಂಗ್ಳು ಆರಾಮಾಕೆ ಮನೀಲಿರ್ಬಾದ್ರಾ ಮಗಾ ಅಂದ್ಲು ಕಾಪಿ ಕೊಡೋಕೆ ಬಂದಿದ್ದ ಈರವ್ವ. ಅವ್ಳಿಗೆ ಮಗಾ ಮತ್ತೆ ನಾಳೇನೆ ಪಟ್ಣಕ್ಕೆ ಹೊತ್ತಾನೆನೋ ಅಂತ ಹೆದ್ರಿಕೆ. ಸುಮ್ನಿರಬೇ, ಮಗಾ ಏನೋ ಕಲೀಬೇಕು ಅಂತಾನೆ. ಇದ್ಯಾ , ಬುದ್ದಿ ಎಲ್ಲಾ ನಿನ್ನಂತಾ ಹೆಬ್ಬೆಟ್ಗೆಲ್ಲಿ ಗೊತ್ತಾಗ್ಬೇಕು ಅಂತ ಜೋರು ಮಾಡದ ಜಗ್ಗಣ. ದಿನಾ ನನ್ನ ಅಳಿಸದೇ ಆತು ನಿಂಕೆಲ್ಸ. ಭೂಮಿಗೆ ಭಾರ ಕೂಳಿಗೆ ದಂಡ ಆಗಿ ನಾ ಯಾಕೆ ಉಳೀಬೇಕು. ಸಾಲಿಗೆ ಹೋಗೇ ಅಂತ ನನ್ನಪ್ಪಯ್ಯ ಮನೇ ಇಣ್ದ ಹೊಡ್ದು ಬಡ್ದು ಕಳ್ಸಿದ್ರೂ ಕಲೀಲಿಲ್ಲ. ನಂಗೆ ಹಿಂಗೆ ಆಗಾಕಾದ್ದೆ ಅಂತ ಗೊಳೋ ಅಂತ ಅಳಕಿಡ್ದು ಈರವ್ವ. ನಾನು ಮನೇ ಬಿಟ್ಟು ಈಗ್ಲೇ ಹೋಗಾಕಿಲ್ಲವ್ವ ಅಂತ ಸಮಾಧಾನ ಮಾಡೋ ಹೊತ್ಗೆ ಗುಂಡಂಗೆ ಸಾಕಾತು

ರಾತ್ರೆ ಎಲ್ಲ ಹುಡುಕ್ದ ಗುಂಡ. ಅದೆಂಥದೋ ಹಾಟ್ ಕ್ವೀನ್ ನೆಟ್ವರ್ಕು, ಬರಾಕಿಲ್ಲ ಕೂಸುಬೇಸು, ಮತ್ತೆಂದದೋ ಬಂಡಿ ಜಟಕಾ.. ಅಲ್ಲಲ್ಲಾ ಇನ್ಪಾಕುಟಕ, ಸಪ್ಪೇ ಲೋಬೊ ಹೇಳೊ ಇಚಿತ್ರದ ಹೆಸ್ರಲೆಲ್ಲಾ ಹುಡುಕ್ದ ಖರ್ಚು ಎಷ್ಟು ಅಂತ. ಹಾಟ್ ಕ್ವೀನ್ ನೆಟ್ವರ್ಕಲ್ಲಿ ಹದಿನೈದು ದಿನದ ಕೋರ್ಸ್ ಗೆ ೨೦೦ ಡಾಲರ್ ಅಂತ ಇತ್ತು. ಅಂದ್ರೆ ಹತ್ತತ್ರ ಹತ್ಸಾವ್ರ. ಅಪ್ಪಯ್ಯ ದುಡ್ಡಿಂದು ಯೋಚ್ನೆ ಮಾಡ್ಬೇಡ ಮಗಾ. ನಾನಂತೂ ಹೆಚ್ಗೆ ಓದಿಲ್ಲ. ನೀ ಎಷ್ಟು ಓದ್ತೀಯೋ ಓದು. ಜಮೀನು ಹೊಲ ಮಾರಾದ್ರೂ ಓದಿಸ್ತಿನಿ ಅಂದಿದ್ದ. ಆದ್ರೂ ಗುಂಡಣ್ಣಂಗೆ ಇದು ಭಾರೀ ಸುಲಗೆ ಅನಿಸ್ತು. ಬರಾಕಿಲ್ಲ ಕೆ ಹೋದ. ಅಲ್ಲಿ ಯಾವ್ದೋ ಪರೀಕ್ಷೆಗೆ ಎಷ್ಟು ದುಡ್ಡು ಅಂತ ಕೊಟ್ಟಿರ್ಲಿಲ್ಲ. ಒಂದೂವರೆ ಘಂಟೆ ಪರೀಕ್ಷೆ ಅಂತ ಮಾತ್ರ ಇತ್ತು.ಆದ್ರೆ ನೀವು ಪರೀಕ್ಷೆ ಬರ್ಯದಾದ್ರೆ ಅದ್ಕೆ ವೋಚರ್ ತಗಂಬೇಕು ಅಂತಿತ್ತು. ಅಲ್ಲಿ ಕೊಟ್ಟಿದ್ದ ಕೊಂಡಿ ಕುಕ್ಕಿದ. ಅದು ಕೇವಲ ೨೦೦ ಡಾಲರ್ ಅಂತು.

