Wednesday, November 30, 2011

ಲಂಚ

ಅಲ್ಲಿ ಲಂಚ ಇಲ್ಲಿ ಲಂಚ ಎಲ್ಲೆಲ್ಲಿಯೂ ಲಂಚವೋ
ಅವರಿಗೆಲ್ಲಾ ಸೊಪ್ಪು ಹಾಕಿ
ಪರರ ಮೇಲೆ ತಪ್ಪ ಹಾಕಿ
ಮತ್ತೆ ಮುಚ್ಚಿ ಕಾಸ ಸುರಿವ
ಸತ್ಯ ಮರಕೆ ಸೀಸ ಎರೆವ
ಮತ್ತೆ ಅದನೆ ಸಾರುವಂತ
ಜನರ ನಡೆಯು ಶಾಶ್ವತ ? |೧|

ನಮ್ಮ ವಾಹನವನೆ ನಡೆಸೆ
ಸುರಿಯಬೇಕೆ ಸುಮ್ಮನಾಗಿ
ಧೈರ್ಯವಿದ್ರೆ ಮುಂದೆ ನುಗ್ಗು,ಕಾರ್ಯಸಾಧನೆ
ಅಂಜಿ ನೀನು ಅಡಗಿ ಕೂತ್ರೆ ಅದೇ ರೋದನೆ
ಕುಳಿತಲ್ಲಿಯೆ ಎಲ್ಲ ಬೇಕು ,ಬಿಸಿಲು ಬೇಡ
ಶ್ರಮವು ಬೇಡ, ಫಲವು ಬೇಕು ಇದ್ರೂ ಕೊರತೆ
ಇಂಥ ಹೊಂಡ ಮುಚ್ಚಿ ತುಂಬೆ ಕಣ್ಣುಮುಚ್ಚಿ
ತೆರೆವದ್ರೊಳಗೆ ತುಂಬಬೇಕಲ್ಲೊ ಅಣ್ಣ ಜೇಬು ಝಣಝಣ|೨|

ಸರಿಯಿಲ್ಲವೊ ಇಂದು ಗಣಕ
ಸಹಿ ಹಾಕಲು ಸಾಹೇಬ್ರಿಲ್ಲ
ಬೆಳಿಗ್ಗೆ ಬಾ, ಸಂಜೆ ಬಾ, ನಾಳೆ ಬಾ ಇದೇ ಗೋಳು
ಕೇಳಿ ಸಾಕಾಗಿದೆಯೆ ಮಾಡು ಒಮ್ಮೆ ಬೆಚ್ಚಗೆ
ಜಡಗಟ್ಟಿದ ಕಡತವೆಲ್ಲ ಸಾಗುವಂತೆ ಸರ್ರನೆ|೩|

ತಡೆಯೊ ಮನವೆ ತಣ್ಣಗಾಗೋ
ಇರುವ ಸಭ್ಯ ಜನರ ತಡಕು
ಒಬ್ಬ ಪಾಪಿ ಕಂಡನೆಂದು
ಇರುವರೆಲ್ಲಾ ಪಾಪಿಯೆ?
ಎಷ್ಟು ದಿನವೋ ಇವನ ಗೋಳು
ಕಷ್ಟವೆಂದು ಕೆಡದೆ ತಾಳು
ಬರುವುದೆಂದೊ ನಿನ್ನ ದಿನ ಅರಿಯೆನಲ್ಲೋ ನಾನು
ನಂಬಿ ನಡೆದ ಮಾರ್ಗವನ್ನು ಬಿಡದಿರುವುದೆ ಬಾಳು ? |೪|

ವಿಭಜನೆ

ಭಾಗ ಮಾಡಿ ಉತ್ತರ
ಛಿದ್ರ ಛಿದ್ರ ಪ್ರದೇಶ
ದೊಡ್ಡ ರಾಜ್ಯ ದೇಶದಲ್ಲೆ
ಎಂಬ ಹೆಸರೆ ವಿನಾಶ|೧|

ನಮಗೂ ಒಂದು ರಾಜ್ಯ ಬೇಕು
ಎಂಬ ಕೂಗು ನೆರೆಯಲಿ
ಕಾಣದಿರುವ ಕೈಗಳೆಷ್ಟೊ
ಕುಣಿಯತಿಹವು ತೆರೆಯಲಿ|೨|

ಬೆಂಕಿ ಹಚ್ಚು ರೈಲಿಗೆ, ಟೈರ ಸುಟ್ಟು ರೋಡಿಗೆ
ತೆರೆದ ಮಳಿಗೆಗಳನು ದೋಚು ಬಂದ್ ಎಂಬ ಹೆಸರಲಿ
ದಿನಗೂಲಿಯ ಜನಗಳೆಲ್ಲ ಮನೆಯ ಸೇರಿ ಮುರುಟುತಿಹರು
ಕೂಲಿ ಕಸಿದೆ ಪಾಪಿ ನೀನು ಕ್ರಾಂತಿಯೆಂಬ ಹೆಸರಲಿ|೩|

ಎಲ್ಲ ಶಾಂತಿ, ಸುಖದಿಂದಿರೆ
ನಿನಗದೇ ಅಶಾಂತಿಯು
ಅವರ ಮೇಲೆ ಇವರ ಕಟ್ಟಿ
ಇಲ್ಲದುದಕೆ ಭುಜವ ತಟ್ಟಿ
ಕತ್ತಿ, ಕೊಡಲಿ , ಮಚ್ಚ ಹಿಡಿದು
ನ್ಯಾಯವೆಂದು ಕೊಚ್ಚತೊಡಗಿ
ನಿನ್ನ ಪಾಪಕಡೆತಡೆಗಳ ತೆಗೆವೆ,ಜನರು ಗಡಗಡ|೪|

ಬೇಡವಣ್ಣ ವಿಭಜನೆ, ತಣ್ಣಗಿಹುದೆ ಸಾಧನೆ
ಸುದ್ದಿ ಬೇಕಾ? ಸೇವೆ ಮಾಡು
ಕಳೆವುದದು ವೇದನೆ
ಹೇಗೆ ಇಹೆವು ಹಾಗೆ ಬಿಡು
ಬೇಡ ನಿನ್ನ ಬೋಧನೆ
ಸಾಕಾಗಿದೆ ರೋಧನೆ|೫|

ನವಮಾಸದ ಐದನೆ ದಿನ

ನವಮಾಸದ ಐದನೆ ದಿನ ಸಂಭ್ರಮ
ಪೊರೆದ ಗುರುವ ನೆನೆವ ನಲಿವೆ ಅನುಪಮ
ಅವರ ಬಗೆಯೆ ನುಡಿಯು, ಚಿತ್ರ
ಬೋರ್ಡ ಮೇಲೆ ಗೋಡೆ ಮೇಲೆ
ನಗುನಗುತಾ ಒಳಬರಲು ಅವರ ಕರೆಯಲು
ಇಷ್ಟ ದಿನದ ಕಾಟಕೊಮ್ಮೆ ಕ್ಷಮೆಯ ಕೇಳಲು|೧|

ವಂದಿಸುವೆವು ಗುರುವರ್ಯ,ಸ್ವೀಕರಿಸೋ ಆಸನ
ಶಿಷ್ಯವೃಂದ ನೀಡುತಿರುವ ಅಲ್ಪ ಕಾಣಿಕೆ
ಖಾದ್ಯ, ಪೇಯ ಇಷ್ಟೆ ಗುರುವೆ ಕೊಡುವೆವಿಂದಿಗೆ
ಅಡ್ಡ ದಾರಿ ಮೆಟ್ಟಿ ಗುರುವೆ ಬೆನ್ನ ತಟ್ಟಿ ಗೆಲುವಿನಲ್ಲಿ
ನಮ್ಮ ಪೊರೆದ ಗುರುವೆ ಮತ್ತೆ ಕ್ಷಮಿಸೋ ತಪ್ಪನು
ನಿನ್ನ ಮಾತು ಕೇಳದಿದ್ದ, ಬಯ್ಯುವಂತೆ ಮಾಡುತಿದ್ದ
ಶಾಪ ಹಾಕುವಂತೆ ನಡೆದ ನಮ್ಮ ನಡೆಯನು
ಸರಿದಾರಿಗೆ ತಂದ ತಂದೆ ನುಡಿಯೊ ಹಿತವನು|೨|

ಗುರುವಿಗೆಂದು ಕ್ಷಣದಿ ಭಾವ
ನಮನ ಪೋಣಿಸಿಟ್ಟು ಗೆಳತಿ
ಅದನು ನಿನಗೆ ಹೇಳಲಾರೆನೆಂದು ನಾಚಿಸಿ
ಗೆಳೆಯನೊಬ್ಬ ಮುಂದೆ ಬಂದು ಅದನೆ ವಾಚಿಸಿ
ವಾಣಿ ಕೃಪೆಯ ಪಡೆದನಲ್ಲೋ ಅವನಿಗರಿಯದೆ
ಎಂದು ಬರೆಯದಾತ ಬರೆದ ಹಿಂದೆ ನೋಡದೆ
ನಿನ್ನ ಮಹಿಮೆ ಹೊಗಳಲೆನಗೆ ಪದವೆ ಸಾಲದೆ|೩|

ಇಷ್ಟು ಒಳ್ಳೆಯವರ ನಾವು
ಎಂದೇ ಆಶ್ಚರ್ಯ ನಮಗೆ
ಗುರುಗಳೇ, ಅಂದಿನ ನಿಮ್ಮ ಮಾತ ಕೇಳಿ
ನಿಮ್ಮ ಗುಣವ ಅರಿತೆವಂದೆ
ಕಣ್ಣ ಪೊರೆಯು ಹರಿಯಿತಂದೆ
ಕ್ಷಮಿಸಿ ನನ್ನ ಅಂದೆಯಲ್ಲೋ ಒದ್ದೆಯಾಯಿತು
ಕಣ್ಣಾಲೆಯು, ಕರವಸ್ತ್ರವು ಮುದ್ದೆಯಾಯಿತು
ಬರದ ನೀರು ಭಾವದಂತೆ ಉಕ್ಕಿಹೋಯಿತು|೪|

ಮರೆಯಲಾರೆ ಗುರುವೆ ನಿನ್ನ
ಎದುರಿಗಿರದೆ ಹೋದರೂ
ಮಿಂಚಿಸಾದ್ರೂ ತಲುಪಿಸುವೆನು
ಫಲಭೂಮಿಗೆ ಹಾರೈಕೆ
ಮಳೆರೂಪದಿ ಜೀವಕೆ|೫|

Tuesday, November 29, 2011

ನೆನಪುಗಳು

ನೆನಪುಗಳು ನೆನಪಾಗದವರಿಗಿಂತ
ನೆನಪೇ ನೆಪವಾಗಿ ನೇಪಥ್ಯಕೆ ಸರಿದವರಿಗಿಂತ
ನೆನಪುಗಳ ಮಳೆಯಲ್ಲಿ ನೆನೆದು ನಿರಾಕರಿಸಿದವರಿಗಿಂತ
ನಿಂತಲ್ಲೇ ನೆನಪಾಗೋ, ನಸುನಗುತಾ ಜೊತೆ ಸಾಗೋ
ಗೆಳೆಯರೇ ನೆನಪಾಗುವರಲ್ಲೋ ಮತ್ತೆ ಮತ್ತೆ||

ಇದ್ದರೂ ಸಾವಿರ ಅವರು
ಬರರೊಲ್ಲರು ನೆನೆದಾಗ
ಗೇಲಿಗೊಳಗಾದಾಗ ದುತ್ತೆಂದು
ಎಲ್ಲಿಂದಲೋ ಅವತರಿಸಿ ನಗುವರು
ಸೇರಿ ಗೇಲಿಸುವವರ ಗುಂಪ ಮತ್ತೆ||

ಗೋವಂತೆ ಮುಖ ಹಾಕಿ
ಹಾವಂತೆ ಕಚ್ಚುವರು
ಕಾಯ್ವ ದನ ಹುಲಿ ತಿಂದು
ಹಾಳಾದರೂ ಮರುಗದಿಹ ಗೊಲ್ಲರಿವರು
ಇದ್ದು ಉಪಯೋಗಿಲ್ಲ ಅಂಥ ಜನರು||

ಮರೆಯಲಿಹ ಸ್ನೇಹಿತನೆ

ತಬಲದಲಿ ಪಾಂಡಿತ್ಯ,
ನಾರಿ ನಾಚಿಸೊ ಕಂಠ
ಗಗನಕ್ಕೆ ಗುರಿ ಇಟ್ಟ ಆ ಚೆಲುವನು
ಒಮ್ಮೆಯೇ ಮರೆಯಾಗಿ ಎಲ್ಲೋದನು?|೧|

ಇರುವ ಸುದ್ದಿಯು ಬಂತು ಜೈನ ನಾಡಿಂದ
ಒಡನಾಡಿದಾ ಗೆಳೆಯ ಎತ್ತರಕೆ ಬೆಳೆದ
ಕಾಲ ಚಕ್ರವು ಉರುಳೆ ಮತ್ತೆ ಮರಳಿ
ಶುಭಕಾರ್ಯದಲಿ ಕಂಡು ಮತ್ತೆ ಮರೆಯಾದ|೨|

ಕಳೆದಿರುವ ಅವನನ್ನು ಹುಡುಕಿತೇ ಹೊತ್ತಿಗೆ?
ಅವ ಕಂಡ ಕನಸೆಲ್ಲಾ ನನಸಾಗೋ ಹೊತ್ತಿಗೆ
ಚಿತ್ರವೊಂದರ ದೃಶ್ಯ ನಿಜವಾಗಿ ಜೀವನದಿ
ಬಸ್ಸ ಚಕ್ರವು ಕಾಲ ಮೇಲೆ ಹರಿದೋಯ್ತು
ರಸ್ತೆಯಲಿ ಹೊಂಡವೋ ನುಣುಪಲ್ಲೊ ಆ ಕಾಲು?
ಎಲೆಯಂತ ನಮ್ಮ ಹಾರಿಸೋ ಕಾಲ ಗಾಳಿಗೆ
ಸಿಕ್ಕನೆಂಬೋ ಹೊತ್ತಿಗೇ ಮತ್ತೆ ಮರೆಯಾದ|೩|

ಕಳ್ಳನಲ್ಲವೊ ಆತ, ಪೋಲಿಸು ಮೊದಲಲ್ಲ
ಗೆಳೆಯನ ನ್ಯಾಯಕೆ ಕಟಕಟೆಯ ಏರಾತ
ಜೀವನದಿ ಎಷ್ಟೊಂದು ಏರಿಳತ ಕಂಡೂ
ಮನದ ಸ್ಥಿತ ಭಾವವನು, ನೋವಿನಲು ನಗುವನ್ನು
ಬಿಟ್ಟು ಕೊಡದೇ ನಡೆದ, ಸರಿಯಾಯ್ತು ಕಾಲು
ಏರಿಳಿತ ಮರೆತಿರುವ ಗೆಲುವೆ ಹೃದಯದ ಬಡಿತ
ಎಂದು ಗುರಿ ಕಡೆ ನಡೆದ ಅಂಥ ಸಾಧಕರಿಗೆ
ಮೆಚ್ಚುಗೆಗೂ ಮರೆಯಾಗಿ ಸೋಲನ್ನೆ ಹೊದ್ದುಂಡೂ
ಮುಂದೆ ತಣ್ಣಗೆ ಸಾಗೋ ಮೌನಿ ಸಾಧಕರಿಗೆ
ಮತ್ತೊಮ್ಮೆ ನಮನವೋ ನನ್ನ ಕಡೆಯಿಂದ|೪|
4V3E6ADGKJEA

Saturday, November 26, 2011

ಹೊದ್ದು ಮಲಗಿದ್ದೆನಾ

ಹೊದ್ದು ಮಲಗಿದ್ದೆನಾ ಎಂದಿನಂತೆ?
ಭದ್ರ ನನ್ನಯ ನಾಡು ಏಕೆ ಚಿಂತೆ
ಏನೋ ಸುರಿದಂತೆ ಸಪ್ಪಳಪು ಎಚ್ಚರಿಸಿ
ಹೊರಬಂದು ನೋಡಿದರೆ ಕಣ್ಣೀರಧಾರೆ
ಬಿಕ್ಕಿಹನೆ ವರುಣನೂ ಒಮ್ಮೆ ಮಿಡಿದು
ಮೂರು ವರ್ಷದ ಹಿಂದೆ ಸಾವ ನೆನೆದು|೧|

ಇಂದಿನಾ ದಿನದಲೇ ತಾಜನ್ನ ತೊಳೆದರು
ಗಾಜಂತೆ ಶುಭ್ರದ ಮನಗಳ ಒಡೆದರು
ಎಲ್ಲಿಂದ ತರಲಿ ನಾ ಆ ವೀರ ಯೋಧರ
ಬುದ್ಧಿಹೇಡಿಗಳೆದೆದುರು ಪ್ರಾಣ ತೆತ್ತವರ
ಅಂದಾದ್ರೂ ಸುರಿದಿದ್ರೆ ನನ್ನ ರೋಷವ ತೋರಿ
ಉಳಿಯುತಿತ್ತೇ ಪ್ರಾಣ , ಆ ಜೀವ ಹರಣ ? |೨|

ನಾನೆ ತೆಪ್ಪಗೆ ಇರುವೆ ನೀನಗೇಕೆ ಅಳು ಮಳೆಯೆ
ಸಾಯೊ ಜನರಿಹರೆಂದು ಪ್ರತಿನಿತ್ಯ ಅಳು ಸರಿಯೆ?
ಅಳು ಅವರಿಗಲ್ಲವೋ ನಾಳೆ ಕಾದಿಹ ನಿನಗೆ
ಪಕ್ಕದಲೆ ಹೊಕ್ಕಿರುವ ಹೊಂಚಿರುವ ಉಗ್ರರಿಗೆ
ಕಾಳೂ ಕಾಳಜಿಯಿಲ್ಲ ದೇಶಕ್ಕೆ ಜೀವ ನೀ
ಹೋಗಿರುವ ಅಣ್ಣನೇ ಮರೆತುಬಿಡೋ ಜನ್ಮ ನೀ|೩|

ಏಕೋ ನಿನಗೀ ಜನ್ಮ ಬಾಲ, ಅದು ಸಾಲ
ಇದು ಸಾಲ ಎಂದು ದೇಶವ ದೂರು
ಇಲ್ಲಿ ಸರಿಯಿಲ್ಲೆಂದು ಬೇರೆ ಕಡೆ ಹಾರು
ನಿನಗಾಗಿ ಸತ್ತವರು, ಸಾಯುತಿರುವರು ನೋಡ
ಗಡಿಯಲ್ಲಿ , ತಾಜಲ್ಲಿ, ಗುಂಡಿಗೆದೆಯೊಡ್ಡುತ್ತ
ಹಿಂದೆ ಹಾರುವ ಗುಂಡಿಗೂ ಗುಂಡಿಗೆಯ ಒಡ್ಡಿ
ಮೇಲೆತ್ತಿ ಹಿಡಿದಿಹರು ನಿನ್ನಂಥ ಬಂಡೆಗಳ
ದೇಶಪ್ರೇಮವೂ ಇಲ್ಲ, ಹನಿಯೂ ಕನಿಕರವಿಲ್ಲ
ನೆನೆಯೋ ಮತ್ತೊಮ್ಮೆ ಆ ಸೈನಿಕ
ಮರೆಯುದಿರು ರಕ್ಷಕನ ಕೊನೆಯ ತನಕ|೪|

Guest Column : Fear


- By Vandana Mogasale

Fear, is a common emotion that we experience in our day to day life. But when asked to define generally we call it as being afraid of some thing. But from the view point of psychology, if we are talking about fear, we must also speak about anxiety. But defining these two terminologies are also is a difficult task.

