Monday, June 25, 2012

ಅಕ್ಷರವಾಗಿಹ ಭಾವಗಳಲ್ಲಿ
ನೋವುಗಳೆಲ್ಲಾ ನಕ್ಕಿಹುದು
ತನ್ನನೆ ನುಂಗಿದ ನಿನ್ನೆಯ ನಡುವೆ
ನಾಳೆ ಆಸೆ ತಲೆ ಎತ್ತಿಹುದು |೧

ಬೊಗಸೆಗೆ ಸಿಗದ ನೆನಪಿನ ಬಿಂದು
ಸಾಗರವಾಗಿ ಉಕ್ಕಿಹುದು
ತನ್ನನೆ ತೇದ ತಂದೆಯ ನೆನಪು
ಕಂಗಳಂಗಳದಿ ಬಿಕ್ಕಿಹುದು |೨

ಮರೆತಿಹ ನಿನ್ನೆಯ ಮರೆಯದ ಕನಸು
ಚುಚ್ಚಿ ಕೊಲ್ಲುವುದು ಅನವರತ
ಕಾದಿಹೆ ನೀನು ಕಷ್ಟದ ವರ್ಷವ
ತಾಳ್ಮೆಯ ಶರಧಿಯ ಬತ್ತಿಸುತ |೩

ಕಾಲದ ಬಿಸಿಲಿಗೆ ಸುಟ್ಟಿಹ ಗಾಯ
ನಿನ್ನ ಅಗಲುವಿಕೆ ಮರೆಯುವುದೆ ?
ಮಾತ ಹಿಂದಿನ ಅವಿತಿಹ ಚಾಟಿ
ಏಟ ಕಾರಣವ ಅರಿತಿರದೆ
ಮರಳೋ ನೆನಪಲೇ, ಅದು ಯಾಕೋ ಯಾತನೆ
ವೇದನೆಯಲ್ಲದ ಭಾವನೆಯು
ಇದು ಮಾಮರ ಮರೆಯದ ಮಾಮಿಡಿಯು
ಮರೆಯಲಾರದಿದ ಮರೆಸುವ ಮುನ್ನ
ಮೆರೆಯೋ ಸಾಧನೆ ಯಾಚನೆಯು

Wednesday, June 13, 2012

ಮಿಂಚ ಸ್ನೇಹ

ಹೊಸ ನೀರು ಬಂದಾಗ ಹಳೇ ನೀರು ಕೊಚ್ಕೊಂಡು ಹೋಗೋ ತರ ಹೊಸ ಗೆಳೆಯರು ಬಂದಾಗ ಹಳಬ್ರು ಮರ್ತೋಗೋದು ತುಂಬಾ ಕಾಮನ್ನು ಅನ್ನೋ ಹಾಗೆ ಆಗ್ತಾ ಇದೆಯಲ್ಲಾ ಈಗ. ಹೈಟೆಕ್ ಜಮಾನಾದಲ್ಲಿ ತುಂಡಾಗೋ ಹೈ ಸ್ಪೀಡ್ ಸಂಬಂಧಗಳ ಮಧ್ಯೆ ಅಲ್ಲೊಂದು ಇಲ್ಲೊಂದು ಬೆಸುಗೆಗಳು ಕಾಲದೊಂದಿಗೆ ಸವೆಯದೇ ಹಾಗೇ ಉಳ್ಕಂಡು ತಾವೆಷ್ಟು ಗಟ್ಟಿ ಅನ್ನೋದ್ನ ಸಾರ್ತಾ ಇರುತ್ತೆ. ಅದೇ ತರ ಕೆಲ ನೆನಪುಗಳೂ ಸಹ. ಎಷ್ಟೋ ಸಲ ಬಸ್ಸಲ್ಲಿ, ರೈಲಲ್ಲಿ ಹೋಗಿರ್ತೀವಿ.ಈ ತರ ಒಂದೂವರೆ ಘಂಟೆ ಇಂದ , ಒಂದು ದಿನದ ಪ್ರಯಾಣದಲ್ಲಿ ಜೊತೆಯಾಗೋ ಜನರು ನಿರೀಕ್ಷಿಸದ ಸಮಯದಲ್ಲಿ ಮೂಡೋ ಮಿಂಚಂತೆ ಮಿಂಚಿ ನಮಗೇ ಅರಿವಿಲ್ಲದಂತೆ ಆ ಪ್ರಯಾಣದ ಅವಧಿಗೆ ನಮ್ಮ ಸ್ನೇಹಿತರಾಗಿ ಹಾಗೇ ಮರೆಯಾಗಿ ಬಿಡ್ತಾರೆ.ಆದರೆ ಅವರಲ್ಲಿ ಎಷ್ಟೋ ಜನರ ಮಾತುಗಳು, ನೆನಪುಗಳು ಅವರ ಹೆಸರು ಮರ್ತೋದ್ರೂ ನೆನ್ಪಲ್ಲಿ ಉಳ್ದು ಬಿಡುತ್ತೆ.ಅಂಥದೇ ಕೆಲ ನೆನಪುಗಳ ಸುತ್ತ ಈ ಬರಹ

ನಮ್ಮೂರು ಸಾಗರದಿಂದ ಶಿವಮೊಗ್ಗಕ್ಕೆ ಒಂದೂವರೆ ಘಂಟೆ ದೂರ .ಈಗಿನ ಬೆಂಗಳೂರಿನ ಟ್ರಾಫಿಕ್ಕಿಗೆ ಹೋಲಿಸಿದ್ರೆ ಅದು ತೀರಾ ಹೆಚ್ಚು ಹೊತ್ತಾಗ್ದೇ ಇದ್ರೂ ಆಗ ನಮಗದು ಸ್ವಲ್ಪ ಜಾಸ್ತೀನೆ ಹೊತ್ತು.ಆಗ ಹೈಸ್ಕೂಲು ದಿನಗಳು. ಬಸ್ಸಲ್ಲಿ ಮೈಮರೆತು ನಿದ್ರೆ ಮಾಡಿದ್ರೆ ಪಕ್ಕಕ್ಕಿರೋರು ದುಡ್ಡು, ಬ್ಯಾಗು ಕದ್ಕೊಂಡು ಹೋಗ್ತಾರೆ ಅಂತ ಲೆಕ್ಕ ಇಲ್ಲದ, ರೆಕ್ಕೆ ಪುಕ್ಕ ಇಲ್ಲದ ಗಾಳಿ ಸುದ್ದಿ ಕಿವಿಗೆ ಬಿದ್ದಿದ್ರ ಪರಿಣಾಮನೋ ಏನೋ ನಾವೆಂತೂ ಬಸ್ಸಲ್ಲಿ ಒಬ್ನೇ ಹೋಗ್ತಾ ಪಕ್ಕಕ್ಕೆ ಬಂದು ಕೂರೋ ಅವ್ರುನ್ನ ಮೊದಲು ಗಮನಿಸ್ತಿದ್ದೆ. ಸ್ವಲ್ಪ ದೊಡ್ಡೋರು ಅಂದ್ರೆ ನೀವೆಲ್ಲಿಗೆ ಹೋಗೋವ್ರು ಅಣ್ಣಾ, ಶಿವಮೊಗ್ಗಕ್ಕಾ ಅಂತನೋ ಏನೋ ಮಾತಿಗೆಳ್ಯೋದು.ಕೆಲೋ ಸಲ ಅವ್ರೇ ನೀವೆಲ್ಲಿಗೆ ಹೋಗೋರು ಅಂತ ಮಾತಿಗೆ ಶುರು ಮಾಡೋರು. ತೀರಾ ಬಿಗುಮಾನ ಇಲ್ದೇ ಮಾತಾಡೋರಾದ್ರೆ ಇಬ್ರಿಗೂ ಒಳ್ಳೇ ಟೈಂ ಪಾಸ್

