Sunday, July 31, 2011

ನಲ್ಮೆಯ ಗೆಳತಿ ನೀತಾ,
ಪ್ರೀತಿಯ ಗೆಳೆಯ ಪ್ರದೀಪ
ಎಂಬೊಕ್ಕಣೆಯನ್ನಾತುಕೊಂಡ
ನೆನಪೊರುವ ಬುಕ್ಕೆ ಸ್ಲಾಂ ಬುಕ್
ಸ್ನೇಹದ ತೋಟದಿ ಅರಿಯದೆ ಅರಳಿದ
ಸೊಬಗನು ನಂಬಿಕೆ ದಾರದಿ ಕಟ್ಟಿದ
ಹೂಗಳ ಬೊಕ್ಕೆ ಸ್ಲಾಂಬುಕ್|1||

ಬಣ್ಣದಕ್ಷರದಿ ಭಾವನೆ ಬಣ್ಣಿಸೋ
ಬೇರ್ಪಡುವ ದಿನದ ನೋವ ನೆನಪಿಸೋ
ಕಾಲಪ್ರವಾಹದಿ ಕೊಚ್ಚಿ ಹೋದವರ
ದಡಮುಟ್ಟಿದವರೆಂದೋ ನೆನೆಯಲು
ಗೆಳೆಯರಿಗೊಳಿದ ದಾರಿ ಸ್ಲಾಂ ಬುಕ್|2|

ಬರಿಯೆಂದು ಬುಕ್ಕು ಕೊಟ್ಟ ಅರೆಕ್ಷಣ
ಬರಿಯುವದೇನಂದರಿಯದೆ ತಲ್ಲಣ
ಹೀಗೆ ಕೂತವರದೆ ಹಲವೆಡೆ ಚಿತ್ರಣ
ಕೈಗೆ ಸಿಗದಾರೋ ಕೋತಿಯ ಕೂರಿಸಿ
ತುಂಬೋ ಸವಿನೆನಪಿಗಿದೇ ಅಂಕಣ
ಸ್ನೇಹವ ಸೂಸೋ ಸ್ಲಾಂಬುಕ್|3

Saturday, July 30, 2011

ರೈಲ್ವೆ ನೆನಪುಗಳು-೨: ರೈಲಲ್ಲೊಂದಿಡೀ ದಿನ ಕಳೆದದ್ದು

ಬೆಳಗ್ಗೆ ಇನ್ನೂ ಸೂರ್ಯ ಏಳೋ ಮುನ್ನವೇ ದಗ್ಗನೆ ಎಚ್ಚರ ಆಯ್ತು. ಮನೆಯಲ್ಲಿ ಎದ್ದಂತೆ ಏಳಕ್ಕೋ, ಎಂಟಕ್ಕೋ ಎದ್ದರೆ ಪ್ರಕೃತಿಯ ಕರೆ ಪೂರೈಸಲು ಪ್ರತೀ ಭೋಗಿಯಲ್ಲಿರೋ ನಾಲ್ಕೇ ರೂಮುಗಳೆದುರು ದೊಡ್ಡ ಕ್ಯೂ ಆಗಿರುತ್ತೆ ಅಂತ ಯಾರೋ ಹೇಳಿದ್ದು ನೆನಪಾಯ್ತು.ಮನೆಯಲ್ಲಿ ಎಂದೂ ಬೇಗ ಏಳದ ನಂಗೆ ಏನು ಕಾದಿದೆಯೋ ಅಂತ ಗಡಿಯಾರ ನೋಡಿದರೆ ನಾಲ್ಕೂವರೆ. ಗಡಿಯಾರದ ಮುಳ್ಳು ನಿಂತಿದೆಯೋ ನಡೀತಿದ್ಯೋ ಅಂತ ಆ ಮಬ್ಬುಗತ್ತಲಲ್ಲಿ ನಂಗೆ ಸಂಶಯ ಬರೋದ್ರೊಳಗೆ ಪ್ರಕೃತಿ ಕರೆಗಾಗಿ ಹಾಸಿಗೆಯಿಂದೆದ್ದೆ. ಕರಾಗ್ರೆ ವಸತೇ, ಸಮುದ್ರವಸನೇ.. ಯಂತ ಪ್ರಾತಃಸ್ಮರಣೆಗಳು ಎಂದಿನಂತೆ ತಮ್ಮ ಕೆಲಸ ಮಾಡಿದವು. "ನಾವೂ ಬರ್ತೀವಿ, ನಿನ್ನ ಬ್ಯಾಗ ಬಂಧನದಿಂದ ಬಿಡಿಸು" ಅಂತ ಬ್ರಷ್ಷು, ಸೋಪುಗಳೂ ಹೇಳಿದಂತಾಯ್ತು. ಸರಿಯೆಂದು ಆ ಸಹಚರರೊಂದಿಗೆ ಮುಖಮಾರ್ಜನೆಗೆ ತೆರಳಿದೆ. ಭೋಗಿಯಲ್ಲಿ ಹೆಚ್ಚಿನವರೆಲ್ಲಾ ನಿದ್ರಾದೇವಿಯ ಸವಿಯಪ್ಪುಗೆಯಲ್ಲಿ ಸುಖವಾಗಿದ್ದರಿಂದ ಪ್ರಕೃತಿಯ ಕರೆಗಾಗಿ ಕ್ಯೂನಲ್ಲಿ ನಿಲ್ಲೋ ಪ್ರಮೇಯ ಬರಲಿಲ್ಲ. ದಿನಾ ಸ್ನಾನವಾಗೋವರೆಗೆ ಹನಿ ನೀರೂ ಕುಡಿಯದಂತ ಸಂಪ್ರದಾಯ ಪಾಲಿಸದಿದ್ರೂ, ಮನಸ್ಸಿಗೆ ಸ್ವಲ್ಪ ಕಿರಿಕಿರಿಯಾದ್ರೂ ಅಲ್ಲಿ ಸ್ನಾನದ ಸಾಹಸ ಮಾಡಲಿಲ್ಲ. "ಸಂಚಾರೀ ಶೂದ್ರವದಾಚರೇತ್" ಎಂಬ ಮಾತು ನೆನಪಾಯ್ತು.


ಗಂಟೆ ಐದಾಗ್ತಾ ಬಂತು. ಇನ್ನೂ ಪೂತ್ರಿ ಬೆಳಕು ಹರಿದಿಲ್ಲ. ಆಗ್ಲೇ ಮುಂಚೆ ಹೇಳಿದಂತೆ ಕ್ಯೂ ಬೆಳೆಯೋಕೆ ಶುರು ಆಯ್ತು. ಬೇಗ ಎದ್ದು ತಯಾರಾದ ನಂಗೆ ಇನ್ನೇನು ಕೆಲಸ? ಮತ್ತೆ ಮಲಗುವುದು. ನಿದ್ರಾದೇವಿ ಮತ್ತೆ ಬರಲಾ, ಬಿಡಲಾ ಅಂತ ಆಡುತ್ತಾಳೆ. ನಿದ್ದೆ ಬಂದಾಗ ಹೊಟ್ಟೆ ಹಸಿಯೋದಿಲ್ಲ ಅನ್ನೋ ಸತ್ಯದ ಅರಿವಾದದ್ದು ಆಗಲೇ. ನಿದ್ದೆ ಬರ್ದಿದ್ರೂ ಎದ್ದೇನು ಮಾಡೋದು ಅಂತ ಅಲ್ಲೇ ಹೊರಳಾಟ. ಕಿಟಕಿಯಾಚೆಯ ರಮಣೀಯ ಪ್ರಕೃತೀನ ನೋಡೋದು, ಮಗ್ಗುಲು ಬದಲಾಯಿಸುತ್ತಾ ಕಣ್ಣು ಮುಚ್ಚೋದ್ರಲ್ಲಿ ಸಮಯ ಕಳೀತು.