Historically, fear was regarded as an emotional experience experienced when posed by an obvious source of danger. And anxiety was just an anticipation of something dangerous or dreadful.

But the recent theories tell us that fear or panic is a basic emotion that involves ‘fight or flight’ response of the sympathetic nervous system, allowing us to respond quickly when faced by any threat. Fear has three components-
1.      cognitive/ subjective components ( I feel afraid)
2.      physiological components ( increased heart rate and so on)
3.      behavioral components ( a strong urge to escape)
On the other hand, anxiety is a complex blend of emotions that is much more diffuse than fear.
Now you must be wondering why I have to speak about anxiety when I am explaining about fear. In order to understand the disorders associated with fear, talking about anxiety becomes important.

In Abnormal Psychology, we consider fear to be a normal phenomenon. Everybody has one or the other kind of fear. But this fear becomes abnormal when the fear is persistent and irrational. And this kind of persistent and disproportionate fear of some object or situation which represents little or no danger to the person is called as “Phobia”.

The International Classification of Diseases and Related Health Problems (ICD-10) by World Health Organization has classified phobias as F40 Phobic anxiety disorders

Diagnostic and Statistical Manual of Mental Disorder (DSM-IV) by American Psychiatric Association classifies phobia under axis -I Anxiety Disorders. Yet again DSM-IV categorizes phobias into three types:

·         Simple or Specific phobia - Fear of a specific object like Bugs, mice, snakes, bats; heights; water; storms; closed places
·         Social phobia - Fear of social settings involving evaluation, embarrassment, looking foolish
·         Agoraphobia - Fear of being in public places.

Etiology or Causes:
Different theorists present different view points regarding the cause of phobia. According to Sigmund Freud’s Psycho Dynamic School, Phobias result from the un-displayed anxiety of our unconscious motives or desires that symbolizes these motives.

According to Behavioral School, Phobia is a learned or conditioned response. Children learn to fear objects by observation or imitation of the elders. If they are reinforced, then they are maintained.

Some biological findings show that the 1st degree relatives of the patients having phobia are at a higher risk (3- 4 times) of developing this disorder. A person may inherit fearful temperament through genetics. But it is yet to be proved whether children really inherit phobic response or imitate the behavior leant from parents.

Treatment
Use of psychotherapies coupled with drug therapy has yielded more effective results rather administered alone.

Psycho analytic therapy helps in lessening the internal conflicts as well as loosening defense mechanisms.
Behavior therapies are very widely used in the treatment of phobias and they are proved to be very effective. Cognitive Behavior Therapy, Relaxation Technique, Modeling and Systematic Desensitization are used. These techniques have yielded maximum number of success.

About author:  
 Vandana M.
Is a Pschyologist who did her Msc in Clinical  Pschyology. Now working as a lecturer in  CSC Mangalore

ರಜೆ ಮುಗಿಸಿ ಹೊರಟೆಯಾ ಓ ಸೈನಿಕ

ರಜೆ ಮುಗಿಸಿ ಹೊರಟೆಯಾ ಓ ಸೈನಿಕ
ಬರೆದಾಯ್ತು ನೋಡಿಲ್ಲಿ ಒಂದು ಕಡತ
ಉಣ್ಣೆ ಕೋಟನು ಕೇಳಿ ಒಬ್ಬ ಅಣ್ಣ
ಮಣಿಸರವ ತಾ ಎಂದು ಒಬ್ಬ ತಂಗಿ
ಎಂದು ಬಾರದ ದೊಡ್ಡಪ್ಪನೇ ಬಂದಿಹನು
ಶಂಖ ತಾ ನನಗೊಂದು ನೇಪಾಳದಿಂದೆಂದು|೧|


ನೆರೆಬೀದಿ ಅಕ್ಕಂದಿರೆಲ್ಲಾ ಒಗ್ಗಟ್ಟು
ರಾಜಸ್ಥಾನದ ಸೀರೆ ಬೇಕಂತೆ
ಸೈನ್ಯ ಸೇರಿದ ಸಮಯ
ಆಡಿ ನಕ್ಕವರೆಲ್ಲಾ ಇಂದು ಸೇರಿಹರಲ್ಲೊ
ಮನೆ ಬಾಗಿಲಿಗೆ ಬಂದು |೨|

ಮೂಲೆಯಲಿ ಕುಳಿತಿದ್ದ ನಿನ್ನೊಬ್ಬ ಮುದುಕಮ್ಮ
ಕಣ್ಣೀರು ಒರೆಸುತಾ ಅವಳ ಬಳಿ ಸಾರಿ
ನಿನಗೇನು ಬೇಕಮ್ಮಾ ಬರೆಯಲೇ ಇಲ್ಲ
ಓ ಬರೆಯಲೇ ತಿಳಿಯೊಲ್ಲ, ಬಾಯಲೇ ಹೇಳಮ್ಮ
ಹಾದಿ ಬೀದಿಗೆ ಎಲ್ಲ ತರುವ ಕರ್ಮವು ನನಗೆ
ನಿನ್ನ ಮರೆಯಲಿ ಹೇಗೆ ನೀನೆ ಹೇಳಮ್ಮ|೩|

ಮಗನ ಬಳಿ ಕೇಳಲಿ ಹೇಗೆಂಬ ಚಿಂತೆಯೇ?
ಕೇಜಿ ಕೇಸರಿ ತರಲೆ ಕಾಶ್ಮೀರದಿಂದ?
ತಂದು ಕೊಡಲೇ ಒಂದು ಜಯಪುರದ ಸೀರೆ?
ವಾರಣಾಸಿಗೆ ಹೋಗಿ ಒಂದು ಜಪ ಮಣಿಯ
ಅದೂ ಬೇಡವೆ ಹೋಗಲಿ ನೀನೆ ಹೇಳಮ್ಮ|೪|

ಎಷ್ಟು ನಿಸ್ವಾರ್ಥಿಯೋ ನನ್ನ ಮಗನೇ
ಪರೀಕ್ಷೆ ಕಟ್ಟಿದ್ದೆ ಅಣ್ಣನಾ ನಂಬಿ
ಹಾಲ್ಟಿಕೇಟ್ ಕಳಿಸಿದ್ದು ಹಿಂದಿನಾ ದಿನವಾತ
ಹೇಗೂ ರಜೆ ಪಡೆದು ಬಂದು ಬರೆದೆಯ ಕಂದ
ಪರೀಕ್ಷೆ ಪುಸ್ತಕವ ಕಳಿಸಲೇ ಮರೆತೋಯ್ತು
ಇದ್ದೊಬ್ಬ ತಂಗಿಗೆ ಊರೆಲ್ಲ ಹರಟೆ
ಅಲ್ಲೂ ಓದುವ ನಿನ್ನ ಆಸೆಗೆ ತಣ್ಣೀರು
ಎರಚುವ ಇಂಥ ಜನಕೇಕೆ ವ್ಯಥೆ ನಿನಗೆ?|೫|

ಸದಾ ಆಡಿದ ಜನರು ಬಂದು ನಿಂತಿಹರಿಂದು
ಸಭ್ಯತೆಯ ಸೋಗಿನಲಿ ದೋಚೊ ದುರ್ಭಾವದಲಿ
ನನಗೇನೂ ಬೇಕಿಲ್ಲ ಓ ನನ್ನ ಕಂದ
ಅನುಕ್ಷಣವು ನೆನಪಾಗುವಂತೆ ಗಡಿಯಾರ
ನಿನ್ನ ನೆನಪೇ ತರುವುದೆನಗೆ ಆನಂದ
ಎಲ್ಲಿ ಹೋದರೂ ನೀನು ಚೆನ್ನಾಗಿರೋ ಕಂದ
ನಿನ್ನಂತೆ ಎಲ್ಲ ಸೈನಿಕರು ಮಕ್ಕಳೆ ನನಗೆ
ಅವರ ಮಾತಲು ನಿನ್ನೇ ಕಾಣುವೆನು ನಾನು
ತಾಯಿ ಭಾರತಿ ಕರೆಯು ಹೊರಡಿನ್ನು ಕಂದ
ಬಿಡುವಾಗೆ ಕರೆಮಾಡು, ಮರೆಯದಿರು ಮಗನೆ|೬|

(ಚಿತ್ರ ಕೃಪೆ: ವಿಕಿಪೀಡಿಯ)

ಬಲೆಯ ಜೇಡ

ಹೊಸಕಿ ಹಾಕದಿರೆನ್ನ
ಬಲೆಯ ಜೇಡನು ಎಂದು
ದೇವರ ಗೂಡಿನಲೆ
ಬಲೆಯ ಕಟ್ಟುವೆನೆಂದು|೧|

ನೀನಿತ್ತ ಬೆಳಕಿಗೆ ಮರುಳಾದ ಕ್ರಿಮಿಕೀಟ
ಹಿಡಿದು ತಿನ್ನುವೆ ನಾನು ಅದು ಪಾಪವೇ?
ನಾ ಕಂಡ ಕನಸನ್ನು ಗುಡಿಸಿ ಹಾಕುವೆ ನೀನು
ನೆಲ ಹೊದ್ದ ಹೊರೆ ಧೂಳ ಬಿಟ್ಟು ಕಾಣುವೆ ನಾನು
ಬೇಸರಿಸೆ ಶಪಿಸಿದರೆ ಸಾಗದೆಲೊ ಬದುಕೆನಗೆ
ಮತ್ತೆ ಹೊಸ ಮೂಲೆಯಲಿ ಹೊಸೆವೆ ಹೊಸ ಬಲೆಯನ್ನು|೨|

ಬಿದ್ದರೂ ಎತ್ತರದಿ ಎದೆಯೊಡೆದು ಸಾಯೆ ನಾ
ಬರಿಯ ಹಿಡಿಯಿಂದಲೇ ಮರಣವೆನಗೆ
ಇಲ್ಲವೆಂದರೂ ನೀ ನನ್ನ ಅಸ್ತಿತ್ವವನೆ
ಮೂಲೆಯಲಿ ಬದುಕುವೆ ಹೀನ ಬದುಕ
ಹಲನೋವ ಜೀರ್ಣಿಸಿದ ನಗುವ ಬದುಕ|೩|

ಚಿತ್ರಕೃಪೆ : ಶಿಶಿರ್ ಎಸ್

Friday, November 25, 2011

ನಾಯಿ ಬಂದಿದೆಯಲ್ಲೋ

ನಾಯಿ ಬಂದಿದೆಯಲ್ಲೋ
ಮನೆ ಬಾಗಿಲಿಗೆ ಇಂದು
ಮೆಚ್ಚಿದರೆ ನನ್ನ ನಿಮ್ಮನೆ
ಕಾಯುವೆನು ಎಂದು|೧|

ಅಪರೂಪಕೊಮ್ಮೆ ನೆನಪಾದಾಗೊಮ್ಮೆ
ನಮ್ಮ ಬಳಿ ಬಂದು ಹಾಯೆನ್ನೊ ನಾಯಿ
ಕಳ್ಳನಿಗೆ ಕೂಗದೇ ಓಡೋಗಿ ಸಾಯಿ
ಅವನೆಸೆದ ರೊಟ್ಟಿಯಲಿ ಮರೆತೋಗೋ ಬಾಯಿ
ಅನ್ನವಿಕ್ಕೊಡೆಯನಿಗೆ ಗುರುಗುಟ್ಟೊ ನೀನು
ಮತ್ತೆ ನೆನಪಾಗಿಂದು ಮರಳಿ ಬಂದೆಯಾ ನಾಯಿ|೨|

ಮತ್ತೊಂದು ಹುಚ್ಚೆಂದು ನಿನ್ನ ನಂಬಿದ್ದೆ
ಹಲತೂತಿಗೊಶವಶವಾಗಿ ಹಾಳಾದೆಯಲ್ಲ
ಅಥವಾ ಹಾಗೆಯಾ ನೀನು ಎಂದರಿಯಲಿಲ್ಲ
ಹಲತರದ ನಾಟಕ, ಕಣ್ಣೀರು ಕಪಟ
ಎಲ್ಲ ಮನ ಗೆಲ್ಲಲೇ ನಿಂದೀ ಆಟ
ಯಾವ ಮುಖವಿಟ್ಟು ನೀ ಅದ ಮತ್ತೆ ಬೇಡುವೆ
ಅದರ ಬದಲೇಟೆ ನಿನಗೋಗಾಚೆ ನಾಯಿ|೩|

Thursday, November 24, 2011

Tricks for those who use mobile Internet for PC

Hello Friends,
I usually hear many friends complaining about mobile internet being deadly slow. Hello my dear friend, please don't compare mobile internet with Broad Band. But if i say it is possible to download movies, possible to group Chat in facebook using mobile internet, do u believe it ? I wil try to cover some of such tricks in this post.

1) Slow Speed of Connection

Although the speed of mobile internet can't be compared with that of broadband, it will be sufficient for general browsing, email , and believe me.. Even for taking online Exam !!!
But the fact is you have to choose proper service provider.

Generally Tata Docomo Internet is faster compared to all other GPRS 2G Internet providers as i have seen. U wil get around 25-30 Kbps max speed. It is the cheapest Internet plan you can get for a month. i.e 48 Rs per/month for 1 GB. But sometimes it wil get limited to 21 days. But 21 days is more than sufficient. Next plan is 2.5 GB/month @63 Rs. next is 4GB/month @95 Rs.There is 8GB plan also. but 4GB itself is more than enough :-) :-)

 But you may not get Docomo Network in all areas. Next in speed is Vodafone. Plan is also good in Docomo. You wil get 6 GB/month @98Rs. If you are in any village or any other area where you won't get above two networks, then go for BSNL.. I am not joking. 3rd in 2G speed is BSNL itself. Currently I am using BSNL GPRS internet itself :-) !! I used that itself to develop this blog :-)

I don't want to talk about other 2G GPRS providers Airtel, Aircel, Idea, Reliance. First thing is speed is slow and some hidden charges like only free for browsing, cost for downloading etc. Sometimes screen gets struck in some of those. Ofcourse you are lucky enough, You can get good service from those also .. but the chances are very rare & may be in only few areas. I saw many of my friends quitting those. So Told..   


2)Download Problem with mobile Internet

Another problem with mobile internet is that downloading. it will be around 10-15 kbps. Generally it will be sufficient to download e-mail attachment, attach files to email and send.. but not sufficient to download large PDFs, large Files, videos/Audios of larger size.  as the download speed is slow it will take long time. So connection will be timed out and you can't resume the download !!!!
What I am trying to say is that suppose you are downloading a PDF of size 17MB .it took around 10 or 15 minutes to download around 15 MB. Then you wil get error that connection is lost!!! alas.. what you downloaded is of no use now.. everthing is waste ..

So go for one of the Downloading softwares like Internet Download Manager(IDM). It has built in ad ons for You Tube Videos download etc. Installation is simple and no configuration as such.. Once u click download, that downloading task will be transferred to IDM. You can rest assured that downloading will be completed :-) !!!

I am not joking again..Many of the sites support resume capability. So u can pause your downloading task at any time and resume it later .. For any reasons like your mobile running out of battery or PC shutting down suddenly.. Downloading task will be paused automatically.:-) Cool na? It has also scheduling tasks like bit torrents, bit comets etc

3)Download Movies using Mobile Net
Sorry. I can't post that link and about Cracks in IDM here as it will be supporting piracy
These are some of the things I & my friend Shashi thought to post for the help of friends who are using mobile Internet for connecting to the PC and ask questions regarding that..

You and I must be thankful for my friend shashi who always shares info like this with me :-)

ಯಾರದೋ ಭಾವಗಳ

ಯಾರದೋ ಭಾವಗಳ
ಅಚ್ಚಲೆರೆಯಲು ಹೋದೆ
ಬೇಸತ್ತೆ ನೋವುಗಳ ಪದರೂಪಕಿಳಿಸಿ
ಪದರ ಹೊರತೇ ಕಂಡು ಮರೆತರೊಳಗಿಹುದ
ಸೋತಿರುವ ಕಂಠಗಳು ಹಾಡದಿಹ ಪದವ|1|


ಬೇಕೇ ಪರಕಾಯ ಜನರ ಮೆಚ್ಚಿಸಲು
ಸಾಕಲ್ಲ ನಿನ್ನತನ ಹಲರೂಪ ಕೊಡಲು
ಬರಿಮಣ್ಣೆ ಸಾಕಲ್ಲ ಸಿರಿಗೌರಿಗಳ ಮಾಡೆ
ಎಲ್ಲ ಕೈಮುಗಿವಂತ ದೇವಿಯರ ನೀಡೆ|2|


ಏನೋ ಆಗಲು ಹೋಗಿ ನಿನ್ನತನ ಕಳೆದೆ
ಮತ್ತದೇ ಧಾಟಿಗಳ, ಅಸ್ಪಷ್ಟ ನೋಟಗಳ
ಅನುಕರಣೆ ರೋಗವ,ಅನುರಣಿಸೊ ರಾಗವ
ಬಿಟ್ಟು ಸಾಗಲು ಮುಂದೆ ಕುಂಟನಾದೆ|3|

ಕತ್ತು ಹಿಸುಕುವೆಯಾಕೆ

ಕತ್ತು ಹಿಸುಕುವೆಯಾಕೆ
ಮೂಕನರಗಿಣಿ ನಾನು
ಅವನ ಮಾತನು ಕಿತ್ತೆ
ನನ್ನೂ ಬಿಡೆಯಾ?
ನನ್ನ ಪಾಡಿಗೆ ಗೀತೆ
ಹಾಡಬಿಡೆಯಾ?||

ಸಾಧಕನು ನೀನು, ಉದ್ದನೆಯ ಬಾಲಕ್ಕೆ
ಕೊಚ್ಚಿರುವ ಬಳಗಕ್ಕೆ, ಸಮಮನಸ ಸರಸಕ್ಕೆ
ಪ್ರಿಯ ಪ್ರಿಯೆಯ ಬಣಿಸೋಕೆ, ಎಳೆಬಾಲರೊಲಿಸೋಕೆ
ನಿನ್ನ ರಾಗವ ಬಿಟ್ಟು ಹಾಡಿಹೆನು ನಾನೆಂದು
ಜೀವತೆಗೆಯಲು ಹಲವು ದ್ವೇಷ ಹೊಂದು
ಇಲ್ಲದಿಹ ನೂರೆಂಟು ದೋಷ ತಂದು||

ಸಾಲದೆಂದೆಯಾ ಜನ್ಮ ನೀನು ಬರೆದಿದ್ದೋದೆ?
ಯಾರಿಗೂ ಬೀಳದಿಹ ಕನಸುಗಳಲಿಳಿಯೆ
ದ್ವೇಷಿಸಿಹೆ, ಕೊಲ್ಲಿಸಿಹೆ ಸುತ್ತಲಿನ ಎಳೆಮೊಳಕೆ
ಮರವಾಗಬಹುದೆಂದು ಕುದಿನೀರ ಹೊಯ್ದೆ
ಆ ಮರವು ಅಲ್ಲ ನಾ, ಹೆದರೊ ಮನುಜನು ಅಲ್ಲ
ಸಾಕೆಂದು ಹಾರುತಿಹೆ ನಿನ್ನ ಸಹವಾಸ
ಪರದೇಶಿ ಮೂಗನಿಗೆ ಮತ್ತೆ ವನವಾಸ||

Tuesday, November 22, 2011

ಹೊಸಗುಂದ ದೇವಸ್ಥಾನದ ಕಾರ್ತೀಕ

ಹೊಸಗುಂದ ಶ್ರೀ ಉಮಾಮಹೇಶ್ವರ ದೇವರು
ಕಾಲುದೀಪಗಳ ಬೆಳಕಲ್ಲಿ
ಶಿವಮೊಗ್ಗದಿಂದ ಸಾಗರಕ್ಕೆ ಬರುವವರು ಹೊಸಗುಂದ ದೇವಸ್ಥಾನ ಎಂಬ ಫಲಕ ನೋಡಿರಬಹುದು. ಅಲ್ಲಿ ಹಿಂದೆ ಹೊಯ್ಸಳರ ಕಾಲದ ದೇವಸ್ಥಾನಗಳಿತ್ತಂತೆ. ಅದೆಲ್ಲಾ ಮುರಿದು ಬಿದ್ದು ಹರಡಿಹೋಗಿತ್ತು ಇತ್ತೀಚಿನ ವರ್ಷಗಳಲ್ಲಿ. ಕಾಡಲ್ಲಿ ಹರಡಿಹೋಗಿದ್ದ ಅವುಗಳನ್ನೆಲ್ಲಾ ಈಗ ಬಾಲಗ್ರಹ ಅಥವಾ ಬಾಲಾಲಯದಲ್ಲಿ ಸ್ಥಾಪಿಸಿ(ದೇವಾಲಯ ಜೀರ್ಣೋದ್ದಾರವಾಗುವ ತನಕ ಮೂರ್ತಿಯನ್ನಿಡುವ ತಾತ್ಕಾಲಿಕ ಗುಡಿ) ದೇಗುಲಗಳ ಜೀರ್ಣೋದ್ದಾರ ಕೆಲಸ ನಡೆಯುತ್ತಿದೆ. ಅಂದಿನ ಶಿಲ್ಪಕಲೆಯ ಸೊಬಗನ್ನು, ಮೂಲಿಕಾವನ ವನ್ನು ನೋಡಲು, ಎರಡಾಳೆತ್ತರದ ಮಾಸ್ತಿಕಲ್ಲುಗಳನ್ನು, ಕರ್ನಾಟಕದಲ್ಲಿ ಎಲ್ಲೂ ಇಲ್ಲದ "ಲಕ್ಷ್ಮೀ ಗಣೇಶ" ನನ್ನು ನೋಡಲು ಹೊಸಗುಂದಕ್ಕೆ ಭೇಟಿ ನೀಡಬಹುದು. ಅಲ್ಲಿಗೆ ಹೋದ ನನ್ನನುಭವವನ್ನು ಪದರೂಪದಲ್ಲಿಳಿಸುವ ಪ್ರಯತ್ನ ನಡೆಸಿದ್ದೇನೆ. ಓದಿ.