ಒಮ್ಮೆ ಹೀಗೇ ಹೋಗ್ತಿರ್ಬೇಕಾದ್ರೆ ಸಾಗರದ ಎಲ್.ಬಿ ಕಾಲೇಜಲ್ಲಿ ಬಿ.ಎ ಓದ್ತಿದ್ದವ್ರೊಬ್ರು ಸಿಕ್ಕಿದ್ರು. ಅವತ್ತು ಹಿಂಗೇ ಮಾತಾಡ್ತಾ ಅವ್ರು ರೋಮಿಯೋ ಜೂಲಿಯಟ್ ಬಗ್ಗೆ, ಲೈಲಾ ಮಜ್ನು ಬಗ್ಗೆ, ಅವ್ರು ಓದಿದ ಶೇಕ್ಸಪಿಯರಿನ ಟ್ರಾಜಿಡಿ ಮತ್ತು ಕಾಮಿಡಿ ನಾಟಕಗಳ ಬಗ್ಗೆ ಮಾತಾಡಿದ್ರು. ಶೇಕ್ಸಪಿಯರಂದ್ರೆ ಬರೀ ಟ್ರಾಜಿಡಿ ಅಂತ ತಿಳಿದಿದ್ದ ನನಗೆ ಅವರ ಇತರ ಕೃತಿಗಳ ಬಗ್ಗೆ ತಿಳಿದಿದ್ದು ಅವಾಗ್ಲೇ. ಮೆಕಬೆತ್,ಕಿಂಗ್ ಲಿಯರ್, ಒಥೆಲೋ,ಹ್ಯಾಮ್ಲೆಟ್ ಕತೆಗಳ್ನ ಅಂದು ಅವರ ಬಾಯಿಂದ ಕೇಳಿದ್ದು ಇನ್ನೂ ನೆನ್ಪಿದೆ !! ಆಗೆಲ್ಲಾ ಈಗಿನ ತರ ಮೊಬೈಲುಗಳಿರ್ಲಿಲ್ಲ. ಆದರು ಸಂಪರ್ಕದಲ್ಲಿರೋಣ ಅಂತ ಹೇಳಿದ್ರು. ಹೂಂ ಸರಿ ಅಂದಿದ್ದೆ. ಆಮೇಲೆ ಅವ್ರು ಎಲ್ಲೂ ಸಿಗ್ಲಿಲ್ಲ. ಒಮ್ಮೆ ಸಾಗರದಲ್ಲೇ ಎದ್ರಿಗೆ ಸಿಕ್ಕಿದ್ರೂ ಮಾತಾಡ್ಸದೇ ಮುಂದೆ ಹೋದ್ರೂ. ನಂಗೂ ಧೈರ್ಯ ಸಾಕಾಗಿರ್ಲಿಲ್ಲ ಅನ್ಸುತ್ತೆ ಅವ್ರನ್ನ ತಡ್ದು ಮಾತಾಡ್ಸೋಕೆ ಆಗ. ಎಷ್ಟಂದ್ರೂ ಮಿಂಚ ಸ್ನೇಹ ಅಲ್ವೇ ? ಒಮ್ಮೆ ಮೂಡಿ ಮರ್ಯೋದನ್ನ ಎಷ್ಟೂಂತ ನೆನ್ಯೋದು ? ! :-( :-(

ಮತ್ತೊಮ್ಮೆ ನಾನು, ನನ್ನಣ್ಣ ದಿಲ್ಲಿಗೆ ಹೋಗ್ತಾ ಇದ್ವಿ .ಬೆಂಗಳೂರಿಂದ ರೈಲಲ್ಲಿ ೩೩ ಘಂಟೆ ಪ್ರಯಾಣ ದಿಲ್ಲಿಗೆ.ನಾವು ಕಾಲೇಜು ಹುಡುಗ್ರಾದ್ರೂ ಇಷ್ಟೆಲ್ಲಾ ದೂರ ಪ್ರಯಾಣ ಮಾಡಿ ಇಬ್ರಿಗೂ ಗೊತ್ತಿಲ್ಲ !!.ಹಿಂಗೇ ಪ್ರಯಾಣ ಮಾಡ್ತಿದ್ದಾಗ ನಮ್ಮ ಪಕ್ಕಕ್ಕಿದ್ದೋರನ್ನ ಮಾತಾಡ್ಸಿದ್ರೆ ಅವ್ರು ದೆಲ್ಲಿಗೆ ಹೋಗೋರು ಅಂತ ಗೊತ್ತಾಯ್ತು. ಅವ್ರು ದಿಲ್ಲಿಯ ದಂಪತಿಗಳು.ಅನಿಲ್ ಶರ್ಮ ದಂಪತಿಗಳು ಅಂತ ಆಮೇಲೆ ಗೊತ್ತಾಯ್ತು. ಹಿಂಗೇ ಕೆಲ ಘಂಟೇಲೆ ಅದೂ ಇದೂ ಮಾತಾಡ್ತಾ ಸ್ವಲ್ಪ ಪರಿಚಯ ಆಯ್ತು. ಬೆಂಗಳೂರಿನ ತಂಪಿನ ಬಗ್ಗೆ, ದೆಲ್ಲಿಯ ಸೆಕೆಯ ಬಗ್ಗೆ, ಅಲ್ಲಿ ಸುತ್ತಾಡೋ ಜಾಗಗಳ ಬಗ್ಗೆ, ಬೆಂಗಳೂರಲ್ಲಿರೋ ಅವರ ಮಗನ ಕೆಲಸದ ಬಗ್ಗೆ, ದೆಲ್ಲಿಯ ತಮ್ಮ ಕೆಲಸದ ಬಗ್ಗೆ ಎಲ್ಲಾ ಚೆನ್ನಾಗೇ ಮಾತಾಡಿದ್ರು. ಹುಟ್ಟಿದಾಗಿನಿಂದ ತನ್ನ ಹುಟ್ಟೂರು ಬಿಹಾರ ಮತ್ತು ಗಂಡನ ಊರು ದೆಲ್ಲಿ ಬಿಟ್ರೆ ಬೇರ್ಯಾವುದೂ ನೋಡದೇ ಇದ್ದ ಆ ಅಮ್ಮ, ಹೆತ್ತ ಮಗನಿಗೋಸ್ಕರವೇ ಬೆಂಗಳೂರವರೆಗೆ ಬಂದಿದ್ದರು. ಅವರಿಬ್ಬರ ಕಣ್ಣಿಗೆ ನಾನು ಅವರ ಚಿಕ್ಕ ಮಗನಂತೆಯೇ ಕಾಣುತ್ತಿದ್ದೆನಂತೆ !!