ಮನೇಲಿ ನಾವೆಲ್ಲಾ ಏಳೋ ಏಳು ಘಂಟೆ ಹೊತ್ತಿಗೆ ಭೋಗಿಲಿರೋ ಜನರೆಲ್ಲಾ ತಯಾರಾಗಿ ಈ ಕ್ಯೂ ಮುಗೀತು.
ಕಾಫಿ, ಟೀ ಅವರು, ಇಡ್ಲಿ, ವಡೆ, ಉಪಮ, ಬ್ರೆಡ್ ಆಮ್ಲೇಟ್ ನವರು ಪ್ಯಾಂಟ್ರಿಯಿಂದ ಬರೋಕೆ ಶುರು ಮಾಡಿದ್ರು.( ಕಾಫಿ, ಟೀ, ನೀರು, ಕೂಲ್ ಡ್ರಿಂಕ್ ನವರು ಇಡೀ ದಿನ ಬರ್ತಾರೆ ಅನ್ನೋದು ಆಮೇಲೆ ತಿಳೀತು ಬಿಡಿ).ನಾವು ವಡೆ, ಉಪಮ ತಂಗೊಂಡ್ವಿ.ಕೋಡು ಬಳೆಯಂತಿದ್ದ ೨ ವಡೆ, ಸೌಟು ಉಪಮಾ ನೋಡಿ ಅಳಬೇಕೋ ನಗಬೇಕೋ ಗೊತ್ತಾಗ್ಲಿಲ್ಲ.ಇದನ್ನು ತಗಂಡ್ರೆ ನಾನೂ ಉಚಿತ ಅಂತ ಜೊತೆಗಿದ್ದ ಸಾಸು ಸ್ಯಾಚೆ ಆಣಕಿಸಿದಂತಾಯ್ತು. ತಿಂದ ಶಾಸ್ತ್ರ ಮುಗಿಸಿದ ನಾವು ಮತ್ತೆ ಹಿಂದಿನ ರಾತ್ರೆಯಂತೆ ಹರಟತೋಡಗಿದೆವು. ಹಗಲೆಲ್ಲಾ ಕೆಳಗಿನ ಬರ್ತ್ನಲ್ಲಿ ಕೂತು ಹರಟೋದು, ಮಲಗಬೇಕು ಅನ್ನಿಸಿದ್ರೆ ಮಧ್ಯದ ಬರ್ತ್ ಬಿಚ್ಚಿ ಅಥವಾ ಮೇಲಿಂದಕ್ಕೆ ಹತ್ತಿ ಮಲಗೋದು.. ಇದೇ ರೈಲಿನ ಬಹುತೇಕರಂತೆ ನಮ್ಮ ಘನಂದಾರಿ ಕೆಲಸ ಆಯ್ತು. ಇಸ್ಪೀಟಾಡೋರು, ಬರ್ತಲ್ಲಿ ಕೂತೋ , ಮಲಗಿಯೋ ತರಹೇವಾರಿ ಪುಸ್ತಕ ಓದೋರು, ಕಾಲಕಾಲಕ್ಕೆ ಭಜನೆ ಮಾಡೋ ಅಜ್ಜಿಯರು, ಕುಣಿದಾಡುತ್ತಿದ್ದ ಮಕ್ಕಳು ಹೀಗೆ ಹಲವಾರು ತರದವರು ನಂ ಭೋಗಿಲಿದ್ರಿಂದ ಭಾರತದ ಸಣ್ಣ ತುಣುಕೊಂದು ಒಂದು ಕಾಲದಿಂದ ಇನ್ನೊಂದಕ್ಕೆ, ಒಂದು ಪ್ರದೇಶದಿಂದ ಇನ್ನೊಂದಕ್ಕೆ ರೈಲೆನ್ನೋ ಚುಕುಬುಕು ವಾಹಕದಲ್ಲಿ ಹೋಗ್ತಿದೆಯೇನೋ ಅನ್ನಿಸ್ತಿತ್ತು.

ಹಿಂದಿನ ದಿನ ರಾತ್ರಿಯೇ ಕರ್ನಾಟಕ ದಾಟಿ ಆಗಿದ್ದರಿಂದ ಆಂರ್ಧದ ತರಾವರಿ ಬೋರ್ಡುಗಳು ಕಾಣುತ್ತಿದ್ದವು. ಸೆಖೆಯೂ ಏರತೊಡಗಿತ್ತು. ದೆಲ್ಲಿ ದಂಪತಿ ತಾವು ತಂದಿದ್ದ ರೊಟ್ಟಿ ತಿಂದರು. ಬೆಂಗಳೂರಿನ ಅಣ್ಣನ ಜೊತೆ ಮಜಾ ಮಾಡಲು ಬಂದಿದ್ದ ನೋಯ್ಡಾ ಹುಡುಗ ಹಿಂದಿನ ದಿನದ ರೈಲು ತಪ್ಪಿಸಿಕೊಂಡು ನಮ್ಮ ರೈಲಿಗೆ ಬಂದಿದ್ದ. waiting list ಅಲ್ಲಿ ಇದ್ದಿದ್ದರಿಂದ ಅವನ ಸ್ಥಿತಿ ಅತಂತ್ರವಾಗಿತ್ತು. ನಮ್ಮ ಭೋಗಿಯಲ್ಲಿ ನಮ್ಮೆದುರ ಸೀಟು ಖಾಲಿ ಇದ್ದುದರಿಂದ, ರಾತ್ರಿಯಿಡೀ ಟಿ.ಟಿ ಚೆಕಿಂಗ್ ಗೆ ಬರದಿದ್ದರಿಂದ ಅವರೂ ನಮ್ಮೊಡನೆ ಖುಷಿಯಾಗಿ ಕೂತಿದ್ದರು. ಲೌಡು ಸ್ಪೀಕರು ಅಳವಡಿಸಿದ ಅವನ ಮೊಬೈಲಲ್ಲಿ ಪಂಜಾಬಿ ಹಾಡು ಕೇಳುತ್ತಾ, ಹರಟುತ್ತಾ, ಪ್ರಕೃತಿ ಸೌಂದರ್ಯ ವೀಕ್ಷಿಸುತ್ತಾ ಕಾಲ ಕಳೆಯೋ ಹೊತ್ತಿಗೆ ಮಧ್ಯಾಹ್ನ ಆಯ್ತು. ಹೊಟ್ಟೆ ಚುರುಗುಟ್ಟೋಕೆ ಶುರು ಆಯ್ತು.ಸರಿ ಅಂತ ಪ್ಯಾಂಟ್ರಿಯವರು ತಂದ ರೈಲಿನ ವೆಜ್ ಬಿರಿಯಾನಿಯನ್ನು ತಿಂದೆ. ಅದು ಎಷ್ಟು ಚೆನ್ನಾಗಿತ್ತು ಅಂದ್ರೆ ರಾತ್ರೆ ರೈಲಲ್ಲಿ ಏನೂ ತಿನ್ನಬಾರದು ಅನ್ಸೋಕೆ ಶುರುವಾಯ್ತು ಅದರ ರುಚಿಯಿಂದ. ಬೆಲೆಗೆ ಅಷ್ಟೆಲ್ಲಾ ಹೆದರುತ್ತಿರಲಿಲ್ಲ ನಾನು. ಅದರ ಅನುಭವವೂ ಆಯಿತು.