ಶ್ರೀ ವೀರಭದ್ರ ದೇವರು
ಇತಿಹಾಸ:
ಕೇರಳದ ರಾಜನೊಬ್ಬ ಈ ಭಾಗಕ್ಕೆ ಬಂದಾಗ ಆತನಿಗೆ ಲಕ್ಷ್ಮೀ ವಿಗ್ರಹದೊಂದಿಗೆ ಗಣಪತಿಯ ವಿಗ್ರಹ ದೊರಕಿತಂತೆ. ಆದ್ದರಿಂದ ಆ ಗಣಪತಿಗೆ ಲಕ್ಷ್ಮೀ ಗಣಪತಿ ಎಂಬ ಹೆಸರು ಬಂದಿತು, ಈ ತರಹದ ಲಕ್ಷ್ಮೀ ಗಣಪತಿಗಳು ಕೇರಳದಲ್ಲಿದೆ, ಆದರೆ ಕರ್ನಾಟಕದಲ್ಲಿರುವುದು ಇದೊಂದೇ ಎಂದು ಅಲ್ಲಿನ ಅರ್ಚಕರು ತಿಳಿಸುತ್ತಾರೆ. ಸಾಂತರಸರು ( ಹೊಯ್ಸಳರು ) ತದನಂತರ ಇಲ್ಲಿ ಹಲವು ದೇವಸ್ಥಾನಗಳನ್ನು ಕಟ್ಟಿಸಿದರಂತೆ. ಅದರಲ್ಲಿ ಮುಖ್ಯವಾದುದು ಉಮಾಮಹೇಶ್ವರಿ ದೇವಸ್ಥಾನ. ಅದಲ್ಲದೇ ವೀರಭದ್ರ, ಸುಭ್ರಮಣ್ಯ, ಪ್ರಸನ್ನನಾಥ, ಚೌಡೇಶ್ವರಿ ದೇಗುಲಗಳೂ ಇವೆ.

ಹೋಗುವ ಮಾರ್ಗ:
ಹೊಸಗುಂದ ದೇವಸ್ಥಾನವು ಸಾಗರದಿಂದ ಸುಮಾರು ಹದಿನೇಳು ಕಿ.ಮೀ ದೂರದಲ್ಲಿದೆ. ದೇವಸ್ಥಾನದವರೆಗೂ ಬಸ್ ಹೋಗುವುದಿಲ್ಲ. ಹೊಸಗುಂದ ಕ್ರಾಸಿನಲ್ಲಿ ಇಳಿದರೆ ಸುಮಾರು ಮೂರು ಕಿ.ಮೀ ನಡೆದು ಹೋಗಬೇಕಾಗುತ್ತದೆ.



ಶ್ರೀ ಚೌಡೇಶ್ವರಿ ದೇವಿ
ಹೊಸಗುಂದಕ್ಕೆ ಹೋಗಬೇಕೆಂಬ ಬಹುದಿನಗಳ ಬಯಕೆ ಈಡೇರುತ್ತಲೇ ಇರಲಿಲ್ಲ. ಅಲ್ಲಿ ಇತ್ತೀಚೆಗೆ ಮೂಲಿಕವನ ಅಭಿವೃದ್ಧಿ ನಡೆಯುತ್ತಿರುವುದು, ಅಲ್ಲಿಗೆ ಪರಿಸರ ಸಂರಕ್ಷಣೆಗಾರರಾದ ಅನಂತ ಹೆಗಡೆ ಆಶೀಸರ ಮೊದಲಾದವರು ಬಂದಿದ್ದು, ಮಠದ ಸ್ವಾಮೀಜಿ ಬಂದಿದ್ದು ಹೀಗೆ ಪತ್ರಿಕೆಗಳಲ್ಲಿ ಪ್ರತೀ ಬಾರಿ ಸುದ್ದಿಯಾದಾಗಲೂ ಅಲ್ಲಿಗೆ ಹೋಗುವ ಆಸೆ ಉಮ್ಮಳಿಸುತ್ತಿತ್ತು. ದೂರದಿಂದ ಬಂದಿದ್ದ ನನ್ನಣ್ಣ ಹೊಸಗುಂದದ ಕಾರ್ತೀಕ ದೀಪೋತ್ಸವಕ್ಕೆ ಹೋಗುವ ಮಾತು ಹೇಳಿದಾಗ ವಿಪರೀತ ಖುಷಿಯಾಗಿ ತಕ್ಷಣ ಒಪ್ಪಿದೆ. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಅಂದಗಾಯ್ತು :-)



ಅಲ್ಲಿ ತಲುಪುವ ದಾರಿಯಲ್ಲೇ ಅಭಿವೃದ್ದಿ ಪಡಿಸುತ್ತಿರುವ ಕೆರೆಯೊಂದು ಕಾಣಿಸುತ್ತದೆ. ಹಿಂದೊಮ್ಮೆ ಅದೊಂದು ಪುಷ್ಕರಿಣೆ ಇದ್ದಿರಬಹುದೇನೋ. ಆದರೆ ಕಾಲಕ್ರಮೇಣ ಮುಚ್ಚಿ ನೀರಿನ ಹೊಂಡವಿತ್ತಂತೆ. ಆದರೆ ಅದನ್ನೀಗ ವಿಶಾಲವಾಗಿ ತೋಡಿಸಿ, ಸುತ್ತಲೂ ಇಳಿಯಲು ಮೆಟ್ಟಿಲುಗಲನ್ನಿಟ್ಟು ಚೆನ್ನಾಗಿ ಅಭಿವೃದ್ದಿ ಪಡಿಸಲಾಗಿದೆ. ಹಾಗೇ ಮುಂದೆ ಸಾಗಿದ ನಾವು ಬಾಲಾಲಯದಲ್ಲಿಟ್ಟಿದ್ದ ಸಾಲು ದೇವರನ್ನು ನೋಡಿದೆವು. ಕಾರ್ತೀಕದ ತಯಾರಿ ನಡೆಯುತ್ತಿತ್ತು.



ದೊಡ್ಡ ದೊಡ್ಡ ರಂಗೋಲಿಗಳು. ಅದರ ಮೇಲಿಟ್ಟಿದ್ದ ಹಣತೆಗಳನ್ನು ಹಚ್ಚುವ ಕೆಲಸ ಶುರುವಾಯಿತು. ಎತ್ತರದ ಕಾಲುದೀಪಗಳು, ಹಣತೆಗಳ ಬೆಳಕಿನಲ್ಲಿ ಇಡೀ ವಾತಾವರಣವೇ ಬಂಗಾರದ ಬಣ್ಣದಲ್ಲಿ ಹೊಳೆಯುತ್ತಿತ್ತು. ಆ ಬೆಳಕಲ್ಲಿ ದೇವರನ್ನು ನೋಡಿದಾನುಭವ ವರ್ಣಿಸಲಸದಳ. ಉಮಾಮಹೇಶ್ವರನೂ ಅವನೆದುರಿಗಿದ್ದ ನಂದಿಯೂ ಬಂಗಾರದ ಹಾಳೆಯಲ್ಲೇ ಮಾಡಿಹುದೇನೋ ಎಂಬಂತೆ ಹೊಳೆಯುತ್ತಿದ್ದವು, ಈ ಹಣತೆಗಳ ಹೊಂಬೆಳಕಿಗೆ. ಆಮೇಲೇ ದೇವಸ್ಥಾನದ ಸುತ್ತಲೂ, ಪಕ್ಕಲಿದ್ದ ತುಳಸಿ ಕಟ್ಟೆ, ಸಪ್ತ ಮಾತೃಕೆಯರ ಕಟ್ಟೆ, ಹತ್ತಿರದ ಗೋಡೆಗಳು.. ಹೀಗೆ ಎಲ್ಲೆಲ್ಲೂ ದೀಪಗಳನ್ನಿಟ್ಟು ಹಚ್ಚಲಾಯಿತು. ಎಲ್ಲಿ ನೋಡಿದರೂ ದೀಪಗಳ ಜಗಮಗ





ದೀಪಗಳ ಬೆಳಕಲ್ಲದೇ ಅಲ್ಲಿ ಇನ್ನೊಂದು ವಿಶೇಷ. ಪಶುವೈದ್ಯಕೀಯ ಶಾಸ್ತ್ರವನ್ನೋದಿದ ನನ್ನಣ್ಣ ನಂತರ ಔಷಧಿ ಶಾಸ್ತ್ರದಲ್ಲಿ ಪಿಎಚ್ಡಿ ಪಡೆದು ಸದ್ಯ ಅಮೇರಿಕಾದ ಸಿಯಾಟಿಲ್ನಲ್ಲಿದ್ದಾನೆ. ಆತ ಉತ್ತಮ ಕೊಳಲು ವಾದಕ !!ಅಂದು ಆತನಿಗೆ ಶ್ರೀ ಗಣಪತಿಯ ಸಮ್ಮುಖದಲ್ಲಿ ವೇಣುವಾದನದ ಯೋಗ ಸಿಕ್ಕಿದ್ದು ಆತನಿಗಷ್ಟೇ ಅಲ್ಲದೆ ನಮಗೂ ಅತೀವ ಸಂತಸ ತಂದಿತು. ವಾಸಂತಿ, ರಾಗಮಾಲಿಕ ಹೀಗೆ ನಾಲ್ಕೈದು ರಾಗಗಳನ್ನು ನುಡಿಸಿದ. ಅದಕ್ಕೆ ಅವಕಾಶ ಕಲ್ಪಿಸಿ ಅಲ್ಲಿ ವೇಣು ವಾದನದ ಮಾಧುರ್ಯವೂ ತುಂಬಲು ಕಾರಣರಾದ ಅಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಿಎಮ್ಮೆನ್ ಶಾಸ್ತ್ರಿಗಳಿಗೆ , ಚಿನ್ಮಯ ಅವರಿಗೆ ಋಣಿ ನಾನು.




ಎಲ್ಲೆಡೆ ಜಗಮಗಿಸುತ್ತಿದ್ದ ಬೆಳಕಿನ ನಡುವೆ ದೇವರಿಗೆ ಮಹಾಮಂಗಳಾರತಿ. ಎಷ್ಟು ಜನ ಸೇರಿದ್ದರೆಂದರೆ ನಮಗೆ ದೇವರೆದುರು ನಿಲ್ಲಲೇ ಆಗಲಿಲ್ಲ. ಈ ಕಡೆ ಮೂಲೆ, ಆ ಕಡೆ ಮೂಲೆಯಲ್ಲಿ ನೆರೆದಿದ್ದ ಜನರಂತೆಯೇ ನಾವೂ ಒಂದು ಮೂಲೆ ಸೇರಿ ಕಣ್ಣು ಮುಚ್ಚಿ ಪ್ರಾರ್ಥಿಸತೊಡಗಿದೆವು.ದೇವಕಾರ್ಯ, ತೀರ್ಥ ಪಡೆದ ಮೇಲೆ ಮತ್ತೊಂದು ಅಚ್ಚರಿ. ನನ್ನಣ್ಣನಿಗೆ ಅಲ್ಲಿನವರ ಸನ್ಮಾನ :-) . ಸಾಗರ ತಾಲೂಕಿನ ತಹಶೀಲ್ದಾರರಾದ ಶ್ರೀ ಯೋಗೀಶ್ ರವರಿಂದ ಸನ್ಮಾನ. ಅದರ ಫೋಟೋ ಕ್ಲಿಕ್ಕಿಸುವುದು, ಅನಿರೀಕ್ಷಿತವಾಗಿ ಆ ಸಂದರ್ಭದಲ್ಲಿ ಭಾಗಿಯಾಗಿದ್ದು ನನಗೂ ಖುಷಿ ನೀಡಿತು :-)




ನಂತರ ಪ್ರಸಾದ ವಿತರಣೆ ಎದುರಿಗಿದ್ದ ಭೋಜನಶಾಲೆಯಲ್ಲಿ ನಡೆಯುತ್ತಿತ್ತು. ಅದಕ್ಕೆ ಹತ್ತುವ ದಾರಿಯಲ್ಲೇ ನಮ್ಮ ಕಣ್ಣು ಸೆಳೆದಿದ್ದು ಮೂರು ಬೃಹತ್ ಶಿಲಾಶಾಸನಗಳು. ಸುಮಾರು ಹತ್ತಡಿಯಷ್ಟು ಎತ್ತರವಿರಬಹುದೇನೋ. ಅಥವಾ ಅದಕ್ಕಿಂತ ಹೆಚ್ಚೇ ಇರಬಹುದೇನೋ. ಅಷ್ಟು ದೊಡ್ಡ ಶಿಲಾಶಾಸನವನ್ನಾಗಲೀ, ಮಾಸ್ತಿ ಕಲ್ಲನಾಗಲಿ ನಾನು ಈ ಮುಂಚೆ ಎಲ್ಲೂ ನೋಡಿದ್ದಿಲ್ಲ.








ಅಲ್ಲಿ ನೋಡಿದ ನಂತರ ನಾವು ಉಮಾಮಹೇಶ್ವರ ದೇವರ ಮೂಲ ದೇಗುಲದತ್ತ ಸಾಗಿದೆವು.
ದೀಪಗಳ ಬೆಳಕಿನಲ್ಲಿ ಅದನ್ನು ನೋಡುವುದೇ ನಮ್ಮ ಕಣ್ಣುಗಳಿಗೊಂದು ಹಬ್ಬವಾಗಿತ್ತು. ಎಂದೂ ಸಂಜೆಯ ದೀಪದ ಹೊಂಬಳಕಲ್ಲಿ ಪುರಾತನ ದೇವಾಲಯವನ್ನು ನೋಡಿದವನಲ್ಲ ನಾನು. ಕರೆಂಟು ದೀಪದಲ್ಲಿ ನೋಡುವುದಕ್ಕೂ ಹಣತೆಯ ಬೆಳಕಿನಲ್ಲಿ ನೋಡುವುದಕ್ಕೂ ಅಜಗಜಾಂತರ ವ್ಯತ್ಯಾಸವಲ್ಲವೇ. ಈ ಸವಿಯನ್ನು ಸವಿಯಲು ಒಬ್ಬ ವಿದೇಶಿ ಮಹಿಳೆಯೂ ಅಂದು ಅಲ್ಲಿಗೆ ಬಂದಿದ್ದರು !!

ಉರುಳಿಬಿದ್ದಿದ್ದ ಕಲ್ಲುಗಳನ್ನೆಲ್ಲಾ ಅದರ ನಕ್ಷೆಯಲ್ಲಿದ್ದಂತೆಯೇ ಗುರುತು ಮಾಡಿ(ಪ್ರತಿಯೊಂದಕ್ಕೂ ಒಂದೊಂದು ಸಂಖ್ಯೆ ಕೊಟ್ಟು) ಈಗ ಮತ್ತೆ ಮುಂಚಿನಂತೆಯೇ ಜೋಡಿಸಿ ನಿಲ್ಲಿಸಲಾಗಿದೆ. ದೀಪದ ಬೆಳಕಿನಲ್ಲಿಯೇ ಅಷ್ಟು ಸೊಗಸಾಗಿ ಕಂಡ ಆ ಪುರಾತನ ದೇಗುಲ ಇನ್ನು ಹಗಲು ಹೊತ್ತಿನಲ್ಲಿ ಎಷ್ಟು ಸುಂದರವಾಗಿ ಕಾಣಬಹುದೆಂದು ಯೋಚಿಸಿ. ಅಲ್ಲೇ ಹತ್ತಿರದಲ್ಲೇ ಚೂಡೇಶ್ವರಿ ದೇವತೆಯನ್ನು ಪ್ರತಿಷ್ಟಾಪಿಸುವ ಗುಡಿಯನ್ನು ನೋಡಿದೆವು.





ಶ್ರೀ ಲಕ್ಷ್ಮೀ ಗಣಪತಿ

 ಇನ್ನುಳಿದವು ಅಲ್ಲೇ ಸ್ವಲ್ಪ ದೂರವಂತೆ. ಅಲ್ಲೇ ಮಾರ್ಗಸೂಚಿಯನ್ನೂ, ಉದ್ದೇಶಿತ ಕಟ್ಟಡಗಳ ಛಾಯ ಚಿತ್ರವನ್ನೂ ಹಾಕಿದ್ದಾರೆ. ನೀವು ಮುಂದಿನ ಬಾರಿ ಹೋಗುವ ವೇಳೆಗೆ ಅವುಗಳಲ್ಲಿ ಹಲವು ಪೂರ್ಣಗೊಂಡಿರಬಹುದು. ಹಿಂದಿನ ಬಾರಿ ಸೌಂದರ್ಯವಿದ್ದೂ ಹಾಳಾಗುತ್ತಿರುವ ದೇಗುಲವೊಂದರ ಬಗ್ಗೆ ಬರೆದಿದ್ದೆ. ಈ ಬಾರಿ ಅದೇ ಹೊಯ್ಸಳರ ಕಾಲದ ದೇಗುಲ ಜೀರ್ಣೋದ್ದಾರವಾಗುತ್ತಿರುವುದನ್ನು ಕಂಡು ಬರೆಯಲು ಅತೀವ ಸಂತೋಷವಾಗುತ್ತಿದೆ.

