Wednesday, August 31, 2011

fbಗೆ ಬಂದ ಫಕೀರಣ್ಣ

ನಿಮಗೆ ಪಾಗಲ್ ಫಕೀರ ಇವರಿಂದ ಹೊಸ ಮಿತ್ರತ್ವದ ಕೋರಿಕೆ ಬಂದಿದೆ ಅಂತ ಒಂದು ಸಂದೇಶ ಗುಂಡ fb ತೆರೆದಾಗ ಕಾಣಿಸ್ತಿತ್ತು. ಇದ್ಯಾರಪ್ಪಾ ಅಂತ ತಕ್ಷಣಕ್ಕೆ ಹೊಳಿಲೇ ಇಲ್ಲ ಗುಂಡನ ತಲೇಗೆ. ಹೈಸ್ಕೂಲ್ ಗೆಳೆಯ ಟಾಂಗ್ ತಿಪ್ಪನೂ ಆನ್ಲೈನು ಇದ್ದ. ಅವ್ನಿಗೆ ಕೇಳ್ದ. ಯಾರೋ ಇದು ಪಾಗಲ್ ಫಕೀರ ಅಂದ್ರೆ, friend request ಕಳ್ಸವ್ರಲ್ಲಾ ಅಂತ. ಬೋ ದೊಡ್ಡ ಸಾಯಿತಿ ಅಲ ನೀನು ಯಾರೋ ಫ್ಯಾನಿರ್ಬೇಕು ಬಿಡ್ಲಾ ಅಂತ ಕಾಲೆಳ್ದ ತಿಪ್ಪ. ಏ ಸುಮ್ಕಿರು ಗುರು. ಸಾಯಿತಿ ಅಲ್ಲ ಸಾಹಿತಿ ಅದು, ಆದ್ರೆ ನಾನು ಅದಲ್ಲ. ಏನೋ ಚಿಲ್ರೆ ಪಲ್ರೆ ಬರಿತೀನಿ ಅಂತ ಹೊಟ್ಟೆಯುರಿ ನಿಂಗೆ .. ಗೊತ್ತಿಲ್ದಿದ್ರೆ ಸುಮ್ನೆ ನಿನ್ನ city villle ಆಡು, ನನ್ನ ಕಾಲೆಳಿಬೇಡ ಅಂದ ಗುಂಡ. ಅಷ್ಟೊತ್ತಿಗೆ ಒಂದು ಸಂದೇಶ ಬಂತು .. ಏ ಗುಂಗುರು ಗುಂಡ, ನಾನಮ್ಮಿ ಪುಟ್ನಳ್ಳಿ ಪಕೀರಣ್ಣ. ಇಸ್ಕೂಲಲ್ಲಿ ನಿನ್ನ ಸೀನೆರು.. ಏಟಪಾ ಕಳ್ಸದು ನಿಂಗೆ ಕೋರ್ಕೆ ನಾ? ಪುಲ್ ಬಿಸಿ ಬಿಡಪಾ ನೀನು. ದೊಡ್ ಮನಸಾ ಆದೆ ಅಂತ ಒಂದೇ ಉಸರಲ್ಲಿ ಬಯ್ಯಕ್ಕೆ ಹಿಡಿದ. ಗುಂಡಂಗೆ ತಡ್ಯಕ್ಕಾಗ್ದೆ ಸಾಯ್ಲತ್ಲಗೆ ಅಂತ accept friend ಅಂತ ಕೊಟ್ಟು ಸ್ಯಾನೆ ತಲೆಬಿಸಿಯಾಗಿ ತಾನೇ offline ಹೋದ. ಆಮೇಲೆ ಗುಂಡಂಗೆ ನೆನ್ಪಾತು. ಕಾಮಣ್ಣನಬ್ಬಕ್ಕೆ ತಂಗೆ ಡಬ್ಬ ಕೊಟ್ಟು ತಾನು ಗಾಡಿ ಅಡ್ಡಾಕಿ ಬೈಸ್ಕತ್ತಿದ್ದ ಜಾರು ಚಡ್ಡಿ ಫಕೀರಣ್ಣ, ಕೌಳಿ ಮಟ್ಟಿ ಒಳಗೆ ಎಲ್ಲಿ ಮುಳ್ಳು ಕಮ್ಮಿ ಐತೆ ಅಂತ ತಕ್ಷಣ ನುಗ್ಗಿ ನಮ್ಗೂ ತಂದ್ಕೊಡ್ತಿದ್ದ ಫಕೀರಣ್ಣ, ನಾನು ಕಿಲಾಸು ಬಾಗ್ಲು ತೆಗಿಯಕ್ಕೋಗಿ ಚಿತ್ರಾನ್ನದ ಡಬ್ಬಿ ಬೀಳಿಸ್ಕಂಡಾಗ ತನ್ನ ಡಬ್ಬಿ ಕೊಟ್ಟ ಫಕೀರಣ್ಣ.. ಹಿಂಗೆ ನೂರು ನೆನ್ಪು ಸುಳೀತು. ಸ್ಯಾನೆ ಬೇಜಾರಾತು.. ಅಂಥವಂಗೆ ಬ್ಯಾಸರ ಮಾಡಿದ್ನಲ ಅಂತ. ಮತ್ತೆ online ಬಂದ ಗುಂಡ sorry ಕೇಳ್ಬೇಕು ಮೊದ್ಲು ಅಂತ..

ಆನ್ಲೈನು ಇರೋರ ಪಟ್ಟೀಲಿ ನೋಡಿದ್ರೆ ಶಾರೂಖ್ ಖಾನ್ ಶರ್ಟ್ ತೆಕ್ಕಂಡು "ಡರ್ ದೇ ಡಿಸ್ಕೋ" ಹಾಡಿಗೆ ಕೊಟ್ಟಿದ್ದ ಪೋಸ್ ಚಿರ್ತದೋರು ಯಾರೋ ಇದ್ರು. ನೋಡಿದ್ರೆ ಅದು ಫಕೀರಣ್ಣ. ಅವಾಗ ಗೊತ್ತಾಗ್ಲಿಲ್ಲ ಫಕೀರಣ್ಣ.. ಮನ್ಸಿಗೆ ಹಚ್ಕಬ್ಯಾಡ. ಎಂಥ ಇದು ಪೋಟ.. ಇಶ್ಶೀ ಅಂದ ಗುಂಡ.ಬ್ಯಾಸ್ಗೆ ಸೆಖೆ ಅಂತ ಹಾಕ್ಕಂಡಿವ್ನಮ್ಮಿ ಅಂದ. ಆದ್ರೆ ಈಗ ಮಳೆ ಹೊಯ್ತಾ ಐತಲಾ ಅಂದ ಗುಂಡ.ಓ ಹೋದಲಾ. ಮಳೇಲಿ ನೆಂದು ಫೇಮಸ್ ಆಗ್ಯಾವ್ನಲಾ ನಂ ಗಣೇಸ ಅವ್ನ ನೆನ್ಪಿಗೆ ಉಳ್ಸಕಂಡಿವ್ನಿ ಅಂದ. ಎಲ್ಲಿ ಶಾರೂಖು ಎಲ್ಲಿ ಗಣೇಶ ಅಂತ ಗುಂಡಂಗೆ ಚೂರೂ ಅರ್ಥ ಆಗ್ಲಿಲ್ಲ.ಅಷ್ಟರಲ್ಲೆ ಕೆಳಗೆ notification ಬಂತು. .ಪಾಗಲ್ ಫಕೀರ್ ಅವ್ರು ತಿಪ್ಪೇಶ, ಇಳಾ ಮತ್ತಿತರ ೬೦ ಜನರೊಂದಿಗೆ ಗೆಳೆಯರಾಗಿದ್ದಾರೆ ಅಂತ. ಗುಂಡಂಗೆ ಒಂದ್ಸಲ ತಲೆ ಗಿರ್ರಂತು.. ಏನು ಫಕೀರಣ್ಣ ಈ ಪಾಟಿ ಫಾಸ್ಟು ನೀನು ಅಂದ. ಅದಕ್ಕೆ ಗುಂಡ ಅನ್ನದು ನಿಂಗೆ fb ಗೆ ಬಂದು ತಿಂಗಳಾನುಗಟ್ಲೆ ಆಗೈತೆ ನೀನು ಆದ್ರೂ ೫೦೦ ಚಿಲ್ರೆ ಗೆಳೆಯರಷ್ಟೆ ನಿಂಗೆ. ನಂದು ನೋಡು ಒಂದು ತಿಂಗಳಲ್ಲೇ ೫೦೦ ಅಂದ. ಅವನ ಪ್ರೊಫೈಲಿಗೆ ಹೋಗಿ ನೋಡಿದ್ರೆ ಹೌದು ಅದು. ಏನಣೋ RJ ರಾಧಿಕಾ , ಬೆಳ್ಗೆರೆ ಸಾಹೆಬ್ರು, ಸಿಂಹ ಸಾರು .. ಹಿಂಗೆ ದೊಡ್ಡ ಕುಳಗಳೆಲ್ಲಾ ನಿನ್ನ ಗೆಳೆಯರ ಪಟ್ಟಿಲವ್ರೆ. ಎಲ್ಲರೂ ನಿಂಗೆ ಗೊತ್ತೈತಾ? ಭಾರಿ ದೊಡ್ ಮನಸಾ ಆದೆ ಬಿಡು ನೀನು ಅಂದ ಗುಂಡ. ಕೆಲೋರೆಲ್ಲ ಯಾರು ಅನ್ನೋದು ಆ ಸಿವನಾಣೆಗೂ ನಂಗೆ ಗೊತ್ತಿಲ್ಲ. ನಿನ್ನಂಗೆ ಪ್ರತಿಯೊಬ್ರಿಗೂ "ನೀವ್ಯಾರು? ಮೊದ್ಲು ನನ್ನ ಕಂಡಿದ್ರಾ? .. " ಅಂತೆಲ್ಲಾ ಪ್ರಶ್ನೆ ಕೇಳಕಿಲ್ಲ ನಾನು. ನಾನೆ ಕೆಲೋರಿಗೆ request ಕಳುಸ್ತೀನಿ. ೧೫-೨೦ mutual friends ಹೆಂಗಿದ್ರೂ ಇತ್ತಾರೆ. ಕನಿಷ್ಟ ೩-೪ .. ಆಗ ಅವ್ರೇ ಒಪ್ಕೋತಾರೆ. ಸ್ನೇಹ ಬೆಳ್ಸೋದೆ fb ಕೆಲ್ಸ ಗುಂಡು, ಇದೆಲ್ಲಾ ನಿಂಗೆ ತಿಳ್ಯಾಕಿಲ್ಲ ಅಂದ ಫಕೀರಣ್ಣ. ಹಂಗಾರೆ ಪರಸ್ಪರ ಪರಿಚಯ, ಅವ್ರು ಬಗ್ಗೆ , ಅವರ ಬರ್ದಿದ್ದೋ-ಹೇಳಿದ್ರ ಬಗ್ಗೆ ಓದಿರದು ಹಿಂಗೆ ಎಂಥದೂ ಇಲ್ದೇ ಅದೆಂಗೆ ಗೆಳೇರಾತಾರೆ ಅಂತ ಗುಂಡಂಗೆ ಕೊನಿಕೂ ಅರ್ಥ ಆಗ್ಲಿಲ್ಲ.ಅಟೋತಿಗೆ ಊಟಕೆ ಆತು. ಎದ್ದ ಗುಂಡ.