ಆಂದ್ರದಲ್ಲಿ ಆಡು ಸಾಕುತ್ತಾರೆ. ನಮ್ಮಲ್ಲಿ ದನ ಎಮ್ಮೆಗಳಂತೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ದನ, ಪಂಜಾಬಿನಲ್ಲಿ ಎಮ್ಮೆ. ಹೀಗೆ ರೈಲಲ್ಲಿ ಕೂತಂಗೇನೆ ಬೇರೆ ಬೇರೆ ಸಂಸ್ಕೃತಿಗಳ ದರ್ಶನ ಆಯ್ತು.ರೈಲಿನುದ್ದಕ್ಕೂ ಬತ್ತಿದ ವಿಶಾಲ ನದಿಗಳು, ಅವುಗಳ ಅಗಾಧ ಮರಳುಹಾಸುಗಳು, ಖಾಲಿಯಾದ ತೊರೆಗಳನ್ನು ನೋಡಿದಾಗ ವರುಣನಿಗೆ ಹಿಡಿಶಾಪ ಹಾಕುವಂತೆ ಅನಿಸುತ್ತಿತ್ತು. ಶಿಥಿಲಾವಸ್ಥೆಯಲ್ಲಿದ್ದ ಜನರಿಲ್ಲದ ಹಳೇ ಮನೆಗಳು ಹಂಚಿಲ್ಲದೇ , ಕಿಟಕಿ ಬಾಗಿಲಿಲ್ಲದಿದ್ದರೂ ತಮ್ಮ ಅಸ್ತಿತ್ವ ಕಾಯ್ದುಕೊಂಡು ಅರಿಯದ ಯಾವುದೋ ಪುರಾತನ ಕಾಲಕ್ಕೆ, ನೋವು ನಲಿವುಗಳಿಗೆ ಸಾಕ್ಷಿಯಾದಂತಿದ್ದವು.ಸಂಜೆಯಾಗುತ್ತಿದ್ದಂತೆ ಕವಿದ ದಟ್ಟ ಮೋಡಗಳು ಎಲ್ಲೋ ಭಾರಿ ಮಳೆಯಾಗುತ್ತಿರೋ ಸೂಚನೆ ನೀಡುತ್ತಿದ್ದವು. ಆ ಮಳೆ ಇಲ್ಲಾದ್ರೂ ಬರಬಾರದೇ, ಬತ್ತಿರೋ ಈ ತೊರೆಗಳನ್ನ ತುಂಬಿಸಬಾರದೇ ಅನಿಸುತಿತ್ತು. ಸುಮಾರು ಸಮಯದ ನಂತರ ರೈಲ ಮೇಲೂ ಬಿದ್ದ ಕೆಲ ಮಳೆ ಹನಿಗಳಿಂದ ಸ್ವಲ್ಪ ತಂಪೆನಿಸಿದ್ರೂ ಆಮೇಲೆ ಅದರ ಸುಳಿವೂ ಇಲ್ಲ.ಸೆಖೆಯೂ ವಿಪರೀತ ಏರತೊಡಗಿತ್ತು. ಇದರ ಮಧ್ಯೆ ಬರುತ್ತಿದ್ದ ಕಾಫಿ, ಟೀ ಯವರು, ಕೀ ಚೈನು, ಪುಸ್ತಕ ಮಾರುವವರು ಆ ಸೆಖೆಗೇ ಹೊಂದಿಕೊಂಡು ಇದುವೇ ಇಲ್ಲಿನ ಜೀವನ ಎಂದತಾಗುತ್ತಿತ್ತು..

ಫ್ಯಾನುಗಳು ತಿರುಗುತ್ತಿವೆ. ಆದರೂ ಸ್ವಲ್ಪ ತಂಪಿಲ್ಲ. ನಮ್ಮ ರೈಲು ಸೂಪರ್ ಫಾಸ್ಟ ಆದ್ದರಿಂದ ಬರೀ ೭ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸುವುದಾಗಿತ್ತು. ನಿರಂತರ ಸಂಚಾರದಿಂದ ಭೋಗಿಯೂ ಬಿಸಿಯೇರತೊಡಗಿತ್ತು. ಬಾಣಲೆಯ ಹತ್ತಿರ ನಿಂತಂತಹ ಅನುಭವ. ದೆಲ್ಲಿಯಲ್ಲಿ ಇನ್ನೂ ಸೆಖೆ ಅನ್ನೋ ದೆಲ್ಲಿ ದಂಪತಿಗಳ ಎಚ್ಚರಿಕೆ ಮಾತಿಂದ ನಮಗೆ ಗಾಯದ ಮೇಲೆ ಉಪ್ಪು ಸುರಿದಂತಾಯ್ತು


ಆಂದ್ರಕ್ಕೆ ಹೋಲಿಸಿದರೆ ಮಹಾರಾಷ್ಟ್ರ ಕಾಡುಗಳು ಸ್ವಲ್ಪ ತಂಪು. ಅಂದು ಸಂಜೆ ರೈಲು ಹತ್ತಿದ ಮಹಾರಾಷ್ಟ್ರದ ಕುಟುಂಬ ಇಡೀ ರೈಲು ತಮ್ಮದೇ ಅನ್ನುವಂತೆ ವರ್ತಿಸತೊಡಗಿದರು.ಕಾಡಿನ ಶಾಂತ ಸ್ವಭಾವ ಅವರಲ್ಲಿ ಸ್ವಲ್ಪವೂ ಇದ್ದಂತೆ ಕಾಣಲಿಲ್ಲ. ಅವರ ೧೬ ಸೀಟು waiting ನಲ್ಲಿ ಇತ್ತು. ಇದ್ದವರು ೨೭ ಮಂದಿ. ಆದರೂ ಪೂರ್ತಿ ಗಲಾಟೆ. ನಮ್ಮನ್ನೂ, ದೆಲ್ಲಿ ದಂಪತಿಗಳನ್ನೂ ಬೇರೆ ಸೀಟಿಗೆ ಹೋಗಿ ಅಂತ ಎಬ್ಬಿಸಲು ನೋಡುತ್ತಿದ್ದರು. ನಾವು ಅದಕ್ಕೆ ಸೊಪ್ಪು ಹಾಕದಿದ್ದರೂ, ನೋಯ್ಡಾ ಹುಡುಗರು ಮಾತ್ರ ಬೇರೆ ಭೋಗಿಗೆ ಹೋಗುವಂತಾಯಿತು. ಎಲ್ಲಾ ಝಣ ಝಣ ಕಾಂಚಾಣ.. ಟಿ.ಟಿ ಕೃಪೆ. ಅವರು ಎಲ್ಲೆಡೆ ಸಾಮಾನು ಎಳೆಯುವುದು, ಜೋರು ಮಾತು, ಕೆಳಗಿನ ಬರ್ತ್ನಲ್ಲಿ ಆರಾಮಾಗಿ ಕೂರಲಾಗದಷ್ಟು ತಾವೇ ಕೂತು ನಮ್ಮೆಲ್ಲರ ನೆಮ್ಮದಿ ಕೆಡಿಸಿದ್ದರು. ಅದುವರೆಗೆ ಆರಾಮಾಗಿದ್ದ ನಮಗೆ ಆಗ ಬಿಸಿ ತುಪ್ಪ ಬಾಯಿಗೆ ಹಾಕಿಕೊಂಡಂತ ಅನುಭವ. ಎದ್ದು ಹೋಗಿ ಅನ್ನೋಕಾಗುತ್ತಾ ? ನೆಲದಲ್ಲೇ ಹಾಸಿ ಮಲಗಿದ ಅವರು ರಿಸರ್ವೇಷನ್ ಇಲ್ಲದ ಪ್ರಯಾಣ ಎಷ್ಟು ಕಷ್ಟ ಅಂತ ನೆನಪಿಸಿದ್ರು.

ಹೇಗೋ ಮಾರನೇ ದಿನ ಬೆಳಗಾಯಿತು. ಕೆಳಗೆ ನೋಡಿದರೆ ನಮ್ಮ ಕಾಲಿಡಲೂ ಆಗದಂತೆ ಮಲಗಿದ್ದಾರೆ. ಹೇಗೋ ಮೂಲೆಯಲ್ಲಿದ್ದ ಚಪ್ಪಲಿ ಹುಡುಕಿ ನಿನ್ನೆಯಂತೆ ನಿತ್ಯಕರ್ಮ. ಮಥುರ, ಆಗ್ರಾಗಳನ್ನು ನಿನ್ನೆಯೇ ನೋಡಿದ್ದರಿಂದ ದೆಲ್ಲಿ ಬರುವುದರ ನಿರೀಕ್ಷೆಯಲ್ಲೇ ಬೆಳಗಾಗಿತ್ತು. ಪರಿಚಯವಾಗಿದ್ದ ದೆಹಲಿ ದಂಪತಿ ಚೂಡಾ(ಒಣ ಅವಲಕ್ಕಿಗೆ ಹಸಿಗಡಲೆ ಮೆಣಸು ಹೆಚ್ಚಿ ಹಾಕಿ ತಯಾರಿಸಿದ್ದು) ತಿನ್ನುತ್ತಿದ್ದರು. ನಮಗೂ ಸ್ವಲ್ಪ ನೀಡಿದರು. ನಾವೂ ನಾವು ತಗೊಂಡ ವೇಫರ್ಸ್ ನೀಡಿದೆವು. ಎರಡೂ ರುಚಿಯಾಗಿತ್ತು. ಅಂತೂ ಬೆಳಗ್ಗೆ ೯:೩೦ ಕ್ಕೆ ದೆಲ್ಲಿ ಬಂತು. ಮುಖ, ಕೈಗಳಿಂದ ಇಳಿಯುತ್ತಿದ್ದ ಬೆವರ ಧಾರೆ ಒರೆಸುತ್ತಾ ಸೆಖೆಯ ನಗರಿ ದೆಲ್ಲಿಯಲ್ಲಿಳಿದೆವು. ದೇಶದ ರಾಜಧಾನಿ ದಿನನಿತ್ಯ ಬರುವ ಸಾವಿರಾರು ಪ್ರವಾಸಿಗರಂತೆ , ಕೋಟ್ಯಾಂತರ ನಿವಾಸಿಗರಂತೆ ಬೇಸರವಿಲ್ಲದೆ ಬರಮಾಡಿಕೊಂಡಿತು.