ಅಂದ ಹಾಗೆ ಅಲ್ಲಿನ ಪೂಜಾ ಸಮಯಗಳು ಬೆಳಿಗ್ಗೆ ೬:೩೦-೮:೩೦ , ಮಧ್ಯಾಹ್ನ ೧೧:೩೦-೧, ಸಂಜೆ ೫-೭. ನಿಮ್ಮದೇ ವಾಹನದ ಸೌಕರ್ಯವಿದ್ದರೆ ಉತ್ತಮ. ಮೂಲಿಕಾವನದಲ್ಲಿನ ಪ್ರತೀ ಸಸ್ಯದ ಕನ್ನಡ ಮತ್ತದರ ಸಸ್ಯಶಾಸ್ತ್ರೀಯ ಹೆಸರುಗಳನ್ನೂ ನೋಡಿ ಆನಂದಿಸಬಹುದು.

Monday, November 21, 2011

ಬೇಸರದ ಭಾವಗಳು


ಹಾಡಲೆಂಬತಿಯಾಸೆ ಹೋಗಿ ಕೇಳಿತು ಗುರುವ
ಸದ್ಗುರುವೆ ಎನಗೊಂದು ಸ್ವರವ ನೀಡಿ
ಧ್ವನಿಯೆ ಇಲ್ಲವೊ ನಿನಗೆ ಹೋಗಾಚೆಗೆ
ಇದ ಕೇಳಿದಾ ಬಾಲ ಬೇಸರಿಸಿ ಸರಿಹೋದ
ಬರಹದಲಿ ಗುರಿಯರಸಿ ಕಳೆದುಹೋದ
ಇಂದೆನ್ನ ಕಾಡಿಹುದು ಮತ್ತದೇ ಪ್ರಶ್ನೆ
ಸಿಗುವುದೇ ಸ್ವರವವಗೆ ಲಿಪಿಯಾಚೆಗೆ?||

ಎಂದು ಬಾರದ ನರಿಗಳಿಂದು ಬಂದಿವೆಯೆಂದು
ಹಿಂದು ಮುಂದರಿಯದೇ ನಲಿಯಬೇಡ
ಮೋಸಗಳ ಮುಖವಾಡದಿಂದಿರುವ ಮೊಗ ಮರೆತು
ಮನದ ಬಾಗಿಲ ತೆರೆದು ಬೆರೆಯೆಬೇಡ
ಸತ್ತ ಜೀವವ ನೋಡಿ ಸಾಂತ್ವನಕೆ ಬಂದಿಹರೆ?
ಕರಗದಿರು ಇವರು ಬಂದಿಹುದು ಹಣಕೆ
ನಂಬಿದರೆ ಆರುವುದು ಇರುವ ಹಣತೆ||

 ಹೇಳಲಾಗದ ಹೇಡಿ ಕವನಗಳ ಗೀಚಿಹನು
ಎಂದೆಯಾ ನೀ ಪ್ರಿಯೆ ಮರೆಗೆ ಸರಿಯುವ ಮುನ್ನ
ಬುದ್ದಿಯಲ್ಲವೇ ಎನಗೆ ಒದ್ದರೂ ಬಿದ್ದಿರುವೆ
ನಲ್ಲೆ ನೀ ಒಂದು ದಿನ ಬದಲಾಗೋ ಬಯಕೆಯಲಿ
ಬರೆಯಲ್ಯಾಕಿನ್ನು ನಾ ಮನಸರಿಯದಾಕೆಗೆ
ಪ್ರತಿವಿಷಯದಲೂ ತಪ್ಪೆ ಹಿಡಿವಾಕೆಗೆ?
ಬೊಮ್ಮ ಬರೆದಿಹನಂತೆ ನನಗಾವ ಸಖಿಯನ್ನು
ಕುರುಡಿಯೋ,ಕುಂಟಿಯೋ ಸರಿಹೊಂದೊ ಸತಿಯನ್ನು
ನಿನ್ನ ನೆನಪಲೆ ಸಾಯಲೆನಗೆ ಮರುಳೆ?||

ಸಪ್ಪೆಯಾಗಿಹುದಲ್ಲೋ ನಿನ್ನ ಇಂದಿನ ಬರಹ
ಉಪ್ಪು ಖಾರವೆ ಇರದ ಚಟ್ನಿಯಂತೆ
ನೆತ್ತಿಗೇರಿತೆ ಸೊಕ್ಕು ಮತ್ತಿನಂತೆ?
ಮನ್ನಿಸೋ ಗುರುವರ್ಯ, ಹುಡುಕಾಡುತಿರುವೆನು
ಕಳೆದಿರುವ ಅಸ್ಮಿತೆಯ ಹುಚ್ಚನಂತೆ|

|ಕಳೆದುಹೋಯಿತೇಕೆ ಕವನ
ನುಚ್ಚು ನೂರು ಭಾವನೆ
ಸಿಕ್ಕಲಿಲ್ಲ ಯಶವು ಎಂದು
ನಿನಗೆ ಏಕೆ ವೇದನೆ?
ಜೊಳ್ಳೊ ಕಾಳೊ ಮರುಗಬೇಡ
ಬರೆವದೊಂದೆ ಕೆಲಸ ನಿನಗೆ
ಮೆಚ್ಚೊ ಚುಚ್ಚೊ ಕೆಲಸವವಗೆ
ನಿಲ್ಲದಿರಲಿ ಸಾಧನೆ ||

Sunday, November 20, 2011

ಕಲಸೆ (ನಾಡಕಲಸಿ) ದೇವಸ್ಥಾನ

ಸಾಗರ ತಾಲೂಕಿನ ಇತಿಹಾಸ ಪ್ರಸಿದ್ದ ದೇವಸ್ಥಾನಗಳಲ್ಲಿ ಕಲಸೆ, ನಾಡಕಲಸಿಯೂ ಒಂದು. ಸಾಗರದವನಾಗಿಯೂ ಅದನ್ನು ನೋಡಲಾಗಿರದ ಬಗ್ಗೆ ಸ್ವಲ್ಪ ಬೇಸರವಿತ್ತು. ಬೆಳಗ್ಗೆ ೮ಕ್ಕೆ, ಮಧ್ಯಾಹ್ನ ಒಂದಕ್ಕೆ ಮಾತ್ರ ಅಲ್ಲಿಗೆ ಬಸ್ಸಿನ ಸೌಕರ್ಯವಿದೆ ಎಂಬ ಗೆಳೆಯರ ಮಾತೂ ನೋಡದಿರುವುದಕ್ಕೊಂದು ಪಿಳ್ಳೆ ನೆವವಾಗಿತ್ತು. ಆದರೆ ಅಲ್ಲಿಗೆ ಹೋದ ಮೇಲೆಯೇ ತಿಳಿದಿದ್ದು. ಅದೆಷ್ಟು ಸುಂದರ ಎಂದು.



ಹೋಗುವ ಮಾರ್ಗ:
ಸಾಗರದಿಂದ ಸುಮಾರು ಎಂಟು ಕಿ.ಮೀ ದೂರವಷ್ಟೇ ನಾಡಕಲಸಿ ಅಥವಾ ಕಲಸಿಯ ದೇವಸ್ಥಾನ. ಸಾಗರದಿಂದ ಹೋಗುವುದಾದರೆ ಸೊರಬ ಮಾರ್ಗದಲ್ಲಿ ಸುಮಾರು ೫ ಕಿ.ಮೀ ಹೋದ ಕೂಡಲೇ ಕಲಸಿ ರಾಮೇಶ್ವರ ದೇವಸ್ಥಾನಕ್ಕೆ ದಾರಿ ಅಂತ ಬೋರ್ಡೊಂದು ಸಿಗುತ್ತದೆ. ಅಲ್ಲಿಂದ ಸುಮಾರು ಮೂರು ಕಿ.ಮೀ ಬಲಕ್ಕೆ ಹೋದರೆ ಸಿಗುವುದು ಕಲಸಿ ಊರು. ಅಲ್ಲಿಂದ ಸ್ವಲ್ಪ ಒಳಗಡೆ ಇದೆ ದೇವಸ್ಥಾನ. ಸೊರಬಕ್ಕೆ ತುಂಬಾ ಬಸ್ಸುಗಳಿವೆ. ಹಾಗಾಗಿ ಸೊರಬ ಬಸ್ಸಿನಲ್ಲಿ ಕಲಸಿ ಬೋರ್ಡಿನಲ್ಲಿ ಇಳಿದುಕೊಂಡರೆ ಮೂರು ಕಿ.ಮೀ ನಡೆದು ಕಲಸಿ ದೇವಸ್ಥಾನಕ್ಕೆ ಯಾವಾಗಲಾದರೂ ಹೋಗಬಹುದು. ಸ್ವಂತ ವಾಹನವಿದ್ದರೆ ಇನ್ನೂ ಉತ್ತಮ.

ಇತಿಹಾಸ:
ಇಲ್ಲಿ ಶ್ರೀ ಮಲ್ಲಿಕಾರ್ಜುನ ಮತ್ತು ರಾಮೇಶ್ವರ ದೇವಸ್ಥಾನಗಳಿವೆ. ಈ ಜೋಡಿ ದೇಗುಲಗಳನ್ನು ಹೊಯ್ಸಳ ರಾಜ ಬಳೆಯಣ್ಣ ಹೆಗ್ಗಡೆ ಕ್ರಿ.ಶ ೧೨೧೮ ರಲ್ಲಿ ಕಟ್ಟಿಸಿದನೆಂದು ಸಂಶೋಧನಕಾರರು ಹೇಳುತ್ತಾರೆ.





ಮೊದಲಿಗೆ ಹೋಗುತ್ತಿದ್ದಂತೆಯೇ ನಿಮ್ಮನ್ನು ಸ್ವಾಗತಿಸುವುದು ದೇಗುಲದ ಎದುರಿಗೆ ಅಥವಾ ಹೋಗುವವರ ಬಲಗಡೆಗೆ ಇರುವ ನಾಗರ ಬನ.ಅದಕ್ಕೆ ನಮಸ್ಕರಿಸಿ ಮೊದಲು ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋದೆವು.







ಅಲ್ಲಿ ಆನೆ . ಬಸವಣ್ಣಗಳು ನಮ್ಮನ್ನು ಸ್ವಾಗತಿಸಿದವು. ಈ ದೇವಸ್ಥಾನದಲ್ಲಿ ಹೊಯ್ಸಳ ಕಾಲದ ಕೆತ್ತನೆಗಳು ನಯನಮನೋಹರವಾಗಿಹೆ. ಚಚ್ಚೌಕವಾಗಿರುವ ಈ ದೇಗುಲಕ್ಕೆ ಗರ್ಭಗ್ರ‍ಹ, ಸುಖನಾಸಿ, ಮುಖಮಂಟಪವಿದೆ. ಇಲ್ಲಿನ ಒಂದು ದುಃಖದ ಸಂಗತಿಯೆಂದರೆ ಇದು ಸಂರಕ್ಷಿತ ಸ್ಮಾರಕ ಎಂದಾಗಿದ್ದರೂ ಇದಕ್ಕೆ ಬೇಕಾದ ಸಂರಕ್ಷಣೆ ಸಿಕ್ಕಿಲ್ಲ. ನಾವು ಹೋದಾಗ ಮಳೆಗಾಲದಲ್ಲಿ ಸೋರಿದ ನೀರು, ಪಾಚಿ ದೇಗುಲದ ಒಳಗೇ ಕೆಲಕಡೆ ಕಟ್ಟಿತ್ತು. ಜೊತೆಗೆ ಬಾವಲಿಯ ಹಿಕ್ಕೆಗಳು ಬೇರೆ.





ಶ್ರೀ ಮಲ್ಲಿಕಾರ್ಜುನ ದೇವರನ್ನು ನೋಡಲು ಬೆಳಕಿನ ವ್ಯವಸ್ಥೆ ಮಾಡಲಾಗಿಲ್ಲ. ಹಾಗಾಗಿ ಕತ್ತಲಲ್ಲೇ ದೇವನನ್ನು ನೋಡುವ ಸಂಕಷ್ಟ ಭಕ್ತರಿಗೆ. ಇದನ್ನು ಮರೆತು ನೋಡಿದಾಗ ದೇಗುಲದ ಸೌಂದರ್ಯ ಒಂದೊಂದಾಗಿ ಕಾಣಸಿಗುತ್ತವೆ. ಹೊರಗಿನ ಗೋಡೆಗಳಲ್ಲಿ ಕೆತ್ತಲಾಗಿರುವ ಮಿಥುನ ಶಿಲ್ಪಗಳೂ ರಸಿಕರ ಮನ ಸೆಳೆಯುತ್ತವೆ.









ದೇಗುಲದ ಚಾವಣಿಯಲ್ಲಿ ಕೆತ್ತಲಾಗಿರುವ ಕಲ್ಲಿನ ಹಿಡಿಗಳಂತಹ ರಚನೆ ಬೆರಗಾಗಿಸುತ್ತದೆ.


ನಂತರ ಅದರ ಪಕ್ಕದಲ್ಲೇ ಇರುವ ಶ್ರೀ ರಾಮೇಶ್ವರ ದೇವಸ್ಥಾನದ ದರ್ಶನ ಪಡೆದೆವು . ಈ ದೇಗುಲದಲ್ಲಿ ಲೈಟಿನ ವ್ಯವಸ್ಥೆ, ಸ್ವಚ್ಛತೆ ಹೀಗೆ ಎಲ್ಲಾ ವ್ಯವಸ್ಥೆಯನ್ನೂ ಮಾಡಲಾಗಿದೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ ಇಲ್ಲಿರುವ ಜಿರಲೆಕಲ್ಲು ಎಂಬ ಕಂಬ. ಇಲ್ಲಿನ ಅರ್ಚಕರು ಮಣ್ಣನ್ನು ಇದಕ್ಕೆ ತೇಯ್ದು , ಮಂತ್ರಿಸಿ ನೀಡುತ್ತಾರಂತೆ. ಅದರಿಂದ ಕಾಲು ಮುರಿದವರಿಗೆ ಸರಿಯಾಗಿದೆಯಂತೆ. ಬುದ್ದಿ ಭ್ರಮಣೆಯಾದವರು, ಮಕ್ಕಳಾಗದವರು ಹೀಗೆ ಅನೇಕರು ಇಲ್ಲಿಗೆ ಬಂದು ಈ ಜಿರಲೆಕಲ್ಲಿನ ಮಹಿಮೆಗೆ ಪಾತ್ರರಾಗಿದ್ದಾರೆ ಎನ್ನುತ್ತಾರೆ ಸ್ಥಳೀಯರು.







ಈ ದೇಗುಲದಲ್ಲಿ ಸುಖನಾಸಿಯಿಲ್ಲದ ಗರ್ಭಗೃಹವಿದೆ. ಸುತ್ತಲೂ ಇರುವ ಪ್ರದಕ್ಷಿಣಾಪಥವು ನವರಂಗಕ್ಕೆ ಸೇರಿಕೊಳ್ಳುವ ವಿನ್ಯಾಸ ಸಾಮಾನ್ಯವಾಗಿ ದ್ರಾವಿಡ ಶೈಲಿಯಲ್ಲಿ ಕಂಡು ಬರುತ್ತದೆಯಂತೆ. ಅದು ಹೊಯ್ಸಳ ಶೈಲಿಯಲ್ಲಿ ಅತೀ ವಿರಳವಾಗಿದ್ದು ಅದನ್ನು ಇಲ್ಲಿ ಕಾಣಬಹುದು ಎಂದು ಮಾಹಿತಿ ಫಲಕ ಹೇಳುತ್ತದೆ. ಇದರ ಎದುರೊಂದು ನಂದಿಯಿದ್ದಾನೆ. ಮಂಗಳಾರತಿಯ ಬೆಳಕಿನಲ್ಲಿ ಶ್ರೀ ರಾಮೇಶ್ವರನನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಆ ಮಂಗಳಮೂರ್ತಿಯೆದುರು ನಿಂತಾಗ ಬಂದ ದಣಿವೆಲ್ಲಾ ಮಾಯವಾಗಿ ಮನದಲ್ಲೊಂದು ಪ್ರಶಾಂತತೆ ಮೂಡುತ್ತದೆ.



















ನಂತರ ಹೊರಬಂದು ದೇಗುಲದ ಪ್ರದಕ್ಷಿಣೆ ಹಾಕಿದಾಗ ಗೋಡೆಗಳಲ್ಲಿನ ಹಲವಾರು ಕುಸುರಿ ಕೆಲಸಗಳು, ವಿಗ್ರಹಗಳು ಮನಸೂರೆಗೊಂಡವು.ಶ್ರೀ ಗಣೇಶ, ಉಮಾಮಹೇಶ್ವರಿ, ಶಿವಲಿಂಗ, ನಾಗದೇವತೆ ಹೀಗೆ ಹಲವಾರು ದೇವದೇವತೆಯರನ್ನಿಲ್ಲಿ ಕಾಣಬಹುದು.



ದೇಗುಲ ದರ್ಶನ ಮುಗಿಸಿ ಅರ್ಚಕರ ಹತ್ತಿರ ಅಲ್ಲಿನ ಇತಿಹಾಸ ಕೇಳುತ್ತಾ ಹೊರಬಂದಾಗ ನಮಗೆ ಇನ್ನೊಂದು ಅಚ್ಚರಿ ಕಾದಿತ್ತು. ವರದ ಹಳ್ಳಿಯ ಶ್ರೀ ಶ್ರೀಧರ ಸ್ವಾಮಿಗಳು ಇಲ್ಲೂ ಬಂದು ತಪಸ್ಸು ಮಾಡಿ ಹಲವರ್ಷ ತಂಗಿದ್ದರಂತೆ!! ಅವರ ಕುಳಿತು ಆಶೀರ್ವಚನ ನೀಡುತ್ತಿದ್ದ ಪೀಠ, ಪೂಜಾ ಮಂದಿರಗಳನ್ನೆಲ್ಲಾ ನೋಡಿದಾಗ ನಮಗೆ ಇನ್ನೂ ಆನಂದವಾಯಿತು.










ಚೆನ್ನಾಗಿ ಮಾತನಾಡಿಸಿದ ಭಟ್ಟರು ಮತ್ತವರ ಪತ್ನಿಯನ್ನು ವಂದಿಸಿ ಬೀಳ್ಕೊಡುವಾಗ ಅವರಾಡಿದ ಒಂದು
ಮಾತು ಕಿವಿಯಲ್ಲೇ ಗುಯ್ಗುಡುತ್ತಿತ್ತು. ಇದು ದೂರ ಅಂತ ಹೆಚ್ಚಿಗೆ ಜನ ಬರುವುದೇ ಇಲ್ಲ ಇತ್ತೀಚೆಗೆ. ಹೆಚ್ಚು ಜನಕ್ಕೆ ಈ ಬಗ್ಗೆ ತಿಳಿದರೆ, ಅವರಿಲ್ಲಿಗೆ ಬಂದರೆ ಈ ಸ್ಥಳದ ಹೆಚ್ಚಿನ ಅಭಿವೃದ್ಧಿಯಾಗಬಹುದೇನೋ ಎಂದು ..