ರೈಲಲ್ಲಿ ಬೇರೆ ಅವ್ರು ಕೊಟ್ಟ ತಿಂಡಿ ತಿನ್ಬಾದ್ರು, ಅದ್ರಲ್ಲಿ ಮತ್ತು ಬರೋ ಔಷಧಿ ಹಾಕಿ ನಮ್ಮನ್ನ ದರೋಡೆ ಮಾಡ್ತಾರೆ ಅಂತೆಲ್ಲಾ ಎಚ್ಚರಿಕೆ ರೈಲವ್ರೇ ಕೊಡ್ತಾರೆ. ಆದ್ರೆ ಈ ದಂಪತಿ ಅವತ್ತು ಸಂಜೆ ನಮಗೆ ಅವ್ರು ಮಾಡಿದ್ದ ಚೂಡಾ(ಅವಲಕ್ಕಿ) ಕೊಡಕ್ಕೆ ಬಂದ್ರು !! ಏನ್ಮಾಡೋದು? ಎಷ್ಟು ಬೇಡಾ ಅಂದ್ರೂ ಕೇಳ್ತಾ ಇಲ್ಲ ಅವರು. ತುಂಬಾ ಒತ್ತಾಯ. ಕೊನೆಗೆ ಅವರು ಚೆನ್ನಾಗಿ ಕಲಸಿ ಅದ್ರಲ್ಲೇ ಸ್ವಲ್ಪ ಭಾಗ ತೆಗ್ದು ನಮ್ಮಿಬ್ರಿಗೆ(ನಾನು ಅಣ್ಣ) ಕೊಟ್ರೂ ತಿನ್ಲಿಲ್ಲ. ಅವ್ರು ತಿಂದು ಅವ್ರಿಗೆ ಏನೂ ಆಗದೇ ಇದ್ದ ಮೇಲೆ ನಮ್ಗೆ ಸ್ವಲ್ಪ ಧೈರ್ಯ ಬಂತು!! ನಾವೂ ಮುಂದಿನ ಸ್ಟೇಷನ್ ಅಲ್ಲಿ ತಗೊಂಡ ವೇಫರ್ಸನ್ನ ಅವ್ರಿಗೆ ನೀಡಿದ್ವಿ. ಅವ್ರೂ ಪ್ರತೀ ಸಲ ಚೂಡಾ ತಿನ್ನೋವಾಗ ನಮ್ಗೆ ಕೊಡೋರು.ಅದೂ ಇದೂ ಹರಟೋದೂ ನಡೀತಾ ಇತ್ತು. ಒಮ್ಮೆ ಅವ್ರು ಯಾವ್ದೋ ಕೀ ಚೈನ್ ತಗೊಂಡ್ರು, ನಾವೂ ತಗೊಂಡ್ವಿ. ನಾನು ದೋ ಕೆ ಪೈಸೆ(ಎರಡರ ದುಡ್ಡು) ಅಂತ ದುಡ್ಡು ಕೊಟ್ಟು ಬಿಟ್ಟೆ. ಅಲ್ಲಿವರ್ಗೂ ಶಾಂತ ಗೌರಿಯಂತಿದ್ದ ಆ ಅಮ್ಮ ಇದ್ದಕ್ಕಿದ್ದಂಗೆ ಸಿಟ್ಟಾದ್ರು. ಆಪಕೇ ಪೈಸಾ ಆಪ್ ಹೀ ರಕಲೋ, ಹಮೇ ಮತ್ ದೋ(ನಿಮ್ಮ ದುಡ್ಡು ನೀವೇ ಇಟ್ಕೊಳಿ, ನಮ್ಗೆ ಕೊಡ್ಬೇಡಿ)  ಅಂತ ಒಂದು ಚೈನಿನ ದುಡ್ಡು ನನ್ನ ಜೇಬಿಗೆ ತುರುಕಕ್ಕೆ ಬಂದ್ರು.. ಕೊನೆಗೆ ನಾನು ನನ್ನಣ್ಣ ತಗಂಡಿದ್ದು ಮತ್ತು ನಾ ತಗಂಡಿದ್ರ ದುಡ್ಡು ಕೊಟ್ಟಿದ್ದಷ್ಟೇ ಅಂತ ಸಮಾಧಾನ ಮಾಡೋದ್ರಲ್ಲಿ ಸಾಕಾಯ್ತು. ಇಂತ ಒಳ್ಳೆ ದಂಪತಿ ಸಿಕ್ಕಿದ್ರಿಂದ ನಮ್ಗೆ ದೆಲ್ಲಿ ಬಂದಿದ್ದೇ ಗೊತ್ತಾಗ್ಲಿಲ್ಲ. ಅಷ್ಟು ಟೈಂ ಪಾಸ್ ಆಗಿತ್ತು. ಬೇರೆ ರಾಜ್ಯವೊಂದರ ಸಂಸ್ಕೃತಿ ಬಗ್ಗೆ ಸುಮಾರು ಅರಿವಾಗಿತ್ತು.  ದೆಲ್ಲಿಗೆ ಹೋದಾಗ ಅವ್ರಿಗೆ ಸಿಗೋಕೆ ಆಗ್ಲಿಲ್ಲ .ಆದ್ರೆ ಅವ್ರ ಮೊಬೈಲ್ ನಂಬರ್ ಈಗ್ಲೂ ಇದೆ:-)

ಮತ್ತೊಂದ್ಸಲ ಬೆಂಗಳೂರಿಂದ ಶಿವಮೊಗ್ಗಕ್ಕೆ ರೈಲಲ್ಲಿ ಬರೋವಾಗ ಸ್ವಲ್ಪ ವಯಸ್ಸಾದವ್ರು ಇಬ್ರು ಎದ್ರಿಗೆ ಕೂತಿದ್ರು. ನಾ ಮಾತಾಡ್ಸೋಕೆ ಮೊದ್ಲೇ ಅವ್ರೇ ಶುರು!! ಏನಪಾ, ಯಾವ್ಕಡೆ, ಏನು ಮಾಡ್ತಾ ಇದೀಯ ಅಂತ. ಅವ್ರಿಗೂ ಟೈಂ ಪಾಸ್ ಆಗ್ಬೇಕಾಗಿತ್ತಲ್ಲ :-) ಕೊನೆಗೆ ಇಬ್ರೂ ತಮ್ಮೂರಿನ ರಿಯಲ್ ಎಸ್ಟೇಟ್ ಬಿಸಿನೆಸ್ ಬಗ್ಗೆ, ಬಡ್ಡಿ ಸಾಲದ ಬಗ್ಗೆ ಮಾತಾಡೋಕೆ ಶುರು ಮಾಡೋರು. ಈ ರಾಜಕೀಯ ಪಕ್ಷಗಳ ಬಗ್ಗೆ ನೀವು ಏನು ಹೇಳ್ತೀರ ಅಂತ ಮಧ್ಯ ಮಧ್ಯ ನನ್ನೂ ಕೇಳೋರು. ನಾನು ಪ್ರತೀ ಸಲ ಓಟು ಹಾಕ್ತೀನಿ ಸಾರ್. ಆ ಸಮಯದಲ್ಲಿ ಇರೋರಲ್ಲಿ ಯೋಗ್ಯ ಅಭ್ಯರ್ಥಿ ಯಾರೋ ಅವ್ರಿಗೆ ಓಟು ಹಾಕ್ತೀನಿ. ಇಂತದ್ದೇ ಪಕ್ಷ ಅಂತೇನೂ ಇಲ್ಲ ಅಂತ ಹೇಳೋದೇ ಸೇಫು ಅನ್ಸಿತ್ತು ಅವಾಗ.. ಸುಮಾರು ಸಲ ರೈಲಲ್ಲಿ , ಬಸ್ಸಲ್ಲಿ ರಾಜಕೀಯದವ್ರನ್ನ ದೇಶದಲ್ಲಿ ಸರಿಯಾಗಿರದೇ ಇರೋದ್ರ ಬಗ್ಗೇನೇ ದೂರೋರ್ವನ್ನ ಕಂಡು, ಅವ್ರ ಮಾತು ಕೇಳಿ ಕೇಳಿ ಬೇಜಾರಾಗಿ ಇವರ ರಿಯಲ್ ಎಸ್ಟೇಟ್ ಮಾತುಕತೇನೆ ಸ್ವಲ್ಪ ವಾಸಿ ಅನ್ಸಿದ್ರಲ್ಲಿ ಆಶ್ಚರ್ಯ ಇಲ್ವೇನೋ !!