Wednesday, July 20, 2011

ರೈಲ್ವೆ ನೆನಪುಗಳು

ಚುಕು ಬುಕು ಚುಕು ಬುಕು.. ಚುಕು ಬುಕು.. ಕೂ .. ರೈಲಿನ ಶಬ್ದ ಕೇಳಿದಾಗಲೆಲ್ಲಾ ಸಣ್ಣವರಿದ್ದಾಗ ಆಡುತ್ತಿದ್ದ ರೈಲಾಟ ನೆನಪಿಗೆ ಬರುತ್ತದೆ.ಸಣ್ಣವನಿದ್ದಾಗ ನಮ್ಮೂರು ಸಾಗರಕ್ಕೆ ಬರುತ್ತಿದ್ದ ರೈಲನ್ನು ದೂರದಿಂದ ನೋಡುವುದರಲ್ಲೇ ಖುಷಿ ಪಡುತ್ತಿದ್ದ ನನಗೆ ಮುಂದೊಮ್ಮೆ ಅದೇ ರೈಲಿನಲ್ಲಿ ದಿನಗಟ್ಟಲೇ ಪಯಣಿಸುವ ಭಾಗ್ಯ ಸಿಗುತ್ತೆ ಅಂತ ಕನಸಲ್ಲೂ ಅನಿಸಿರಲಿಲ್ಲ.ಕೆಲವರ್ಷಗಳ ಹಿಂದೆ ಪೂನಾಕ್ಕೆ, ಇತ್ತೀಚೆಗೆ ಬೆಂದಕಾಳೂರಿಗೆ ರೈಲಲ್ಲಿ ಹೋಗೋ ಸುಯೋಗ ಲಭಿಸಿತ್ತು. ಆದರೂ ದಿನ ದಿನವೂ ಬದಲಾಗಿದೆ, ದಿನ ಬರುತಿದೆ ಕಾಲ.. ಎಂಬ ಕವಿವಾಣಿಯಂತೆ ಪ್ರತಿದಿನವೂ,ಪ್ರತಿ ಪ್ರಯಾಣವೂ ಹೊಸತು ಅಂತಲೇ ನಂಗೆ ಅನ್ನಿಸುತ್ತೆ. ಇತ್ತೀಚಿಗಿನ ಮೀರತ್ ಪ್ರಯಾಣದ ಕೆಲ ನೆನಪುಗಳು ನೆನಪ ಬುತ್ತಿಯಿಂದ ಬಿಚ್ಚಿದಾಗ...

ಮೊದಲಾ ದಿನ ಅಲ್ಲಲ್ಲ ಮೊದಲ ರಾತ್ರಿ!!..
ಭಾರತ ಸ್ವಾತಂತ್ರಸಂಗ್ರಾಮದ ಸಿಪಾಯಿದಂಗೆಯ ಉಗಮಸ್ಥಾನ ಮೀರತ್ ಬಗ್ಗೆ ನೀವೆಲ್ಲ ಓದಿರಬಹುದು. ನಂ ಕರ್ನಾಟಕದ ಹೆಮ್ಮೆಯ ನಗರಿ ಬೆಂಗಳೂರಿನಿಂದ ನಮ್ಮ ದೇಶದ ರಾಜಧಾನಿ ನವದೆಹಲಿಗೆ ಸುಮಾರು ೨೩೦೦ ಕಿ.ಮೀ ಗಳಿಗಿಂತಲೂ ಹೆಚ್ಚು ದೂರ. ಸಂಪರ್ಕ ಕ್ರಾಂತಿ ರೈಲಲ್ಲಾದರೆ ೩೩, ರಾಜಧಾನಿಯಲ್ಲಾದರೆ ೩೫ ಘಂಟೆಗಳ ಪ್ರಯಾಣ. ಅಲ್ಲಿಂದ ೭೫ ಕಿಮೀ ದೂರದ ನಗರಿ ಮೀರತ್. ನನ್ನಿಲ್ಲಿವರೆಗಿನ ಜೀವನದಲ್ಲಿ ಎಂದೂ ಅಷ್ಟು ದೂರದ ಪ್ರಯಾಣ ಮಾಡಿರಲಿಲ್ಲ. ಆದರೆ ನಾನು ಅಲ್ಲಿಗೆ ಈ ಬಾರಿ ಬರಲೇಬೇಕು ಅಂತ ಅತ್ತೆ- ಮಾವನ ಅತೀವ ಒತ್ತಾಯ. ಸರಿ, ಆದದ್ದಾಯಿತು ಎಂದು ನಿರ್ಧಾರ ಮಾಡಾಯಿತು. ಬೆಂಗಳೂರಿನ ಯಶವಂತಪುರದಲ್ಲಿ ರೈಲು ಹತ್ತಿದ್ದೂ ಆಯಿತು. ಜೊತಿಗಿದ್ದಿದ್ದು ನನ್ನತ್ತೆಯ ತಮ್ಮ, ನನ್ನ ವಯಸ್ಸಿವನೇ ಆದ ಆನಂದಣ್ಣ.ರೈಲಲ್ಲಿ ಸಾಮಾನೆಲ್ಲಾ ಬಿಟ್ಟು ಎಲ್ಲಿಗೂ ಹೋಗ್ಬೇಡಿ, ಯಾರು ಏನು ಕೊಟ್ಟರೂ ತಿನ್ನಬೇಡಿ, ರೈಲಲ್ಲಿ ಸರಗಳ್ಳರು, ಸಾಮಾನು ಕಳ್ಳರು, ಜೇಬುಗಳ್ಳರು ಹೀಗೆ ಅಸಂಖ್ಯಾತ ತರದ ಕಳ್ಳರಿರುತ್ತಾರೆ ಎಂಬ ಎಚ್ಚರಿಕೆಗಳೂ ನಮ್ಮ ಜೊತೆಗೇ ಬರುತ್ತಿದ್ದವು ಅನ್ನಿ. ಎದುರಿಗೆ ಕಾಣೋ ಪ್ರತೀ ಮನುಷ್ಯನೂ ಕಳ್ಳನಾ, ಯಾವಾಗ ನಮ್ಮನ್ನು ದೋಚುತ್ತಾನೋ ಎಂಬ ಭೀತಿ ನಮಗೆ ಕಾಡುವ ಮೊದಲೇ ನಮ್ಮ ರೈಲಿನ ಹೊರಡೋ ಸಮಯ ಆಯಿತು. ಕಾಣದ ದೇವರ ಕಾಯೋ ಭರವಸೆ ಮೇಲೆ ಮಕ್ಕಳನ್ನು ಕಳಿಸಿದ್ದ ಹಲವಾರು ಹೆತ್ತವರ ಹಾರೈಕೆಯನ್ನು, ತಿರುಗೋ ಬಯಕೆಯ ಯುವಕ-ಯುವತಿಯರನ್ನು, ತಮ್ಮೂರಿಗೆ ಮರಳುತ್ತಿದ್ದ ಹಲವರನ್ನು, ಇನ್ನೂ ಅರಿಯದ ಹತ್ತು ಹಲವನ್ನು ಹೊತ್ತು ನಮ್ಮ ರೈಲು ರಾತ್ರೆ ೧೦:೨೦ ಕ್ಕೆ ನಿಲ್ದಾಣಕ್ಕೆ ಸೀಟಿಯ ಟಾಟಾ ಹೇಳಿತು.