Saturday, November 19, 2011

ಜಾಬ್ಸ್ ಜಾತ್ರೆಯಲ್ಲಿ ಮರೆತೋದ ರಿಚ್ಚಿ

ಆಪಲ್ ಸ್ಥಾಪಕ ಸ್ಟೀವ್ ಜಾಬ್ಸನ ವಿಚಾರಗಳೆಲ್ಲಾ ಕದ್ದಿದ್ದು. ಅವನ ಸ್ವಂತದ್ದು ಏನೂ ಇಲ್ಲ. ಅವನ ಸಾವಿಗೆ ಅಷ್ಟು ಮನ್ನಣೆ. C, Unix ಗಳನ್ನು ಕಂಡು ಹಿಡಿದ ಡೆನ್ನಿಸ್ ರಿಚ್ಚಿಯ ಸಾವು ಯಾರೂ ಕಂಡೂ ಕೇಳದಂತೆ ಮರೆಯಾಗಿ ಹೋಯಿತಲ್ಲಾ ಎಂಬ ವೇದನೆಯ ಹಲರೂಪಾಂತರಗಳು ಅಂತರ್ಜಾಲದಲ್ಲೆಲ್ಲಾ ಸುತ್ತಾಡುತ್ತಿದ್ದವು ಕೆಲವಾರದ ಹಿಂದೆ. ಇನ್ನೂ ಅಲ್ಲೊಂದು , ಇಲ್ಲೊಂದು ಅಂತಹ ಫೋಟೋಗಳು, ಪೋಸ್ಟುಗಳು ಸುತ್ತಾಡುತ್ತಲೇ ಇವೆ. ಇಬ್ಬರಲ್ಲಿ ಯಾರು ಹೆಚ್ಚೆಂಬ ವಿಮರ್ಶೆಯನ್ನು ಮಾಡೋದು ಆ ದೈತ್ಯ ಪ್ರತಿಭೆಗಳೆದುರು ಪಾಮರನಾದ ನನ್ನಿಂದೆಂತೂ ಅಸಾಧ್ಯ. ಆದರೆ ಇಂದು ಮತ್ತೊಂದು ಅಂತಹದೇ ಪೋಸ್ಟನ್ನೋದಿದಾಗ ನನಗನಿಸಿದ ಭಾವಗಳನ್ನು ಹಂಚಿಕೊಳ್ಳುತ್ತಿದ್ದೇನೆ.

 
ಪಿಯುಸಿಯಲ್ಲಿ ಕಂಪ್ಯೂಟರ್ ಓದಿದವರಿಂದ ಹಿಡಿದು,BCA, BE, BCom (Computers) , Diploma ಹೀಗೆ ಹಲವು ವಿಷಯಗಳನ್ನೋದಿದ ಜನರೆಲ್ಲಾ C ಎಂಬ Programming ಭಾಷೆಯನ್ನು ಓದೇ ಇರುತ್ತಾರೆ. ಬಲ್ಬು ಕಂಡುಹಿಡಿದವರು ಯಾರು ಎಂದರೆ ಎಂಥಾ ಟ್ಯೂಬ್ಲೈಟಾದರೂ ಥಾಮಸ್ ಅಲ್ವಾ ಎಡಿಸನ್ ಅಂತ ಹೇಳ್ತಾರಲ್ವಾ ಹಾಗೇನೆ ಇವರಿಗೆಲ್ಲಾ C ಯನ್ನು ಕಂಡುಹಿಡಿದವರು ಯಾರು ಅಂದರೆ ತಟ್ಟನೆ ಬರುವ ಉತ್ತರ ಡೆನ್ನಿಸ್ ರಿಚ್ಚಿ, ಕೆರಿಂಗ್ ಹ್ಯಾಮ. ನಾನೂ ಓದಿ ಇಷ್ಟಪಟ್ಟ Programming ನ ಮೊದಲ ಪುಸ್ತಕ The C Programming Language . ಆಗ ರಿಚ್ಚಿಯ ಬಗ್ಗೆ ಅಷ್ಟು ತಿಳಿದಿರಲಿಲ್ಲ. ನಂತರ ಮೂರನೆಯ ಸೆಮಿಸ್ಟರಿನಲ್ಲಿ Unix ಅನ್ನೋ ವಿಷಯ ಇತ್ತು. ಅದರ ಬಗ್ಗೆ ಗೊತ್ತಿಲ್ದೇ ಇರೋರಿಗೆ ಹೇಳೋದಾದರೆ ನೀವು ಬಳಸ್ತಾ ಇರೋ Windows XP, Windows 7, Vista ಗಳಂತೆ ದುಡ್ಡು ಕೊಟ್ಟು Genuine ಅವತರಣಿಕೆ ಪಡೆಯಬೇಕೆಂಬ ರೇಜಿಗೆಯಿಲ್ಲದ್ದದು. ಯಾರು ಬೇಕಾದರೂ ಉಚಿತವಾಗಿ ಬಳಸಬಹುದಾದ ದತ್ತಾಂಶ Open Source ಗಳ ಪರಿಕಲ್ಪನೆಯನ್ನು ಹುಟ್ಟಿಹಾಕಿದ್ದೇ Unix ನ ಮತ್ತೊಂದು ರೂಪ Linux. ಇರಲಿ, ಆ Linux ಅನ್ನು ರೂಪಿಸುವಲ್ಲಿಯೂ ಕೆನ್ ಥಾಮ್ಸನ್ ಅನುವವರೊಂದಿಗೆ ಕೈ ಜೋಡಿಸಿದ್ದು ಇದೇ ರಿಚ್ಚಿ.
 
ಸರಿ, ಪ್ರೋರ್ಗಾಮಿಂಗ್ ಭಾಷೆಯನ್ನು , ಇನ್ನೊಂದು ಕಂಪ್ಯೂಟರ್ ಭಾಷೆಯನ್ನು ಕಂಡುಹಿಡಿದಾಕ್ಷಣ ಅದು ಮಹಾನ್ ಸಾಧನೆಯೇ ಎಂಬ ಸಂದೇಹ ಈಗಾಗಲೇ ಬಂದಿದ್ದರೆ ಅದನ್ನು ಪರಿಹರಿಸಲೋಸುಗ ಈ ಕೆಲವು ಸಾಲುಗಳು..ರಿಚ್ಚಿ ಸತ್ತ ದಿನ ಅವರ ದೀರ್ಘ ಕಾಲೀನ ಸಹೋದ್ಯೋಗಿ ರೋಬ್ ಪೈಕ್ ಸೂಚಿಸಿದ ಸಂತಾಪ ನುಡಿಗಳಿಂದ.

" C ಹಳೆಯದಾಗಿದೆ. ಆದರೂ ಇನ್ನೂ ಅದರ ಉಪಯೋಗ ಕಡಿಮೆಯಾಗಿಲ್ಲ. ಯುನಿಕ್ಸ, ಲಿನಕ್ಸ, ಮ್ಯಾಕ್(ಸ್ಟೀವ್ ಜಾಬ್ಸನದು),ವಿಂಡೋಸ್ನ(XP) ಒಳಪದರ(Kernel) ಲನ್ನು ಬರೆದಿರೋದು C ನಲ್ಲೇ:-). ಹೆಚ್ಚಿನ ಎಲ್ಲಾ ಬ್ರೌಸರ್ಗಳನ್ನು, ಪರಿಚಾರಕ(web server) ಬರೆದಿರೋದು C,C++ ನಲ್ಲೇ. ಅಂತರ್ಜಾಲದ ಹೆಚ್ಚೆಲ್ಲಾ ವಾತಾವರಣವಿರುವುದು C, ಅಥವಾ ಅದರಿಂದ ಸ್ಪೂರ್ತಿ ಪಡೆದ Java, Ruby, Python ನಂತಹ ಭಾಷೆಗಳಲ್ಲಿಯೇ. ದೂರವಾಣಿಯನ್ನು ನಿರ್ವಹಿಸುವಂತಹ ಜಾಲವನ್ನೂ C ಯಲ್ಲೇ ಬರೆಯಲಾಗಿದೆ.

ಇಷ್ಟೇ ಅಲ್ಲ. ಮುಂಚೆ ಎಲ್ಲ ಕಂಪ್ಯೂಟರ್ ಕಾರ್ಯನಿರ್ವಹಿಸಲು ಬೇಕಾದ ಮಾಹಿತಿಯನ್ನು ಕೆಳಮಟ್ಟದ ಕಂಪ್ಯೂಟರಿಗೆ ಸುಲಭವಾಗಿ ಅರ್ಥವಾಗುವಂತಹ ಭಾಷೆಗಳಲ್ಲಿ ಬರೆಯುತ್ತಿದ್ದರು(assembly). ಅದನ್ನು ಮೇಲ್ಮಟ್ಟದ, ಮನುಷ್ಯರಿಗೆ ಅರ್ಥವಾಗುವಂತಹ ಭಾಷೆಯಲ್ಲಿ ಬರೆದ ಶ್ರೇಯಸ್ಸು ಸಲ್ಲಬೇಕಾದ್ದು Unix ಮತ್ತು ರಿಚ್ಚಿಗೆ. ಅವರು ಸ್ಟೀವ್ ಜಾನ್ಸನ್ ಜೊತೆ ಸೇರಿ ಒಂದೆಡೆ ಬರೆದ ಪ್ರೋಗ್ರಾಮ್ ಯಾವುದೇ ಕಂಪ್ಯೂಟರಿನಲ್ಲಿ , ಏನೊಂದೂ ಬದಲಾವಣೆಯಿಲ್ಲದಂತೆ ವ್ಯವಹರಿಸುವಂತೆ ರೂಪಿಸಲು ಶ್ರಮಿಸಿದರು. ಮೇಲ್ಗಡೆ ಇರುವ ಆಪರೇಟಿಂಗ್ ವ್ಯವಸ್ಥೆಗೂ ಕೆಳಗಣ ಹಾರ್ಡವೇರ ಮೇಲೆಯೇ ನೇರವಾಗಿ ಅವಲಂಭಿತವಾಗೋ ವ್ಯವಸ್ಥೆ ತಪ್ಪಿಸಿದ ಶ್ರೇಯ ಅವರಿಗೇ ಸಲ್ಲಬೇಕು."


(ಇಂದು ಎಷ್ಟೊಂದು ಬಗೆಬಗೆಯ ಕಂಪ್ಯೂಟರ್ ಹಾರ್ಡವೇರ್ಗಳಿವೆ. ಅದು ಪ್ರತಿಯೊಂದಕ್ಕೂ ಪ್ರತ್ಯೇಕ ತಂತ್ರಾಂಶ ಬರೆಯೋದಂದ್ರೆ ಬರೆಯೋನಿಗೂ ತಲೆನೋವು. ಬಳಸೋನಂತೂ ಹುಡುಕಿ ಹಾಕೋದ್ರೊಳಗೆ ಸುಸ್ತೋ ಸುಸ್ತು.)

"ಸ್ಟೀವ್ ಜಾಬ್ಸನ ಸಂತಾಪಸಂದೇಶದಲ್ಲಿ ಅಂತರ್ಜಾಲ ಕಂಡುಹಿಡಿದ ಬರ್ನರ್ಸ್ ಲೀ, ಜಾಬ್ಸನಿಂದ ಕಂಡುಹಿಡಿದ ನೆಕ್ಟಬಾಕ್ಸನ್ನ ಉಪಯೋಗಿಸಿದ ಅಂತ ಓದಿದೆ. ಆದರೆ ಅದರಲ್ಲಿದ್ದ ಆಪರೇಟಿಂಗ್ ಸಿಸ್ಟಂ ಮತ್ತು ಅದನ್ನು ಬರೆದ ಭಾಷೆ ಯಾವುದಾಗಿತ್ತು ಎಂದು ಮರೆಯಬಾರದು"
 
ಮುಗಿಸುವ ಮುನ್ನ
ಮುಕ್ತ ತಂತ್ರಾಂಶ ಎಂದರೆ ಅದನ್ನು ಯಾರು ಬೇಕಾದರೂ ಉಪಯೋಗಿಸಬಹುದೆಂದೇ ಅರ್ಥ. ಅಂತದ್ರಲ್ಲಿ ಅದನ್ನು ಬೆಳೆಸಿಕೊಂಡು ಬೆಳೆದ ಅಂದ ಮಾತ್ರಕ್ಕೆ ಜಾಬ್ಸ್ ಒಬ್ಬ ಕಳ್ಳನಾಗುತ್ತಾನೆಯೇ? ಅದನ್ನು ಬಳಸಿದವ ಅವನೊಬ್ಬನೇ ಅಲ್ಲವಲ್ಲಾ? ನೂರಾರು, ಸಾವಿರಾರು ಜನರ ಮಧ್ಯೆ ಅವನೂ ಒಬ್ಬ. ಆದರೂ ಜಾಬ್ಸನೇ ಯಾಕೆ ಬೇಕು? ಅವನೇನೂ ಪುಕ್ಕಟೆ ನೀಡಿ ಅಪಪ್ರಚಾರ ಮಾಡಲಿಲ್ಲವಲ್ಲ, ಆಪಲ್ಲನ್ನು ಬಳಸಲು ಇಷ್ಟವಿದ್ದವರೇ ಅದರ ಬೆಲೆ ಹೆಚ್ಚಾದರೂ ತೆಗೆದುಕೊಂಡರು. XWindow ಅನ್ನೋ ಪರಿಕಲ್ಪನೆಯನ್ನು ಮೊದಲಿಗೆ ತಂದಿದ್ದು ಲಿನಕ್ಸು. GUI ಇದ್ದ ಮೊದಲ ಬ್ರೌಸರು Mosaic ಬ್ರೌಸರು ಕೂಡ ಲಿನಕ್ಸಿನದೇ. ಇದನ್ನೆಲ್ಲಾ ಬಳಸಿಕೊಂಡ ಮೈಕ್ರೋಸಾಪ್ಟನ್ನೂ ಕಳ್ಳರೆನ್ನುತ್ತೀರಾ ಹಾಗಾದರೆ?

ಮೊದಲೇ ಹೇಳಿದಂತೆ ಜಾಬ್ಸ ಮತ್ತು ರಿಚ್ಚಿ ಇಬ್ಬರೂ ಅಗಾಧ ಪ್ರತಿಭೆಗಳೆ. ಆದರೆ ರಿಚ್ಚಿ ಹೆಚ್ಚು ಸಮಯ ಕಳೆದಿದ್ದು ಪ್ರಯೋಗಾಲಯದಲ್ಲೇ. ಹೊಸತೊಸತು ಹುಡುಕುವ ಬಗ್ಗೆ , ತಮ್ಮ ಅನ್ವೇಷಣೆಗಳ ಪ್ರಯೋಜನವನ್ನು ಬೇರೆ ಕ್ಷೇತ್ರಗಳಿಗೆ ದಾಟಿಸುವ ಬಗ್ಗೆ ಅವರು ಶ್ರಮಪಟ್ಟಿರಬಹುದೇ, ಆ ವಿಜಯವನ್ನೇ ಆನಂದಿಸಿರಬಹುದೇ ಹೊರತು ಪ್ರಚಾರದಲ್ಲಲ್ಲ. ಆದರೂ ಟ್ಯಾರಿಂಗ್ ಪ್ರಶಸ್ತಿ, ಹಾಮಿಂಗ್ ಪದಕ, ಗಣಕೇತಿಹಾಸ ಸಂಘದ ಗೌರವ ಸದಸ್ಯ,ಜಪಾನ್ ಪ್ರಶಸ್ತಿ, ದೇಶದ ತಂತ್ರಜ್ಞಾನ ಪ್ರಶಸ್ತಿಗಳಂತವು ಅವರನ್ನು ಹುಡುಕಿಕೊಂಡು ಬಂದವು. ಆದರೆ ಜಾಬ್ಸ ಹಾಗಲ್ಲ. ಪ್ರತೀ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ತಂದಾಗಲೂ ಅದಕ್ಕೆ ಪ್ರಚಾರ ನೀಡಲೇ ಬೇಕಲ್ಲವೇ? ಕಂಪೆನಿ ಮೊದಲು , ನಂತರ ತಾನು ಎಂಬತಹ ತತ್ವವನ್ನಿಟ್ಟುಕೊಂಡಿದ್ದರೂ ಆಪಲ್ನ ಹಲವು ಉತ್ಪನ್ನಗಳೊಂದಿಗೆ ಆತನೂ ಪ್ರಖ್ಯಾತನಾದ.

ಮುಗಿಸುವ ಮೊದಲ ಕೊನೆಯ ಪ್ರಶ್ನೆ. ಒಬ್ಬ ವ್ಯಕ್ತಿಯನ್ನು ಹೊಗಳುವಾಗ ಮತ್ತೊಬ್ಬನನ್ನು ತೃಣೀಕರಿಸಲೇ ಬೇಕೆ? ಸರ್ವಕಾಲಿಕ ಸತ್ಯವೆಂಬುದಿರಲು ಸಾಧ್ಯವಿಲ್ಲ. ನನಗೆ ಸತ್ಯವೆಂದನಿಸಿದ್ದು ನಿಮಗೆ ಸುಳ್ಳೆನಿಸಬಹುದು. ಆದರೆ ಎರಡರ ಸಾಧ್ಯತೆಯನ್ನು ಒಟ್ಟಿಗೆ ಅಂಗೀಕರಿಸಬಹುದಲ್ಲವೇ?

ಮಾಹಿತಿ, ಚಿತ್ರ ಮೂಲ: ವಿಕಿಪೀಡಿಯ, ಜೈವೀರ್ ರಾವ್, https://plus.google.com/u/0/101960720994009339267/posts/33mmANQZDtY#101960720994009339267/posts/33mmANQZDtY 
(ವಿನಂತಿ: ನಾನಿಲ್ಲಿ ಬಳಸಿದ ಆಂಗ್ಲ ಪದಗಳಿಗೆ ಪರ್ಯಾಯವಾದ ಕನ್ನಡ ಪದಗಳಿದ್ದರೆ ದಯವಿಟ್ಟು ತಿಳಿಸಿ. ಮುಂದೆ ಬರೆಯುವಾಗ ಅದನ್ನೇ ಬಳಸಲು ಪ್ರಯತ್ನಿಸುತ್ತೇನೆ)

Friday, November 18, 2011

ನಮ್ಮೂರ ರಾಜ್ಯೋತ್ಸವ

ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲಿರೋರಿಗೆ ಕೆಳದಿಯ ಬಗ್ಗೆ ಗೊತ್ತೇ ಇರುತ್ತದೆ. ಹೊಸಬರಿಗೆ ಹೇಳಬೇಕೆಂದರೆ, ನೀವು ಜಗತ್ಪ್ರಸಿದ್ಧ ಜೋಗ ಜಲಪಾತದ ಹೆಸರನ್ನು ಕೇಳಿಯೇ ಕೇಳಿರುತ್ತೀರಿ. ಅದಕ್ಕೆ ಹೋಗಬೇಕಾದರೆ ಸಾಮಾನ್ಯವಾಗಿ ಸಾಗರಕ್ಕೆ ಬಂದೇ ಹೋಗುತ್ತಾರೆ. ಸಾಗರದಿಂದ ಎಂಟು ಕಿ.ಲೋ ಮೀಟರು ದೂರವಿರುವ ಊರು ಕೆಳದಿ. ಇಲ್ಲಿಯ ಪಾಳೇಗಾರ ಶಿವಪ್ಪನಾಯಕ, ರಾಣಿ ಚೆನ್ನಮ್ಮ... ಈ ಹೆಸರುಗಳನ್ನು ಎಲ್ಲೋ ಕೇಳಿದ/ಓದಿದ ನೆನಪಾಗುತ್ತಿದೆಯೇ? ಹಾ ಅದೇ ಕೆಳದಿ. ಅದರ ಹತ್ತಿರವೇ ನಮ್ಮೂರು.