ಮತ್ತೊಂದ್ಸಲ ಬರ್ತಾ ಆಜಾದ್ ಅಂತ ಸಿಕ್ಕಿದ್ರು. ಅವ್ರು ಮಾತಾಡಿದ್ದು ಫುಲ್ಲು ವೇದಾಂತದ ಬಗ್ಗೆ. ದೇವರು ಕೊಟ್ಟ ಈ ಜೀವನದಲ್ಲಿ ನಾವು ಎಷ್ಟು ಬೇರೆ ಅವ್ರಿಗೆ ಸಹಾಯ ಮಾಡ್ತೀವಿ ಅನ್ನೋದನ್ನೇ ದೇವ್ರು ನೋಡ್ತಾ ಇರ್ತಾನೆ ಅನ್ನೋದು ಅವ್ರ ಮಾತು. ಇರೋ ಅಷ್ಟು ದಿನ ಬೇರೆ ಅವ್ರಿಗೆ ನೋವು ಕೊಡ್ದೇ ಸಂತೋಷವಾಗಿ ಬಾಳೋದೇ ಜೀವನದ ಸತ್ವ ಅನ್ನೋ ಧಾಟೀಲಿ ನಮ್ಮ ಮಾತು ಸಾಗ್ತಿತ್ತು. ಈ ಬಾರಿ ಕೆ.ಎ.ಎಸ್ ಬರ್ದಿದ್ರಂತೆ ಅವ್ರು. ಬರ್ದು ಪಾಸಾಗೋದು ಕಷ್ಟ ಆದ್ರೆ ಆಯ್ಕೆ ಆದ್ರೆ ಮನೇಲಿರೋದನ್ನ ಉದ್ರಿ ಇಟ್ಟಾದ್ರೂ ನನ್ನ ಕಳಿಸ್ತಾರೆ ಅಲ್ಲಿಗೆ ಅಂದ್ರು. ಅವರ ನಿಷ್ಠೆಗೆ ಭೇಷ್ ಅನ್ಸಿತ್ತು. ಸೂಫಿ ಸಾಹಿತ್ಯದ ಬಗ್ಗೆ, ಗಝಲ್ ಗಳ ಬಗ್ಗೆ, ಸಂವಿಧಾನ ಸುಧಾರಣೆಗಳ ಬಗ್ಗೆ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಹುಟ್ಟಿದಬ್ಬಕ್ಕೆ ಕ್ಯಾಂಡಲ್ ಆರ್ಸೋದು ಸರೀನಾ ತಪ್ಪೋ, ಅವತ್ತು ಹೆವೀ ಪಾರ್ಟಿ ಮಾಡೋ ಬದ್ಲು  ಅನಾಥರಿಗೆ ನಮ್ಮ ಹಳೇ ಬಟ್ಟೆ ಕೊಟ್ಟು ಅವತ್ತಿನ ದಿನದ ನೆನಪು ಚೆನ್ನಾಗಿಡ್ಬೋದಲ್ಲಾ ಅನ್ನೋ ನನ್ನ ಐಡಿಯಾದ ಬಗ್ಗೆ.. ಹೀಗೆ ಬೆಂಗಳೂರಿಂದ ಶಿವಮೊಗ್ಗಕ್ಕೆ ಬರೋವರ್ಗೂ ಮಾತಾಡಿದ್ವಿ. ಎಲ್ಲೋ ಅಪರೂಪಕ್ಕೊಮ್ಮೆ ಸಿಗೋ ಇಂತ ಜನರು ಮಿಂಚಂತೆ ಮತ್ತೆ ಮರೆಯಾದ್ರೂ ಅವ್ರ ನೆನ್ಪು ಈ ತರ ಮತ್ತೆ ಮತ್ತೆ ಹಸಿರಾಗ್ತಾನೆ ಇರುತ್ತೆ

ಮತ್ತೊಂದ್ಸಲ ಶಿವಮೊಗ್ಗಕ್ಕೆ ಬರ್ತಿರೋವಾಗ ಒಬ್ಬ ಸಣ್ಣ ಹುಡ್ಗ ಮತ್ತು ಅವನ ಕುಟುಂಬ ನನ್ನ ಎದ್ರಿಗೆ ಕೂತಿತ್ತು. ಹಿಂಗೇ ಎಲ್ಲಿಗೆ ಹೋಗ್ತಾ ಇದೀರ ಅಂತ ಮಾತಾಡ್ತಾ ಇರ್ಬೇಕಿದ್ರೆ ಅವ್ನಿಗೆ ನಾನು ಅವ್ನ "ಪುನಿ" ಅಣ್ಣನ ಹಾಗೆ ಕಾಣಕ್ಕೆ ಶುರು ಆದೆ. ತಗಳಪ್ಪ, ಅಲ್ಲಿಂದ ಶುರು . ಪುನಿ ಅಣ್ಣ, ಆ ಆಟ ಆಡೋಣ ಬಾ, ಈ ಆಟ ಆಡೋಣ ಬಾ, ನಮ್ಮನೆಗೆ ಬಾ ಅಂತ ತುಂಬಾನೆ ಹಚ್ಕೊಂಡು ಬಿಟ್ಟಿದ್ದ. ಮಧ್ಯ ಮಧ್ಯೆ WWF ಮಾಡ್ತೀನಿ ನಿನ್ನ ಜೊತೆ ಅಂತ ಶುರು ಮಾಡ್ತಿದ್ದ. ಆಗೆಲ್ಲಾ ಈ ಟೀವಿಯಿಂದ ಮಕ್ಳು ಎಷ್ಟು ಹಾಳಾಗ್ತಿದಾರೆ ಅಂತ ಟೀವಿಗೆ ಶಾಪ ಹಾಕಿದ್ದೊಂದೇ ನನ್ನ ಕೆಲ್ಸ.ಪಾಪ, ಸಣ್ಣ ಹುಡ್ಗ, ಅವ್ನಿಗೇನು ಗೊತ್ತಾಗುತ್ತೆ !! ಅವ್ನು ಇಳೀತಾ ನಮ್ಮನೇಗೆ ಬಾ ಅಂತ ನನ್ನ ಬ್ಯಾಗು ತಗೊಂಡು ಹೋಗಕ್ಕೆ ಶುರು !! ಕೊನೆಗೆ ಅವ್ನ ಅಮ್ಮ ಬೈದು , ನೀವೇನು ಬೇಜಾರು ಮಾಡ್ಕೋಬೇಡಿ ಅಂತ ನಂಗೂ ಸಮಾಧಾನ ಮಾಡಕ್ಕೆ (!!) ಬಂದ್ರು.. ಇಲ್ಲಮ್ಮಾ, ನಂಗೇನೂ ಬೇಜಾರಿಲ್ಲ, ಸಣ್ಣ ಮಕ್ಕಳಲ್ವಾ ಆಟ ಆಡ್ತಾವೆ. ಹೋಗಿ ಬನ್ನಿ , ಪರ್ವಾಗಿಲ್ಲ ಅಂತ ನನ್ನ ಬ್ಯಾಗು ಇಸ್ಕೊಂಡಿದ್ದೆ !!

ಹಿಂಗೇ ಸುಮಾರಷ್ಟು ನೆನ್ಪಾಗ್ತಾ ಹೋಗತ್ತೆ .. ಆದ್ರೆ ಕಾಲ ಬದ್ಲಾಗ್ತಾ ಹೋದಂಗೇ ಜನಾನು ಬದ್ಗಾಗ್ತಾ ಹೋಗ್ತಿದಾರಲ್ವಾ ಅನುಸುತ್ತೆ ಕೆಲೋ ಸಲ. ಕೆಲೋ ಸಲ ಶಿವಮೊಗ್ಗದಿಂದ ಹೊರಟು, ಬೆಂಗಳೂರವರೆಗೆ ಬಸ್ಸಲ್ಲಿ ಬಂದ್ರೂ ಪಕ್ಕದೋರು ಬೆಂಗಳೂರಿಗೆ ಹೋಗ್ತಿದಾರೆ ಅನ್ನೋದು ಬಿಟ್ಟು ಬೇರೇನೂ ಮಾತಾಡಿರಲ್ಲ!!ಪಕ್ಕದೋರಿಗೆ ಅಥವಾ ನಮಗೆ ಅವರ ಮೇಲೆ ಅನುಮಾನವ, ಅವಿಶ್ವಾಸವಾ.. ಅಂತಲ್ಲ. ಆದರೂ , ಯಾಕೆ ಬೇಕು, ನಮ್ಮ ಪಾಡಿಗೆ ನಾವಿರೋಣ ಅನ್ನೋ ಭಾವನೇನೆ ಅದೇಗೋ ಅರಿದೇ ಮೇಲುಗೈ ಸಾಧಿಸಿರುತ್ತೆ. ಆದ್ರೂ ಕೆಲೋ ಸಲ  ಸಹಪ್ರಯಾಣಿಕರು ಮಿಂಚಂತೆ ಅದ್ಯಾವ್ದೋ ಗಳಿಗೇಲಿ ಸ್ನೇಹಿತರಾಗಿ ಸುಮಧುರ ನೆನ್ಪುಗಳ್ನ ಉಳಿಸಿ ಬಿಡ್ತಾರೆ. 
   
ಇಂತದ್ದು ನಿಮ್ಮ ಜೊತೆಗೂ ನಡ್ಡಿರಬಹುದು. ಅಥವಾ ನಾನು ಪ್ರಸ್ತಾಪಿಸಿದವ್ರಲ್ಲಿ ಒಬ್ರಾದ್ರೂ ಈಗ ಈ ಲೇಖನ ಓದ್ತಾನೂ ಇರ್ಬೋದು!! ಹಾಗೇನಾದ್ರೂ ಇದ್ರೆ ಅದು ನನ್ನ ಮಹಾಪುಣ್ಯವೇ ಸೈ. ನಿಮ್ಮೆಲ್ಲಾ ಮಧುರ ನೆನಪುಗಳಿಗೆ ಮತ್ತೊಮ್ಮೆ ಸಲಾಂ.