ಮಾರ್ನೇ ದಿನ ಮತ್ತೆ ನೋಡ್ತಾನೆ city ville,farm ville ಹಿಂಗೆ ಹಲವಾರು ಆಟದ, App ಗಳ ಕೋರಿಕೆ ಬಂದಿತ್ತು. ಎಲ್ಲಾ ಫಕೀರಣ್ಣಂದೇ ಕರಾಮತ್ತು. ಫಕೀರಣ್ಣ farm ಅಲ್ಲಿ ಪಾಪರಾಗವ್ನೆ. ದುಡ್ಡು ಕೊಡಿ ಅಂತ ಒಂದು, ಅವ್ನು ಅಷ್ಟು ಗೆದ್ದ ಅಂತ ಮತ್ತೊಂದು.. ಹಿಂಗೆ.. ಗುಂಡಂಗೆ ಬ್ಯಾಂಕವ್ರು ಸಾಲ ತಕಳಿ ಅಂತ ಮೊದ್ಲು ಪೂಸಿ ಹೊಡಿತಾರೆ ಆಮೇಲೆ ರೋಡಿಗಳ್ನ ಕರ್ಕೋಂಬತ್ತಾರೆ ಅಂತ ತಿಪ್ಪ ಹೇಳಿದ್ದು ಜ್ಞಪ್ತಿಗೆ ಬಂತು.. ಬ್ಯಾಡಪ್ಪ ಇದೆಲ್ಲಾ ಸಹವಾಸ ಅಂತ ಅದ್ನೆಲ್ಲಾ ತೆಗ್ದು ಹಾಕಿದ. ಸ್ವಲ್ಪ ಹೊತ್ತು ಬಿಟ್ಟು mycalender ಅಂತ ಮತ್ತೆ ಬಂತು. ಈಗಿರೋ ವ್ಯವಸ್ಥೆ ಚೆನಾಗೈತಲಾ? ಅದೇ ದಿನ ಅವತ್ತಿನ ಹುಟ್ಟಿದಬ್ಬ ತೋರಿಸ್ತೈತಲಾ ಅನುಸ್ತು ಗುಂಡಂಗೆ. ಆದ್ರೂ ಇರ್ಲಿ ಅಂತ ಒಳಗೆ ಹೋದ. ನೋಡಿದ್ರೆ ಅದು ನಿಮ್ಮ ಖಾಸಗಿ ಮಾಹಿತಿ ಎಲ್ಲಾ ನಾವು ಉಪಯೋಗಿಸಕ್ಕೆ ನೀವು ಒಪ್ಕತೀರಾ ಅಂತು.. ಈ fb ನವ್ರು ನಾ ಹೇಳ್ದೇ ಇದ್ರು ನಂ ಮಾಹಿತಿ ಮಾರ್ದವ್ರು ಮುಂಚೆ ಒಂದಪಾ. ಈಗ ನಾನೇ ಮಾರಿ ಅಂತ ಬೀದಿಲಿ ಹೋಗ ಮಾರಿನ ಒಳಾಕೆ ಕರ್ಯದಾ ಅಂತ ಸಿಟ್ಟೆಲ್ಲಾ ಬಂತು ಗುಂಡಂಗೆ. ಅದನ್ನೂ ತೆಗ್ದ. ಮತ್ತೊಂದು ನಿಮಿಸಕ್ಕೆ ಸಂದೇಶ ಬಂತು ಫಕೀರಣ್ಣಂದು ನಾನು ನೀನು video chat ಮಾಡುವ ಅಂತ. ಹೇ ಫಕೀರಣ್ಣ, ನಂದು ಸ್ಲೋ ನೆಟ್ಟಲೇ. video chat ಮಾಡಕ್ಕೆ ೧ mbps ಸ್ಪೀಡ್ ಬೇಕು ಅಂದ ಗುಂಡ. ಹೋ, ಅದು ನಾ ಕಳಿಸಿದ್ದಲ್ಲ, ತಾನಾಗೆ ಬಂತು ಹ್ಯಾಗೆ ಹೇಳಿ ಗೊತ್ತಿಲ್ಲ ಅಂದ ಫಕೀರಣ್ಣ. ಗುಂಡಂಗೆ ಹಿಂದೆ ಒಂದಿನ ನಾನು chat phone ಬಳಸ್ತಾ ಇದ್ದೆ ಅಂತ ಮಂಗಳೂರು ಮಂಜನ ಸಂದೇಶ ಬಂದಿದ್ದು ನೆನ್ಪಾತು. ನಮಗೆ ಗೊತ್ತಿಲ್ದೇ ಏನೇನು ಮಾಡ್ತಿರ್ತಾರಪಾ ಈ ಜನ ಅಂತ ಹಿಡಿ ಶಾಪ ಹಾಕ್ದ ಗುಂಡ

ಗುಂಡ ಮಾರ್ನೇ ದಿನ ಅವ್ನ ಮಿಂಚಂಚೆ ತೆರೆದು ನೋಡ್ತಾನೆ. ೧೫೦ ಹೊಸ ಸಂದೇಶಗಳು ಅಂತ. ಒಂದ್ಸಲ ಶಾಕ್ ಆಯ್ತು. ಅದೆಲ್ಲಾ "ಗುಂಡಳ್ಳಿ ಸ್ಕೂಲ್ ಗೂಂಡಾಗಳು" ಅನ್ನೋ ಗ್ರೂಪಿಂದು. ಕೊನೆಗೆ ಮೂಲೆಲೊಂದು ಸಂದೇಶ ಇತ್ತು. ಫಕೀರಣ್ಣ ನಿಮ್ನ ಇಂಥಾ ಗ್ರೂಪ್ಗೆ ಹಾಕವ್ನೆ ಅಂತ. fb ಗೆ ಬಂದು ಆ ಗ್ರೂಪ್ಗೆ ಹೋದ ಗುಂಡಣ್ಣ. ಅದ್ರಲ್ಲಿ ಅವ್ನ ಇಸ್ಕೂಲು ಚಡ್ಡಿ ದೋಸ್ತರೆಲ್ಲಾ ಇದ್ರು. ಸಂದೇಶ ನೋಡಿದ್ರೆ ರಂಜಾನ್ಗೆ ಶುಭಾಶಯ ಅಂತ ಹಾಕಿದ್ದ ಫಕೀರಣ್ಣ. ಅದನ್ನೇ ಎಲ್ರೂ ಕಾಪಿ ಮಾಡಿ ಅಂಟ್ಸಿದ್ರು.. ಜೊತೆಗೆ ಕೆಲೋರು ನಿಮ್ಗೂ ಅಂತ ಕಮೆಂಟು ಬರ್ದಿದ್ರು.. ಹೀಗೆ ಒಂದೇ ಹಬ್ಬದ ೧೫ ಪೋಸ್ಟ. ಇರೋ ೩೦ ಜನ ಮೆಂಬರ್ಗಳಿಗೆ ಆ ಹಬ್ಬ ಈ ಹಬ್ಬ, ಊಟ ಆಯ್ತಾ,ಏನು ಮಾಡ್ತಾ ಇದೀರ ಎಲ್ಲಾ?, ಆಫಿಸಿಗೆ ಹೋಗ್ತಾ ಇದೀನಿ, ಈಗ ಬಂದು ಮುಟ್ಟಿದೆ.. .ಇಂಥದ್ದೇ ಬೇಜಾನು ಬೇಜಾರಾಗೋಷ್ಟು ಟೈಂಪಾಸು ಮಾತು ಕತೆಯಾಗಿ ೧೫೦ ಸಂದೇಶ ಬಂದಿತ್ತು ಗುಂಡಂಗೆ. ಮೊದ್ಲು ಆ ಗ್ರೂಪ್ ಸೆಟ್ಟಿಂಗ್ ಗೆ ಹೋಗಿ mail alert ತೆಗ್ದು ಸಮಾಧಾನ ಮಾಡ್ಕಂಡ. ಸ್ವಲ್ಪ ಹೊತ್ತಿಗೆ ಗುಂಡಳ್ಳಿ ಗಣಪತಿ ಹಬ್ಬ ಅಂತ event invitation ಬಂತು ಗುಂಡಣ್ಣಂಗೆ. ಸರಿ , ಬರ್ತೀನಿ ಅಂತ ಕುಕ್ಕಿದ ಅದ್ನ. ಅದ್ರ ಬೆನ್ನಲ್ಲೇ ಗುಂಡಳ್ಳಿ ಗಣಪತಿ ಹಬ್ಬ ಅಂತ ಮತ್ತೆ ಬರೋದೆ. ನೋಡಿದ್ರೆ ಒಂದೇ event ಗೆ ನಾಕು ಸಲ ಕರ್ದಿದ್ದ ಗುಂಡಣ್ಣನ್ನ. ಏನ್ಲಾ ಫಕೀರಣ್ಣ, ಒಂದಕ್ಕೆ ನಾಕು ಸಲ ಕರ್ಯದಾ ನೀನು? ಒಂದಪಾ ಕರ್ದ್ರೆ ಬರಾಕಿಲ್ಲನು ನಾನು ಅಂದ ಗುಂಡ. ಇಲ್ಲಪಾ? message ಕೆಲ ಸರಿ delivery ಆಗಕಿಲ್ಲ ನೋಡು, ಹಂಗೆ ಆದ್ರೆ ಅಂತ ಮತ್ತೆ ಕರದ್ನಪಾ.. ಹಿ ಹಿ ಅಂದ ಫಕೀರಣ್ಣ. ಈ ಫಕೀರಣ್ಣನ ಹೆಸ್ರು ಕರೆಕ್ಟಾಗೆ ಐತೆ ಪಾಗಲ್ ಅಂತ. . ಇನ್ನೂ ಸ್ವಲ್ಪ ಹೊತ್ತು ಹೋದ್ರೆ ನಾನೂ ಅದೇ ಆಗದು ಅಂತ ಗಾಡಿಬಿಟ್ಟ ಗುಂಡ..

ಈಕ್ಷಕರೆ ಇಲ್ಲಿಗೆ fb ಪುರಾಣ ಮುಗೀತು.. ನಿಮ್ಗೂ ಇಂಥ ಪಾಗಲ್ಗಳು ಸಿಗ್ಬೋದು, ಅಥ್ವಾ ನೀವೆ ಇಂಥೋರು ಆಗಿರ್ಬೋದು..

ಏ ಕಟ್ ಕಟ್.. fb ಹೊಸಬನ ಅದ್ವಾನದ ಬಗ್ಗೆ ಹೇಳ ಅಂದ್ರೆ ನೀನೆ ಅದ್ವಾನ ಮಾಡ್ತೀಯಲ್ಲೋ.. ಕೇಳುಗರೆ, ನಿಮಗೆ ನಮ್ಮ ಪ್ರಸಂಗ ಹೇಗನಿಸ್ತು ಅನ್ನೋದನ್ನ ಬರ್ದು ಕಳಿಸಿ. ನಿಮಗೆಲ್ಲಾ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.. ಇಂತಿ ಪಾಪಣ್ಣ ಆನ್ಲೈನ್ ವಾಣಿ..

( ಈಗ ಚಿಕ್ಕದೊಂದು ವಿರಾಮ).. ಜಂಡೂ ಬಾಮ್.. ಎಲ್ಲಾ ತರದ ತಲೆನೋವಿಗೂ ರಾಮಬಾಣ ... !!! :-)

ಗಣಪತಿ ಹಬ್ಬ


ಗಣಪತಿ ಹಬ್ಬಕ್ಕೆ ಚಿತ್ರ ವಿಚಿತ್ರ ಗಣಪತಿ ಇಡ್ತಾರೆ.. ಮೊನ್ನೆ ದಾರೀಲಿ ಬರ್ಬೇಕಾದ್ರೆ "danger boys ವಿದ್ಯಾವರ್ಧಕ ಗಣಪತಿ" ಅಂತ ಬೋರ್ಡ ನೋಡಿದ್ದೆ. ಕಾರ್ಗಿಲ್ ಗಣಪತಿ, ಉಪೇಂದ್ರ, ಮಣ್ಣಿನ ಮಗ ಹಿಂಗೆ ತರಾವರಿ ಅದ್ವಾನ.ಕೈಯಲ್ಲಿ ಮೆಷಿನ್ ಗನ್ ಹಿಡಿದ, ಹರಕು ಪ್ಯಾಂಟಿನ ಗಣಪತಿ ನೋಡಿ ಎಂಥಾ ಕಾಲ ಬಂತಪ್ಪಾ ದೇವ್ರೆ ಅಂತ ಹಿರಿಯರು ಗೋಳಾಡ್ತಿರ್ತಾರೆ. ಅದರ ಜೊತೆಗೆ ಮೈಕು ಹಾಕಿ ಭಕ್ತಿಗೀತೆಗಳ ಜೊತೆಗೆ ಅನಿಸುತಿದೆ ಯಾಕೋ ಇಂದು, ಹೊಡಿ ಮಗ ಹೊಡಿ ಮಗ.. ತರದ ಹಾಡು ಹಾಕಿ ಇಡೀ ದಿನ ಕುಣಿಯೋರು ಇದ್ದಾರೆ. ಆ ಟೈಮಲ್ಲೇ ತಾರಕ ಮೈಕ ಧ್ವನಿ ಮಧ್ಯೆ ಓದ್ಬೇಕಾಗಿರೋ ಇಂಟರ್ನಲ್ಲು,ಟೆಸ್ಟು ಇರೋ ವಿದ್ಯಾರ್ಥಿಗಳ ಗತಿ ಆ ಗಣಪತಿಗೇ ಪ್ರೀತಿ. ಗಣಪತಿ ಆಚರಣೆಯನ್ನು ಮೊದಲು ಜಾರಿಗೆ ತಂದೋರು ನಮ್ಮ ಮಾನ್ಯ ತಿಲಕರು. ಇದು ಜನರ ಹಬ್ಬ. ದೇವ್ರು ನಮ್ಮ ಕಣ್ಣ ದೃಷ್ಟಿ ಹಂಗೆ, ಯೋಚ್ನೆ ಮಾಡೋ ಹಂಗೆ ಇದ್ರೆ ಪೂಜೆ ಮಾಡೋ ಉತ್ಸಾಹ ಇರುತ್ತೆ ಬಾಸ್ ಅಂತಾರೆ ಹೀಗೆಲ್ಲಾ ಇಟ್ಟೋರು. ವರ್ಷವಿಡೀ ಕೂಗೋರಿಗೆ ಕೇಳೋಲ್ಲ, ನಮಗ್ಯಾಕೆ ಕೇಳ್ತೀರ ಅಂಥ ಸಮರ್ಥನೆ ಬೇರೆ ಮೈಕಾಸುರರಿಗೆ..ಗಣಪತಿ ಇಡ್ತೀವಿ ಅಂತ ರಸ್ತೆ ಅಡ್ಡಗಟ್ಟಿ ಚಂದ ಎತ್ತೋರು, ಮನೆ ಸುತ್ತಮುತ್ತ ಗಣಪತಿ ಇಟ್ಟಿದೀವಿ ಹಸಿರು ನೋಟು ಕೊಡದೇ ಹೋಗೋದೆ ಇಲ್ಲ ಅನ್ನೋ ಜನರು, ಹಲವಾರು ಗಣಪತಿ ಪೂಜಿಸುವ ಗಡಿಬಿಡಿಲಿರೋ ಭಟ್ಟರು..ಯಾವುದು ತಪ್ಪು ಅಂತ ನೀವೇ ಹೇಳ್ಬೇಕು. ಇದ್ಯಾವುದರ ಅರಿವೂ ಇಲ್ಲದೆ ಪಂಚಕಜ್ಜಾಯ ಯಾವಾಗ ಸಿಗತ್ತಪ್ಪಾ ಅಂತ ಕಾಯೋ ಮಕ್ಕಳು, ಅವ್ರು ಪೂಜೆ ಆಗೋದ್ರೊಳಗೆ ತಿಂದ್ರೆ ಗತಿಯೇನು ಅಂಥ ಅವ್ರನ್ನ ಕಾಯೋ ಅಮ್ಮಂದಿರು, ನಿಮ್ಮನೇಲಿ ಎಷ್ಟು ಪಟಾಕಿ ಬಾಕ್ಸ್ ನಮ್ಮನೇಲಿ ಇಷ್ಟು ಎಂಬ ಎಳೆಯರ ಮಾತುಗಳು, ಹೊಸ ಬಟ್ಟೆ ಸಂಭ್ರಮ, ಸೀರೆಗೆ ಮ್ಯಾಚಿಂಗ್ ಸೆಟ್ ಹುಡುಕಾಟದಲ್ಲಿರೋ ಹೆಂಗಳೇರು, ೨-೩ ದಿನ ಆಫಿಸಿಗೆ ರಜಾ ಆರಾಮು ಅಂತಿರೋ ಗಂಡಸ್ರು.. ಹಿಂಗೆ ಒಂದು ಬೇರೆ ದುನಿಯಾನೇ ಸೃಷ್ಟಿ ಆಗುತ್ತೆ ಆ ಸಮಯದಲ್ಲಿ.. ಹಬ್ಬದ ದಿನ ಅಂತೂ ಎಷ್ಟು ಗಣಪತಿ ನೋಡಿದೆ, ಎಷ್ಟು ಕಡೆ ಪಂಚಕಜ್ಜಾಯ ತಿಂದೆ, ಯಾವ್ಯಾವ ಗಣಪತಿ ಮೂಮೆಂಟ್ ಶೋ ನೋಡಿದೆ ಎಂಬ ಉತ್ಸಾಹವೋ ಉತ್ಸಾಹ.. ರಾತ್ರಿಯೆಲ್ಲಾ ಪಟಾಕಿ, ಸುರು ಸುರು ಬತ್ತಿ,ಕುಂಡಗಳ ಬೆಳಕ ಸಂಭ್ರಮ. ಮನೆ ಬಿಟ್ಟು ದೂರ ಓಡಿ ಹೋಗೋ ನಾಯಿಗಳು, ಎಲ್ಲೋ ಅನಿಸುತಿದೆ ನೀನೆ ಎಂದು ಹಾಡ್ತಾ ಇರೋ ಆರ್ಕೆಸ್ಟ್ರಾ, ಟಿ.ವಿ ಯಲ್ಲಿ ಜಭರದಸ್ತ್ ಕಾರ್ಯಕ್ರಮಗಳು, ಮನೆಗೆ ಬರೋ ಹೊಸ ನೆಂಟರುಗಳು.. ಹೀಗೆ ಸಂಭ್ರಮವೋ ಸಂಭ್ರಮ.. ಇನ್ನು ಚೌತಿ ದಿನ ಚಂದ್ರ ಕಾಣ್ತಾನೆ ಅಂತ ಮನೆ ಹೊರಗೇ ಹೊರಡೋದಿಲ್ಲ ಕೆಲೋರು. ಚಂದ್ರ ನೋಡಿದ ತಪ್ಪಿಗೆ ಶ್ಯಮಂತಕ ಪುರಾಣ ಕೇಳೋದು, ನೋಡದಿದ್ದರೂ ಕಥೆ ಚೆನ್ನಾಗಿದೆ ಅಂಥ ಕೇಳೋದು ಹೀಗೆ ಮನೇಲಿರೋ ಹಿರೀರಿಗೆ ಫುಲ್ ಕೆಲಸ.. ಇಟ್ಟಷ್ಟು ದಿನವೂ ದಿನಾ ಹೊಸದು ನೈವೇದ್ಯಕ್ಕೆ ಏನು ಮಾಡೋದು ಅಂತ ಮನೆಯೊಡತಿ ಚಿಂತೆ,ಮಕ್ಕಳಿಗೆ ದಿನಾ ಹೊಸದು ಸಿಗತ್ತಲ್ಲಾ ಅಂತ ಸಂತಸದ ಸಂತೆ. ಹಳ್ಳಿಗಳ ಕಡೆ ಗೌರಿಯನ್ನೂ ತರೋ ಆಚರಣೆ ಇದೆ. ಅದರದ್ದೂ ವಿಭಿನ್ನ ಸಂಭ್ರಮ.