ಅವ ಅಯ್ಯೋ ಶಿವನೇ, ನಾವ ಭಾರತದಾಗಿದೀವ ಇಲ್ಲಾ ಫಾರಿನಲ್ಲಾ ಅಂತಂಕಡ. ಆಮೇಲೆ ಬಂಡಿ ಜಟಕಾ ಅಲ್ಲಲ್ಲಾ ಇನ್ಫಾಕುಟಕಕ್ಕೆ ಹೋದ. ಅದ್ರಲ್ಲಿ ಪರೀಕ್ಷೆಗೆ ೨೦೦ ಡಾಲರ್. ಆ ಸಾಪ್ಟವೇರ್ ಕಲ್ಸ ಜಬಾದಾರಿ ನಂದಲ್ಲಾ ಅಂತ ಇತ್ತು. ಹಂಗಾರೆ ಅದ್ನ ಪಟ್ಣಕ್ಕೆ ಹೋಗೇ ಮಾಡದು ಸರಿ ಅಂತ ಅಂದ್ಕಂಡ. ಬೆಳ್ಗಿಂದ ಕಂಪೂಟ್ರ ಮುಂದೆ ಕೂತು ಕೂತು ಕಣ್ಣೆಲ್ಲಾ ಉರೀತಿತ್ತು. ಹನ್ನೆರ್ಡೂ ವರೆ ಆಗಿತ್ತು. ಮಗೀಗೆ ಬೇಜಾರಾತ್ತದೆ ಅಂತ ಈರವ್ವ ಏನೂ ಹೇಳ್ದೆ ಮನೀಕಂಡಿದ್ಲು. ತಾನಾಗಿದ್ರೆ ಕರೆಂಟು ಬಿಲ್ಲು ಹೆಚ್ಗೆ ಬತ್ತದೆ ಅಂತ ಒಂಭತ್ಗಂಟೆಗೇ ಲೈಟಾರ್ಸೋ ಗಂಡ್ನೇ ಏನೋ ಯೋಳಿಲ್ಲ ನಾ ಏನೇಳ್ಲಿ ಅಂತ ಅಂದ್ಕಂಡ್ಲು. ಊರೆಲ್ಲಾ ಲೈಟಾಪು ಆಗಿದ್ರು ಜಗ್ಗಣ್ಣನ ಮನೆ ಲೈಟು ಆನಾಗಿದ್ದು ನೋಡಿ ಸುಮಾರು ನಾಯ್ಗಳು ಅಲ್ಲೇ ನೋಡ್ತಾ ಕುಯ್ಯೋ ಅಂತಿದ್ವು.

ಈ ಸಂಗೀತ ಕಚೇರಿಗೆ ಪಕ್ಕದ ಮನೇವ್ರೆಲ್ಲಾ ಏಳ್ತಿದ್ರು. ಪಟ್ಣದಲ್ಲಿ ಮಧ್ಯರಾತ್ರಿ ಅಂದೆ ಸಾಯ್ಕಾಲ ಅಂತೆ ಅಂತ ಕಿಟ್ಟಪ್ಪ ಹೇಳಿದ್ನ ಕೇಳ್ದವ್ರು ಗುಂಡಣ್ಣಂಗೆ ಒಳಗೊಳಗೇ ಶಾಪ ಹಾಕಿ ಹಾಳು ಕುನ್ನಿಗೊಂದು ಬಿಟ್ಟು ಮತ್ತೆ ಮಲಗ್ತಿದ್ರು. ಸ್ವಲ್ಪ ಹೊತ್ತಾದ ಮೇಲೇ ಇದೇ ಸಂಗೀತ ಮತ್ತೆ ಶುರು ಆಗೋದು. ಕೊನೀಗೆ ಲೋಬೋ ಗೆ ಹೋದ. ಅಲ್ಲಿ ದುಡ್ಡು ಕಾಸಿನ ಇವ್ರ ಇರ್ಲಿಲ್ಲ. ನಿಮ್ಮಾ ಈಮೇಲು ವಿಳಾಸ ಕೊಡಿ. ನಾವೇ ಹೇಳ್ತೀವಿ ಅಂದ್ರು. ಸರಿ ಅಂತ ಅಲ್ಲಿ ಈಮೇಲು, ಫೋನು ನಂಬರ್ರು, ರೆಸೂಮಂತೆ ಎಂಥ್ದೋ ಅದನ್ನೂ ಕೊಟ್ಟು ಮಲೀಕಂಡ. ರಾತ್ರೆ ಕನ್ಸಲ್ಲೂ ತಾ ಕೋರ್ಸ್ ಮಾಡ್ದಂಗೆ , ದೊಡ್ಡ ಕಂಪ್ನೀ ಅವ್ರೆಲ್ಲಾ ತನ್ನ ಹಳ್ಳಿಗೇ ಹುಡ್ಕಂಬಂದಗೆಲ್ಲಾ ಕನ್ಸು ಬಿತ್ತು