ಪ್ರತೀವರ್ಷವೂ ಕನ್ನಡ ರಾಜ್ಯೋತ್ಸವ ಬಂತೆಂದರೆ ನಮಗೆಲ್ಲಾ ಹಬ್ಬದ ವಾತಾವರಣ.ಹಂಪಿಯಿಂದ ಕೆಳದಿಗೆ ಬರುತ್ತಿದ್ದ ವಿದ್ಯಾರಣ್ಯ ಜ್ಯೋತಿಯದು ಕೆಳದಿಯಿಂದ ಸಾಗರದವರೆಗೆ ಮೆರವಣಿಗೆ..ಆ ಸಂದರ್ಭವೆಂದರೆ ನಮಗೆಲ್ಲಾ ಸಂಭ್ರಮವೋ ಸಂಭ್ರಮ.ಪ್ರತೀ ಮನೆಯೆದುರ ರಸ್ತೆಯನ್ನೂ ತೊಳೆದು ಎಳೆದ ದೊಡ್ಡದೊಡ್ಡ ರಂಗೋಲಿಗಳು,"ವಿದ್ಯಾರಣ್ಯ ಜ್ಯೋತಿಗೆ ಸ್ವಾಗತ", "ರಾಜ್ಯೋತ್ಸವದ ಶುಭಾಶಯಗಳು" ಇತ್ಯಾದಿ ಬರಹಗಳೇನು, ಪ್ರತೀ ಹಳ್ಳಿಯ ಬಾಗಿಲುಗಳಲ್ಲಿ, ಹೆಚ್ಚೆಚ್ಚು ಮನೆಗಳಿದ್ದ ಕಡೆ ಹೀಗೆ ಸಾಲು ತೋರಣಗಳೇನು, ಪೇಟೆ ಹತ್ತಿರ ಸಾಗುತ್ತಿದ್ದಂತೆ ಸಾಲು ಸಾಲು ವಿದ್ಯುತ್ ದೀಪಗಳೇನು..ಅಬ್ಬಾ!! ಜ್ಯೋತಿಯೊಂದಿಗೆ ಎಂಟು ಕಿಲೋಮೀಟರಿಗಿಂತಲೂ ದೂರ ಸಾಗುವುದೆಂದರೆ ಒಂದು ಅವಿಸ್ಮರಣೀಯ ಅನುಭವ.. ವಿದ್ಯಾರಣ್ಯರು ಹಕ್ಕ-ಬುಕ್ಕರ ಗುರುಗಳಲ್ಲವೇ, ಆ ವಿಜಯನಗರ ಸಾಮ್ರಾಜ್ಯಕ್ಕೂ ಕೆಳದಿಗೂ, ಅವರ ಹೆಸರಿನ ಜ್ಯೋತಿಗೂ , ನಾನು ಹೇಳಹೊರಟಿರುವ ಮೆರವಣಿಗೆಗೂ ಎಲ್ಲಿಂದೆಲ್ಲಿಯ ಸಂಬಂಧವಯ್ಯಾ ಅಂತ ಸಂದೇಹ ಶುರು ಆಯ್ತಾ? ತಡೀರಿ ಒಂದೊಂದಾಗಿ ಹೇಳುತ್ತಾ ಹೋಗ್ತೇನೆ. ಮುಂದೆ ಓದಿ


ಇತಿಹಾಸ

 ವಿಜಯನಗರದ ಕೃಷ್ಣದೇವರಾಯನ ಕಾಲದಲ್ಲಿ ಕೆಳದಿಯ ಸಾಮಾನ್ಯ ರೈತನೊಬ್ಬನಾದ ಭದ್ರಗೌಡನೆಂಬುವನಿಗೆ ನಿಕ್ಷೇಪ ದೊರೆತು ಅದರಿಂದ ಅವನು ಪಾಳೆಯವನ್ನು ಕಟ್ಟಿಕೊಂಡನಂತೆ. ಅವನ ಪರಾಕ್ರಮಕ್ಕೆ ಮೆಚ್ಚಿ ಕೃಷ್ಣದೇವರಾಯ ಅವನಿಗೆ ಎಂಟು ಮಾಗಣಿಗಳ ನಾಯಕತ್ವವನ್ನು ಕೊಟ್ಟನೆಂದು ಇತಿಹಾಸವಿದೆ .ಕಾಲ ಕಳೆದಂತೆ ಸಂಸ್ಥಾನ ಬೆಳೆಯಿತು. ಕೆಳದಿ, ಇಕ್ಕೇರಿ, ಗೌರಿ ಬಿದನೂರು ಹೀಗೆ ಕೋಟೆ ಕೊತ್ತಲಗಳನ್ನು, ದೇವಾಲಯಗಳನ್ನು ಕಟ್ಟಿದರು. ಶಿವಪ್ಪನಾಯಕ, ಚೆನ್ನಮ್ಮ ರಾಣಿಯಂತಹವರು ಬಂದು ಹೋದರು. ಕೆಳದಿಯ ವೀರಭದ್ರ ದೇವಸ್ಥಾನದ ಪ್ರಧಾನ ಬಾಗಿಲ ಬಳಿ ಶ್ರೀಕೃಷ್ಣನ ಸಣ್ಣ ವಿಗ್ರಹವಿದೆ. ಇದು ಅಂದಿನಾ ಘಟನೆಯ ಸವಿನೆನಪಿಗಾಗಿ ಎಂದು ಅನೇಕರು ಹೇಳುತ್ತಾರೆ.

   
  ೧೯೫೬ ರಲ್ಲಿ ಕರ್ನಾಟಕ ಏಕೀಕರಣವಾಯಿತು. ರಾಜ್ಯೋತ್ಸವ ಆಚರಣೆಗಳು ಪ್ರಾರಂಭವಾದವು. ೭೦ರ ದಶಕದ ಕೊನೆಭಾಗದಲ್ಲಿ ರಾಜ್ಯೋತ್ಸವ ಆಚರಣೆಯ ಭಾಗವಾಗಿ ಇತಿಹಾಸ ಪ್ರಸಿದ್ದ ಸ್ಥಳಗಳಿಂದ ಜ್ಯೋತಿಯೊಂದನ್ನು ತಂದು ಮೆರವಣಿಗೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತಂತೆ. ಅದಾಗಿ ಕೆಲಸಮಯದಲ್ಲಿ ಅಂದರೆ ಈಗ್ಗೆ ಸುಮಾರು ಇಪ್ಪತ್ತು ವರ್ಷಗಳ ಹಿಂದಿಂದ ಕೆಳದಿಯಿಂದ ಜ್ಯೋತಿಯ ಮೆರವಣಿಗೆ ನಡೆಸುವ ಸಂಪ್ರದಾಯ ಶುರುವಾಗಿದೆ ಅಂತ ಅಲ್ಲಿನ ಹಿರಿಯರು ಹೇಳುತ್ತಾರೆ. ಮೊದಲಿಗೆ ನವೆಂಬರ್ ಒಂದರ ಹಿಂದಿನ ರಾತ್ರಿ ಹಂಪಿಯಿಂದಲೇ ವಿದ್ಯಾರಣ್ಯ ಜ್ಯೋತಿ ಕೆಳದಿಗೆ ಬರುತ್ತಿತ್ತಂತೆ. ಜೀಪಲ್ಲಿ ಹಿಂದಿನ ದಿನ ಮಧ್ಯರಾತ್ರಿಯ ಹೊತ್ತಿಗೆ ಕೆಳದಿಗೆ ಬರುತ್ತಿತ್ತು ಆ ಜ್ಯೋತಿ. ಮಧ್ಯರಾತ್ರಿ ಎಷ್ಟೊತ್ತಾದರೂ ಕೆಳದಿಗೆ ಬಂದೇ ತಲುಪುತ್ತಿದ್ದ ಜ್ಯೋತಿ ಹೊತ್ತು ತಂದವರು ಕೆಳದಿ ದೇಗುಲದ ಪ್ರಾಂಗಣದಲ್ಲೇ ಮಲಗಿರುತ್ತಿದ್ದರಂತೆ. ನಂತರ ಬೆಳಗ್ಗೆ ಆರೂ ಮುಕ್ಕಾಲರ ಹೊತ್ತಿಗಾಗಲೇ ಅದಕ್ಕೆ ಪೂಜೆಯಾಗಿ ಕೆಳದಿ ರಾಮೇಶ್ವರ ದೇವಸ್ಥಾನದಿಂದ ಸಾಗರದ ಕಡೆಗೆ ಹೊರಡುತ್ತಿತ್ತು.


ನಾವು ಕಂಡ ನೆನಪುಗಳು

ಬೆಳಗ್ಗೆ ಹೊರಡುತ್ತಿದ್ದ ಜ್ಯೋತಿಯ ಮೆರವಣಿಗೆ ಸ್ವಾಗತಿಸಲು ನಾವೆಲ್ಲಾ ಏಳು ಘಂಟೆ ಹೊತ್ತಿಗೇ ಸ್ನಾನವೆಲ್ಲಾ ಮುಗಿಸಿ ಹೊಸ ಬಟ್ಟೆಯಿದ್ದರೆ ಅದನ್ನೇ ತೊಟ್ಟು ಮನೆಯೆದುರಿಗಿನ ರಸ್ತೆಯಲ್ಲಿ ಕಾಯುತ್ತಾ ನಿಂತಿರುತ್ತಿದ್ದೆವು. ದೊಡ್ಡವರೆಲ್ಲಾ ತೋರಣ ಕಟ್ಟುವುದರಲ್ಲೋ , ಹೆಂಗಸರು ರಂಗೋಲಿಯೆಳೆಯುವುದರಲ್ಲೋ , ನಗುನಗುತ್ತಾ ತೊಡಗಿಕೊಂಡಿರುತ್ತಿದ್ದರು. ನಾವು ಹುಡುಗರಿಗೇನು ಕೆಲಸ? ಅಲ್ಲಿಂದಿಲ್ಲಿಗೆ ಓಡುವುದು, ಕೇಕೆ. ಇದೇ.. ಜ್ಯೋತಿ ಬರುತ್ತೆ ಸ್ವಲ್ಪ ಸುಮ್ಮನಿರಿ ಅಂತ ದೊಡ್ಡವರೂ ಗದರುತ್ತಿರಲಿಲ್ಲ. ಅವರೂ ನಮ್ಮ ಸಂತೋಷದಲ್ಲಿ ಶಾಮೀಲು.. ಕೆಲ ಸಲ ಚಾಕ್ಪೀಸುಗಳನ್ನು ನೆನೆಸಿ ರಾಜ್ಯೋತ್ಸವ ಜ್ಯೋತಿಯ ಚಿತ್ರವನ್ನೋ , ರಾಜ್ಯೋತ್ಸವ ಜ್ಯೋತಿಗೆ ಸ್ವಾಗತ ಅಂತಲೋ , ರಾಜ್ಯೋತ್ಸವದ ಶುಭಾಶಯ ಅಂತಲೂ ಬರೆದಿದ್ದುಂಟು ನಾವು ಹುಡುಗರೆಲ್ಲಾ ಸೇರಿ. ಮನೆಯೆದುರಿನ ಹೂವಿನೆಸೆಳುಗಳನ್ನು ತಂದು ಅದರಲ್ಲಿ ಸಿಂಗರಿಸಿದ್ದೂ ಉಂಟು. ಹುಡುಗಿಯರು ರಂಗೋಲಿ ಪುಡಿ ತಂದು ತುಂಬುತ್ತಿದ್ದರು. ಜ್ಯೋತಿ ಹಿಂದೆ ಬಂದ ಊರಿಗಿಂತಲೂ , ಮತ್ತೆ ಮುಂದೆ ಸಾಗೋ ಊರಿಗಿಂತಲೂ ನಮ್ಮೂರ ಸ್ವಾಗತ ಚೆನ್ನಾಗಿರಬೇಕು ಅಂತ ನಮ್ಮೆಲ್ಲರ ಆಸೆ ..

ಅಂತೂ ಜ್ಯೋತಿ ಬರೋದು.. ಕೆಳದಿಯ ಕಡೆಯಿಂದ ಬರೋ ಪ್ರತೀ ಬೈಕು, ಬಸ್ಸಿಗೂ ನಮ್ಮದು ಒಂದೇ ಪ್ರಶ್ನೆ. ಜ್ಯೋತಿ ಎಲ್ಲಿದೆ ಈಗ ಅಂತ.. ಅವರು ಹೇಳಿದ ಉತ್ತರದ ಮೇಲೆ ಇನ್ನು ಹತ್ತು ನಿಮಿಷಕ್ಕೆ ಇಲ್ಲಿಗೆ ಬರುತ್ತೆ ಅಂತಲೋ, ಅರ್ಧ ಘಂಟೆ ಆಗುತ್ತೆ ಅಂತಲೋ ನಮ್ಮದೇ ಒಂದು ನಿರ್ಧಾರ. ಆಗೆಲ್ಲಾ ಈಗಿನಂತೆ ಮೊಬೈಲು, ಮೆಸ್ಸೇಜುಗಳಿರ್ಲಿಲ್ಲ ನೋಡಿ.. ಜ್ಯೋತಿ ಬಂದ ತಕ್ಷಣ ಜೈಕಾರಗಳ ಕೂಗು ಮುಗಿಲು ಮುಟ್ಟೋದು. ಚಿಳ್ಳೆ-ಪಿಳ್ಳೆ, ಮುದುಕ-ಮುದುಕಿ ಎಲ್ಲಾ ಜೈ ಅನ್ನೋದೆ. ಬಚ್ಚ ಬಾಯಿ ಅಜ್ಜಿಯಂದ್ರೂ ನಮ್ಮ ಸಂಭ್ರಮ ನೋಡೋಕೆ ಮನೆಯಿಂದ ಹೊರಬಂದು ನಿಲ್ಲೋರು. ಜೈ ಅನ್ನೋಕೆ ಆಗದಿದ್ರೂ ನಾವು ಜೈ ಅಂದಾಗ ಕೈ ಎತ್ತೋರು, ಖುಷಿ ಇಂದ. ಚಪ್ಪಾಳೆ ತಟ್ಟೀ ಖುಷಿ ಪಡೋರು. ಯಾವುದಾದ್ರೂ ಜಾಗದಲ್ಲಿ ನೆಲ ಒದ್ದೆ ಆಗಿದೆ, ರಂಗೋಲಿ ಇದೆ ಅಂದ್ರೆ ಅಲ್ಲಿ ಜ್ಯೋತಿನ ನಿಲ್ಲಿಸಬೇಕು ಅಂತಲೇ ಅಲಿಖಿತ ನಿಯಮ. ಲೇಟಾಗತ್ತೆ ನಿಮ್ಮನೆ ಮುಂದೆ ನಿಲ್ಸಕಾಗಲ್ಲ ಅಂತೆಲ್ಲಾ ಜಬರ್ದಸ್ತು ಮಾಡಂಗೆ ಇಲ್ಲ. ಎಷ್ಟಕ್ಕೂ ಅದು ನಮ್ಮೂರ ಜ್ಯೋತಿ ಅಲ್ವಾ?

ಹೀಗೆ ನಿಲ್ಸಿದ ಕಡೆ ಎಲ್ಲಾ ಸುತ್ತಮುತ್ತಲ ಮನೆಯೋರು ಬಂದು ಕಾಯಿ ಒಡೆಯೋರು. ಜ್ಯೋತಿಗೆ ಎಣ್ಣೆ, ಕರ್ಪೂರ, ಊದಿನ ಕಡ್ಡಿ, ಬತ್ತಿ ಹಾಕೋರು. ಜ್ಯೋತಿ ಹಿಡಿದುಕೊಂಡೋರ ಪಾದಕ್ಕೆ ನೀರು ಹಾಕೋದೂ ಇತ್ತು ಕೆಲೋ ಕಡೆ. ಜ್ಯೋತಿ ಜೊತೆಗಿದ್ದೋರೊಗೆ ಕುಡಿಯೋಕೆ ನೀರು ಬೇಕಾ ಕೇಳಿ ಕೊಡ್ತಿದ್ರು ಪ್ರತೀ ಊರಲ್ಲೂ. ಕೆಲೋ ಕಡೆ ಶರಬತ್ತು :-) ನಮ್ಮೂರಲ್ಲಿ ಜ್ಯೋತಿಗೆ ಪೂಜೆ ಆದ ಮೇಲೆ ನಾವೂ ಜ್ಯೋತಿ ಜೊತೆ ಮುಂದೆ ಹೋಗ್ತಿದ್ವಿ. ಹೀಗೆ ಪ್ರತೀ ಊರಲ್ಲೂ ಜನ ಸ್ವಲ್ಪ ದೂರದವರೆಗಾದ್ರೂ ಜ್ಯೋತಿ ಜೊತೆಗೆ ಹೋಗೋರು. ನಮ್ಮಂಥ ಕೆಲ ಹುಡುಗರು, ಸ್ವಲ್ಪ ಯುವಕರು ಸಾಗರದವರೆಗೆ ಹೋದದ್ದೂ ಇದೆ. ಅಂದಂಗೆ ಹೇಳಕ್ಕೆ ಮರೆತೆ. ಮೊದಲೆಲ್ಲಾ ಟ್ರಾಕ್ಟರಲ್ಲಿ ಜ್ಯೋತಿ ಬರುತ್ತಿತ್ತಂತೆ. ಅದರ ಹಿಂದೆ ತಾಯಿ ಭುವನೇಶ್ವರಿಯ ಚಿತ್ರ, ಮುಂದೆ ವಿದ್ಯಾರಣ್ಯರ ದೊಡ್ಡ ಭಾವಚಿತ್ರ.ಎದುರಿಗೆ ಜ್ಯೋತಿ ಹಿಡಿದ ಜನರು. ಈಗ ತೆರೆದ ಜೀಪಲ್ಲಿ ಆ ಮೆರವಣಿಗೆ ನಡೆಯುತ್ತಿದೆ. ಆ ಭಾವಚಿತ್ರ, ಜ್ಯೋತಿ ಎಲ್ಲಾ ಹಾಗೇ ಇದೆ.

ನಮ್ಮ ಹಳ್ಳಿ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಹುಲ್ಲತ್ತಿ ಅಂತ ಸಿಗುತ್ತಿತ್ತು. ಅಲ್ಲಿಂದ ಆಮೇಲೆ ಪೇಟೆಯ ವಾತಾವರಣ ಶುರು ಆಗುತ್ತಿತ್ತು. ಅಲ್ಲೆಲ್ಲಾ ಬಣ್ಣದಿಂದ ಬರೆದಿರೋರು. ಆಮೇಲೆ ಶ್ರೀಗಂಧದ ಸಂಕೀರ್ಣ ಅಥವಾ ಕಾಂಪ್ಲೆಕ್ಸು ಅಂತ ಸಿಗುತ್ತಿತ್ತು. ಅಲ್ಲಿಂದ ಸಾಗರಕ್ಕೆ ಸುಮಾರು ಮೂರೂವರೆ ಕಿ.ಮೀ.ಯ ಲೆಕ್ಕಾಚಾರ.ಅಲ್ಲೊಂದು ಕನ್ನಡ ಧ್ವಜಾರೋಹಣ ಆಗುತ್ತಿತ್ತು. ಅಲ್ಲಿಂದ ಶಾಲೆ ಹುಡುಗರು ಮೆರವಣಿಗೆಯ ಮುಂಬಾಗಕ್ಕೆ ಸೇರಿಕೊಳ್ಳುತ್ತಿದ್ದರು.ಮುಂದೆ ಅವರ ಪೆರೇಡ್, ಹಿಂದೆ ಜ್ಯೋತಿ. ಮೊದಲು ಸಣ್ಣವರನ್ನೆಲ್ಲಾ ಆ ಪೆರೇಡ್ಗೆ ಕರೆಯುತ್ತಿರಲಿಲ್ಲ. ಆಮೇಲೆ ಆ ಕಾಂಪ್ಲೆಕ್ಸ್ ಶಾಲೆಯಲ್ಲೇ ಓದಿದ ನಾನೂ ಆ ಮೆರವಣಿಗೆಯ ಜೊತೆ ಸೇರಿಕೊಳ್ಳಬೇಕಾಯಿತು. ಅದರಲ್ಲಿ ಆ ತ್ರಿಕೋನಾಕೃತಿಯ ವಾದ್ಯ ಬಡಿಯೋದು, ಡ್ರಮ್, ದೊಡ್ಡ ಡ್ರಮ್ಮು, ಪೀಪಿ ಊದೋದು.. ಅಬ್ಬಾ ಬಹಳ ಒಳ್ಳೆಯ ಅನುಭವ. ಆ ದಿನಕ್ಕೇ ಅಂತಲೇ ರೆಡಿಯಾದ ಶೂಗಳು, ಬಿಳಿ ಬಟ್ಟೆ, ಕೈಗೊಂದು ಬ್ಯಾಂಡು ಇವೆಲ್ಲಾ ಮತ್ತೊಂದು ಸ್ವಾತಂತ್ರ್ಯ ದಿನದಷ್ಟೇ ಖುಶಿ ಕೊಡುತ್ತಿತ್ತು ನಮಗೆ. ಈಗಿನ ಹುಡುಗರಿಗೆ ಅದೆಲ್ಲಾ ದಿನನಿತ್ಯದ ಸಮವಸ್ತ್ರ ಬಿಡಿ. ಆದರೆ ನಮಗೆಲ್ಲಾ ಶೂಗಳು ಅಂದ್ರೆ ಪೆರೇಡ್ಗೆ ಮಾತ್ರ ಅದು ಅನ್ನೋ ಅಂತ ಪರಿಸ್ಥಿತಿ. ಆರ್ಥಿಕ ಸ್ಥಿತಿಯೂ ಹಾಗೇ ಇತ್ತು ಬಿಡಿ...