ಗಣೇಶ ಚತುರ್ಥಿಯನ್ನು ಎಂದು ಮೊದಲು ಆಚರಿಸಲಾಯಿತು ಎಂಬುದರ ಬಗ್ಗೆ ನಿಖರ ದಾಖಲೆಗಳಿಲ್ಲ..ಇತಿಹಾಸ ತಜ್ಞ ರಾಜವಾಡೆ ಅವರ ಪ್ರಕಾರ ಗಣೇಶ ಚತುರ್ಥಿಯನ್ನು ಶಾತವಾಹನರು, ರಾಷ್ಟ್ರಕೂಟರು,ಚಾಲುಕ್ಯರ ಕಾಲದಲ್ಲೇ ಆಚರಿಸುತಿದ್ದರಂತೆ..ಮರಾಠ ರಾಜ ಶಿವಾಜಿ ಮಹಾರಾಜನು ಅದನ್ನು ಮಹಾರಾಷ್ಟ್ರದಲ್ಲಿ ವಿಜ್ರಂಭಣೆಯಿಂದ ಆಚರಿಸಲು ಪ್ರಾರಂಭಿಸಿದನು.ಅದೇ ರೀತಿ ಪೇಶ್ವೆಯವರ ಕಾಲದಲ್ಲೂ ಈ ಆಚರಣೆಯಿದ್ದ ಉಲ್ಲೇಖವಿದೆ.ಅವರ ಮನೆದೈವ ಗಣೇಶ.ಅವರ ಆಳ್ವಿಕೆ ದುರ್ಬಲಗೊಂಡ ಕಾಲದಲ್ಲಿ ಅಂದರೆ ೧೮೧೮-೧೮೯೨ ರ ಕಾಲದಲ್ಲಿ ಈ ಆಚರಣೆ ಅವರ ಮನೆತನಕ್ಕೆ ಮಾತ್ರ ಸೀಮಿತಗೊಂಡಿತು ಎನ್ನುತ್ತಾರೆ ಇತಿಹಾಸಕಾರರು. ೧೮೯೩ ರಲ್ಲಿ ಈ ಗಣಪತಿ ಹಬ್ಬವನ್ನು ದೇಶಾದ್ಯಂತ ಆಚರಿಸುವಂತೆ ಮಾಡಿದವರು ಲೋಕಮಾನ್ಯ ಬಾಲಗಂಗಾಧರ ತಿಲಕರು. ಅಂದಿನಿಂದ ಆರಂಭಗೊಂಡ ಈ ಸಂಭ್ರಮ ಇಂದು ಭಾರತವನ್ನೂ ಮೀರಿ ನೇಪಾಳ,ಫಿಜಿ,ಕೆನಡಾ,ಅಮೇರಿಕಾ ಮತ್ತಿತರ ದೇಶಗಳಿಗೂ ವ್ಯಾಪಿಸಿದೆ.ಜಾತಿಗಳ ಗೋಡೆಯೊಡೆದು , ಮೇಲು ಕೀಳೆಂಬ ಭಾವ ಮೆಟ್ಟಿ ನಿತ್ತು ದೇಶವೆಲ್ಲಾ ಒಂದಾಗಲೆಂಬ ಉದಾತ್ತ ಉದ್ದೇಶದಿಂದ ತಿಲಕರು ಗಣಪತಿ ಹಬ್ಬವನ್ನು ಜನ ಸಾಮಾನ್ಯರ ಹಬ್ಬವನ್ನಾಗಿ ರೂಪಿಸಿದರು. ಬೀದಿ ಬೀದಿಗಳಲ್ಲಿ ಆಳೆತ್ತರದ ಗಣೇಶನನ್ನು ಪ್ರತಿಷ್ಟಾಪಿಸಲು ಪ್ರೋತ್ಸಾಹಿಸಿದರು ಎನ್ನುತ್ತಾರೆ..


ಮುಂಚೆ ಎಲ್ಲಾ ಮನೆ ಬಳಿಯೆ ತೆಗೆದ ಜೇಡಿ ಮಣ್ಣಿನಿಂದ ಗಣೇಶನನ್ನು ತಯಾರಿಸಿ , ಪೂಜಿಸಿ ನಂತರ ನೀರಲ್ಲಿ ವಿಸರ್ಜಿಸಲಾಗುತಿತ್ತು.. ಮಣ್ಣಿನಿಂದಲೇ ಹುಟ್ಟಿದ ನಾವು ಕೊನೆಗೆ ಸೇರುವುದು ಅಲ್ಲಿಗೇ ಎಂಬ ಆಧ್ಯಾತ್ಮಿಕ ತತ್ವ ಇದರ ಹಿಂದೆ ಅಡಗಿತ್ತು ಎನ್ನುತ್ತಾರೆ. ಆದರೆ ಈಗ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ವ್ಯಾವಹಾರಿಕ ಗಣಪ ಬರಲಾರಂಭಿಸಿದ ಮೇಲೆ ಅದರಿಂದಾಗುವ ಪರಿಸರ ಮಾಲಿನ್ಯವೂ ಅತಿಯಾಗುತ್ತಿದೆ.ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ನೀರಿನ ಆಮ್ಲೀಯತೆ ಅತಿಯಾಗುವುದಲ್ಲದೇ , ಬಣ್ಣಗಳಲ್ಲಿರುವ ತರಹೇವಾರಿ ವಿಷ ರಾಸಾಯನಿಕಗಳಿಂದಲೂ ನೀರು ಹಾಳಾಗುತ್ತದೆ. ಇದರಿಂದ ಸಾವಿರಾರು ಮೀನುಗಳು ಗಣೇಶ ವಿಸರ್ಜನೆಯ ಮಾರನೇ ದಿನ ಸತ್ತು ತೇಲುವುದು ಅನೇಕ ಕಡೆ ವರದಿಯಾಗಿದೆ. ಭಕ್ತರಕ್ಷಕನ ವಿಸರ್ಜನೆಗೆಂದು ಏನೂ ಅರಿಯದ ಆ ಜೀವಿಗಳ ಜೀವ ತೆಗೆಯುವುದು ಎಷ್ಟು ಸರಿ? ಪ್ರತೀ ನಾಲ್ವರಿಗೆ ಒಂದು ಗಣೇಶನಂತೆ ಲೆಖ್ಕಕ್ಕೆ ತೆಗೆದುಕೊಂಡರೂ ಕರ್ನಾಟಕದಲ್ಲೇ ೧ ಕೋಟಿ ಗಣೇಶ.ಪ್ರತೀ ಗಣೇಶನ ನಿರ್ಮಾಣದಲ್ಲೂ ಸುಮಾರು ೨೦೦ ಗ್ರಾಂ ನಷ್ಟು ವಿಷ ರಾಸಾಯನಿಕಗಳನ್ನು ಬಣ್ಣವಾಗಿ ಬಳಸುತ್ತಾರೆ.. ಅಂದರೆ ಎಷ್ಟೊಂದು ಭಾರಿ ಪ್ರಮಾಣದ ಮಾಲಿನ್ಯ ಎಂಬ ಆಕರ್ಷಕ ವರದಿ ಕನ್ನಡ ದಿನಪತ್ರಿಕೆಯೊಂದರಲ್ಲಿ ಮೊನ್ನೆ ಪ್ರಕಟವಾಗಿತ್ತು. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ?

ಯಾಕಿಲ್ಲ. ಪರಿಸರ ಸ್ನೇಹಿ ಗಣಪನನ್ನು ನಿರ್ಮಿಸಿ ಎಂಬ ಪರಿಸರವಾದಿಗಳ ಕೂಗು ಮುಗಿಲು ಮುಟ್ಟುತ್ತಿರುವ ವೇಳೆಯಲ್ಲಿ ನಾವೂ ಜಾಗರೂಕರಾಗಬೇಕಾದ ಅಗತ್ಯವಿದೆ. ಗಣಪತಿ ಹಬ್ಬಕ್ಕೆ ಮೂರು ತಿಂಗಳ ಮುಂಚೆಯೇ ಟನಗಟ್ಟಲೇ ಸೀಸರಹಿತ ಬಣ್ಣವನ್ನು ಉತ್ಪಾದಿಸಿ ಗಣಪತಿ ಮಾಡುವವರ ಸಭೆ ಕರೆದು ಆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಕಳೆದ ವರ್ಷ ಈ ಪ್ರಯತ್ನ ಶೇ.೩೦ ರಷ್ಟು ಯಶ ಕಂಡಿತ್ತು ಅನ್ನುತ್ತವೆ ಸರ್ಕಾರಿ ಮೂಲಗಳು.. ಈ ಬಾರಿ ಅದು ಇನ್ನೂ ಹೆಚ್ಚಬೇಕಾಗಿದೆ.ಬಣ್ಣವಿಲ್ಲದ ಗಣಪತಿಯನ್ನು ಪೂಜಿಸುವ, ಲೋಹದ ಗಣಪನನ್ನು ಪೂಜಿಸುವ, ಅವನ್ನು ಬಕೆಟ್ನಲ್ಲಿ ವಿಸರ್ಜಿಸುವ ಹೀಗೆ ಹಲವಾರು ಸಲಹೆಗಳು ಪ್ರತೀ ವರ್ಷ ಬರುತ್ತವೆ.. ಇವುಗಳಿಗೆ ಆಸ್ತಿಕ ಬಂಧುಗಳ ಆಕ್ಷೇಪಣೆ ಏನೇ ಇದ್ದರೂ ಪರಿಸರದ ಬಗೆಗಿನ ಕಾಳಜಿಯನ್ನು ಅವರು ಮರೆಯದಿದ್ದರೆ ಚೆಂದ. ಭೂಮಿಯಿಂದಲೇ ನಾವು. ಜಲದಿಂದಲೇ ಜೇವನ. ಆ ಜಲ ಶುಚಿಯಾಗಿದ್ದರಷ್ಟೇ ಸ್ವಸ್ಥ, ಸ್ವಚ್ಚ ಜೀವನ ಸಾಧ್ಯ. ಹಾಗಾಗಿ ಈ ಬಾರಿ ಪ್ರಕೃತಿಪ್ರಿಯರಾಗಿ ಮೋದಕಪ್ರಿಯನ ಹಬ್ಬವನ್ನು ಆಚರಿಸೋಣವೇ?