ಮಾರ್ನೇ ದಿನ ಅಪ್ಪಯ್ಯ , ಅವ್ವ ಹೊಲದ್ ತಾವ ಹೋಗಿದ್ರು. ಗುಂಡಣ್ಣನ ಫೋನು "ಟಚ್ ಮಿ ಟಚ್ ಮಿ ಟಚ್ ಮಿ" ಅಂತ ವಿಕಾರವಾಗಿ ಕೂಕ್ಕಂಡ್ತು. ಎತ್ತಿದ್ರೆ ಯಾವ್ದೋ ಹುಡ್ಗಿ ಧ್ವನಿ.ನಾನು ಮಿಸ್ ಹಾಲಾಹಲ ..ಅಲ್ಲಲ್ಲ ಕೋಮಲ ಲೋಬೋ ಇಂದ. ಮಿ. ಗುಂಡ್ ಅವ್ರ ಹತ್ರ ಮಾತಾಡ್ಬೋದ ಅಂತ ಇಂಗ್ಲೀಷಲ್ಲಿ ಕೇಳಿದ್ಳು. ನಾನೇಯ ಗುಂಡ ಅಂದ. ನಿಮ್ಮ ರೆಸ್ಯೂಮ್ ತುಂಬಾ ಚೆನ್ನಾಗಿದೆ. ಪರ್ಸಂಟೇಜಂತೂ ಮಾತಾಡೋ ಹಾಗೇ ಇಲ್ಲ ಅಂತ ಸ್ವಲ್ಪ ಜಾಸ್ತೀನೇ ಏರ್ಸಿದ್ಳು. ನಿಮಗೆ ಯಾವ್ದೂ ಕಂಪ್ನೀಲಿ ಕೆಲ್ಸ ಮಾಡಿದ ಅನುಭವ ಇಲ್ವಲ್ಲಾ ಅಂತ ರಾಗ ತೆಗೆದು ನೀವು ನಮ್ಮ ಆಬಾಡ್ಸಿಸ್ ಕೋರ್ಸ್ ಮಾಡ್ತೀರಾ ಅಂದ್ಳು. ಅದ್ಕೆ ಖರ್ಚು ಎಷ್ಟಾಗತ್ತೆ ಅಂದ ಗುಂಡ. ಆ ಕೋರ್ಸ್ ಅಲ್ಲಿ ಏನೇನೆಲ್ಲಾ ಇರ್ತದೆ ಅಂತ ಒಂದೆರಡು ನಿಮಿಷ್ ಅ ಮಾತಾಡಿದ ಮೇಲೆ ಟ್ರೈನಿಂಗ್ ಖರ್ಚು ೨೫,೦೦೦ ಅಂದ್ಳು