ನಾವು ಮುಂಚೆಯೇ ಸ್ಲೀಪರ್ ಕ್ಲಾಸಲ್ಲಿ ಬುಕ್ ಮಾಡಿಸಿದ್ದೆವು.ಅದರಲ್ಲಿ ಎದುರು ಬದುರು ೬ ಸೀಟು ಮತ್ತೆ ಕಿಟಕಿ ಬದಿ ೨ ಸೀಟು. ಮೇಲ್ಗಡೆ ಬರ್ತ್ ಸಿಕ್ಕವರಿಗೆ ಅದು ನಿಜ ಅರ್ಥದಲ್ಲಿ ಸ್ಲೀಪರ್. ಮಧ್ಯ ಅಥವಾ ಕೆಳಗಡೆಯ ಬರ್ತ್ ಸಿಕ್ಕವರು ಮಲಗೋಕೆ ರಾತ್ರೆವರೆಗೆ ಕಾಯಬೇಕು. ಅಲ್ಲೀವರಗೂ ಎಲ್ಲ ಕೆಳಗಡೆ ಬರ್ತಲ್ಲೇ ಕೂತಿರುತ್ತಾರಲ್ಲಾ.. ಅದಕ್ಕೆ. ಅಂದು ನಾವಿದ್ದ ರೈಲಲ್ಲಿ ಆ ೮ರಲ್ಲಿ ಬರೀ ನಾಲ್ಕರಲ್ಲಿ ಮಾತ್ರ ಬುಕ್ ಮಾಡಿಸಿದವರು ಬಂದಿದ್ದರು. ನಾವು ಮತ್ತು ಒಂದು ದಂಪತಿ.ನಿಧಾನಕ್ಕೆ ರೈಲು ಹೊರಡತೊಡಗಿದಂತೆ ಅವರ ಪರಿಚಯ ಆಯಿತು. ಅವರು ದೆಲ್ಲಿಯವರಂತೆ. ಅವರ ಮಗನಿಗೆ ಬೆಂಗಳೂರಿನ DRDO ನಲ್ಲಿ ಕೆಲಸ ಸಿಕ್ಕಿತ್ತಂತೆ. ಅವನನ್ನು ನೋಡಲು ಬಂದಿದ್ದ ಅವರು ಸ್ವಗ್ರಾಮಕ್ಕೆ ಮರಳುತ್ತಿದ್ದರು. ನೋಡಿದರೆ ನಾವು ಕೇಳಿದ ಯಾವುದೇ ಕಳ್ಳರ ಹೋಲಿಕೆ ಕಾಣುತ್ತಿರಲಿಲ್ಲ. ಆದರೆ ಹೇಗೆ ಹೇಳುವುದು.ಯಾವ ಹುತ್ತದಲ್ಲಿ ಯಾವ ಹಾವಿದೆಯೋ?.. ಆದರೂ ಅವರ ಮಾತುಗಳನ್ನು ನಂಬಬಹುದು ಅಂತ ನಮ್ಮಿಬ್ಬರಿಗೂ ಅನ್ನಿಸಿದ್ದರಿಂದ ಅವರೊಂದಿಗೆ ಮಾತನಾಡಲಾರಂಭಿಸಿದೆವು. ಹೀಗೆ ಎಲ್ಲಿಂದ , ಎಲ್ಲಿಗೆ ಎಲ್ಲ ಆದ ಮೇಲೆ ಸ್ವಲ್ಪ ವಿಶ್ವಾಸ ಬೆಳೆಯಲಾರಂಭಿಸಿತು. ೨ ದಿನದ ಮಟ್ಟಿಗಾದರೂ ಇವರೇ ನಮ್ಮ ಬಂಧು ಬಳಗ. ಹಾಗಾಗಿ ಇವರೊಂದಿಗೆ ಸ್ವಲ್ಪವಾದರೂ ಮಾತನಾಡೋದ್ರಲ್ಲಿ ತಪ್ಪಿಲ್ಲ ಅಂತ ಅನ್ನಿಸ್ತು. ಹಾಗಾಗಿ ನಾವೂ ಅವರ ಹರಟೆಯಲ್ಲಿ ಸೇರಿಕೊಂಡೆವು. ಖಾಲಿ ಇದ್ದ ಸೀಟಿನಲ್ಲಿ ಹಿಂದಿನ ದಿನದ ರೈಲು ತಪ್ಪಿಸಿಕೊಂಡು ಈ ರೈಲಿಗೆ ಬಂದಿದ್ದ ರಿಸವ್ರೇಷನ್ ಕನ್ಫರ್ಮ್ ಆಗದಿದ್ದ ಇಬ್ಬರು ನೋಯ್ಡಾದ ಹುಡುಗರು ಕುಳಿತಿದ್ದರು. ಸೀಟಂತೂ ಸಿಕ್ಕಿಲ್ಲ, ಹೇಗಿದ್ದರೂ ಈ ಸೀಟು ಖಾಲಿ ಇದ್ಯಲ್ಲಾ, ಇಲೇ ಮಲಗೋಣ. ರಾತ್ರಿ ಟಿ.ಟಿ ಹರ್ತ ಈ ಸೀಟನ್ನು ತಮಗೆ ಮಾಡಿಸಿಕೊಳ್ಳೋಣ ಅಥವಾ ಅವನು ಬರೋವರೆಗಾದ್ರೂ ಮಲಗೋಣ ಅನ್ನೋ ಉದ್ದೇಶ ಅವರದ್ದು.

ದೂರದೂರಿಗೆ ಹೋಗೋ ರೈಲುಗಳಲ್ಲಿ ಅದರದ್ದೇ ಆದ ಅಡುಗೆ ಭೋಗಿ(PANTRY) ಇರುತ್ತದೆ ಅಂತ ಕೇಳಿದ್ದೆ. ಆದರೆ ಅದನ್ನು ನೋಡೋ ಯೋಗ ಈ ಸಲ ಸಿಕ್ಕಿತ್ತು. ( pantry ಹೊರಮುಖದ ಚಿತ್ರ (photo-1) ನೋಡಿ). ನಾನು ರೈಲತ್ತೋ ಮೊದಲೇ ಊಟ ಮಾಡಿದ್ದರಿಂದ ಅಂದು ರಾತ್ರಿ pantry ಇಂದ ಏನೂ ತಿನ್ನಲಿಲ್ಲ. ಬೆಂಗಳೂರಿನ ತಂಪು ಹವೆ, ದಿಲ್ಲಿಯ ಬೇಯೋ ಸೆಖೆಯ ಬಗ್ಗೆ, ಅವರ DRDO ಮಗನ ಕೆಲಸದ ಬಗ್ಗೆ ಹರಟಿದ ನಮಗೆ ನಮ್ಮ ಬೆಂದಕಾಳೂರ ಬಗ್ಗೆ ದೆಲ್ಲಿಗರಲ್ಲಿನ ಒಳ್ಳೆಯ ಅಭಿಪ್ರಾಯ ತಿಳಿದು ಸಂತೋಷವಾಯಿತು. ನೋಯ್ಡಾವಾಸಿಗಳೂ ಇದನ್ನು ಮೆಚ್ಚಿದರು. ಆದರೆ ಇಲ್ಲಿನ ಟ್ರಾಪಿಕ್ ಜಾಂ, ಮಾಲಿನ್ಯಗಳು ಅತೀ ಅನ್ನೋ ಅವರ ಮಾತಿಗೆ ನಾವು ತಲೆದೂಗಲೇಬೇಕಾಯಿತು..ರಾತ್ರೆ ಹನ್ನೊಂದರವರೆಗೆ ಹರಟಿದ ನಾವು ಕೊನೆಗೆ ನಮ್ಮ ಬರ್ತ್ ಹತ್ತಿ ಮಲಗಿದೆವು. ನಿಧಾನವಾಗಿ ರೈಲಿನ ಕುಲುಕಾಟದಲ್ಲಿ ನಿದ್ರಾದೇವಿ ನಮ್ಮನ್ನಾವರಿಸಲಾರಂಭಿಸಿದಳು. (ಮುಂದುವರೆಯುವುದು)

Monday, July 18, 2011

ದಿನಪತ್ರಿಕೆಗಳ(ಲ್ಲಿ) ಕೊಲೆ

ಇಂದು(೧೮/೭/೧೧) ಬೆಳಗ್ಗೆ ಎದ್ದು ದಿನಪರ್ತಿಕೆ ತೆಗೆದರೆ ಕೊಲೆ ಸುಲಿಗೆಗಳೇ ಮುಖಪುಟದಲ್ಲಿ ರಾರಾಜಿಸುತ್ತಿದ್ದವು. ಇತ್ತೀಚೆಗೆ ಅವುಗಳದೇ ಹಾವಳಿ. ಅಂತರ್ಜಾಲದಲ್ಲೂ ಅದೇ ಸುದ್ದಿ.. ಅದರ ಬಗ್ಗೆ ಯೋಚಿಸುತ್ತಿದ್ದಾಗ ಹೊಳೆದಿದ್ದು ಈ ಕವನ