Tuesday, August 30, 2011

ರೈಟ್ ರೈಟ್ ಎಂಬ

ರೈಟ್ ರೈಟ್ ಸ್ವಾಮಿ ಮುಂದೆ ಹೋಗಿ
ಎಂಬ ಎಳೆಯ ದನಿ ಕಂಡಕ್ಟರ್
ಮೀಸೆ ಬೆಳೆಯೋದರೊಳಗೆ ಕಾಸನು
ಎಣಿಸೋ ಕೆಲಸ ಆಡೋ ಬದಲು
ಓದ ಕಸಿದುದು ಯಾವ ವೇದನೆಯೋ
ಎಳೆಯ ಹೆಗಲಿಗೇಕಿ ಹೊರೆ ಬ್ರಹ್ಮನೆ
ಬರಿ ಬೆವರ ಹಗಲ ಹಣೆ
ಬರಹವನರಿಯೆ,ಕನಸಿಲ್ಲದ ನಿಶೆ ಮರ್ಮವನರಿಯೆ


ತಳ್ಳಿ ಮುಂದೆ ನೀ ಹಿಂದೆ ಉಳಿದೆಯಾ
ಚಿಲ್ಲರೆ ನೀಡದ ಕಳ್ಳಿಯಾದೆಯಾ
ನಿನ್ನಲೆ ಇಲ್ಲದೆ ಏನ ನೀಡುವೆ?
ಮಾತು ದಾನಿಗಳ ದೂರವೆ ಇಡುವೆ
ಕೇಳರು ಯಾರೂ ನಿನ್ನಯ ರಗಳೆ
ಬೇಸರ ಬೇಡವೆ ಸುಂದರ ಮನಳೆ

ಪ್ರೀತಿ.. ಒಡೆದಾಗ


ನೂರೆಂಟು ಮಾತು ಅಲ್ಲಲ್ಲೆ ಅವಿತು
ಹೊರತಂತು ವಿರಹ ಬರಹ
ಮೀಟಿ ಸೋತೆ ನಾ ಪ್ರೀತಿ ತಂತಿ
ಕೊಡದಾದೆ ದುಡಿದು ವರಹ
ನಾ ಜಲ್ಲೆಯಂತೆ ನೀ ಹರಿವ ಹಾಲು
ಬೇರಾದೆ ನೂರು ತರಹ


ನಾನು ಹಕ್ಕಿ , ಅರೆ ಹಕ್ಕಿ ನೀನು
ಹುಡುಕೋಣ ಪ್ರೀತಿ ಕಾಳ
ಎಂದುಸುರಿ ಒಮ್ಮೆ, ಕಲಿಸಿದ್ದೆ ಕನಸ ಬಾಳ
ಅಂದರಿಯದಾದೆ ನಾ ಪಾರಿವಾಳ
ನೀ ಹೊಂಚಿ ಕಾಯೋ ಗಿಡುಗ
ಮನಸಿಟ್ಟ ನನಗೆ ಕೈ ಕೊಟ್ಟೆಯಲ್ಲೊ ಹುಡುಗ

Monday, August 29, 2011

ಭಕ್ತ ಮಾರ್ಕಂಡೇಯ ನಾಟಕದ ಕೊನೆಯ ಸನ್ನಿವೇಶ

ಭಕ್ತ ಮಾರ್ಕಂಡೇಯ ನಾಟಕದ ಕೊನೆಯ ಸನ್ನಿವೇಶ. ಸಾಯಬೇಕಾಗಿದ್ದ ಮಗ ಶಿವಕೃಪೆಯಿಂದ ಬದುಕಿ ಬಂದುದನ್ನು ತಿಳಿದ ವೃದ್ದ ತಂದೆ ತಾಯಿ ಪರಶಿವನನ್ನು ಸ್ತುತಿಸೋ ಪ್ರಸಂಗ.. ಈ ಸಂದರ್ಭಕ್ಕೆ ಹಾಡೊಂದು ಬೇಕು ಅಂತ ದೊಡ್ಡಪ್ಪ ಹುಡುಕ್ತಾ ಇದ್ದರು. ಆಗ ಹೊಳೆದ ಸಾಲುಗಳು..



ಪರಮೇಶ್ವರನೇ ಪಾರ್ವತಿಪತಯೇ
ನೀಲಕಂಠನೇ ನಮೋ ನಮೋ
ವಿಷವನೆ ಹೀರಿದ ಯಮನನೆ ತಡೆದ
ಮೃತ್ಯುಂಜಯನೇ ನಮೋ ನಮೋ

ಅಲ್ಪಾಯುಷಿಯನು ಅಮರನಾಗಿಸಿದೆ
ಮಸಣವಾಸಿಯೇ ನಮೋ ನಮೋ
ಮರಣ ಶಯ್ಯೆಯ ಮಗನ ಬದುಕಿಸಿದೆ
ಮುಕ್ಕಣ್ಣ ದೇವ ನಮೋ ನಮೋ

Friday, August 26, 2011

ಇರುವೆ

ಮೇಲೇರು ನೀ ಇರುವೆ.
ಒಣಜಂಭದೊಡೆ ಸಾಯ್ವೆ.
ನಿನ್ನ ದೇಹಕೂ ಮೀರಿದ ಭಾರ ಸಂಸಾರ.
ಹೊರೆ ಹೊತ್ತರೆ ಮಾತ್ರ ಮಳೆಗಾಲಕಾಧಾರ.
ಒಗ್ಗಟ್ಟೆ ಬಲವೆಂದು ಜೊತೆಯಲ್ಲೆ ಸಾಲು.
ಗುರಿ ಸೇರೂ ನಿಸ್ವಾರ್ಥಿ,ಬಿಡೆ ನೀನು ನೀತಿ ಸಾಲು.

ಬ್ರಹ್ಮನೇ ಬಿದ್ದರೂ ನಿನ್ನಯ ದಾರಿಯಲಿ
ಬಳಸಿ ನೀ ಸಾಗುವೆ ಬದಲಾದ ಪಥದಲಿ.
ಮಳೆಯೆಂದು,ಚಳಿಯೆಂದು,ಮರವೆಂದು,ಶಿಲೆಯೆಂದು
ಹಲಕಾರಣದ ಮೈಗಳ್ಳತನ ಬೇಡೆಂದು
ಕೂಡೆಂದು ಆಹಾರ ಕಾಣೆ ನಾಳೆಯ ಎಂದು
ಅಗುಳಗುಳು ಕೂಡಿದರೆ ಮನವರಳಿ ಅನುಬಂಧ
ಅರಿವ ಭಾವವು ಬೆಸೆಯೆ ಮನೆಯರಳೊ ಸಂಬಂಧ

Thursday, August 18, 2011

ನಾವು ತಿಂದ ಕ್ಯಾಪ್ಸೂಲುಗಳು ಕರಗೋದೇಗೆ?

ನಂಗೂ ಇದೇ ಸಂದೇಹ ಬಂದಾಗ ಮೊದಲನೇ ಪಾಠಶಾಲೆನ ಕೇಳ್ದೆ. ಅವ್ರು ನಂಗೂ ಸರಿ ಗೊತ್ತಿಲ್ಲ. ಮೊನ್ನೆ ಕತ್ತರಿಸಿದ ಕ್ಯಾಪ್ಸೂಲ್ ಕವರು ನೀರಲ್ಲಿ ಬಿದ್ದು ಅರ್ಧ ಕರಗಿತ್ತ ಮಗ್ನೆ ಅಂದ್ರು.. ಸರಿ ಅಂತ ನೆಟ್ಟಣ್ಣನ್ನ ಕೇಳಿದ್ರೆ ಸುಮಾರು ಮೀನೆಣ್ಣೆ ಬಗ್ಗೆ ಮಾಹಿತಿ ಒಗ್ದ. ಅದಕ್ಕೂ ಇದಕ್ಕೂ ಎಂತಾ ಸಂಬಂಧ ಇಶ್ಶೀ ಅಂತೀರಾ? ನೀವು ಅಂದ್ಕೊಂಡ ಹಾಗಿಲ್ಲ ಓದಿ ಮುಂದೆ

ಕೆಲವೊಂದು ಮಾತ್ರೆಗಳಲ್ಲಿರೋ ಅಂಶಗಳು ಇಂಥಲ್ಲೇ ಜೀರ್ಣವಾಗ್ಬೇಕು ಅಂತಿರುತ್ತೆ. ಅಂದ್ರೆ ಹೊಟ್ಟೇಲಿ,ಕರುಳಲ್ಲಿ ಹೀಗೆ. ಹೊಟ್ಟೆಯ ಆಮ್ಲ ಗುಣದಿಂದ ಮಾತ್ರೆಲಿರೋ ಅಂಶಗಳು ಹಾಳಾಗ್ಬೋದು ಅಥವಾ ಬೇರೆ ರೀತಿ ಪ್ರತಿಕ್ರಿಯೆಗಳು , ವಿಚಿತ್ರ ವಾಸನೆಗಳು ಬರ್ಬೋದು. ಹಾಗಾದ್ರೆ ಕರುಳಲ್ಲಿ ಜೀರ್ಣ ಆಗ್ಬೇಕಾದ ಮಾತ್ರೆನ ಕರುಳಿಗೆ ಹೇಗೆ ತಲುಪಿಸೋದು.. ತಿಂದಿದ್ದೆಲ್ಲಾ ಹೊಟ್ಟೆ ಮೂಲಕನೇ ಕರುಳಿಗೇ ಹೋಗ್ಬೇಕಲ್ಲಾ? ಅದಕ್ಕೇ ಅಂತನೇ enteric coating ಅನ್ನೋ ತಂತ್ರ ಇರೋದು. ಅದೇನಪಾ ಅಂದ್ರೆ ಮಾತ್ರೇನ ಪ್ರತ್ಯಾಮ್ಲದಿಂದ ಮುಚ್ಚೋದು(cover).enteric ಅಂದ್ರೆ ಕರುಳು ಅಂತನೇ ಅರ್ಥ. ಹಾಗಾಗಿ ಕರುಳಲ್ಲಿ ಜೀರ್ಣ ಆಗೋ ಮಾತ್ರೆ ಅಲ್ಲಿಗೇ ಹೋಗುತ್ತೆ. ಅಲ್ಲಿರೋ ಪ್ರತ್ಯಾಮ್ಲಗಳಲ್ಲಿ ಕರಗಿ ಅದರಲ್ಲಿನ ಅಂಶಗಳ್ನ ಬಿಡುಗಡೆ ಮಾಡುತ್ತೆ. ನಾವು ನೋಡೋ ಕ್ಯಾಪ್ಲೂಸ್ಗಳ ಕೋಟಿಂಗ್ ಇದೇನೆ. ಇದನ್ನ ಮೇಣಗಳು, ಹಲ ತರದ fatty acid ಗಳಿಂದ ಮಾಡಿರ್ತಾರೆ..

ವೀಕ್ಷಕರೇ ಆಗ್ಲೇ ಮೀನಿನ ವಾಸ್ನೆ ಅಂದ್ನಲಾ.. ಈಗ ನೆನ್ಪಾಯ್ತು ನೋಡಿ.. ಸುಮಾರು ಕಂಪನಿಗಳು ಮೀನೆಣ್ಣೇನ ತಮ್ಮ ಮಾತ್ರೆಗಳಲ್ಲಿ ಉಪಯೋಗಿಸ್ತಾರೆ. ಆದ್ರೆ ಅದು ಹೊಟ್ಟೆಗೆ ಹೋದಾಗ ಬಾಯಿಂದ ಮೀನಿನ ಕೊಳೆತ ವಾಸನೆ ಬರೋದು ಇತ್ಯಾದಿ ಆಗ್ತಿತ್ತಂತೆ. ಅದಕ್ಕೆ ಅದಕ್ಕೂ ಈ ಎಂಟರಿಕ್ ಅಂಟು ಉಪಯೋಗಿಸ್ತಾರಂತೆ.. ನಿಂಗೂ ?

ಏ ಕೆಂಚಾ ನಿಲ್ಸಾ.. ಎಲ್ಲ ಟಿ.ವಿ ಆಫ್ ಮಾಡಕತ್ತಿದ್ರು.. ಕಟ್ ಕಟ್.. ವೀಕ್ಷಕರೇ ನಮ್ಮ ಸಂಚಿಕೆ ಹೇಗಿತ್ತು? ಮತ್ತೆ ಭೇಟಿಯಾಗೋಣ ಶುಭರಾತ್ರಿ ಎನ್ನುತ್ತಾ ಪಾಪಣ್ಣ ಆನ್ಲೈನ್ ಟಿ.ವಿ.