Tuesday, June 5, 2012

FB, ಮೊಬೈಲು ಮತ್ತು ನಾವು

ಲೇ ಲೇ.. ಯಾಕಿಂಗಾಡ್ತೀಯೋ,  
ಏನಾಗಿದ್ಯೋ ನಿಂಗೆ
FB ಗೆ ಯಾವಾಗ ಬಂದ್ರೂ ನೀನು ಹಾಕಿರೋ ೩-sad status ಕಾಣತ್ತೆ.  
ಮೆಸೇಜಿಗೆ ರಿಪ್ಲೆ ಇಲ್ಲ. ಫೋನ್ ಮಾಡಿದ್ರೂ ರಿಸೀವ್ ಮಾಡಲ್ಲ
ಕಾಲೇಜಲ್ಲಿ ಹೆಂಗಿದ್ದೋನು ಹೆಂಗಾಗಿದಿಯಲ್ಲೋ, ಏನೋ ಕರ್ಮ ನಿಂಗೆ 
ಪ್ರೇಮ್ ಅಂತ ಒಂದೇ ಉಸುರಿಗೆ ಬಯ್ದ ವಿಶ್ವ.  

ಹೂಂ ಕಣೋ , ನೀನೊಬ್ಬ ಕಮ್ಮಿ ಇದ್ದೆ ನೋಡು ನಂಗೆ ಬಯ್ಯಕ್ಕೆ..
ಕೆಲ್ಸ ಇಲ್ಲ ಅಂತ ನಾನು ಒದ್ದಾಡ್ತ ಇದ್ರೆ ನಿಂಗೆ ಅದು ಏನೂ ಅಲ್ಲ ಅಲ.  
ನಿಮ್ಗೇನಪ ಆರಾಮಗಿದೀರ.  
ಕಾಲೇಜು ಮುಗಿದು ಮೂರು ತಿಂಗ್ಳಲ್ಲಿ ಎಷ್ಟು ಮೆಸೇಜು ಹಾಕಿದ್ದೆ, ಎಷ್ಟು ಸಲ FB ಲಿ ಮೆಸೇಜು ಹಾಕಿದ್ದೆ, poke ಮಾಡಿದ್ದೆ,ಒಂದಕ್ಕಾದ್ರೂ ರಿಪ್ಲೆ ಮಾಡಿದ್ಯ ನೆನ್ಪು ಮಾಡ್ಕೊ.
 ಇಡೀ ದಿನ FB ಲಿ ಏನು ಮಾಡ್ತೀಯ ಅಂತ ಒಂದಿನ ಬಯ್ದಿದ್ಯಲ್ಲ, ಅವತ್ತು ಬೆಳಿಗ್ಗೆ ಅಷ್ಟೆ ನಾನು ನನ್ನ ನಂಗೇ ಲೆಕ್ಕ ಇಲ್ಲದ ಅದೆಷ್ಟನೇದೋ interview ನಲ್ಲಿ ಫೇಲಾಗಿ ಬಂದಿದ್ದೆ ಗೊತ್ತಾ?
ನಾಳೆ ಬೆಳಿಗ್ಗೆ ಯಾವ ಪೀರಿಯಡ್ ಫಸ್ಟು, internal ಗೆ ಯಾವ್ದು ಮುಖ್ಯ ಅಂತ ಒಂದೂ ಬಿಡ್ದೇ ಮೆಸೇಜು ಮಾಡ್ತಿದ್ರಿ..  
ಕ್ಲಾಸಲ್ಲಿದ್ದ ೬೦ ಜನರಲ್ಲಿ ಒಬ್ರಾದ್ರೂ ಈಗ ಬದ್ಕಿದ್ಯಾ ಸತ್ತಿದ್ಯಾ ಅಂತನಾದ್ರೂ ಮೆಸೇಜು ಮಾಡ್ತಿರೇನ್ರೋ..  
ಬಂದುಬಿಟ್ಟ ದೊಡ್ಡದಾಗಿ ಬುದ್ದಿ ಹೇಳಕ್ಕೆ ಅಂದ ಪ್ರೇಮ್..

ಈಗಿನ ತಲೆಮಾರಿನ ಪ್ರತೀ ಯುವಕ/ಯುವಕಿಯ ಬಾಳಿನ ಅವಿಭಾಜ್ಯ ಅಂಗ ಅನ್ನೋ ತರ ಆಗ್ಬುಟ್ಟಿದೆಯಲ್ಲಾ ಈ FB ಮತ್ತು ಮೊಬೈಲ್. ಉಂಡಿದ್ದು , ತಿಂದಿದ್ರಿಂದ ಹಿಡಿದು ಕೆಲ್ಸ ಸಿಕ್ಕಿದ್ದು, ಪ್ರಾಜೆಕ್ಟು ಮುಗ್ದಿದ್ದು, Internal , ಎಕ್ಸಾಂ ಬರ್ಯೋದು.. ಎಲ್ಲವೂ ಇಲ್ಲಿ Status ಗಳೇ. ದಿನಕ್ಕೆ ಕನಿಷ್ಟ ಆದ್ರೂ ೨೫-೩೦ ರಷ್ಟು ಸಂದೇಶ ಸುತ್ತಾಡ್ಸೋ ಮೊಬೈಲುಗಳು ಕೆಲವೊಂದು ಸಲ ಸ್ಮಶಾನ ಮೌನ ವಹಿಸಿಬಿಡುತ್ತೆ. ಕಾಲೇಜು ಸಮಯದಲ್ಲಿ ಪಾದರಸದಷ್ಟು ಗೆಲುವಾಗಿದ್ದೋರು ಮುಗಿದ ಕೆಲವೇ ಸಮಯದಲ್ಲಿ ಎಲ್ಲೋ ಕತ್ತಲೇಲಿ, ಯಾರಿಗೂ ಸಿಗದಂಗೆ ಮರೆಯಾಗಿಬಿಡ್ತಾರೆ. ಹಿಂಗ್ಯಾಕಾಗತ್ತೆ ಅನ್ನೋದಕ್ಕೆ ನಿರ್ದಿಷ್ಟ ಉತ್ರ ಇಲ್ದಿದ್ರೂ ಕೆಲ ಅಂಶಗಳೆಂತೂ ಸತ್ಯ...ಗುರಿ, ಬೇಸರ, ಹತಾಶೆ, ನಿರಾಸೆ.. ಅದೇ ಇಲ್ಲಿ ಪ್ರೇಮ್ ನ ಬಾಳಲ್ಲೂ ಆಗಿದ್ದು.

ಕೊನೆಯ ಎಕ್ಸಾಮು ಮುಗಿದ ದಿನ ಪ್ರೇಮಿಗೆ ತುಂಬಾ ಖುಷಿ. ಕೊನೆವರೆಗೂ ಕಾಂಟಾಕ್ಟಲ್ಲಿರೋಣ, ಎಂದೂ ಮರೀಬೇಡ ನನ್ನ ಅನ್ನೋ ಹುಡುಗಿಯರ ಮೆಸೇಜುಗಳು, ನಾಳೆ ಹಾಸ್ಟೆಲ್ ಖಾಲಿ ಮಾಡ್ತಾ ಇದೀನಿ. ಇನ್ಯಾವಾಗ್ಲಾದ್ರೂ ಸಿಗೋಣ ಲೈಫಲ್ಲಿ ಅನ್ನೋ ಪಕ್ಕದ ರೂಂ ಹುಡುಗ್ರು .. ಹಿಂಗೆ ಎಲ್ಲರ ಕಣ್ಣಲ್ಲೂ ನೀರು. ಅಂತೂ ಒಲ್ಲದ ಮನಸ್ಸಿಂದ ಊರಿಗೆ ಬಂದು ಎರಡು ದಿನ ಆಗಿತ್ತಷ್ಟೇ.. ಆಗ್ಲೇ ಮುಂದೆ ಕೆಲ್ಸ ಹುಡ್ಕಬೇಕಾದ ಅನಿವಾರ್ಯತೆ ನೆನ್ಪಾಗತೊಡಗಿತ್ತು. ಓದಕ್ಕೆ ಅಂತ ಮಾಡಿದ ಸಾಲ ಬೇರೆ ಇತ್ತಲ್ಲ.. ಗೂಗಲ್ಲು, ಮೈಕ್ರೋಸಾಫ್ಟು, ಇಂಟೆಲ್ಲು ಹೀಗೆ ದೊಡ್ಡ ದೊಡ್ಡ ಕಂಪನಿಗಳಿಗೆಲ್ಲಾ ಅರ್ಜಿ ಗುಜರಾಯಿಸಿದ. ಬೆಳಗಿಂದ ಸಂಜೆವರೆಗೆ ಅಂತರ್ಜಾಲದಲ್ಲೇ ಇದ್ದು ಸಿಕ್ಕ ಸಿಕ್ಕ ಕೆಲ್ಸಕ್ಕೆಲ್ಲಾ ಅರ್ಜಿ ಹಾಕೋದು, FB ಯಲ್ಲಿ , ಮೆಸೇಜಲ್ಲಿ ಗೆಳೆಯರಿಗೆ , Seniors ಗೆ ಎಲ್ಲಾದ್ರೂ ಉದ್ಯೋಗ ಇದ್ಯಾ ಅಂತ ಕೇಳೋದು.. ಇದೇ ಆಯ್ತು.