ಅಲ್ಲಿಂದ ಮುಂದೂ ಹೀಗೆ ಮಾರು ಮಾರಿಗೆ ಜ್ಯೋತಿಯ ನಿಲುಗಡೆ. ಹಾಗೇ ಸಾಗುತ್ತಿದ್ದಾಗ ಅಲ್ಲಿ ರಾಣಿ ಚೆನ್ನಮ್ಮ ವೃತ್ತ ಅಂತ ಸಿಗುತ್ತಿತ್ತು. ಅಲ್ಲಿ ಸಾಗರದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳೂ ಬಂದು ಸೇರುತ್ತಿದ್ದರು. ಡೊಳ್ಳು ಕುಣಿತದ ತಂಡದವರು, ಆನೆಗಳು , ಎಲ್ಲೆಡೆ ಬಣ್ಣದ ಕಾಗದ, ಲೈಟು ಸರಗಳು.. ಹೀಗೆ ಕಣ್ಣಿಗೆ, ಕಿವಿಗೆ ಹಬ್ಬ ಅಲ್ಲಿ. ಸಾಗರದ ಸೇವಾಸಾಗರ, ಪ್ರಗತಿ,ವನಶ್ರೀ, ಸಿದ್ದೇಶ್ವರ, ಕಾನ್ವೆಂಟ್ ಹೀಗೆ ಹಲವು ದೊಡ್ಡ ಶಾಲೆಗಳದ್ದು ಒಂದೊಂದು ಲಾರಿಯೇ ಇರುತ್ತಿತ್ತು. ಏನು ಅಂದಿರಾ? ಸ್ಥಬ್ದ ಚಿತ್ರಗಳು.. ರಾಣಿ ಚೆನ್ನಮ್ಮ, ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ ಹೀಗೆ ಹಲವು ವೇಷ ಹಾಕಿದ ಹುಡುಗ ಹುಡುಗಿಯರು ಲಾರಿಯ ಮೇಲಿರುತ್ತಿದ್ದರು. ಸೈಡಿಗೆ ಇದು ಇಂಥ ಶಾಲೆ ಎಂಬಂಥ ಬ್ಯಾನರು. ಇಲ್ಲಿ ಇನ್ನೂ ಹಲವಾರು ಶಾಲೆಯ ಹುಡುಗರು ಮೆರವಣಿಗೆಗೆ ಸೇರುತ್ತಿದ್ದ ಕಾರಣ ನಮ್ಮ ಕಾಂಪ್ಲೆಕ್ಸ ಶಾಲೆಯವರಿಗೆ ಇಲ್ಲಿಯವರೆಗೆ ಮಾತ್ರ ಮೆರವಣಿಗೆ ಜೊತೆ ಹೋಗೋ ಅವಕಾಶ. ಮುಂದೂ ಹೋಗಬಹುದಿತ್ತು. ಆದರೆ ಅದಾಗಲೇ ಸುಮಾರು ೨ ಕಿಮೀನಷ್ಟು ನಡೆದು, ಮನೆಯಿಂದ ಬೆಳಗ್ಗೆನೇ ಬಂದ ಹುಡುಗರು ಮುಂದೆ ಹೋಗುತ್ತಿರಲಿಲ್ಲ.


ರಾಣಿ ಚೆನ್ನಮ್ಮ ವೃತ್ತದಲ್ಲಿ ಧ್ವಜಾರೋಹಣ. ಅಲ್ಲಿ ಕನ್ನಡ ಗೀತೆಯ ಗಾಯನ, ಭಾಷಣಗಳು ಇರುತ್ತಿದ್ದವು. ಅಲ್ಲಿ ಗೆಳೆಯರ ಬಲಗದವರು, ಆಟೋ ಚಾಲಕರು ಎಲ್ಲಾ ಸೇರಿ ನೆರೆದಿದ್ದ ಎಲ್ಲರಿಗೂ ಸಿಹಿ, ಜ್ಯೂಸ್ ಹಂಚುತ್ತಿದ್ದರು. ಅಲ್ಲಿಂದ ಮುಂದೂ ಪ್ರಮುಖ ಬೀದಿಗಳಲ್ಲಿ ಸಾಗಿ ಹತ್ತು, ಹತ್ತೂವರೆ ಹೊತ್ತಿಗೆ ಸಾಗರ ಪುರಸಭೆಯನ್ನು ಮುಟ್ಟುತ್ತಿತ್ತು ಜ್ಯೋತಿ. ಅಲ್ಲೂ ಮತ್ತೆ ಕಾರ್ಯಕ್ರಮಗಳು. ಸಂಜೆ ರಾಣಿ ಚೆನ್ನಮ್ಮ ವೃತ್ತದಲ್ಲಿ ರಸಮಂಜರಿ, ಇನ್ನಿತರ ಮನರಂಜನಾ ಕಾರ್ಯಕ್ರಮಗಳು ಇರುತ್ತಿತ್ತು.. ಪುರಸಭೆಯಲ್ಲೂ ಅಂದು ಸಂಜೆ ಹಲಕಾರ್ಯಕ್ರಮಗಳು..

ಪ್ರತೀ ವರ್ಷವೂ ನವೆಂಬರ್ ಒಂದು ಬಂದಾಗ ಈ ಎಲ್ಲಾ ನೆನಪುಗಳು ಹಸಿರಾಗುತ್ತವೆ. ಮನೆಗೆ ಬರಲು, ಇದರಲ್ಲಿ ಮತ್ತೆ ಪಾಲ್ಗೊಳ್ಳಲು ಮನ ಹವಣಿಸುತ್ತದೆ. ಹಂಪಿಯಿಂದ ಜ್ಯೋತಿ ತರುತ್ತಿದ್ದ ಆಚರಣೆ ಕೆಲ ವರ್ಷಗಳಲ್ಲಿ ನಿಂತಿತಂತೆ. ಅದನ್ನೀಗ ಕೆಳದಿಯಿಂದಲೇ ನೇರವಾಗಿ ತರುತ್ತಿದ್ದಾರೆ.( ಆದರೆ ನಾವು ಸಣ್ಣವರಿದ್ದಾಗ ಅದು ಹಂಪಿಯಿಂದಲೇ ಬರುತ್ತಿದೆ ಅಂತ ನಂಬಿದ್ದೆವು) . ಉಳಿದೆಲ್ಲಾ ಸಂಭ್ರಮಗಳು ಹಾಗೇ ಇದೆ. ಈ ವರ್ಷ ಕೆಳದಿಯಿಂದ ಚಂದ್ರಗುತ್ತಿಗೂ ಒಂದು ಜ್ಯೋತಿ ತೆಗೆದುಕೊಂಡು ಹೋಗಿದ್ದಾರಂತೆ. ಅಲ್ಲಿಂದ ಸೊರಬದವರೆಗೆ ಸಾಗರದ ರೀತಿಯಲ್ಲೇ ಮೆರವಣಿಗೆ ಮಾಡೋ ಉದ್ದೇಶವಂತೆ.
ನಮ್ಮೂರಿನ ಈ ರೀತಿ ಆಚರಣೆಯಲ್ಲಿ ಭಾಗವಹಿಸಿದ್ದೆ ಅನ್ನೋದೆ ನನಗೊಂದು ಹೆಮ್ಮೆ. ಇಲ್ಲಿಯವರೆಗೆ ತಾಳ್ಮೆಯಿಂದ ಓದಿದ ತಮಗೆಲ್ಲರಿಗೂ ಮತ್ತೊಮ್ಮೆ ವಂದಿಸುತ್ತಾ ವಿರಮಿಸುತ್ತಿದ್ದೇನೆ.

ಸಹಾಯ: ನನ್ನಮ್ಮ ಶ್ರೀಮತಿ ಸವಿತಾ ಪ್ರಭಾಕರ್ ಮತ್ತು ಕೆಳದಿಯ ಅರ್ಚಕರಾದ ಶ್ರೀ ರಾಮಭಟ್ಟರು

Tuesday, November 15, 2011

ನೂರು ತುಂಬಿತು ಬ್ಲಾಗಿಗೆ

ಇನ್ನೂರು , ಮುನ್ನೂರು , ಐನೂರು ಆದವರೆ
 ತಣ್ಣಗಿದ್ದಾರಲ್ಲೋ ಹಿಂದೆ ಎಲ್ಲೋ
ಬರಿಯ ನೂರಕೆ ನಿನಗೆ ಊರ ಸಂಭ್ರಮ ಸಲ್ಲ
ಕಲಿಯುವುದು ಬಹಳುಂಟು ತಡೆಯೊ ನಲ್ಲ||

 ತನ್ನ ಕವಿತೆಗಳನ್ನು ಮಗನಲ್ಲಿ ಕಂಡಿರುವ
ಪ್ರೋತ್ಸಾಹ ಚಿಲುಮೆ ನನ್ನೆತ್ತಮ್ಮಗೆ
ತಾಳ್ಮೆಯಿಂದೋದಿ ಬರೆದರ್ಥವಿಲ್ಲದ ಪದ
ಭರವಸೆಯ ತುಂಬಿರುವ ಗೆಳೆಯ ಶಶಿಗೆ
ಜಾಲದಲಿ ಕಳೆದೋದ ಮಾಹಿತಿಯ ಹುಡುಕಾಡಿ
ಹಲಹೊಸತ ಕಲಿಸಿರುವ ಗೆಳೆಯಾದಿಗೆ||

 ಹೀಗಲ್ಲ ಹಾಗೆಂದು ತಿದ್ದೆನ್ನ ಜೊತೆಗಿದ್ದ
ಹಲಹೊಳಹು ತೋರಿಸಿದ ರವಿ, ಕಿರಣಗೆ
ಮಾಹಿತಿಯ ಹರಿಸುತಿಹ ಹರೀಶನಿಗೆ
ಹೊಸಲೋಕ ತೋರಿಸಿದ ಟೆಕ್ಸತ್ಯಗೆ
ಹೇಳಲೋದರೆ ನಾನು, ಹಲವಾರು ಜನರಿಹರು
ಮೆಚ್ಚಿಹರು, ಚುಚ್ಚಿಹರು, ನೋಡಿ ನಕ್ಕವರು
ಕುಣಿಯೆಂದು ರಂಗದಲಿ ಬಿಟ್ಟು ನಕ್ಕವರು
ಬೆಳೆ ತಮ್ಮ ನೀನೆಂದು ನೀರೆರೆದ ಜನರು
ಎಲ್ಲರಿಗೂ ಅರ್ಪಣೆ ಈ ಕೆಲವು ಸಾಲುಗಳು
ಹೇಳಲಾಗದ ಭಾವ ತಿಳಿಸಲೆಂದು
ಮೆಚ್ಚಿದ ಮನವೊಮ್ಮ ನೆನೆಯಲೆಂದು||

 ಪಯಣದ ಆರಂಭ
ಬರೆಯಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಆದರೆ ಕವಿತೆ ಬರೆಯಲಾಗಿರಲಿಲ್ಲ. ಮೊದಲ ಕವಿತೆ ಬರೆದದ್ದು ಇದೇ ವರ್ಶದ ಫೆಬ್ರವರಿ ಏಳರಂದು..ಅದು ಕವನ ಅನ್ನುವುದಕ್ಕಿಂತ ಭಾವವನ್ನು ಸಾಲುಗಳಲ್ಲಿ ಸೆರೆ ಹಿಡಿಯಲು ನಾ ಮಾಡಿದ ಪ್ರಯತ್ನ ಎನ್ನಬಹುದೇನೋ..ಆಗ ಸ್ಪೂರ್ತಿಯಾಗಿದ್ದು ಗೆಳೆಯ ಶಶಿ, ಕವನ ಸಂಕಲನ ಪ್ರಕಟಿಸಿದ್ದ ತಂಗಿ ಸೌರಭ. ,ಒದಲು ಬರೆದದ್ದನ್ನ ಕವನ ಅನ್ನುವುದಕ್ಕಿಂತಲೂ ಮುಗಿಯುತ್ತಿದೆಯಲ್ಲಾ ಇಂಜಿನಿಯರಿಂಗ್ ಎಂಬ ವ್ಯಥೆ ಎನ್ನಬಹುದೇನೋ..ತಮಾಶೆಗೋ ಏನೋ ಗೆಳೆಯರು ಬಹಳವೇ ಏರಿಸಿದರು.ಅದಕ್ಕೆ ಕಾರಣವಾದ FaceBook ಗೂ ಧನ್ಯವಾದ ಹೇಳಲೇಬೇಕು. ಆಮೇಲೆ ಹೊತ್ತೊಯ್ಯುತ್ತಿದ್ದ ಸತ್ತ ಹೆಣವನ್ನು ಕಂಡ ನನಗೆ ಏನು ಕಂಡಿತೋ ಏನೋ ಮತ್ತೊಂದು ಬರೆದೆ. ಅದನ್ನು ಮೆಚ್ಚಿದ ನನ್ನ ಮಾವ "ಸಂಪದ", "ಕೆಂಡ ಸಂಪಿಗೆ" ಗಳ ಬಗ್ಗೆ ಹೇಳಿದರು. ಅದೇ ದಿವಸ ಗೆಳತಿಯೊಬ್ಬಳು "ಕಥೆ ಕವನ ಕಾಲಹರಣ" ಕ್ಕೆ ಹಾಕಿದಳು.. ಅಲ್ಲಿ ಸಿಕ್ಕಿದ ಪ್ರೋತ್ಸಾಹಕ್ಕೆ ನಾನು ಎಂದೂ ಋಣಿಯಾಗಿರಬೇಕು. ಅಲ್ಲಿನ ಕಿರಣಣ್ಣ,ಅನ್ಸತ್ತೆ, ಪ್ರಶಾಂತಣ್ಣ, ಮಂಜಣ್ಣ .. ಈಗ ಗಣೇಶಣ್ಣ ಎಲ್ಲರೂ ನಾ ಬರೆದ ಕವಿತೆ, ಲೇಖನಗಳನ್ನ ಮೆಚ್ಚಿ ಬೆನ್ನು ತಟ್ಟುತ್ತಾ ಬಂದರು, ತಟ್ಟುತ್ತಿದ್ದಾರೆ. ಕಿರಣಣ್ಣನನ್ನಂತೂ ನಾನು ಹಲವಕ್ಕೆ ಗುರುವೆಂದೇ ಅನ್ನಬಹುದು.

 ನಂತರ
"ಸಂಪದ" ದಲ್ಲಿ ಬರೆದ ಲೇಖನದಿಂದ ಪರಿಚಯವಾದವರು ಶಿವಮೊಗ್ಗದ ಸತ್ಯಚರಣರು. ಅವರಿಂದ ಸುಮಾರಷ್ಟು ತಂತ್ರಜ್ಞಾನ ವಿಷಯಗಳ,"ನಿಲುಮೆ"ಯ ಪರಿಚಯವಾಯಿತು.ಈಗಲೂ ಹೊಸದಕ್ಕೆ ಬೆನ್ನು ತಟ್ಟುತ್ತಲೇ ಇರುತ್ತಾರೆ. ಆಮೇಲೆ ಮಂಜಣ್ಣನಿಂದ ಪರಿಚಯವಾದದ್ದು "ಕನ್ನಡ ಬ್ಲಾಗ್". ಅಲ್ಲಿಂದಲೂ ಹಲವು ಮೆಚ್ಚೋ, ಪ್ರೋತ್ಸಾಹಿಸಿದ ಗೆಳೆಯರು ಸಿಕ್ಕಿದರು. ಪ್ರಮೋದ್ ಶೆಟ್ಟಿ, ಚೌಟರು,ಮೋಹನ್ ಮತ್ತುಳಿದ ಹಲವು ಅಡ್ಮಿನ್ಗಳು ಬರೆದ ಎಲ್ಲಾ ಕವನ, ಲೇಖನಗಳನ್ನೂ ಮೆಚ್ಚುತ್ತಾ ಬಂದಿದ್ದಾರೆ. ಹಲ ವಿಷಯ ಖಂಡಿಸಿದ, ತಿದ್ದಿದ ರವಿ ಮೂರ್ನಾಡರನ್ನಂತೂ ಮರೆಯುವಂತೆಯೇ ಇಲ್ಲ.

ಹೇಗೆ ಮರೆಯಲಿ ನಾನು ಹರೀಶಣ್ಣನ ಬಳಗವ? ಅವ ಶುರು ಮಾಡಿದ ಗ್ರೂಪು, ಅಲ್ಲಿನ ಡಾಕೂ ನೆರವಾದ ಬಗ್ಗೆ ಹೇಳಲೇ ಬೇಕು. ಅಲ್ಲಿದ್ದ ೮೦ ಬ್ಲಾಗುಗಳಲ್ಲಿ ಒಂದೂ ಬಿಡದೇ ಎಲ್ಲವನ್ನೂ ಸುತ್ತುವ ಮನಸಾಗಿತ್ತು. ಬರೋಬ್ಬರಿ ಎರಡು ದಿನಗಳ ಪಯಣವದು. ಆಗ ಓದಿದ ಅಂಶಗಳಿಂದ ಇನ್ನೂ ಬೆಳೆಯುವುದೆಷ್ಟಿದೆ ಎಂಬ ಅರಿವಾದದ್ದು.. ಅಲ್ಲಿನ ಗೆಳೆಯರಿಗೂ ಮತ್ತೊಮ್ಮೆ ವಂದನೆ.