ಮಾಹಿತಿ ಮೂಲ: ಗೂಗಲ್, ವಿಕಿಪೀಡಿಯ

Composition of coatings
1)methyl acrylate-methacrylic acid copolymers
2)cellulose acetate succinate
3)hydroxy propyl methyl cellulose phthalate
4)hydroxy propyl methyl cellulose acetate succinate (hypromellose acetate succinate)
5)polyvinyl acetate phthalate (PVAP)
6)methyl methacrylate-methacrylic acid copolymers
7)Sodium alginate and stearic acid

Wednesday, August 17, 2011

ಕಟ್ಟೆರ ಕಚ್ಚಿದೆ

ಕಟ್ಟೆರ ಕಚ್ಚಿದೆ, ಕಪ್ಪನೆ ಕಟ್ಟೆರ
ಅಂಗುಲಿ ಅಂಗುಲ ಉರಿ ಭಾರಿ
ಕಾಲ ಮೇಲೆಲ್ಲಾ ಮುತ್ತಿ ಕಚ್ಚಲು
ಕಾಲ್ಕೀಳುವುದೊಂದೇ ದಾರಿ
ಪರಿಪಾಟಲನು ನೋಡಿ ನಗುವೆಯಾ?
ಕಚ್ಚಿದ್ದು ನಿನಗಲ್ಲ ಪ್ರಭುವೆ ಹರಿ


ಹೆತ್ತ ತಾಯಿಯ ಗರ್ಭದಿ ಒದ್ದೆ
ಹೊತ್ತ ಭೂಮಿಯ ಒಡಲನೆ ಬಗೆದೆ
ನ್ಯಾಯನೀತಿಗಳ ಮೂಲೆಗೆ ಒಗೆದೆ
ನೀ ಬಗೆದೆ ಇರುವೆ ಈ ಕರಿಕೋಟು
ಸಂತೋಷವೆಂಬ ವರದಿಯ ಕಟ್ಟೆರ
ನಿನ್ನಾಸೊಕ್ಕಿಗೆ ಕಚ್ಚಿದೆ ಕಟ್ಟೆರ

ಇದ್ರ ಎರಡನೇ ಪ್ಯಾರಾವನ್ನು ಹೀಗೆ ಬರೀಬೇಕಂತಿದ್ದೆ..
ಅದು ಈಗ ಮೂರನೇದು ಅಂತನಾದ್ರೂ ಓದ್ಕಳಿ


ತಾ ಮಲಗಿದ್ದರೂ ಇತರರೆಚ್ಚರಿಸೊ ಜಗದೋದ್ದಾರಕ ನೀನಂತೆ
ತುಳಿವವಗೆ ಉಳಿಗಾಲವಿಲ್ಲ ಎಂದೆಚ್ಚರಿಸಿದೆ
ನಿದ್ರೆಯಿಂದ ನನ್ನೆತ್ತಿದೆ ದೇವ
ಮನ್ನಿಸೋ ಮಹೇಶ
ಕಾಯೋ ಲಕ್ಷ್ಮೀಶ

ಪ್ರಶಸ್ತಿ.ಪಿ

ಮನೆಯ ಮೇಲೊಂದು ಮನೆ ಕಟ್ಟಿಸಿದೆನಯ್ಯಾ

ಮನೆಯ ಮೇಲೊಂದು ಮನೆ ಕಟ್ಟಿಸಿದೆನಯ್ಯಾ
ಬಾಡಿಗೆಗೆ ನೀಡಲೆಂದು
ಆ ದುಡ್ಡು ಡೆಡ್ಡೆಂದ ದಡ್ಡ ಮಗನಿಗೆ ಬೈದೆ, ಕಾದೆ
ಭಕಪಕ್ಷಿಯಂತೆ ಮೀನು
ಬಂದವರು ಶ್ರೀರಾಮ , ಸಕಲ ಸದ್ಗುಣ ಭಾಮ
ವಾರಂತ್ಯದಲ್ಲೆ ಶುರುವಾಯ್ತು ವರಾತ

ಪಕ್ಕದ್ಮನೆ ಗುಂಡನದು ಅತಿಯಾಯ್ತು ಪುಂಡಾಟ
ಎಲ್ಲೋ ಕೂಗೋನ ದನಿ ಜಾಸ್ತಿಯಾಯ್ತು
ಹೀಗೆ ಹೊಸ ಕಂಪ್ಲೇಟು, ಬಿಳಿಬಟ್ಟೆಯ ಹಿಂದೆ ನೀರು ಕೊತಕೊತ
ಬಯಲಲ್ಲಿ ಬೇಸರವೇ ಮಕ್ಕಳಿಗೆ ಕ್ರಿಕೆಟ್ಟು?
ತಲೆ ಮೇಲೆ ಧಿಂ ಧಿಂ ಬಾಂಬನಾಕುವರು
ಮಧ್ಯರಾತ್ರಿಯಲಿ ಕಾಯ ತುರಿಯೋರು
ಎಂದು ಹೋಗುವರೋ ಇವರು ಜಗಳ ಕಾಯೋರು
ಮನೆ ನೋಡ ಬಂದಿಹರು ಹೊಸಬರು ಶ್ರೀಕೃಷ್ಣನಂತೆ

ರಕ್ಷಾಬಂಧನ

ರಕ್ತ ಹಂಚಿ ಹುಟ್ಟದಿದ್ದರೂ ನೀ ರಾಖಿ ಸೋದರ
ಕ್ಷಯವಾಗದಿರಲಿ ಈ ಪ್ರೀತಿ ನೆನೆಯೋ ನಿನ್ನ ರೀತಿ
ಬಂಧು ನೀನೆ ಈ ಸ್ನೇಹಲೋಕದಲಿ, ಎಳೆವ ನಾಡಿನಲಿ
ಧನದಿಂದಳೆಯದಿರು ನನ್ನ, ಬೇಕಿಲ್ಲ ಚಿನ್ನ ಇರು ನೀ ಚೆನ್ನ
ನನ್ನ ಮರೆತರೂ ನಿನ್ನ ಮರೆಯೆ ನಾ ನನ್ನ ಸಹೋದರನಾ
ಮೊದಲಕ್ಷರಗಳ ಸೇರಿಸಿ ನೀ ಪಡೆ ರಕ್ಷಾಬಂಧನ
ಪ್ರಶಸ್ತಿ.ಪಿ

ಕೃಷ್ಣಂಗೆ ದ್ರೌಪದಿ ರಾಖಿ ಕಟ್ಟಿದ್ದು , ಮುಸಲ್ಮಾನ ರಾಜ್ರಿಗೆ ರಜಪೂತ ಹೆಂಗಸ್ರು ರಾಖಿ ಕಟ್ಟಿದ್ದು ನಿಮಗೆ ಗೊತ್ತುಂಟೋ? ರಾಖಿ ಅಂದ್ರೆ ಬರೀ ಆ ತರ ಅಷ್ಟೇ ಅಲ್ಲ ಮಾರ್ರೇ. . ಮೂರು ವರ್ಷದ ತಮ್ಮಂಗೆ ಅಕ್ಕ ಕಟ್ಟೋದು, ಮೂವತ್ತು ವರ್ಷ ಆಗಿ ಮದ್ವೆ ಆಗಿ ಮಕ್ಳಾದ ಮೇಲೂ ಪ್ರತೀ ವರ್ಷ ರಾಖಿ ಕಳ್ಸೋದುಂಟು.. ತುಂಬಾ ಬ್ಯಾಸ್ರದಲ್ಲಿದ್ದಾಗ ನಿನ್ನ ಸಪೋರ್ಟಿಗೆ ನಾವೆಲ್ಲಾ ಇದೀವಿ ಬ್ರದರ್ ಅಂತ ರಾಖಿ ತಂಗ್ಯಂದ್ರು ಹೇಳ್ದಾಗ ಸ್ಯಾನೆ ಖುಸಿ ಆತೈತೆ ಗುರೂ.. ಮಳ್ ತಮ್ಮ, ಹೇಳೋರು ಕೇಳೋರು ಯಾರೂ ಇಲ್ಲೆ ನಿಂಗೆ ಅಂದ್ಕಂಡ್ಯನಾ? ಅಮ್ಮಂಗೆ ಹೇಳ್ತಿ ತಡಿ ಹೇಳಿ ರಾಖಿ ಅಕ್ಕ ಬೈದಾಗ ಏನೋ ಒಂಥರಾ ಅನುಸ್ತು. ಸೂಪರು .. ಹೋಗ್ತೈತೆ ಮಗಾ ಹೇಳಿ ಹಿಂಬಾಲಿಸ್ತಿರೋ ಹುಡುಗ್ರೆಲ್ಲಾ ಈ ರಾಖಿ ಕಂಡ ತಕ್ಷಣನೇ ಓಡೋದು ನೋಡೋಕೆ ಒಂಥರಾ ಮಜಾ. ಕಟ್ಟಿದ ಚಣನೇ ಜೊತಿಗುಟ್ಟಿದ ಅಣ್ಣನಾ ಅನ್ನಂಗೆ ಡೌಟು ಬರೋ ಹಂಗೆ ಬದ್ಲಾತ್ತಾರೆ ಸಿವ ಕೆಲೋರು..
- ಪಾಪಣ್ಣ & ಪೀಪಣ್ಣ

ನೀ ಸಾಕಿದ ನಾಯೆ ನಿನ್ನ ಕಚ್ಚೋ ದಿನ

ನೀ ಸಾಕಿದ ನಾಯೆ ನಿನ್ನ ಕಚ್ಚೋ ದಿನ
ಫಲ ಬಿಟ್ಟ ತಾಂಬೂಲ ತಲೆ ಮೇಲೆ ಬಿದ್ದು
ಮನದ ಮಲ್ಲಿಗೆ ಬಳ್ಳಿಗರಿಯದಾವುದೊ ಹುಳ
ಮುಂಜಾನೆ ನೇಸರನು ಬೇಸರವ ತರುವಂತೆ
ಚಂದ್ರಮನ ಬೆಳಕೂ ಅಣಕಿಸುವ ನಗುವಂತೆ
ಜೀವದ ಗೆಳೆಯರೇ ನೀನ್ಯಾರು ಅನುವಂತೆ
ನೀನವನಲ್ಲ, ನೀನವನಲ್ಲ, ನೀನವನಲ್ಲ
ಬದಲಾದೆ ನೀನು,ಹೋಗಾಚೆ ಎನುವಂತೆ


ಬರುವುದಿಂತಾ ದಿನ ಕೆಲವರಿಗೆ ಪ್ರತಿದಿನ
ಕೆಲವರಿಗೆ ಒಮ್ಮೊಮ್ಮೆ ಸಾಗರದಿ ಅಲೆಯಂತೆ
ಅಲೆಯಲ್ಲ ಸುನಾಮಿ, ದಡದಲ್ಲಿ ಇದ್ದ ಮನೆ
ಮನಗಳನು ಕೊಚ್ಚುವುದು. ನಿನ್ನಲ್ಲೆ ನೆನಪಾಗಿ
ಅನುದಿನವು ಚುಚ್ಚುವುದು. ಇದು ಅಲ್ಲ ವೇದಾಂತ
ಸುಖವೆಲ್ಲಾ ಬರಿ ಭ್ರಾಂತ, ಎಲ್ಲ ಒಂದೇ ಎಂಬ ಸಿದ್ದನಾಗು
ಹಂಚಿದಷ್ಟೂ ಬೆಳೆವ ಬೆಳಕದುವೆ ಸಂತೋಷ
ಇಲ್ಲದವರಿಗೆ ನೀಡಿ ತೃಪ್ತನಾಗು
ಕಡಲಾಳದ ಮೀನೆ ನಿನ್ನಯ ಜೀವಾಳ
ದಿನಗೆಲಸಕೆ ಮತ್ತೆ ಸಿದ್ದನಾಗು