ನನ್ನ ಇಂಜಿನೀರ ಒಂದು ವರ್ಷದ ಫೀಸ್ ಕೇಳ್ತಾವ್ಳಲ್ಲಪಾ ಅಂದ್ಕಂಡ. ಅವ ಸುಧಾರ್ಸಕೋದ್ರೊಳ್ಗೆ ಸರ್ಟಿಫಿಕೇಟ್, ಎಕ್ಸ ಫೋಸರೋ ಎಂಥದೋ ಪೋರ್ಜರಿ ಎಲ್ಲಾ ಸೇರಿ ೩ ಲಕ್ಷ ಆಗ್ತದೆ, ೨೫ ದಿನ ದ ಕೋರ್ಸ್ ಅಂದ್ಳು. ಗುಂಡಣ್ಣಂಗೆ ಒಂದ್ಸಲ ಉಸ್ರು ಸಿಕ್ಕಾಕಂಡಂಗೆ ಆತು. ನಾನು ಜೀವಮಾನದಲ್ಲಿ ಇಲ್ಲೀವರ್ಗೆ ಓದಿರದೂ ಸೇರಿದ್ರೂ ಅಷ್ಟಾಗಕಿಲ್ಲ. ೨೫ ದಿನಕ್ಕೇ ಅಷ್ಟಾ ಅನುಸ್ತು. ಯಾವಾಗ ಸೇರ್ತೀರ ಅಂದ್ಳು. ಸರಿ ನೀವು ಎಲ್ಲಾ ಮಾಹಿತಿ ನನ್ನ ಈ ಮೇಲ್ ಗೆ ಕಳಿಸಿ, ನಾನೇ ಆಮೇಲೆ ಹೇಳ್ತೇನೆ ಅಂದ. ಸರಿ ಅಂತ ಖುಷಿಯಾಗೇ ಫೋನಿಟ್ಳು. ಹೋದ ಜೀವ ಬಂದಗಾತು ಗುಂಡಣ್ಣಂಗೆ. ಗೊತ್ತಿಲ್ದೇ ಇರಾ ನಂಬರಿಂದಾ ಯಾವ್ದೇ ಫೋನ್ ಬಂದ್ರೂ ಎತ್ಬಾರ್ದು ಇನ್ಮೇಲೆ ಅಂತ ಅಂದ್ಕಂಡ. ಅವಳ ಈಮೇಲ್ ಕಡೆ ತಲೆ ನೂ ಹಾಕ್ಲಿಲ್ಲ.

ಮಧ್ಯಾಹ್ನ ಮನೆಗೆ ಬಂದ ಜಗ್ಗಣ್ಣ. ಅದೇನೋ ಮಾಡ್ತೀನಿ ಅಂತಿದ್ಯಲ್ಲಾ ಮಗಾ. ಎಷ್ಟು ದುಡ್ಡು ಬೇಕೋ ಮಗಾ? ಒಂದ್ನಾಕು ಅಡ್ಕೆ ಮೂಟೆ ವ್ಯಾಪಾರಕ್ಕೆ ಹಾಕಕ್ಕೆ ಹೇಳ್ತೀನಿ ಅಂದ. ಅದೆಲ್ಲಾ ಬ್ಯಾಡ ಅಪ್ಪಯ್ಯಾ. ಓದಿ ಓದಿ ಬ್ಯಾಸರ ಆತ್ತದೆ. ನಾ ಸುಮ್ನೇ ಮನೇಕಿದ್ರೆ ನಿಂಗೆತಾರೂ ಬ್ಯಾಸರ್ವಾ ಹೇಳು ಅಂದ. ಅಂತ ಮಾತೆಲ್ಲಾ ಆಡ್ಬೇಡ ಬಂಗಾರ. ಏಟು ದಿನಾ ಬೇಕಾರು ನೀ ಇಲ್ಲೇ ಇರು. ಆರಾಮಾಗಿರು ಅಂತ ಬಂದು ಮಗೀನ ತಪ್ಕಂಡ್ಲು. ಜಗ್ಗಣ್ಣಂಗೆ ತಾನೇ ಏನೋ ಆಡಬಾರ್ದು ಆಡಿದ್ನೇನೋ, ಅಮ್ಮ ಮಗೀನ ಬೇರೆ ಮಾಡ ತರ ಆದ್ನಾ ಅಂತ ಬೇಜಾರಾತು. ಮಾರ್ನೇ ದಿನದಿಂದ ಮಗ ಹೊತ್ತಿಗೆ ಸರ್ಯಾಗಿ ಆರಾಮಾಗಿ ತಿಂದ್ಕಂಡು ತಿರುಗಾಡ್ತಾನೆ, ಮಲ್ಗತಾನೆ. ಈರವ್ವ, ಜಗ್ಗಣ್ಣಂಗೆ ಆಶ್ಚರ್ಯನೋ ಆಶ್ಚರ್ಯ. ಒಳಗೊಳಗೇ ಖುಸಿ. ಇದಾದ್ಮೇಲಿಂದ ಹಿಂಗೇ ಯಾವಾಗ್ಲೂ ಕಾಯವ್ವ , ನಮ್ಮಮ್ಮ ಅಂತ ದಿನಾನೂ ಈರವ್ವಂಗೆ ಮೂರೊತ್ತೂ ಕಾಳವ್ವನ ನೆನ್ಯೋದೆ ಕೆಲ್ಸ. ಜಗ್ಗಣ್ಣನೂ ಆರಾಮೂ. ಗುಂಡಣ್ಣ ಮನೆಹಾಳು ಐಡಿಯಾ ಕೊಟ್ಟ ತಿಪ್ಪೇಶಿಗೆ ಮನ್ಸಲ್ಲೇ ಬಯ್ತಾ ಅಪ್ಪ, ಅವ್ವಂತವ ಆರಾಮಾಗವ್ನೆ.

ಚಿತ್ರ ಕೃಪೆ: Google