ಬ್ಲಾಗು ಬರೆಯಲು ಪ್ರೋತ್ಸಾಹಿಸಿದ ಮೊದಲ Followers ನಿತೀಶ, ಜಿತಿನ್ರಿಗೆ.ಬ್ಲಾಗಲ್ಲಿ ಬಂದು ಪ್ರತಿಕ್ರಿಯಿಸದಿದ್ದರೂ ಕಂಡಲ್ಲೆಲ್ಲಾ ಹೇಳುವ ಆದಿತ್ಯ,ಆದಿ, ಶಿಶಿ,ಗೌತು,ವಿಶ್ವ, ಅಕ್ಷಯ, ವರುಣ,ಪ್ರಜ್ವಲ್, ಪ್ರವೀಣ, ಕೋಳಿ, ರಕ್ಷಿತ್, ಸ್ವಾತಿ,ರಂಜಿತ,ಶ್ವೇತ,ವಿನಾಯಕ,ನಂದನ್, ಪ್ರಭಾತ, ಮಾನಸ್,ವಂದನಕ್ಕ,ಹಂಸಿಕಾ, ಅಭಿ,.. ಹಿಂಗೆ ಸುಮಾರು ಜನ ಗೆಳೆಯರು, ಮುಖ್ಯವಾಗಿ ಕ್ಲಾಸಲ್ಲಿ ಬೋರಿಡಿದ ಪೀರಿಯಡ್ಗಳ ಮಧ್ಯೆ ಇಂಥದರ ಮೇಲೆ ಬರಿಯೋ ಅಂಥ ತಮಾಶೆ ಮಾಡಿ ಆಮೇಲೆ ಮೆಚ್ಚುತ್ತಿದ್ದ ನನ್ನೆಲ್ಲಾ ಕ್ಲಾಸ್ಮೇಟುಗಳಿಗೆ, ನನ್ನೆರಡು ಕವನ ಪ್ರಕಟಿಸಿದ ಬ್ರಾಂಚಿನ ಪತ್ರಿಕೆಗೆ ,ಬ್ರಾಂಚಿಗೆ, FB ನಲ್ಲಿರುವ ರಾಕಿ,ಶಿರ್ವ,ಪ್ರಕಾಶರಂಥ ಹಿರಿಯರು,ಪ್ರದೀಪಣ್ಣನಂಥ, ಗೆಳೆಯರು .. ಎಲ್ಲರಿಗೂ ಚಿರಋಣಿ..
ಶ್ರುತಿ, ರೋಶ್ನಿ,ತೇಜು, ಪವಿ,

 ಮುಗಿಸುವ ಮುನ್ನ
ಸಂಖ್ಯೆ ದಾಟಿರಬಹುದು. ಆದರೆ ಭಾವ ಅದೇ, ಪ್ರೌಡಿಮೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಬರೆಯಲೆಂತೂ ಖುಶಿಯಾಗುತ್ತದೆ.. ನೂರು ತುಂಬಿದೆಯೆಂದು ಬರೆದುಕೊಳ್ಳುವುದು ಆತ್ಮಸ್ತುತಿಯಾಗುವುದೋ ಎಂಬ ಭಯವಿತ್ತು. ಆದರೆ ಇದಕ್ಕೆಲ್ಲ ಕಾರಣರಾದ ಇವರನ್ನೆಲ್ಲಾ ಹೆಸರಿಸದೇ ಇರುವುದು ಸ್ವಾರ್ಥವಲ್ಲದೇ ಬೇರಲ್ಲ ಅನ್ನಿಸಿತು.ಬರದೆ. ಹೆಚ್ಚಾದರೆ ಕ್ಷಮಿಸಿ. ಬಿಟ್ಟೋದರೂ ಕ್ಷಮಿಸಿ.. ಮೆಚ್ಚಿದ ಎಲ್ಲರಿಗೂ ಧನ್ಯವಾದ.. ಎಲ್ಲೆಲ್ಲಿ ಎಡವುತ್ತಿರುವೆ, ಎಲ್ಲಿಷ್ಟವಾದೆ ಎಂದು ಓದಿದ ತಾವು ತಿಳಿಸಿದಲ್ಲಿ ಅದಕ್ಕಿಂತ ಹೆಚ್ಚಿನ ಸಂತೋಷ ಬೇರಿಲ್ಲ.. ಮತ್ತೊಮ್ಮೆ ಹೇಳಿದ, ಹೇಳದ ಎಲ್ಲರಿಗೂ ವಂದಿಸುತ್ತಾ ಈ ಲೇಖನದಿಂದ ವಿರಮಿಸುವೆ.

ಒಡತಿಯಿಲ್ಲದ ಮನೆ

ಹುಲ್ಲು ಬೆಳೆದಿದೆಯಲ್ಲೋ ಹೊಸ್ತಿಲ್ಲಲ್ಲಿ
ದೇವರೊಳದಲು ಬಲೆಯ ಕಟ್ಟಿಹ ಜೇಡ
ಲಡ್ಡಾಗಿ ಗೆದ್ದಲಿಂ ಹೆಬ್ಬಾಗಿಲು
ಒಡತಿಯಿಲ್ಲದ ಮನೆಗೆ ಎಲ್ಲಿ ಗೆಲುವು?||

 ದೀಪ ಹಚ್ಚುವರಿಲ್ಲ ಸಂಜೆಯಾಗಿದೆಯಲ್ಲ
ವರಲಕ್ಷ್ಮಿ ಹೊರಗಾಕಿ ಮನೆಗೆ ಬೀಗ
ಪೇಟೆಯಳೆಯುತಿಹ ಮಗ, ಬಾರಲ್ಲಿ ಅಪ್ಪ
ಊಳಿಡುತ್ತಿದೆಯಲ್ಲ ಬಡಕು ನಾಯಿ
ಹೇ ಜೀವ ಇಲ್ಯಾಕೆ ಬೇಗ ಸಾಯಿ||

 ಖೈದಾಯ್ತು ಕೊಟ್ಟಿಗೆಯು ಕಷ್ಟವೋ ಚಾಕರಿ
ಬೇಡ ಬಾಸಿನ ಹಂಗು, ಬಿಡಲೇ ನೌಕರಿ
ಸಹಧರ್ಮಚಾರಿಣಿಯೆ ಸತ್ತಳಲ್ಲ
ಮಾತು ಕೇಳದ ಮಗನದಡ್ಡ ದಂಧೆಯೆ ಬರಿ
ಬಾರಲ್ಲೂ ಬದುಕಿಲ್ಲ ಉಳಿದಲ್ಲಿ ಸುಖವಿಲ್ಲ
ಈ ಜೇವ ಇನ್ಯಾಕೆ ಬೇಗ ಸಾಯಿ||

 ಇದ್ದೊಬ್ಬ ಅಮ್ಮನಿಗೆ ದುಡ್ಡು ಬಿಚ್ಚದ ಅಪ್ಪ
ಆಕೆ ನರಳುತ್ತಿರೆ ಆಫಿಸಲಿದ್ದ, ಲಂಚ ಹೊಡೆದಿದ್ದ
ಬಡಜನರ ಬಿಡಲಿಲ್ಲ ನಂ ಬಾಳು ರೋದನೆ
ಮನಸುಗಳಿಗವಕಾಶವಿಲ್ಲದಾ ಮನೆಯಲ್ಲಿ
ಬಾಳೋ ಬದಲು ಜೀವ ಬೇಗ ಸಾಯಿ||

 ದುರ್ಲಭದ ನರಜನ್ಮ ಪಡೆದಿರುವ ಪಾಪಿಗಳು
ನಿನ್ನೆ ಶಪಿಸುವರಲ್ಲೋ ಕ್ಷಮಿಸೊ ದೇವ
ಸೌಕರ್ಯ ಹೆಚ್ಚಾಗಿ ಮನೆಗೆ ಮಾರಿಗಳಾದ
ಅರಿವಿಲ್ಲದಾತ್ಮಗಳ ಗೋಳು ನೋಡ
ಹೋಗುವಂತೆನಬೇಡ ಅಂತ ಮನೆಗಳಿಗಿನ್ನು
ಕಷ್ಟದಲೂ ಕೈ ಹಿಡಿವ ದಯೆಯ ದೈವ||

ಎಚ್ಚರ ಬ್ಲಾಗಿಗರೆ, ಕಳ್ಳರಿಹರು

ಒಳ್ಳೆ ಸಾಹಿತ್ಯವನು ಸೃಷ್ಟಿಸಿಯೂ ಮುಂದೆ
ಕಳ್ಳನೆಂದೊಂದು ದಿನ ಬಿರುದು ಬೇಕೆ?
ನೀ ಮೊದಲು ಬರೆದದ್ದು ಎಂಬುದಕೆ ಏನುಂಟು
ಮಿಥ್ಯಾರೋಪಗಳ ಒಪ್ಪಬೇಕೆ?
ಪುಗಸಟ್ಟೆ ಮಾತುಗಳ ನುಂಗಬೇಕೆ?

 ನೀವು ಕವಿಯೇ?ಸಾಹಿತಿಯೇ? ಬರೆದದ್ದ ನಿಮ್ಮ ಬ್ಲಾಗಲ್ಲಿ ಹಾಕುತ್ತಿದ್ದೀರಾ? ಜನ ಮೆಚ್ಚಲಿ , ಇಲ್ಲದಿರಲಿ ನಿಮಗೊಂದು ನಮನ ಮತ್ತು ಅಭಿನಂದನೆ. ನೀವು ಬರೆದಿದ್ದದು ಎಂಬುದಕ್ಕೆ ಅಲ್ಲಿರುವ ದಿನಾಂಕವೇ ಸಾಕ್ಷಿ. ಬೇರೆ ಯಾರಾದರೂ ಅದನ್ನು ಕದ್ದು ತನ್ನ ಹೆಸರಲ್ಲಿ ಪ್ರಕಟಿಸಿದರೆ ನೀವು ನಿಮ್ಮ ಬ್ಲಾಗಿನ ಪ್ರಕಟಗೊಂಡ ದಿನಾಂಕವನ್ನು ತೊರಿಸಿ ಅದನ್ನು ನೀವೇ ಬರೆದದ್ದೆಂದು ನಿರೂಪಿಸಬಹುದು.ಹಾಗಾಗಿ ಬ್ಲಾಗೆಂಬುದು ನಿಮ್ಮ ಕವನಕ್ಕೆ ಶ್ರೀ ರಕ್ಷೆ..ಹಾಂ.. ತಡೀರಿ, ಇಷ್ಟಿದ್ದೂ ನಿಮ್ಮ ಕವನವನ್ನು, ಲೇಖನವನ್ನು ಯಾರಾದರೂ ಕದೀಬಹುದು. ಅದನ್ನು ನಿಮಗಿಂತ ಮುಂಚಿನ ದಿನಾಂಕದಲ್ಲಿ ತನ್ನ ಬ್ಲಾಗಲ್ಲಿ ಹಾಕಿಕೊಳ್ಳಬಹುದು. ಅವಾಗೇನ್ಮಾಡ್ತೀರ? ಹೆಚ್ಚು ಕೇಳ ಹೋದರೆ ನೀವೇ ಕಳ್ಳರೆನ್ನುತ್ತಾರೆ.. ಅರೇ, ಇದು ಹೇಗೆ ಸಾಧ್ಯ? ಇದಕ್ಕೆ ಪರಿಹಾರವೇ ಇಲ್ಲವೇ ಅನಿಸುತ್ತಿದೆಯಾ? ಅದನ್ನು ತಿಳಿಸುವ ಒಂದು ಪುಟ್ಟ ಪ್ರಯತ್ನವೇ ಈ ಕಿರು ಲೇಖನ.

ಬ್ಲಾಗಿನ ಪೋಸ್ಟಿಗೆ ಇಂದಿನದು ಬಿಟ್ಟು ಹಿಂದಿನ ದಿನಾಂಕ ಹಾಕಬಹುದೇ?
ಹೌದು. ಹಾಕಬಹುದು. post options ಗೆ ಹೋಗಿ ಅಲ್ಲಿರುವ ದಿನಾಂಕದಲ್ಲಿ ಹಳೆಯ ದಿನಾಂಕವನ್ನು ಹಾಕಬಹುದು. (ಚಿತ್ರ ನೋಡಿ)


ಹಾಗೇನಾದರೂ ಹಾಕಿದರೆ ಅದು ಪ್ರಕಟಗೊಂಡ ದಿನಾಂಕ ತೋರಿಸೋ ಜಾಗದಲ್ಲಿ ಆ ದಿನಾಂಕವನ್ನೇ ತೋರಿಸುತ್ತದೆ. ಉದಾಹರಣೆಗೆ ಚಿತ್ರ ನೋಡಿ.. :-) :-)

ಇದಕ್ಕೇನು ಪರಿಹಾರ
ತಾಂತ್ರಿಕವಾಗಿ ಹಲವಾರು ಪರಿಹಾರ ಇರಬಹುದು. ಆದರೆ ಸುಲಭವಾದದ್ದೊಂದು ಇಲ್ಲಿದೆ.
) ನೀವು ಬ್ಲಾಗಿಗೆ ಹಾಕುವ ಮೊದಲು ಅದನ್ನ ನಿಮ್ಮ ಮೆಂಚೆಯಿಂದ ನಿಮ್ಮದೇ ಇನ್ನೊಂದು ಮಿಂಚೆಗೆ ಕಳುಹಿಸಿ.ಆ ದಿನಾಂಕವನ್ನು ಬದಲಿಸಲು ಸಾಧ್ಯವಿಲ್ಲ (ಎಂಬುದು ನನ್ನ ಇಲ್ಲಿಯವರೆಗಿನ ತಿಳುವಳಿಕೆ). ಅಲ್ಲಿಗೆ ಅದನ್ನು ಯಾವತ್ತು ಕಳುಹಿಸಿದ್ದಾರೆ ಎಂಬ ಪ್ರಮಾಣ ಸಿಕ್ಕಂತಾಯಿತಲ್ಲವೇ. ಆದರೆ ನಿಮ್ಮನ್ನು ಕಳ್ಳ/ಕಳ್ಳಿ ಎಂದವರ ಹತ್ತಿರ ಈ ತರದ ಮಿಂಚೆ ಇರಲಿಕ್ಕೆ ಸಾಧ್ಯವೇ ಇಲ್ಲ.. ಹಾಗೆ ಮಾಡಬೇಕು ಅಂತ ಗೊತ್ತಿರಲಿಲ್ಲ, ಹೊಳೆಯಲಿಲ್ಲ, ಮರೆತೋಯ್ತು ಇತ್ಯಾದಿ ನೂರಾರು ಕಾರಣ ಆಮೇಲೆ ಹೇಳಿದರೂ, ಗೋಗರೆದರೂ ಯಾರೂ ನಂಬೋಲ್ಲ ಆಮೆಲೆ. ಹಾಗಾಗಿ ಕಷ್ಟಪಟ್ಟು ಬರೆದ ನೀವು ಇಷ್ಟಾದರೂ ಎಚ್ಚರವಹಿಸಿ

ನಿಮ್ಮದು ಎರಡು ಮಿಂಚೆ ಇಲ್ಲದಿದ್ದರೆ
ನಿಮ್ಮ ಮಿಂಚೆಯಿಂದ ನಿಮ್ಮ ಮಿಂಚೆ ವಿಳಾಸಕ್ಕೇ ಕಳುಹಿಸಿಕೊಳ್ಳಿ.. Draft ಅಲ್ಲಿ ಇಡಬಹುದು. ಆದರೆ ಎಲ್ಲಿಗಾದರೂ ಕಳುಹಿಸಿದಾಕ್ಷಣ Draft ಪಟ್ಟಿಯಿಂದ ತಂತಾನೇ ಅಳಿಸಿಹೋಗುತ್ತದೆ ಸುಮಾರು ಮಿಂಚೆಗಳಲ್ಲಿ. ಕಳುಹಿಸಿದ ದಿನಾಕ ಮೂಡುತ್ತದೆ ಅಷ್ಟೇ ಅದರ ಮೇಲೆ.. ಹಾಗಾಗಿ ಆ ವಿಚಾರದಲ್ಲಿ ಕಾಳಜಿ ಅಗತ್ಯ

ಇದಕ್ಕೆ ಬೇರೆ ಪರಿಹಾರಗಳು ನಿಮಗೂ ತಿಳಿದಿರಬಹುದು. ತಿಳಿದಿದ್ದರೆ ಹಂಚಿಕೊಳ್ಳಿ. ಅಥವಾ ನಾನು ಹೇಳಿದ್ದರಲ್ಲಿ ಏನಾದರೂ ತಪ್ಪಿದ್ದರೆ ಅದನ್ನೂ ಪ್ರತಿಕ್ರಿಯಿಸಿ.ಸರಿಪಡಿಸಿಕೊಳ್ಳುವೆ.

Monday, November 14, 2011

ಹಾಯ್ಕ

ನೆನಪಾಯ್ತು ಮತ್ತೇಕೊ ಹಳೆಯಾಕ್ಕೆ ಹಾಯ್ಕ
ಬಚ್ಚಿಟ್ಟ ಭಾವಗಳ ಬಿಚ್ಚಿಡೋ ತವಕ
ದ್ವಂದ್ವದೆಳೆಗಳದೊಂದು ಅಂಗಿ ನೇಯಲು ಚರಕ
ಅಥವ ಕಟುಭಾವಗಳ ಹೊಯ್ಯಲೊಂದೆರಕ||

ಅಪ್ಪ ಬ್ಯಾಂಕುದ್ಯೋಗಿ,ನೋಟೆಣಿಸೊ ಕೆಲಸ
ಖುಷಿ ಪಟ್ಟ ಮಗನಿಗೂ ಅದೇ ಹವ್ಯಾಸ
ಮನೆ ನೋಟು ಅಲ್ಲವದು ಕನ್ನ ಹಾಕಿದ್ದು
ತಪ್ಪಾದ ಕಾರಣದಿಂದ ಕಂಬಿಯೆಣಿಸುತ್ತಿದ್ದಾನೆ
|೨|

ಆತ ಜನನಾಯಕ, ಪಾರದರ್ಶಕ
-ತೆಯೆಂದು ಕಥೆ ಹೇಳಿ ವೋಟು ಕಿತ್ತಾತ
ಇಂದೂ ಆ ಮಾತು ಮುರಿದಿಲ್ಲ
ಜನರೆದುರೇ ನೋಟೆಣಿಸುತ್ತಿದ್ದಾನೆ|೩|

ದುಡ್ಡು ಹೆಚ್ಚಾಯ್ತೆಂದು ಶೋಕಿ ಬಾರು
ಮಬ್ಬುಗಣ್ಣಿಗೆ ವಿಶ್ವಸುಂದರಿ ಪಾರು
ದೇವಿಯೊಡನೆ ದೆವ್ವವೂ ತೊಲಗಿತು
ಈಗವನೇ ಸೇವಕ,ಕಂಡರಸಹ್ಯ ಬೀರು|೪|

ಊರಿಗೇ ನೀರಿತ್ತ ನೀರಗಂಟಿಯು ಆತ
ಬೆಳೆಗಳಿಗೆ ಕಳೆಯಿತ್ತ ಬುದ್ದಿವಂತ
ಇಂದು ವಯಸಾಗಿದೆ ನಡೆಯಲೂ ಆಗದ
ಕಣ್ಣೀರೊರೆಸಲೂ ಗತಿಯಿಲ್ಲವೇ ಭಗವಂತ! |೫|

ಅವನೊಳ್ಳೆ ಪೂಜಾರಿ, ಹಲಶಾಸ್ತ್ರ ಪ್ರವೀಣ
ಜನರಿಗೆಲ್ಲುಪದೇಶ ಸ್ಥಳದಲ್ಲೆ ಕೊಡುವಾತ
ಮನೆಯಲಿ ಮಾತ್ರ ದಿನಾ ಅದೇ ಗೋಳು
ಮಕ್ಕಳಿಗೆ ಬೈತ, ಹೆಂಡ್ತಿಗೆ ಹೊಡಿತ |೬|

ತನ್ನಳೆಯ ಚಾಳಿಗೆ ಹೊದ್ದೊಂದು ಮುಖವಾಡ
ದಿನವೂ ಹೊರಟಿದ್ದನು ಆಕೆ ಮನೆಗೆ
ಇಲ್ಲದಿದ್ದಕೂ ಹಲವು ಅನುಮಾನ ಜನರಿಗೆ
ಬಾಗಿಲೊಡೆದೊಂದು ದಿನ ಮೂಳೆ ಮುರಿಯಿತು|೭|

ಮನಶ್ಯಾಸ್ತ್ರವರಿತಾತ ಬಲು ಬುದ್ದಿವಂತ
ಜನರೆಲ್ಲ ಪೂಜಿಸಿಹರು ದೇವರಂತ
ಅರಿಯದಿಹ ನೆರೆಯ ಔಷಧಿಯವನ ನೋವನ್ನ
ಎತ್ತಂಗಡಿ ಮಾಡಿಸಿ ಬುದ್ದಿವಂತಿಕೆ ಮೆರೆದಿದ್ದಾನೆ|೮|