Friday, August 12, 2011

ವಿಮಾನಯಾನ: ವಿಷಯಾನ

ಶೀರ್ಷಿಕೆ ನೋಡಿ ನಾನು ಪೋಲಿಸರು ಹತ್ತಿಸುತ್ತಾರೆ ಅನ್ನೋ ವಿಮಾನದ ಬಗ್ಗೆ ಮಾತಾಡ್ತಾ ಇದ್ದೀನಾ ಅಂತ ಕೆಲವ್ರಿಗೆ ಸಂದೇಹ ಬಂದ್ರೂ ಬಂದಿರ್ಬೋದು. ಇಲ್ಲಾ ಸ್ವಾಮಿ. ನಾ ಹೇಳ್ತಿರೋದು ಜನ್ರು ಬೇಗ ಹೋಗ್ಬೇಕೋ, ದೂರ ಹಾರ್ಬೇಕು ಅಂತ ಬಳಸೋ ವಿಮಾನದ ಬಗ್ಗೇನೆ. ಅದು ಅಪಘಾತವಾಗಿ ಸುಮಾರು ಜನ ಸಾಯ್ತಾರೆ.ಆದ್ರೆ ಅದ್ರಲ್ಲಿನ ಪ್ರತೀ ಪ್ರಯಾಣವೂ ಹೇಗೆ ವಿಷಯಾನ ಆಗತ್ತೆ ಅಂತ ಕುತೂಹಲ ಕಾಡೋಕೆ ಶುರು ಆಯ್ತಾ? ಹಾಗಾದ್ರೆ ಮುಂದೆ ಓದಿ.
ಕಾಸ್ಮಿಕ್ ಕಿರಣಗಳು ಅಂತ ನೀವು ಕೇಳಿರಬಹುದು.ಅಂತರಿಕ್ಷದಲ್ಲಿ ಸಂಚರಿಸ್ತಾ ಇರೋ ಶಕ್ತಿಭರಿತವಾ ಹೀಲಿಯಂ ಅಯಾನುಗಳು, ಪ್ರೋಟಾನುಗಳು ಇತ್ಯಾದಿಗಳಿಗೆ ಹಾಗೆನ್ನುತ್ತಾರೆ. ಅವು ನಮ್ಮ ಭೂಮಿಯ ಕಡೇನೂ ಬರ್ತಿರುತ್ತೆ. ಆದ್ರೆ ನಮ್ಮ ಹೀರೋ ಸೂರ್ಯನ ಮತ್ತು ಭೂಮಾತೆಯ ಆಯಸ್ಕಾಂತೀಯ ಕ್ಷೇತ್ರಗಳು ಅವನ್ನು ಭೂಮಿಯಿಂದ ದೂರ ತಳ್ಳೋಕೆ ಪ್ರಯತ್ನ ಮಾಡ್ತಾ ಇರುತ್ತೆ. ಹೆಚ್ಚು ದೂರ ಕ್ರಮಿಸಿದಂತೆ, ಭೂಮಿಯ ವಾತಾವರಣದಿಂದಲೂ ಆ ಕಿರಣಗಳ ತೀವ್ರತೆ ಸ್ವಲ್ಪ ಕಮ್ಮಿ ಆಗುತ್ತೆ.ಹಂಗಂತಾ ನಾವ್ಯಾಗ್ಲೂ ಸುರಕ್ಷಿತರಲ್ಲ ಸ್ವಾಮಿ.ಸೂರ್ಯನೇ ಕೆಲವೊಮ್ಮೆ ಸೌರಜ್ವಾಲೆಗಳ ಮೂಲಕ ಕಾಸ್ಮಿಕ್ ಕಿರಣಗಳಿಗೆ ಪುಷ್ಟಿ ನೀಡೋದುಂಟು. ಸೂರ್ಯನಿಗೂ ಸೂರ್ಯಚಕ್ರ ಅಂತ ಇರುತ್ತೆ. ಪ್ರತೀ ಹನ್ನೊಂದು ವರ್ಷಕ್ಕೆ ಪುನರಾವರ್ತನೆ ಆಗತ್ತೆ. ತೀಕ್ಷ್ಣ ಅವಧಿ ಅಂದರೆ ಸೂರ್ಯನಲ್ಲಿ ನಡೆಯೋ ಚಟುವಟಿಕೆಗಳೆಲ್ಲಾ ಚೆನ್ನಾಗಿ ನಡೆದು ಅದರಿಂದ ಪ್ರಬಲ ಆಯಸ್ಕಾಂತೀಯ ಕ್ಷೇತ್ರ ನಿರ್ಮಾಣ ಆಗೋ ಸಮಯ. ದುರ್ಬಲ ಅಂದ್ರೆ ಇದಕ್ಕೆ ವ್ಯತಿರಿಕ್ತ. ಈ ರೀತಿ ದುರ್ಬಲವಾದಾಗ ತೀಕ್ಣವಾಗಿದ್ದಾಗ ತಡೆಯೋದಕ್ಕಿಂತ ೪೦ ಪ್ರತಿಶತ ಕಮ್ಮಿ ತಡೆಯುತ್ತೆ. ಇಷ್ಟೆಲ್ಲಾ ಪೀಠಿಕೆ ಆದ ಶೀರ್ಷಿಕೆಯ ವಿಷಯಕ್ಕೆ ಬರೋಣ.

ಮುಂಚೇನೆ ಓದಿದ್ರಿ ವಾತಾವರಣದಲ್ಲಿ ಹೆಚ್ಚೆಚ್ಚು ಮೇಲೆ ಹೋದಂತೆಲ್ಲಾ ಕಾಸ್ಮಿಕ್ ಕಿರಣಗಳ ತೀವ್ರತೆ ಜಾಸ್ತಿ ಆಗತ್ತೆ ಅಂತ.ನಮ್ಮ ಪ್ರಯಾಣಿಕರ ವಿಮಾನಗಳು ಸಾಮಾನ್ಯವಾಗಿ ೧೦೦ ಕಿ.ಮೋ ರಷ್ಟು ಎತ್ತರಕ್ಕೆ ಹಾರುತ್ತೆ ಅಂತಾರೆ ತಜ್ಞರು.ಅಂದ್ರೆ ಈ ವಿಕಿರಣಗಳ ಪ್ರಭಾವವೂ ನೆಲದಲ್ಲಿದ್ದಕ್ಕಿಂತ ೧೦೦ ಪಟ್ಟು ಹೆಚ್ಚು ಅಂತಾರೆ ಅವರು.ಈ ರೀತಿ ವಿಕಿರಣಗಳಿಗೆ ಒಗ್ಗಿಕೊಳ್ಳೋದ್ರಿಂದ ಕ್ಯಾನ್ಸರ್ ನಂತಹ ಕಾಯಿಲೆ ಬರ್ಬೋದು. ಮಕ್ಕಳ , ಗರ್ಭದಲ್ಲಿರೋ ಕಂದಮ್ಮಗಳ ದೇಹ ಹೆಚ್ಚು ಸೂಕ್ಷ್ಮವಾಗಿರುತ್ತೆ . ಹಾಗಾಗಿ ಅವಕ್ಕೆ ಇನ್ನೂ ಅಪಾಯ ಅಂತಾರೆ ಅವ್ರು.ಈಗ ಪ್ರಭಾವ ಕಾಣದಿದ್ರೂ ಇನ್ನು ಕೆಲವರ್ಷದಲ್ಲಿ ಕಾಣುತ್ತೆ ಅಂತಾರೆ ಅವ್ರು.
ಹಾಗಂದ ಮಾತ್ರಕ್ಕೆ ಒಂದೋ,ಎರಡೋ ಬಾರಿ ಪ್ರಯಾಣ ಮಾಡಿದ್ರೆ,ಅಪರೂಪಕ್ಕೆ ಮಾಡೋರಿಗೂ ಕ್ಯಾನ್ಸರ್ ಬರೊತ್ತೆ ಅಂತ ಅರ್ಥಾನ ಅಂದ್ರೆ ಉತ್ರ ಖಂಡಿತ ಇಲ್ಲ.ನೀವು ೧೦೦ ಸಾರಿ(ಅಂದಾಜು ಸಾವಿರ ಘಂಟೆ) ದೂರದ ವಿಮಾನ ಪ್ರಯಾಣ ಮಾಡಿದ್ರೆ ಒಂದು ವರ್ಷದಲ್ಲಿ ನೀವು ನೆಲದಲ್ಲಿ ಪಡೆಯೋ ವಿಕಿರಷ್ಟದಷ್ಟು ಪಡೀತಿರಿ. ಈ ವಿಕಿರಣದಿಂದ ಕ್ಯಾನ್ಸರ್ ಸಾಧ್ಯತೆ ೧% ಜಾಸ್ತಿ ಆಗ್ಬೇಕಿದ್ರೂ ನೀವು ವರ್ಷಕ್ಕೆ ೧೦೦೦ ಘಂಟೆಗಳಂತೆ ೩೦ ವರ್ಷ ಪ್ರಯಾಣ ಮಾಡ್ಬೇಕಂತೆ!! ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಇದೆ ಅಂತ ಮರೀಬೇಡಿ. ಇಂಥ ಚಿಲ್ರೆ ವಿಕಿರಣಗಳಿಂದ ಹೆಚ್ಚು ಅನಾಹುತ ಆಗದಂಗೆ ಅದೂ ತಡಿಯತ್ತೆ. ಆದ್ರೂ ಗರ್ಭಿಣಿಯರು ನಿಮ್ಮ ಗರ್ಭದಾರಣೆ ಸಮಯದಲ್ಲಿ ೨೦೦ ಘಂಟೆಗಿಂತ ಹೆಚ್ಚು ಪ್ರಯಾಣ ಮಾಡ್ಬೇಡ್ರಮ್ಮ.. ಇದ್ನ ನಾನು ಹೇಳ್ತಿರೋದಲ್ಲ. ಕೆನಡಾದ ಡಾ ಲೀವಿಸ್ ತಂಡ ಹೇಳ್ತಿರೋದು.. ಸರಿ ಏನೋ ಅಂದ್ಕಂಡಿದ್ದೆ, ಏನೂ ಆಗ್ಲಿಲ್ಲ ಅಂದ್ರಾ? ನೀವು ಏನೇ ಅನ್ನಿ ನಿಮ್ಮನ್ನ ಖುಷಿಪಡ್ಸೋದು ಉದ್ದೇಶನೇ ಹೊರ್ತು ಅಳ್ಸೋದಲ್ಲ...

ಎಂ ಕೆಂಚಾ, ಕೊದ್ರಿದ್ದು ಸಾಕು ನಿಲ್ಲಿಸ್ಲಾ... ವೀಕ್ಷಕರೇ ನಿಮ್ಗಿದು ಹೇಗನಿಸ್ತು ಅಂತ ಬರೆದು ಕಳ್ಸಿ. ಮತ್ತೊಮ್ಮೆ ನಿಮಗೆಲ್ಲಾ ಹಬ್ಬದ ಹಾರ್ದಿಕ ಶುಭಾಷಯ ಕೋರುತ್ತಾ ಪಾಪಣ್ಣ ಆನ್ಲೈನ್ ಟೀವಿ

ಸ್ಪೂರ್ತಿ: Health Canada Website : hc-sc.gc.ca
B.J. Lewis et al, Cosmic radiation Exposure on Canadian-Based Commercial Airline Routes, Radiation Protection Dosimetry
ಚಿತ್ರಗಳು: ಗೂಗಲ್

Wednesday, August 10, 2011

ಬೇಸರದ ಬಿಸಿಲಿಗೆ ಬಾಡಿದೆ ಮನಲತೆಯು


ಬೇಸರದ ಬಿಸಿಲಿಗೆ ಬಾಡಿದೆ ಮನಲತೆಯು
ನಂಬಿ ಕೆಟ್ಟಿಹ ನೋವು ಸುಳಿದಾಡುತಿಹುದು
ವಾತ್ಸಲ್ಯ ನೀರಿಲ್ಲ, ಸ್ನೇಹದ ನೆರಳಿಲ್ಲ
ನೈಜತೆಯ ಮುಖಕೊಡೆವ ನಗೆಯ ಮುಖವಾಡ
ತರಕಾರಿ ಕೊಟ್ಟರೂ ತಪ್ಪಿಲ್ಲ ತಕರಾರು
ಉಪಕಾರ ನೆನಪಿಲ್ಲ, ದೈನತೆಯ ಅರಿವಿಲ್ಲ
ಕೆಳ ಕೆಳಗೆ ಎಳೆವುದೇ ದಿನ ಕಾಯಕ
ಇದಕೆ ಬಗ್ಗದೆ ಇಹುದೆ ನಿರ್ಣಾಯಕ

ಅರಿಯದ ಮರುಳನಿಗೇಕೆ ದು:ಖ ಲತೆಯೇ?
ಅರಿವಾಸೆ ಇರುವವರು ಹೇಳದುದನರಿವರು
ಅರೆಮನಸಲಿರುವವಗೆ ಹೇಳೂ ಸುಖವಿಲ್ಲ
ಇದ್ದಲನೆ ಬಯಸುವ ಚಿನ್ನದವನಿರುವಾಗ
ಸಿಗದ ಜಡದವಗೇಕೆ ನಿನ್ನ ಕೊರಗು?
ನಿನ್ನಿಂದ ಹಣ್ಣಾದ ಹಕ್ಕಿಗಳ ಪಾಲಾದ
ಫಲದಲ್ಲಿ ನೀನಿರುವೆ, ಮತ್ತೆ ಹುಟ್ಟುವೆ ನೀ
ಹರಿದಂಗಿಯಂತೆ ನಿನ್ನೀ ಬಡ ದೇಹ
ಹೊಸದು ಕಾದಿಹುದು ,ಅಳಬೇಡ ಲತೆಯೆ

ಚಿತ್ರಕೃಪೆ: ವಿಜಯಕಾಂತ ಪಾಟೀಲ, ಗೂಗಲ್

Tuesday, August 9, 2011

ಲಾಸ ಲವ್ಸ್ ಲವೋಟಿ

ಹಿಂಗೆ ಒಂದು ಮಧ್ಯಾಹ್ನ "ಲಾಸ ಲವ್ಸ್ ಲವೋಟಿ, ಲಾಸ ಲವ್ಸ್ ಲವೋಟಿ.." ಅಂಥೇನೋ ಕೈಲಾಸ ಅಲಿಯಾಸ್ ಲಾಸ ಹಾಡ್ತಾ ಖಾಲಿ ಕ್ಲಾಸಲ್ಲಿ ಕೂತು ಹಾಡ್ತಾ ರೆಕಾರ್ಡ್ ಬರೀತಿರ್ಬೇಕಾದ್ರೆ ಅವ್ನ ಕೆಲ ಗೆಳೆಯರೂ ಅವನ್ನ ಹುಡುಕ್ಕಂಡು ಅಲ್ಲಿಗೇ ಬಂದ್ರು. ಮುಟ್ಟಿದೆಲ್ಲಾ ಲಾಸಾಗಿ, ಹೆಸ್ರಲ್ಲಿರ ಕೈನೂ ಲಾಸಾಗಿ ಲಾಸ ಆಗಿರೋನು ಇವತ್ಯಾಕೆ ಇಷ್ಟು ಖುಷಿಯಾಗಿದಾನೆ ಅಂದ ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ. ಲಾಸ ಲವ್ಸ್ ಲಂಗೋಟಿ ಅಂತಿರ್ಬೇಕು ಮಾರ್ರೆ ಅಂದ ಮಂಜ ಅಲಿಯಾಸ್ ಮಂಗಳೂರು ಮಂಜು.ಎಲ್ಲಾ ಗೊಳ್ಳಂತ ನಕ್ರು. ಪಾಪ ಯಾಕರ್ವ ಜೀವ ತಿಂಬೂದು ನೀವು ಮಿ.ಮಂಜು? ಲವೋಟಿ ಅಂದ್ರೆ ಎಂಥ ಹೇಳಿ ಕಾಂಬ ಈಗ ಅಂದ್ಳು ಇಳಾ ಅಲಿಯಾಸ್ ಇಳಾದೇವಿ.ಈಗ ಮಂಜನ ಮುಖ ಹುಳಿಯಾಯ್ತು. ತಿಪ್ಪಂದೂ.