ಹಂಗೂ ಹಿಂಗೂ ಒಂದು ತಿಂಗ್ಳಾಯ್ತು. ಅಕ್ಕ ಪಕ್ಕದ ಮನೆ ಅವ್ರೆಲ್ಲಾ ಬಂದು ನಿಮ್ಮಗನಿಗೆ ಇನ್ನೂ ಕೆಲ್ಸ ಸಿಕ್ಕಿಲ್ವಾ, ನನ್ನ ಅಕ್ಕನ ಮಗಳಿಗೆ ಆ ಕಂಪೆನಿ, ಮಾವನ ಮಗಂಗೆ ಈ ಕಂಪನಿ ಅಂತ ಶುರು ಮಾಡೋರು. ಇವ್ರಿಗೆ ನೆರೆ-ಹೊರೆ ಅಂತ ಇಟ್ಟಿರೋ ಹೆಸ್ರಲ್ಲಿ ನೆರವಾಗಕ್ಕಾಗ್ದಿದ್ರೂ ಹೊರೆ ಆಗಿ ಹೆಸ್ರು ಸಾರ್ಥಕ ಮಾಡ್ಕೊಳ್ತಾರೆ. ನಾನು ಹೆಂಗಿದ್ರೆ ಇವ್ರಿಗೇನು ಅಂತ ಅನೇಕ ಸಲ ಗೊಣಗಿದ್ದ ಪ್ರೇಮ್. ಮನೇಲೆ ಖಾಲಿ ಕೂತು ಕೂತು ಬೇಜಾರು ಬೇರೆ. ಮುಂಚೆ ಎಲ್ಲಾ ದಿನಕ್ಕೆ ಐವತ್ತು ಸಲವಾದ್ರೂ ಹೊಡ್ಕೊಳ್ತಾ ಇದ್ದ ಸೆಲ್ಲು ಈಗ ತಣ್ಣಗೆ ಬಿದ್ಕೊಂಡಿರ್ತಿತ್ತು. ಮುಂಚೆ ಎಲ್ಲಾ ದಿನಾ ಫಾರ್ವಡ್ರು ಕಳುಸ್ತಿದ್ದವ್ರುದ್ದೂ ಈಗ ಸುದ್ದಿ ಇಲ್ಲ.ದಿನಾ ಬೆಳಗ್ಗೆ ಅತ್ವಾ ರಾತ್ರೆ ಇವ್ನು ತನ್ನ ಸೆಲ್ಲಲ್ಲಿರೋ ಎಲ್ಲ ಗೆಳೆಯರಿಗೂ ಮೆಸೇಜಿಸೋ ಅಭ್ಯಾಸನೂ ಮಾಡ್ಕಂಡಿದ್ದ ಊರಿಗೆ ಬಂದ ಹೊಸದ್ರಲ್ಲಿ. ಆದ್ರೆ ಈಗ ಅದೂ ಇಲ್ಲ. ರಿಪ್ಲೇನೆ ಇಲ್ಲ ಅಂದ್ರೆ one-way ಆಗಿ ಎಷ್ಟು ಮೆಸೇಜು ಅಂತ ಕಳ್ಸೋದು?

ಹಿಂಗೇ ಮತ್ತೊಂದು ತಿಂಗ್ಳೂ ಆಯ್ತು. ಯಾವ್ದೂ ಕೆಲ್ಸ ಇಲ್ಲ. ದೊಡ್ಡ ಕಂಪೆನಿಗಳು ಸಾಯ್ಲಿ ಅಂತ ಸಣ್ಣಸಣ್ಣದಕ್ಕೆ ಹಾಕದಕ್ಕೆ ಶುರು ಮಾಡಿದ್ದ ಈಗ ಪ್ರೇಮ್. ಕೇಳಿದ ನೆಂಟ್ರೆಲ್ಲಾ ಕ್ಯಾಂಪಸಲ್ಲಿ ಆಗಿಲ್ವಾ ಅಂತ ಇವ್ನಿಗೆ ಹಂಗ್ಸೋರು. ಆಮೇಲೆ ನೆಂಟ ಅನ್ನೋ ಸಂಕಟಕ್ಕೆ ಆಮೇಲೆ ನೋಡ್ತೀನಿ ಅನ್ನೋರು. ಹೀಗೆ ೨-೩ ಸಲ ಸುಮಾರು ಜನ ಕೇಳಿದ ಮೇಲೆ ಈ ನೆಂಟ್ರೆಲ್ಲಾ ಹಿಂಗೇ ಅಂತ ಗೊತ್ತಾಯ್ತು ಪ್ರೇಮಿಗೆ. ಇಂಟರ್ನಶಿಪ್ ಮಾಡಿದ್ರೆ, ಸರ್ಟಿಫಿಕೇಟ್ ಇದ್ರೆ ಅತ್ವಾ ರೆಫರೆನ್ಸ್ ಇದ್ರೆ ಅತ್ವಾ ಒಳ್ಳೇ ಪರ್ಸಂಟೇಜ್ ಇದ್ರೆ ಮಾತ್ರ ದೊಡ್ಡ ದೊಡ್ಡ ಕಂಪೆನಿಗಳೆಲ್ಲಾ ಕರೀತಾರೆ. ಇಲ್ಲಾಂದ್ರೆ ಹಾಕಿರೋ ಸಾವಿರಾರು ಅರ್ಜಿಗಳಲ್ಲಿ ನಿನ್ನ ಮೂಸೂ ನೋಡಲ್ಲ ಅಂದ ಒಬ್ಬ ಗೆಳೆಯ

ಇರೋ ಬೇಜಾರನ್ನ ಯಾರತ್ರ ಅಂತ ಹೇಳ್ಕೋಳ್ಳೋದು? ಅಪ್ಪ-ಅಮ್ಮಂಗೆ ಹೇಳ್ಕೊಂಡ್ರೆ ಅವ್ರು ಮತ್ತೂ ಬೇಜಾರಾಗ್ತಾರೆ. ಇವ್ನು ಹೀಗೇ ಬೇಜಾರು ಅಂತ ಹಾಕಿದ ಮೆಸೇಜುಗಳು ಇವ್ನ ಹೆಚ್ಚಿನ (ಹಳೆ)ಗೆಳೆಯರಿಗೆ ಹೋಗ್ತಾನೆ ಇರಲಿಲ್ಲ. ಸುಮಾರು ಜನ ನಂಬರ್ನೇ ಬದಲಾಯಿಸಿದ್ರೂ ಇವ್ನಿಗೆ ಕೊಟ್ಟಿರಲಿಲ್ಲ. ಏನೋ ದಿನಾ ನಿಂಕ್ಲಾಸು ಹುಡ್ಗೀರಿಗೆ ರೋದನೆ ಮೆಸೇಜು ಹಾಕಿ ಗೋಳು ಕೊಡ್ತೀಯಂತೆ ಅಂತ ಪಕ್ಕದ ಕ್ಲಾಸವ್ನೊಬ್ಬ ಬೇರೆ ಮೊನ್ನೆ ಹೇಳಿದ್ದ. ಹಾಗಾಗಿ ಹುಡ್ಗೀರ ನಂಬರನ್ನ ಇವನೇ ಅಳಿಸಿ ಹಾಕಿದ್ದ. ಅವ್ರೆಲ್ಲಿದಾರೋ ಚೆನ್ನಾಗಿ ಇರ್ಲಿ. ನನ್ನ "ಗೋಳು" ಅವ್ರಿಗೆ ಮುಟ್ದೇ ಇರ್ಲಿ ಅಂತ..ಆದ್ರೆ ಈ ಹಾಳಾದ ಬೇಜಾರು ಅನ್ನೋದು ಯಾರಿಗಾದ್ರೂ ಹೇಳ್ಕಳದಿದ್ರೆ ಕಮ್ಮಿ ಆಗೊಲ್ವಲ್ಲ ಅಂತ FB status ಗಳ ಮರೆ ಹೋಗಿದ್ದ ಪ್ರೇಮ್.FB ನಲ್ಲಿ ಇವ್ನು ಮೆಸೇಜು ಮಾಡಿದ ಕೂಡ್ಲೇ Offline ಹೋಗಿ ಬಿಡ್ತಿದ್ರು ಇವ್ನ ನೆಂಟ್ರು, ಗೆಳೆಯರೆಲ್ಲಾ.. ಒಳ್ಳೇ ಟಾರ್ಚರ್ ಕೇಸು ಅಂತ..
ಈಗ Good Bye all, Deleting FB Account ಅಂತ status ಹಾಕಿದ್ದಕ್ಕೆ ವಿಶ್ವನ ಕೈಲಿ ಬಯ್ಗುಳ ಸಿಕ್ಕಿತ್ತು !!..