ದಿನಪತ್ರಿಕೆಗಳ(ಲ್ಲಿ) ಕೊಲೆ

ಇವನ ಹತ್ಯೆ, ಅವಳ ಕೊಲೆ
ಎಲ್ಲೋ ಗಲಭೆ, ಯಾಕೋ ಸುಲಿಗೆ
ದಿನವೂ ದಿನಪತ್ರಿಕೇಲಿ
ಇವುಗಳದ್ದೇ ಹಲಬಗೆ|1

ಇದೇ ಓದಿ ಬೋರಾಯಿತು
ಪುಟ ತಿರುಗಿಸಿ ನೋಡಾಯಿತು
ಕಣ್ಣುಗಳೀಗೆ ರಾಚಿತು ರಾಜಕೀಯ ವಾರ್ತೆ
ಪರರ ತುಳಿದು ತಾವು ಬೆಳೆದ ಭ್ರಷ್ಟರ ಭರಾಟೆ|2|

ಇವೇ ಇವುಗಳಿಗೆ ವಾರ್ತೆ?
ಸುದ್ದಿಗಿಹುದೆ ಕೊರತೆ?
ಬೆವರ ಬಸಿವ ಸಾಧಕರು ಸುದ್ದಿಯಲ್ಲ ಇವಕೆ
ಮುಖ್ಯ ಸುದ್ಧಿ ಮೂಲೆಗಾಕಿ,ಖಧೀಮರದೇ ಫೋಟೋ ಹಾಕಿ
ಕೆಲವು ಸುದ್ದಿ ಹಲುಬಿ ತಿರುಚಿ
ಬರೆವ ಬುದ್ದಿ ಜೀವಿಗಳಿಗೆ ಇಲ್ಲಿಲ್ಲ ಕೊರತೆ|3|

ಜನ ಓದೋದನ್ನೆ ಬರೀತಿವಂತಾರವರು
ಕೊಲೆಗಳನ್ನೇ ಇಷ್ಟಪಡುವರೆಷ್ಟು ಕಲಾವಿದರು?
ಇಹರೇ ಸತ್ತ ಸುದ್ದಿ ಓದಿ ಸಂತೋಷಿಸೋ ಜನರು
ಪುಟ ತುಂಬಿಸೋ ಜಾಹಿರಾತಲೆಲ್ಲೋ ಅವಿತ ಅಪ್ರತಿಮರ
ಆಗಸದಲಿ ಚಿಕ್ಕಿಯಂತೆ, ಬೇಕಾದುದ ಹೆಕ್ಕಿ ಓದೋ
ಕರ್ಮ ಶಪಿಸೋ ಜನರು
ಎಂದು ನಿಲ್ಲುವುದೀ ರೀತಿ ದಿನಪತ್ರಿಕೆಗಳ(ಲ್ಲಿ) ಕೊಲೆ

Thursday, July 14, 2011

ಮತ್ತೆ ಬಂದೆಯಾ ಭಯೋತ್ಪಾದಕ?

ಮತ್ತೆ ಬಂದೆಯಾ ಭಯೋತ್ಪಾದಕ?
ಅಷ್ಟಿಷ್ಟಲ್ಲ ನಿನ್ನನಾಹುತ
ಮತ್ತೆ ಮುಂಬೈಲಿ ಬಾಂಬನಿಟ್ಟೆಯಾ
ಅನ್ನವಿತ್ತವಗೆ ಮರಣ್ವಿತ್ತೆಯಾ?|1|

ರಕ್ತಸಿಕ್ತ ಹಸುಳೆಗಳ ನರಳಾಟ
ಗಾಯಗೊಂಡವರ ಗೋಳಾಟ
ಸಾವು ಬದುಕುಗಳ ಮಧ್ಯೆ ಹೋರಾಟ
ತಮ್ಮವರ ಛಿದ್ರ ದೇಹದ ನೋಟ
ಗಳ ಮತ್ತೆ ತರುವ ನಿನ್ನ ಮಂಗಾಟ|2|

ವೀರ ಯೋಧರೊಡೆ ಕಾದಲು ಆಗದೆ
ಕಳ್ಳದಾರಿಯಲಿ ಕಾವಲು ತಪ್ಪಿಸಿ
ನಮ್ಮ ಮಧ್ಯದ ದ್ರೋಹಿಗಳೊಡೆ ಸೇರಿ
ಮಾವೋ, ನಕ್ಸಲ್, ಭೂತವಾದಿಗಳು
ಹಲವು ನಾಮದಿ, ನಾನಾ ನೆಪದಿ
ಜನ ಕೊಲ್ಲೋ ನಿಮಗೆ ಎಲ್ಲಿಯ ಹೃದಯ
ನಿಮ್ಮವರೆಲ್ಲರ ಸುಖದಿರಗೊಟ್ಟು
ಇತರರ ಕೊಲ್ಲೋ ಪಾಪಿಯ ಹೃದಯ

Wednesday, July 13, 2011

ವಿದ್ಯುತ್ ಸಾಗಿಸೋ ಕರೆಂಟು ಕಂಬವೇ

ವಿದ್ಯುತ್ ಸಾಗಿಸೋ ಕರೆಂಟು ಕಂಬವೇ
ಜೊತೆಗಾಡುವವರ ಮರಣಕ್ಕೆ way
ದಾರಿಯಲೆಲ್ಲ ನೀನೆ ಕಾಣುವೆ
ಶ್ವಾನಗಳಿಗೆ ಪ್ರಿಯ ಸ್ಥೂಪವೇ|1|

ಮುಳುಗಡೆಯ ಕತ್ತಲಾಗಲು
ಡ್ಯಾಮುಗಳಿಂದ ವಿದ್ಯುತ್ ತರಲು
ಆ ಶಕ್ತಿ ಹೊತ್ತೊಯ್ವ ನೀ ಸಹಕರಿಸುವೆ
ಪೋಲು ಮಾಡುವವರಿಗೇನೂ ಅನ್ನಲು
ಆಗದ ಅಣ್ಣಾ, ಇದು ಸರಿಯೆ?|2|

ನಮ್ಮ ಮಧ್ಯದ ಅಧಿಕಾರಿಗಳು
ಜನರ ಶಕ್ತಿ ಕಾರ್ಖಾನೆಗರಿಸಿದರು
ಅನದಿಕೃತಕೂ ನಿನ್ನ ನೆಟ್ಟರು
ಇಲ್ಲದ ಅಭಾವ ಸೃಷ್ಟಿಸಲು
ತಮ್ಮ ತುಂಬದಾಸೆ ಜೇಬ ಭರಿಸಲು

Story of small sculptor

Story of small sculptor
Face-1
There was a small sculptor in a city called selsagi. He was interested in making sculptors of his surroundings. He used to study the styles of architecture in his hometown temples. But, neither his little eyes nor his mind could differentiate the styles of aryan, dravidian, Indo-Islamic styles etc..He was not bothering about those also.He was simply enjoying himself in carving sculptors. Those tiny,thogh childish looking sculptors were a mere representataion of his hidden but may be mighty talent. Who knows, he might be developing his own style. .

But he was unaware of his calibre. He was considering himself as a superhero who could carve anything he observes into beautiful realistic sculptors.. He was crawling in terms of maturity of his sculptures.Day by day, he started walking. . He grew up without any guide or Inspiration. Only he was the master of himself correcting his small mistakes and finetuning himself.Everything went fine for him until a day when he thought to show his sculptures to a renown experienced articulate sculptor of that time, Bhatji in his hometown.Bhatji never used to cool the confrontations of his works. He was famous for his unique style of art. So, the boy liked him very much and liked his various works.

He was very much thrilled by the thought of getting small appreciation for his works.He was awaiting much of guidence.But was unaware of the mighty future which had some other plans itself for him. Finally that day came. For the good or bad, happiness or sadness to give nector or bitterness in his life.who knows? Not atleast the small sculptor.

Face-2
Bhatji was a famous scluptor of selsagi province. His works were honoured by many people including the king. He was approched by many younf scluptors for suggestions regarding their work. There were many innovative young minds who never missed any of his exhibitions which used to be held often in that province exhibiting new works of him ansd his fellow scluptors. One of such lads who attracted bhatji’s mind is Swaroop. Once Swaroop met bhatji in a market. Swaroop was very happy on seeing bhatji. Heexpressed his desire to show his works to bhatji.Bhatji was happy to help always. So he agreed to meet next day.