ಕೊನೆಗೆ ಲಾಸನೇ ಹೇಳ್ದ ಲವೋಟಿ ಅಲ್ಲ ಅದು ಲವೋಟಿಕ್ಸ್. ಅಂದ್ರೆ ಮನುಷ್ಯ ಮತ್ತು ರೋಬೋಗಳ ನಡುವಿನ ಸಂಬಂಧ ಅಂತ. ಇನ್ನೂ ಹೇಳ್ಬೇಕು ಅಂದ್ರೆ ಪ್ರೀತಿ ಮಾಡೋ ರೋಬೋಟ್ ಅಂಥ.ಇದನ್ನ ಕಂಡುಹಿಡಿದದ್ದು ಸಿಂಗಾಪುರದ ಹೂಮನ್ ಸಾಮಿ ಅನ್ನೋ ಸಂಶೋಧಕ ಅಂದ. ಏ ಅವ್ನು ಮೊಹ್ಮದ್ ಸಾಮಿ ನೆಂಟ್ರ ಅಂದ ಕ್ರಿಕೆಟ್ ಪ್ರಿಯ ತಿಪ್ಪ. ಅಲ್ಲಾ, ಗೋಕುಲಾಷ್ಟಮಿ ಇಮಾಮಿ ಸಾಬಿ ಮಗ, ಎಂಥಾ ಕೇಳ್ತಿ ಸುಮ್ನಿರ ಅಂದ್ಳು ಸರು. ಎಲ್ಲಾ ತಣ್ಣಗಾದ್ರು. ಕೊನೆಗೆ , ಅದು ರಜನೀಕಾಂತ್ ಚಿತ್ರದ "Am chitti, the robot, Memory 1 Tera Byte,Speed 1 Tera Hertz" ಅನ್ನೋ ತರದ್ದಾ ಮಾರಾಯ ಅಂದ ಮಂಜು.

ಏ ಆ ತರದ್ದೆಲ್ಲಾ ಇನ್ನೂ ಬಂದಿಲ್ಲ. ಇವ ಹೇಳೋದು ಯಾವ್ದೋ ಬಾರ್ಬಿ ತರದ ಸಣ್ಣ ರೋಬೋ ಗೊಂಬೆ ಇರ್ಬೇಕು ಅಂದ್ಳು ಸರು ಅಲಿಯಾಸ್ ಸರಸ್ವತಿ. ನೀ ಹೇಳದು ಸ್ವಲ್ಪ ಸರಿ ಅಷ್ಟೆ ಸರು.ಇದು ಸಣ್ಣದೇ ಆದ್ರೆ ನೀವಂದ್ಕಂಡೆ ಒಂದ್ಕಡೇ ಬಿದ್ಗೊಂಡಿರೋ ಬಾರ್ಬಿ ತರ ಅಲ್ಲ.ಅದಕ್ಕೆ ಎದ್ರಿಗಿರೋರ ಪ್ರೀತಿ ಅರ್ಥ ಆಗುತ್ತೆ. ಪ್ರತಿಯಾಗಿ ಅದೂ ಪ್ರೀತಿ,ಖುಷಿ, ಸಿಟ್ಟು, ಅಸೂಯೆ, ಆಶ್ಚರ್ಯ ಎಲ್ಲಾ ತೋರ್ಸತ್ತೆ ಅಂದ. ಯಾರೂ ತುಟಿ ಪಿಟಕ್ಕನ್ನಲಿಲ್ಲ. ಇನ್ನೂ ಹೇಳೋ ಪ್ಲೀಸ್ ಅನ್ನೋ ತರ ಲಾಸನ್ನೇ ನೋಡಕ್ಕತ್ತಿದ್ರು.
ಮನುಷ್ಯನಲ್ಲಿ ಜೈವಿಕ ಕ್ರಿಯೆಗಳನ್ನೆಲ್ಲಾ ಹೆಚ್ಚು ಮಾಡೋದು, ಕಮ್ಮಿ ಮಾಡೋದು ಯಾವ್ದು ಅಂದ ಲಾಸ. ಹಾರ್ಮೋನು ಅಂದ್ರು ಎಲ್ಲಾ, ಹಾರ್ಮೋನಿಯಂ ಪೆಟ್ಗೆಯ ತಾರಕ ಶ್ರುತೀಲಿ.ಹಾ ಸರಿ. ಮನುಷ್ಯರಲ್ಲಿ ಆಕ್ಸಿಟೋಸಿನ್, ಡೋಪಮೈನ್, ಸೆರಟೋನಿನ್, ಎಂಡಾರ್ಪಿನ್ ಅನ್ನೋ ಪ್ರೀತಿಯ ಹಾರ್ಮೋನ್ಗಳಿರುತ್ತೆ. ಅದೇ ರೀತಿ ರೋಬೋಟ್ ನಲ್ಲಿ ಅದಕ್ಕೆ ತತ್ಸಮನಾದ ಕೃತಕ ಹಾರ್ಮೋನ ಹಾಕಿದ್ರಾಯ್ತು ಅಂದ ಲಾಸ. ಅದನ್ನ ಹೆಚ್ಚು ಕಮ್ಮಿ ಮಾಡಿದ್ರಾಯ್ತು , ರೋಬೋಟ್ ರೆಡಿ ಅಂದ ಎಲ್ಲಾ ತಿಳಿದೋನಂತೆ ತಿಪ್ಪ. ಅದು ಸರಿ, ಮಾನಸಿಕ ಅಂದ್ಯಲಾ , ಎದ್ರುಗಿರೋರ ಮನಸ್ಸಲ್ಲೇನಿದೆ ಅಂಥ ಹೇಗೆ ತಿಳಿಯೂದು ಅಂದ್ಳು ಇಳಾ? ಎದ್ರಿಗಿರೋರ ಮೆದುಳಿನ MRI ಸ್ಕಾನ್ ಮಾಡಿದ್ರೆ ?ಅಂದ ಮಂಜ.ಅವರ ಧ್ವನಿ, ಹಾವ ಭಾವ,ಮುಖಭಾವದಿಂದ್ಲೂ ಮಾಡಬೋದೇನೋ ಅಂತ ಸೇರಿಸಿದ್ಲು ಸರು. ವೆರಿ ಗುಡ್. ಸಾಮಿ ತನ್ನ ೧೧ ಪೇಪರ್ ಅಲ್ಲಿ ಹೇಳಿದ್ದೂ ಇದೇ ತರದ ವಿಧಾನನ ಅಂದ ಲಾಸ. ಮಂಜಂಗೆ ಮತ್ತು ಸರೂಗೆ ತಾನೇ ಸಾಮಿ ಅನ್ನ ಹಂಗೆ ಖುಷಿ ಆಯ್ತು.




ಸರಿ ಇವೆಲ್ಲಾ ರೋಬೋಟ್ ನಲ್ಲಿ ಹ್ಯಾಂಗ್ ಒಟ್ಟಾತ್ತು ಅಂದ್ಳು ಇಳಾ. ನಮ್ಮ ದೇಹದಲ್ಲಿ Endocrine,exocrine ಅಂತ ೨ ವ್ಯವಸ್ಥೆ ಇರೋಲ್ವ ಅದೇ ತರ ಇಲ್ಲೂ ಅಂದ ಲಾಸ. ಸಾಮಾನ್ಯವಾಗಿ ಇಂಥ ರೋಬೋಗಳಲ್ಲೆಲ್ಲಾ ಕೃತಕ ಬುದ್ದಿಮತ್ತೆ(artificial intelligence) ತುಂಬಿರ್ತಾರೆ ಅಲ್ವಾ ಅಂದ್ಳು ಸರು.ಹೌದು. ಇದ್ರೊಳಗೆ ಸಂಕೀರ್ಣ ಸರ್ಕೀಟ್ ಗಳು. ಹೊರಗೆ ಸ್ಕಾನರ್, ಮೈಕ್ರೋಫೋನ್, LED ಗಳು ಅಂದ. ಓ ಮುನ್ನಾಭಾಯಿ ಗೆ ಎಲ್ಲಾ ಕೆಲ್ಸ ಮಾಡ್ಕೋಡೋ ಸರ್ಕಿಟ್ ನಂತೆ ಇಲ್ಲೂ ಇದೆ ಸರ್ಕಿಟ್ ಅಂದ ತಿಪ್ಪ. ಎಲ್ಲಾ ಮತ್ತೆ ನಕ್ಕರು ಈಗ

ಓ ಈಗ ಗೊತ್ತಾಯ್ತು ನಿನ್ನ ಹಾಡಿನ ಅರ್ಥ. ನೀ ಹೇಳಿದ್ದು ಲವೋಟಿನೆ. ಹೆಣ್ಣು ರೋಬೋ ಅಂತ ನೀ ಹಂಗೆ ಹೆಸ್ರಿಟ್ಟಿದೀಯ. ಆದ್ರೆ ನೀವಿಬ್ರು ಪ್ರೀತಿ ಹೆಂಗೆ ಮಾಡ್ತೀರಿ ಅಂದ್ಳು ಇಳಾ. ಲಾಸನ ಮುಖ ನಾಚಿಕೆಯಿಂದ ಕೆಂಪಾಯ್ತು. ಅವನ ಮಗ್ಗುಲಲ್ಲಿದ್ದ ಗೊಂಬೆಯಿಂದ ನೇರಳೆ ಬಣ್ಣ ಬರಕಿಡೀತು. ಎಲ್ರಿಗೂ ಆಶ್ಚರ್ಯ ಆಯ್ತು ಅದೆಂತಾ ಅಂತ. ಹಿಂಗೇ ಅಂದ ಲಾಸ. ಯಾರಿಗೂ ಅರ್ಥ ಆಗ್ಲಿಲ್ಲ. ಇದರಲ್ಲಿ LED ಗಳು ಇರ್ತವೆ. ತನ್ನೊಡೆಯನ್ನ ಬೇರೆ ಯಾರಾದ್ರೂ ಮಾತಾಡ್ಸಿದ್ರೆ ಇದಕ್ಕೆ ಅಸೂಯೆ ಆಗಿ ಈ ತರ ಬೆಳಕು ಬಿಡತ್ತೆ. ಇದಕ್ಕೆ ಪ್ರೀತಿ ಆದ್ರೆ ಹಾರ್ಟ್ ಕಲರ್ ಕೆಂಪು ತೋರ್ಸತ್ತೆ. ಹಿಂಗೆ ನೀಲಿ,ಹಸಿರು, ಬೇರೆ ಬೇರೆ LED , vibration ಎಲ್ಲಾ ಇದೆ ಅಂದ. ಆದ್ರೆ ನೀ ಹ್ಯಾಗೆ ಅದಕ್ಕೆ ಪ್ರೀತಿ ತೋರಿಸ್ತೀಯ ಅಂತ ಸರು ಅದ್ರ ತಲೆ ನೇವರಿಸಕ್ಕೆ ಹಿಡಿದ್ಳು ಮುದ್ದಿನ ನಾಯಿ ತರ.
ಅದ್ರ ಬಣ್ಣ ಕೆಂಪಾಯ್ತು. ಹಿಂಗೇ ಅಂದ್ರು ಎಲ್ರೂ. ಕೆಂಪಾಗೋ ಸರದಿ ಈಗ ಸರೂದು. ಸರಿ ಹೀಗೆ ಮಾತಾಡ್ತಾ ಇದ್ರೆ ಲ್ಯಾಬ್ ಗೆ ಲೇಟಾಗತ್ತೆ , ಎಲ್ರೂ ರೆಕಾರ್ಡ ಬರದಾಯ್ತ ಅಂತ ತನ್ನ ಸಿಂಗಾಪುರದ ಗೊಂಬೆ ಅಲ್ಲಲ್ಲಾ ರೋಬೋನ ಬ್ಯಾಗೊಳಗಿಟ್ಟ ಲಾಸ.