ಕಾಲೇಜು ಮುಗಿದ ದಿನದಿಂದ್ಲೇ ಬೇಜಾರು ಸಾರಿಕಾಗೆ.ಕೆಲ್ಸ ಏನೋ ಸಿಕ್ಕಿತ್ತು. ಆದ್ರೆ ಜಾಯಿನ್ ಆಗಕ್ಕೆ ಇನ್ನೂ ಸುಮಾರು ಸಮಯ ಇತ್ತು. ಮನೇಲಿ ಬೇಜಾರಾಗ್ಡೇ ಇರ್ಲಿ ಅಂತ ಇಂಟರ್ನೆಟ್ ಹಾಕಸ್ಕಂಡಿದ್ಲು ಸಾರಿ.ಮೊನ್ನೆ ಯಾವನೋ ಗೊತ್ತಿಲ್ದೇ ಇರೋನ Friendship ರಿಕ್ವೆಸ್ಟ್ ಬಂದಿತ್ತು. ಯಾರು ಅಂತ ಗೊತ್ತೇ ಇಲ್ಲ ಅಂತ delete ಮಾಡಿದ್ಲು. ಸ್ವಲ್ಪ ದಿನ ಆದ್ಮೇಲೆ ಮತ್ತದೇ ವ್ಯಕ್ತೀದು. ನಿಮಗೆ ನಾನು ಗೊತ್ತ ಅಂತ ಮೆಸೇಜು ಹಾಕಿದ್ಲು. ಸಾರಿ, ಗೊತ್ತಿಲ್ಲ. suggestion ತೋರುಸ್ತು ಕಳ್ಸಿದೆ. ನಾವು FB ಲಿ ಗೆಳೆಯರಾಗ್ಬೋದಲ್ವಾ ಅಂತ ಉತ್ರ ಬಂದಿತ್ತು. ಹೂಂ ಅಂತ ಸಂತೋಷದಿಂದ್ಲೇ ಒಪ್ಪಿದ್ಲು. ಕೊನೆಗೆ ಇವಳು ಹಾಕಿದ್ದ ಫೋಟೋಗಳಿಗೆಲ್ಲಾ awesome, superb ಅಂತೆಲ್ಲಾ ಕಾಮೆಂಟುಗಳು ಬೀಳದು, ಪ್ರತಿಯೊಂದಕ್ಕೂ ಲೈಕುಗಳು ಬೀಳೋದು ಶುರು ಆಯ್ತು. ಇವತ್ತಿನ ಫೋಟೋ ಸಖತ್ತಾಗಿದೆ ಅನ್ನೋ ಮೆಸೇಜುಗಳೂ ಬರೋಕೆ ಶುರು ಆದ್ವು.ಇವ್ಳು ಫೋನ್ ನಂಬರೊಂದು ಕೊಟ್ಟಿರ್ಲಿಲ್ಲ .

ಯಾಕೋ ಒಂದಿನ ಇದ್ದಕ್ಕಿದ್ದಾಗ ನಿನ್ನ ಪ್ರೀತಿಸ್ತೀನಿ ಅಂತ ಮೆಸೇಜ್ ಹಾಕ್ದ. ಸಾರಿ ನಾನಿನ್ನ ಆ ತರ ನೋಡೇ ಇಲ್ಲ. ಸುಮ್ನೆ ಗೆಳೆಯನ ತರಹ ನೋಡಿದೀನಿ ಅಷ್ಟೇ ಅಂದ್ಲು. ಆಮೇಲಿಂದ ಇವ್ಳು ಆನ್ ಲೈನ್ ಹೋದಾಗೆಲ್ಲಾ ಅವ್ನ ಮೆಸೇಜುಗಳೇ ಕಾಣಕ್ಕೆ ಶುರು ಆದ್ವು.ದಿನಾ ಹೊಸ ತರ ರೋದನೆ. ನೀನಿಲ್ದೇ ನಾನಿಲ್ಲ. ನೀನಿಲ್ದೇ ಹೋದ್ರೆ ನಾ FB ಅಕೌಂಟ್ನೇ ಡಿಲಿಟ್ ಮಾಡ್ಬಿಟ್ತೀನಿ. ನನ್ಯಾಕೆ ಅವಾಯ್ಡ್ ಮಾಡ್ತೀಯ ಅಂತೆಲ್ಲಾ ಶುರು ಆಯ್ತು. ಅವ್ಳಿಗಷ್ಟೇ ಅಲ್ಲದೇ ಅವಳ ಗೆಳತಿಯರಿಗೂ ಅವಳಿಗೆ ಸಮಾಧಾನ ಹೇಳಿ ಅಂತ ಮೆಸೇಜು ಹಾಕ್ತಿದ್ದ. ಕೊನೆಗೊಂದು ದಿನ ಸಾರಿ ಗೆಳತಿ ಸಾರಿಗೆ ನಿಂಗೆ ಮೆಸೇಜು ಹಾಕ್ತಿರೋ ವ್ಯಕ್ತಿ ಸರಿ ಇಲ್ಲ ಅನ್ಸುತ್ತೆ ಅಂದ್ಲು. ಅವ್ನು ಅವ್ಳ ಫ್ರೆಂಡ್ ಲಿಸ್ಟಲ್ಲೂ ಇದ್ನಂತೆ. ಯಾವುದೋ ದಿನ ಯಾರದೋ ಫೋಟೋಗೆ ಆ ವ್ಯಕ್ತಿ ಅಶ್ಲೀಲವಾಗಿ ಕಾಮೆಂಟಿಸಿದ್ದನ್ನ ನೋಡಿ ಅವನನ್ನ ಗೆಳೆತನದಿಂದ್ಲೇ ತೆಗೆದು ಹಾಕಿದ್ಲು.. ಅವತ್ತಿಂದ ಸಾರಿ FB ಕಡೆ ಹೋಗೋದೆ ಕಡ್ಮೆ ಮಾಡಿದಾಳೆ. ಯಾರು ರಿಕ್ವೆಸ್ಟ್ ಕಳ್ಸಿದ್ರೂ accept ಮಾಡಲ್ಲ, ಭಾರಿ ಜಂಬ ಅಂತ ಸುಮಾರು ಜನ ಹಿಂದೆ ಬಿಟ್ಟು ಹೇಳ್ತಾರೆ. ಆದ್ರೆ ಸಾರಿ ಅದಕ್ಕೆಲ್ಲಾ ತಲೆ ಕೆಡ್ಸಿ ಕೊಳ್ಳೊಲ್ಲ. ಗೊತ್ತಿರೋರನ್ನ ಮಾತ್ರ ಗೆಳೆಯರನ್ನಾಗಿಸೋದು FB ಲಿ...