Face-3
Little boy swaroop could not sleep sleep well that day in the thought of meeting bhatji. Finally sun rose with braight rays tearing clouds of darkness.Whether he was bringing rays of hope to swaroop or not. Only the almighty knows. Unaware of the future swaroop went to meet bhatji carrying his small bag. They were of wooden , clay, stone,metal.. many varieties of small sculptors waiting for recognition.

Bhatji saw all works of swaroop partientlly. He admired some of them. But critically examined many of them, advising him to study works of great sculptors. One of the words of bhatji struck young boy’s mind.”Dear Swaroop,what you are doing is not great sculptures.You have a long to go.But Don’t stop creating new ones”.Swaroop came back home with those words deep rooted in mind.

He forgot the last line and considered first two so seriously that he stopped creating new sculptures. Tried to understand big words.But could only fill his mind with few drops from the wast sea of art. Started trying to imitate works of other known artists. But was lost in journey unable to dicover himself. Meanwhile he used to create new ones. Got admirations mixed with critics. But he could not filter the good ones from the bad ones.With each comment he started developing inferiority complex.
Time passed without any works by swaroop. Nobody was missing it, not even swaroop himself. One day in the early morning he saw a spider’s web. A boy was curiously observing it and drawing it. It remainded swaroop of himself. The young bvoy was not bothering whether he is going to become Leonardo , Ravi verma or anyone else. Was Simply enjoying himself in painting. Swaroop observed a singing nightingale and harsh sound of crow happy of finding foof near by. None of them were bothering about the harshness or the sweetness of their sound. Then swaroop thought. If these things won’t worry about themselves, why should I? whatever I have is good only. Why to bother about what I don’t have. Why can’t I simply go on as I used to in earlier days. How can I Improve unless I try?

This struck his mind. One more transformation was about to happen. An image of a boy painting with full involvemnent was framed in the riverside clay.Sweat was pouring all over his face as if washing all dirt, bad thoughts of early days.It was pouring as if it will unleash a new person hidden beneath it. Sun was smiling behind the trees watching the little boy return to his track.

Wednesday, July 6, 2011

ಬೆಂಗ್ಳೂರಲ್ಲಿ ಬಸ್ ಮಿಸ್ ಆದಾಗ

ನಾಲ್ಕು ಜೋಡಿ ಸಿಂಹಗಳು, ಎತ್ತರೆತ್ತರಕ್ಕೆ ಹಾರುತ್ತಿದ್ದ ತ್ರಿವರ್ಣ ಧ್ವಜ, ಕಣ್ಣೆತ್ತಿ ನೋಡುವಂತ, ನೋಡಿದೊಡನೆ ಮನಸಲ್ಲಚ್ಚಳಿಯುವಂತ ಕಟ್ಟಡ... ಬೆಂಗಳೂರಿನ ಶಿವಾಜಿನಗರದಲ್ಲಿ ಗಿಜಿಗಿಜಿ ಭಾನುವಾರವೂ ನ್ಂಗೆ ಬೇಕಾದೆಡೆ ಬಸ್ಸಿರಲಿಲ್ಲ. ಕಾದು ಕಾದು ಬೇಸತ್ತ ನಾನು ಮುಂದಿನ ನಿಲ್ದಾಣದವರೆಗೆ ನಡೆಯೋಕೆ ಶುರು ಮಾಡಿದಾಗ ಕಂಡ ಕೆಲವು ದೃಶ್ಯಗಳಿವು...ಮೇಲೆ "ಸರ್ಕಾರದ ಕೆಲಸ ದೇವರ ಕೆಲಸ" ಎಂಬ ಬೋರ್ಡು.. ಹಾಂ ಅದೇ ವಿಧಾನಸೌಧ. . ಎತ್ತಮ ರಾಜಕಾರಣಿಗಳ, ಜತ್ತಿಯಂತವರ, ಹೆಗಡೆಯಂತವರ ಸಜ್ಜನಿಕೆಗೆ ಸಾಕ್ಷಿಯಾಗಿದ್ದ ಭವನ, ಇತ್ತೀಚಿಗಿನ ರಾಜಕೀಯ ದೊಂಬರಾಟಗಳಿಗೆ ಸಾಕ್ಷಿಯಾದ ಭವನದೆಡೆಗೆ ನಿಂತಾಗ ಏನೋ ಅನಿರ್ವಚನೀಯ ಅನುಭವ. ದೂರದಿಂದಲೇ ಅದರ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾಗ ಅನಿಸಿದ್ದು ಒಂದೇ.. ulti le

ವಿಧಾನಸೌಧದ ದೂರದಿಂದಲೇ ಗಮನ ಸೆಳೆವಂತ ಉಬ್ಬು ಚಿತ್ರಗಳು ಗಮನ ಸೆಳೆಯುತ್ತದೆ. ಇನ್ನು ಒಳ್ಹೋಗಿ ನೋಡಿದರೆ ಹೇಗೋ? .. ವಿಧಾನಸೌಧದ ಪಕ್ಕದಲ್ಲೇ ವಿಕಾಸಸೌಧ.. ಅದರ ಎರಡು ಗೋಪುರಗಳು, ಅದರೆತ್ತರದ ಸ್ಥಂಬಗಳು ನಾವೇನು ಕಮ್ಮೀನಾ ಎಂದಗಿತ್ತು. ಅದರ ಎದುರಿಗೆ ೩೦ರೂ ಗೆ ಛಾಯಾಚಿತ್ರ ತೆಗೆದುಕೊಡೋ ಛಾಯಾಚಿತ್ರಗ್ರಾಹಕರ(ಪಪರಾಚಿಗಳ) ಸುತ್ತಾಟ. ಎದುರಿಗೆ "ನಮ್ಮ ಮೆಟ್ರೋ" ಕಾಮಗಾರಿ ನಡೀತಾ ಇತ್ತು. ಹಾಗಾಗಿ ಆ ಪಪರಾಚಿ ಇದ್ದಂಲ್ಲಿಂದ ಸರಿಯಾಗಿ ಕಾಣುತ್ತಿರಲಿಲ್ಲ. ಆದರೆ ಅವನ ಬಣ್ಣದ ಮಾತುಗಳಿಗೆ, ತೋರಿಸೋ ಚಿತ್ರಗಳಿಗೆ ಯಾರಾದರೂ ಮರುಳಾಗುವುದೇ..

ಹಾಗೇ ಎದುರಿಗೆ ಕಂಡದ್ದು ಹೈಕೋರ್ಟ. ಹೊರ ಆವರಣದಲ್ಲಿ ಮೇಯುತ್ತಿದ್ದ ನೂರಾರು ಪಾರಿವಾಣವಳು (ನಾ ಹೋಗಿದ್ದು ಭಾನುವಾರ) ಶಾಂತ ವಾತಾವರಣಕ್ಕೆ ಸಾಕ್ಷಿಯಾಗಿದ್ದವು. ಇಲ್ಲಿ ನ್ಯಾಯದೇವತೆ ನಿರಪರಾಧಿಗಳ ಬಂಧನವನ್ನು ಕಳಚಿ ನ್ಯಾಯವನ್ನು ಮುಗಿಲೆತ್ತರಕ್ಕೆ ಒಯ್ಯುತ್ತದೆ ಎಂಬುದರ ದ್ಯೋತಕದಂತಿದ್ದವು. ಅವಕ್ಕೆ ಕಾಳು ಹಾಕುತ್ತಿದ್ದ ಜನರನ್ನು ನೋಡಿದಾಗ ನ್ಯಾಯಕ್ಕೆ ಕಾಳು ಹಾಕ್ತಿದಾರಾ? ಅನ್ನಿಸ್ತು. .ಮರುಕ್ಷಣವೇ ಪ್ರತೀ ಜೀವಿಗೂ ದೇವರು ಒಂದಲ್ಲಾ ಒಂದು ರೀತಿ ಆಹಾರ ಒದಗಿಸುತ್ತಾನೆ ಎಂಬ,"ಹುಟ್ಟಿದ ದೇವರು ಹುಲ್ಲು ಮೇಯಿಸುತ್ತಾನೆ" ಎಂಬಿತ್ಯಾದಿ ಮಾತುಗಳು ನೆನಪಾದವು.