ಎರಡೂ ಸ್ವಲ್ಪ ಬೇರೆ ಬೇರೆನೆ ಕಥೆ. ಆದ್ರೆ ಎರಡರಲ್ಲೂ ಇದ್ದಿದ್ದು ನಾವು ನಮ್ಮ ಜೊತೆಗೆ ಇರೋರನ್ನ ಬಿಟ್ಟು ಈ ಮೊಬೈಲು, FB ಹೀಗೆ virtual world ನಲ್ಲೇ ಹೇಗೆ ಬದುಕ್ತಾ ಇದೀವಲ್ಲ ಅಂತ.. ಅದ್ರಲ್ಲಿ ಯಾರೋ ಏನೋ ಕಾಮೆಂಟು ಹಾಕಿದ್ರು, ಇವತ್ತು ಹಾಕಿದ ಫೋಟೋಗೆ ಕಾಮೆಂಟು ಬಿದ್ದಿಲ್ಲ, ಲೈಕು ಬಿದ್ದಿಲ್ಲ. ನನ್ನ ಪೋಸ್ಟು ಓದದೇ ಮತ್ತೊಂದು ದರಿದ್ರ ಪೋಸ್ಟಿಗೆ ಹೊಗಳ್ತಾ ಇದಾರಲ್ಲಾ.. ನಂಗೆ ಬೈದಿದ್ದಕ್ಕೆಲ್ಲಾ ಲೈಕು ಒತ್ತತಾರಲ್ಲಾ.. ಹಿಂಗೆ ಪ್ರತಿಯೊಂದಕ್ಕೂ ತಲೆ ಕೆಡಿಸಿಕೊಳ್ತಾ ಇದೀವಲ್ಲಾ.. ಈ ತರದ ಮನೋಭಾವದ ಬಗ್ಗೆ.ತಂತ್ರಜ್ನಾನವನ್ನ ಈ ತರ ಹ್ಸಚ್ಕೊಳ್ಳೋದು ಒಳ್ಳೇದೋ ಕೆಟ್ಟದ್ದೋ ಗೊತ್ತಿಲ್ಲ. ಪ್ರೇಮ್, ಸಾರಿ ಅಂತವರು ನಿಮ್ಮ್ ಮಧ್ಯೆನೂ ಇರಬಹುದು . ಅಂತ ಘಟನೆಗಳನ್ನ ನೀವೂ ನೋಡಿರಬಹುದು, ಕೇಳಿರಬಹುದು. ಹಾಗಾಗಿ ತೀರ್ಮಾನ ನಿಮ್ಮದೇ..

Friday, June 1, 2012

Hogenakal Falls

When i heard about the name "Hogenakal" i recalled the news about it for the wrong reasons. The border and water issues, the almost death of kannada film "Krishnan Love Story" hero and many others. One of my friend who had read the reviews about it also said that the place is not nice, costly, filled with voilent people, no proper food blaw blaw blaw.. But after i had been there , i really felt bad for hearing those news about such a marvellous place. We would have missed a relly wonderful day if we hadn't been there. Ok, let me come back to the original content about Hogenakal falls


Infront of "Cini Falls" in Hogenakal


Hogenakal Falls is located at around 180 Km frm Bangalore. You have KSRTC buses also to hogenakal. But they are rare .we saw only one bus during our travel to hogenakal. So its better to go in a Tata Sumo or Cab or Tempo Traveller. It not only saves your time and convienient but also helps to see the places on the way like Crocodile Park..(more on that a bit later)

View from the top-near the watch tower

It would be better if you leave for the place early. We planned to leave from Marathhalli(Bangalore) by 7:00. But we managed to leave by 7:30. Thanks to Bangalore traffice. The reason being,if you get late at the Tamil Nadu checkpost (after 8am), there will be huge queue of trucks and you may have to wait for more than 1 hr at check post.Meanwhile, u have to pay 1500 Rupees for the Traveller at the checkpost.For Tata Sumo it may be a bit less , but more or less the same. Its better have breakfast or carry it for the journey as you don't get good food one the way. If you start from Marathalli, it is Marathalli>SilkBoard>Elecronic City> Hosur. Then from Hosur, its 67 km to Hogenakal. Here is the road map.

When we reached hogenakal, it was almost afternoon. On the entrance to the falls, we found many policemen guarding the entrance. we found plenty of hotels also. But thought to feast the eyes first, then treat our stomach. If you like fish, its said to be at its best taste in Hogenakal. Don't worry veggies, it wont bore you too. Mangoes, churumuris, bhel puri and many others to pass time   throught ur journey to the foot of the falls and also in river !! :-) :-)

First, you have to get a boat to go to the foot of the falls. They charge you 150-160 per head or 900 per boat(In a boat 6 ppl). They also provide 2 life jackets per boat and the boats called "Teppa" in kannada are in good condition and no need to worry. They may  say more initially, but agree to this aound this rate.
From the place where you start, you have to get down at one place, from there the boatman takes you to the steep steps, from where real fun begins :-)



Initially you see the shooting spot of Film Roza. Then a big water fall. He takes you under the waterfall. That is really thrilling. (If you go in rainy season, all these things wil be covered by water. And they will show you some new wonders in another route). After that he showed us the making spot of Chandramouli(Chandramouli falls) and 2 more films, of that of hindi film Ashoka and an upcoming film "kashta pattu ishta patte" being released in 3 south indian languages. To learn the names of other films and see the spots, you have to be there only ! :-) :-)

moving to the foot of hogenakal falls


  • The more facinating thing about hogenakal is you can go to almost  foot of the falls in boat and enjoy the water splashing on you.
  • There will be vendors selling cocunts, biscuits, lays in their seperate boats!!
  • There is one photo studio "Shabari" just near the water falls


    Last one might be less fascinating although :P . Sometimes boatmen asks you whether he can swirl the boat. The swirling experience is also really good.Sometime he may give you the row to run the boat also(on request). You can enjoy like anything, but be a bit careful as always :) He also shows you the caves created by running waters in rainy season.
    In a burrow created by running waters

      After you see the initial falls, you will be taken near karnataka Tamil Nadu border. From there we got to know that u can come to this from the side of mysore also. If you go that side, u can enjoy the places like Male Mahadeshwara betta (at 45 km) and others. You have buses also that way. Near that place only there is a sand shore. At that shore, fish food will be prepared. If you want to enjoy, you can go there and enjoy that too


    After that we returned back to the place of steep steps. Near that only there is one more waterfall. U can enjoy that well. you have to cross the waters of waist length to get to that. There are crabs in the water!! But they are of no harm. You will feel like something is biting you if you stand at a place for a while. But no harm from them. And you wont find this also if you keep moving:-)

    After that the boat journey almost takes you back to the place you came from. On the way , you can see people getting oil massage. People believe that water here has medicinal values. So Oil, massage is in great demand. But, be careful anyways. After returning to the bank where we started, we thought to see the remaining falls. so we went ahead. Initially you get the seperate bath sections for men and wome. They too are like falls only. But we didnt go there. Went to the left of it. There you have a hanging Bridge. 5/head is the entry fee to cross that. From the top of the bridge you can see the running river at hundreads of feet down.
    View from Hanging Bridge of Hongenakal Falls


    After you cross the hanging bridge, you can see the Cini falls and then the mini falls. Both are good. You can enjoy many snaks and masla mango and other things on the way here. To bath in mini water falls, again entry fee of 5. We didn't go there and and rested on the rocks there itself. After resting for a while, we returned back to the place where we started. After seeing the falls, you can also enjoy shopping dolls and other things in the street. Ice creams, juices and others need not be mentioned !! As we ate many things near the falls, we were in no hurry to rush to nay hotel. So we came near our tempo.Then went to crocodile park

    Mini Falls-Hogenakal


    Crocodile Park
    It is located around 1.5 Km from Hogenakal falls. Its good. Entry fee is 1 Rs !! You can enjoy the views of many sleeping, walking crocodiles of different ages and sizes. When we entered, a goat was just fed into a cage of crocodiles.. The scene of crocodiles dissucting it and sharing among themselves.. caused nausea in some and interest in many. Then , after that we headed back to bangalore with nice memories of Hogenakal



     Note:One warning to the people with vomitting sensation in ghats. Hogenakal route has lot of curvings and many people get vomitting sensation. So you can rely on Arecanut, lemon or  moreover will power to overcome it :-) :-)