ಹಾಗೇ ಮುಂದೆ ಸಾಗುತ್ತಿದ್ದಾಗ ಕಂಡಿದ್ದು ಕಬ್ಬನ್ ಪಾರ್ಕ್.. ಅಲ್ಲಿ ಹಸಿರಿನ ಮಧ್ಯೆ ಛಾಯಾಚಿತ್ರ ತೆಗೆಸಿಕೊಳ್ಳುವ ಹಲವರಿದ್ದರು.. ಪ್ರೇಮಿಗಳು, ಕಲಾವಿದರು, ಮುದುಕರು, ಮಕ್ಕಳು.. ಹೀಗೆ ಹಲವು ವೈವಿಧ್ಯದ ಜನರಿದ್ದರು..ಹಸಿರು ಹಾಸಿನ, ಕಲ್ಲು, ಸಿಮೆಂಟ್ ರಚನೆಗಳ ಮಧ್ಯೆ ನಾನಾ ಭಂಗಿಯಲ್ಲಿ ಕೂತು ಛಾಯಾಚಿತ್ರ ತೆಗೆಸಿಕೊಳ್ಳುವವರು ತುಂಬಾ ಜನ. ಬೇಕಾದ ಸುಂದರ ತಾಣಕ್ಕಾಗಿ ಪಪರಾಚಿಗಳನ್ನು ಬಾಡಿಗೆಗೆ ಪಡೆದು ಪಾರ್ಕ್ ತುಂಬಾ ತಿರುಗುತ್ತಿದ್ದವರೂ ತುಂಬಾ ಜನ. ೮ ತರದ ಹಣ್ಣುಗಳಿಂದ ತಯಾರಾದ fruit salad ದು ಸಕತ್ ರುಚಿ.

ಇದೆಲ್ಲಕ್ಕಿಂತ ಮುಂಚೆ , ಸ್ವಲ್ಪ ಹಿಂದೆ ಸಿಕ್ಕಿದ್ದು ಕನ್ನಡ ಪ್ರಭ/Indian Express ಪತ್ರಿಕಾಲಯ. ೭-೮ ಮಹಡಿಗಳಿಗಿಂತಲೂ ಎತ್ತರದ ಅದನ್ನು ನೋಡಿ ಅಬ್ಬಾ ಅನಿಸಿತ್ತು. ಬೆಳಗ್ಗೆ ಎದ್ದು ಪತ್ರಿಕೆ ಓದಷ್ಟೇ ಗೊತ್ತಿದ್ದ ನನಗೆ ಪತ್ರಿಕಾ ಕಚೇರಿ ಅಷ್ಟು ದೊಡ್ಡದಿರುತ್ತಾ ಅಂತ ಆಶ್ಚರ್ಯವಾಯಿತು. ಆಲ್ಲೇ ಸಿಕ್ಕಿದ ವಿಶ್ವೇಶ್ವರಯ್ಯ ಸಣ್ಣ ಗೋಪುರ, ದೊಡ್ಡ ಗೋಪುರಗಳು, ಅದರಲ್ಲಿದ್ದ ಹಲವಾರು ಇಲಾಖೆಗಳು.. ಮುಗಿಲೆತ್ತರದ ಕಟ್ಟಡ, ಕತ್ತೆತ್ತಿ ನೋಡಿ ಕುತ್ತಿಗೆ ನೋವು ತರಿಸಿದವು.. ಹಡ್ಸನ ವೃತ್ತ, ರಿಚ್ಮಂಡ್ ವೃತ್ತ, ಹೈದರಾಲಿ ಖಾನ ರಸ್ತೆ, ವಾಟಾಳ್ ನಾಗರಾಜ್ ರಸ್ತೆ.. ಹೀಗೆ ಪ್ರತಿಯೊಂದು ಹೆಸರುಗಳೂ, ಸ್ಥಳಗಳೂ ಒಂದೊಂದು ರೀತಿಯ ಸಂಸ್ಕೃತಿಗಳ ಅನಾವರಣದಂತೆ ಅನಿಸುತ್ತಿದ್ದವು

ಹೋಗೋಕೆ, ಬರೋಕೆ ಬೇರೆಯದೇ ಆದ ಏಕಮುಖ ರಸ್ತೆಗಳು, ಎದುರಿಗೆ ಕಾಣುತ್ತಿದ್ದರೂ ಆ ಜಾಗಕ್ಕೆ ಹೋಗದೇ ಸುತ್ತಾಕಿ ಬರೋ ಬಸ್ಸುಗಳು, ನಿಲ್ಲಿಸಿದ ಬಸ್ಸನ್ನು ಇಲ್ಲಿಗೋಗತ್ತೆ ಅಂತ ಕೇಳೋದ್ರೊಳಗೇ ಓಡಿಸೋ ಚಾಲಕರ ಗಡಿಬಿಡಿ.. ಹೀಗೆ ಹಲವಾರು ವಿಷಯ ಮೊದಲ ಬಾರಿ ಬಂದವರಿಗೆ ವಿಚಿತ್ರ ಅನಿಸಬಹುದು. ಎರಡನೇ ದಿನ ನಡೆದು, ಹೊಟ್ಟೆ ಚುರುಗುಟ್ಟಿದ, ಬಾಯಾರಿದ ಅನುಭವ. . ಎಲ್ಲಾ ಈ ಸಲ ನನಗೆ ಸಿಕ್ಕಿದ ಹೊಸ ಅನುಭವ:-) :-) ಪ್ರತೀ ಬಾರಿ ಬಂದಾಗ್ಲೂ ಒಂದಲ್ಲಾ ಒಂಥರಾ ಎಲ್ಲಾ ನವ ನವೀನ.. ಮತ್ತೆ ಬರಬೇಕು, ಮತ್ತೆ ಹೀಗೆ miss ಆಗಿ expect ಮಾಡದೇ ಸುತ್ತಬೇಕು, ಹೊಸದು ನೋಡಬೇಕು ಎಂಬ ಬಯಕೆ ಇದನ್ನು ಬರೆದು ಮುಗಿಸುವ ಹೊತ್ತಿಗೆ ನನ್ನ ಮನದಲ್ಲಿ ಮಿಡಿತಾ ಇತ್ತು. . ಎಲ್ಲೋ .. ಅಲ್ಲಿ.

Tuesday, July 5, 2011

window ದಿಂದ ಕಂಡ ಹಲವು ದೃಶ್ಯಗಳು

ನೀರು ಬತ್ತಿದ ನದಿಗಳು
ಬಿದ್ದಿಲ್ಲ ವರುಣನ ಕಂಗಳು
ತುಂಬಿ ಹರಿಯುತಿಹ ತೊರೆಗಳು
ಹಲವೆಡೆ ಕಂಡವಿಂಡು ಕುರಿಗಳು
ನೆಲದಲಾಸೆ ಬಿತ್ತುತಿಹ ರೈತರು|1|

ನಮ್ಮಲ್ಲಿ ತೆಂಗಂತೆ ಇಲ್ಗುಂಪು ತಾಳೆ
ಕಟ್ಟಿದ ಮಡಕೆ ಕೊಡುವುದು ಕಳ್ಳು ನಾಳೆ
ಎಣ್ಣೆ ತೆಗೆವ ಬದಲೀ ಎಣ್ಣೆ ಕುಡಿವ ಜನ
ಇವರ ಬಯಕೆಯೂ ಒಳ್ಳೆ ಬಾಳೆ|2|

ರೈಲೇರಲು ಬಂದ ಮ್ಯಾಂಗನೀಸ್ore
ಕೃಷಿಯೊಂದಿಗೆ ಕಾರ್ಖಾನೆಯು ಜೋರು
ಹಲವೆಡೆ ಇಣುಕೋ ಮಂದಿರ ಮಸೀದಿ
ಗಳಲ್ಲದಿಹುದು ಹಸಿರು, ಜನರು|3|

ಹಾಳು ಬಿದ್ದ ಹಲ ಮನೆ, ದಾರಿ , ಸೇತ್ವೆ
ಹಲವಾರು ಗಣಿಗಳೆತ್ತರದ ಗುಡ್ಡೆ
ಹಲವಸಿರು ಸೊಬಗು,ಬೆಟ್ಟಗುಡ್ಡ
ನೋಡಿ ತಣಿಯಿತೆನ್ನ ಕಣ್ಣ ಗುಡ್ಡೆ|4|