ಗೆಳೆಯರೇ ಈ ಲೇಖನ ನಿಮಗೆ ಹೇಗನ್ನಿಸಿತು? ಇದರ ಬಗ್ಗೆ ಮುಂಚೆ ಓದಿದ್ರಾ? ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತ

ಮಾಹಿತಿ ಮತ್ತು ಚಿತ್ರ ಕೃಪೆ: www.lovotics.com,www.extremetech.com, Google





Friday, August 5, 2011

ಹಳ್ಳೀಗ್ಬಂದ ಗುಂಡಣ್ಣ ಮತ್ತು ಆನ್ಲೈನ್ ಕೋರ್ಸು

ಪಟ್ಣದಿಂದ ಜಗ್ಗಣ್ಣನ ಮಗ ಗುಂಡಣ್ಣ ಬತ್ತವ್ನಂತೆ. ಅದೆಂತದೋ ಕಾಂಪೂಟ್ರಂತ ಡಬ್ಬ ತತ್ತವ್ನಂತೆ ಅನ್ನೋ ಸುದ್ದೀನ ಊರೆಲ್ಲಾ ಟಾಂ ಟಾಂ ಮಾಡ್ತಿದ್ದ ಜಮೀನ್ದಾರ ಜಗ್ಗಣ್ಣನ ಮನೆ ಕೆಲ್ಸದ ಕಿಟ್ಟಪ್ಪ. ಊರಿಗೆ ಬರೋ ಮಗೀನ ತತ್ತಾರಲಾ ಅಂತ ಧಣೀರೆ ಕಿಟ್ಟಪ್ಪಂಗೆ ಗಾಡಿ ಕಟ್ಕಂಡು ಹೋಗಕ್ಕೆ ಹೇಳಿದ್ರು. ಕಿಟ್ಟಪ್ಪ ರಾಜ್ಕುಮಾರ್ನ ಅಣ್ಣತಂಗಿ ಸಿನೀಮಾದಾಗೆ ನೋಡಿದ್ನಂತೆ. ಅದ್ರಲ್ಲಿ ಪಟ್ಣದ ಹೀರೋ ತನ್ನಳ್ಳಿಗೆ ಬಂದಾಗ ಅವನ ಕೋಟು ಬೂಟೇನು ,ಅವಂಗೆ ಹಾರ ತುರಾಹಿ ಹಾಕೋದೇನೂ.. ಅಬ್ಬಬ್ಬಾ ಅಂದ್ಕಂಡಿದ್ದ. ಅದೇ ತರ ಚಿಕ್ಕೆಜಮಾನ್ರೂ ಬತ್ತಾರೆ ಅಂತ ಕನ್ಸು ಕಾಣ್ತಾ ಇದ್ದ. ಮುಖ, ಮೈಮೇಲೆಲ್ಲಾ ಯಾರೋ ನೀರು ಹುಯ್ದಂಗಾಗಿ ಕಣ್ಬಿಟ್ಟ. ಯಾವನ್ಲೇ ಅವ ಕೆಸ್ರು ಹಾರಿಸಿದವ.. ಅಂತ ಬಾಯ್ತುದೀವರ್ಗೂ ಬಂದಿತ್ತು.ನೋಡಿದ್ರೆ ಪಟ್ಣದ ಬಸ್ಸು ಹಾರ್ನು ಹೊಡಿತಾ ಐತೆ. ಯಾವುದೋ ಪಟ್ಣದ ಹುಡ್ಗಿ ಇಳಿತಾ ಐತೆ.
ಅದೆಂತದೋ ಪ್ಯಾಂಟು, ಶರ್ಟು, ಕನ್ನಡಕ ಹಾಕ್ಕೊಂಡು. ಒಂದ್ಕಿವಿಗೆ ರಿಂಗು ಬೇರೆ. ಈಗಿನ ಹುಡ್ಗೀರು ಹಿಂಗೆ ಇರ್ಬೇಕು, ಆದ್ರೂ ಕೂದಲು ಬಿಟ್ಕಂಡು , ಕಿವಿಗೆ ರಿಂಗೆಲ್ಲಾ ಹಾಕ್ಕಂವ್ಳಲ್ಲಾ ಅಂತ ಸಮಾಧಾನ ಮಾಡ್ಕಂಡ. ಅಷ್ಟರಲ್ಲೇ ಆ ಹುಡ್ಗಿ ಇವ್ನ ಹತ್ರವೇ ಬಂದು ಜಮೀನ್ದಾರ ಜಗ್ಗಣ್ಣ ಅವ್ರ ಮನೇ ಇಂದ ನನ್ನ ಕರ್ಕೊಂಡೋಗಕ್ಕೆ ಯಾರೋ ಬರ್ತಾರೆ ಅಂದಿದ್ರು. ನೀವ್ಯಾರ್ನೂ ನೋಡಿದ್ರಾ ಅಂದ್ಳು.

ಕಿಟ್ಟಪ್ಪಂಗೆ ಶಾನೆ ಗಾಬ್ರಿ ಆತು. ಕೊನೆಗೆ ಪಟ್ಣದಿಂದ ಗುಂಡಣ್ಣ ಇವತ್ತು ಬರಾಕಿಲ್ಲೇನೋ, ಇವ್ಳ್ನೇ ಕರ್ಕಂಬಾ ಅಂತ ಹೇಳೋಕೆ ಧಣೀರು ಮರ್ತಿರ್ಬೇಕು ಅಂದ್ಕಂಡ. ನೋಡೋಕೆ ಹುಡ್ಗಿ ಹಂಗಿದ್ರೂ ಧ್ವನಿ ಹುಡ್ಗನಂಗೈತಲಾ ಅಂತ ಆಶ್ಚರ್ಯ ಆತು. ಆದ್ರೂ ಅದೆಲ್ಲಾ ಕೇಳೋದು ಸರಿಗಿರಾಕಿಲ್ಲ ಅನುಸ್ತು. ಸರಿ ತಂಗಿ ಅವ ನಾನೇಯ. ಹತ್ತು ಗಾಡಿ ಅಂದ. ಆ ಹುಡ್ಗಿ ಸುತ್ತ ಎಲ್ಲಾ ನೋಡಿ ತನ್ನೇ ಕರೀತಿರದು ಅಂತ ಗೊತ್ತಾದ ಮೇಲೆ ನಾ ಯಾರು ಅಂತ ಗೊತ್ತಾಗ್ಲಿಲ್ವಾ? ಕಿಟ್ಟಪ್ಪನೋರೇ ಅಂತು. ಕಿಟ್ಟಪ್ಪಂಗೆ ಕೊನೆಗೂ ಜ್ನಪ್ತಿಗೆ ಬರಲೇ ಇಲ್ಲ. ಅದು ಕಿಟ್ಟಪ್ಪಾ ನಾನು ಗುಂಡು ಅನ್ನೋದೆ? ಕಿಟ್ಟಪ್ಪ ತಲೇ ತಿರುಗಿ ಬೀಳೋದೊಂದು ಬಾಕಿ. ಎಂಥಾ ಕಾಲ ಬಂತು ದೊರೆ. ಏನೀ ವೇಷ ಅಂದ. ಇದು ಫ್ಯಾಷನ್ ಕಿಟ್ಟಪ್ಪ ನಿಂಗೆದೆಲ್ಲಾ ತಿಳ್ಯಕಿಲ್ಲಾ, ನಡೀ ಮನಿಗೆ ಅಂದ.


ಮನೇಲಿ ಮಗ ಬತ್ತಾನೆ ಅಂತ ಈರವ್ವ ಆರ್ತಿ ತಟ್ಟೆ ಹಿಡ್ಕಂಡು ಕಾದಿದ್ಲು. ಕಿಟ್ಟಪ್ಪ ನೋಡಿದ್ರೆ ಯಾರೋ ಗೌರೀನ ಕರ್ಕಂಬತ್ತವ್ನೆ. ಅಯ್ಯೋ ಅದರ ವ್ಯಾಷನಾ? ಇಶ್ಶೀ.. ಬರ್ಲಿ ಸರೀ ಮಂಗಳಾರತಿ ಮಾಡ್ಬೇಕು ಅಂತ ಕಾಯ್ತಾ ಇದ್ರು. ಬಂದವ್ನೇ ಹಾಯ್ ಮಮ್ ನಾನು ನಿನ್ಗುಂಡು ಅಂತ ನಮಸ್ಕಾರ ಮಾಡದೇ ಅದು. ಬಾಯ್ಬಿಟ್ಕಳ ಕತೆ ಈಗ ಈರಮ್ಮಂದು. ಮಗೀನ ನೋಡ್ದೇ ೨ ವರ್ಶ ಆತು. ಅಂದೆಂಥದೋ ಕಂಪ್ನಿ , ಅದ್ಕೆಂತದೋ ತಯಾರಿ ಹೇಳಿ ಅವ ಮನೆ ಕಡೀಗಿ ಬರ್ಲಿಲ್ಲ. ಈಗಿದ್ಯಾವ್ದೋ ಮೂದೇವಿ ಮಮ್ಮಂತಾಳಲ್ಲಾ ಅಂತ್ಕಳ ಹೊತ್ಗೆ ಜಗ್ಗಣ್ಣ ಬಂದ್ರು. ಅವ್ರು ೨ ತಿಂಗ್ಳಿಂದೇ ಮಗೀನ ನೋಡ್ಕಂಬಂದಿದ್ರು. ಹಂಗಾಗಿ ಇವ್ನೇ ಕಣೇ ನಂ ಗುಂಡ ಅಂದ್ರು ಈರವ್ವಂಗೆ. ಎಷ್ಟು ಓದ್ತೀಯೋ ಮಗ್ನೇ, ಕ್ಷೌರ ಮಾಡ್ಸಕ್ಕೂ ಟೇಮಿಲ್ಲನೋ ನನ್ನ ರಾಜಾ ಅಂತೇಳಿ ನಾಯಿ ಕಣ್ಣು, ನರೀ ಕಣ್ಣಿಂದೆಲ್ಲಾ ದಿರುಷ್ಟಿ ತೆಗೆದ್ಳು.

ಬಂದವ್ನೇ ಸ್ನಾನನೂ ಮಾಡ್ಲಿಲ್ಲ. ತಿಂಡೀನೂ ತಿನ್ಲಿಲ್ಲ. ಅದೆಂಥದೋ ಡಬ್ಬಿ ತೆಗದ್ನಪ್ಪಾ ಮಗರಾಯ. ಎಲ್ಲಾ ಬಿಚ್ತಾ ಇದೇ ಕಿಟ್ಟಪ್ಪಾ ಕಂಪ್ಯೂಟ್ರು ಅಂದ. ಕಿಟ್ಟಪ್ಪಂಗೇನು ತಿಳೀತದೇ? ಬಾಯ್ಬಿಟ್ಕಂಡು ನೋಡ್ದ. ಅಷ್ಟರಲ್ಲಿ ಈರವ್ವ ಬಂದು ಮಗನ ಕಿವೀ ಹಿಡ್ಕಂಡು ಒಳಕ್ ಕರ್ಕಂಡೋದ್ರು. ನೀ ಊರಿಗೇ ಇಂಜೆನೇರು ಆದ್ರೂ ನಂಗೆ ಮಗಾನೆ. ತಿಂಡಿ ತಿಂದು ಅಮೇಲೆ ಎಂತಾರು ಮಾಡ್ಕ ಹೋಗು ಅಂದ್ಳು. ಮಗ ಬತ್ತಾನೆ , ಇಷ್ಟ ಅಂತ ರೊಟ್ಟಿ, ಗುರೆಳ್ಳು ಚಟ್ನಿ ಮಾಡಿದ್ಳು. ಮಧ್ಯಾಹ್ನಕೆ ಕೋಳಿ ಕಜ್ಜಾಯ ಮಾಡ್ತೀನಿ ಅಂತ ಅವ್ಳು ಹೇಳಿದ ಮಾತ್ನೂ ಕಿವಿಗಾಕ್ಕಳ್ದೇ ಗಡಿಬಿಡೀಲೆ ತಿಂಡಿ ತಿಂದ ಮಗರಾಯ. ಅದೆಂತದೋ ವೈರುಗಳನ್ನೆಲ್ಲಾ ಜೋಡ್ಸಿ. ಒಂದು ವೈರುನ ಕರೆಂಟು ತಾವ ಕೊಟ್ನಪ. ಅದೆಂತದೋ ಗುಂಡಿನೆಲ್ಲಾ ಅದ್ಮಿದ್ಮೇಲೆ ಯಾವುದೋ ಗುಡ್ಡದ ಚಿತ್ರ ಬಂತು. ಮಗ ಟೀ.ವೀಲಿ ಕಾಣ್ತೈತಲ್ಲಾ ಅದು ಯಾವ ಗುಡ್ಡನೋ ಅಂದ ಜಗ್ಗಣ್ಣ. ಅಪ್ಪೋ ಅದು ನನ್ನ ಮಾನಿಟರು, ಟೀವಿ ಅಲ್ಲ. ನೀ ನೋಡ್ತಿರದು ವಾಲ್ ಪೇಪರು ಗುಡ್ಡ ಅಲ್ಲ ಅಂದ. ಜಗ್ಗಣ್ಣಂತೆ ತಾನು ಇಸ್ಕೂಲ್ ನಾಗೆ ಮಾನಿಟರ್ ಆಗಿದ್ದು ಜ್ನಪ್ತಿಗೆ ಬಂತು. ಅದು ಇದೇನಾ ಅಂತ ಹೆಂಡ್ತೀ ಎದ್ರಿಗೆ ಕೇಳೋಕಾತದಾ? ನೀ ಒಳ್ಗೆ ನಡಿಯಬೇ. ನಾ ಮಗೀನತ್ರ ಮಾತಾಡ್ಬೇಕು ಅಂತ ಬೈದು ಒಳೀಕೆ ಕಳ್ಸಿದ. ವರ್ಷಗಟ್ಲೇ ಆದ್ಮೇಲೆ ಮನೀಗೆ ಬಂದ ಮಗಿ ಜೊತಿಗೆ ಮಾತಾಡೋಕೂ ಬಿಡಂಗಿಲ್ಲ ಇವ್ರು ಅಂತ ಶಾಪ ಹಾಕ್ತ ಒಳಗೋದ್ಳು ಈರವ್ವ.
ಜಗ್ಗಣ್ಣಂಗೆ ನ್ಯೂಸು ಪೇಪರು ಗೊತ್ತಿತ್ತೇ ಹೋರ್ತು ಇದೆಂತದೋ ಒಲೇ ಪೇಪರು ಅಂತ ಅರ್ಥ ಆಗ್ಲಿಲ್ಲ.

ರಾತ್ರೆ ಆತು. ಬೋರ‍ೊ ಬೋರು ಅಂತಾನೆ ಗುಂಡಣ್ಣ. ಒನ್ನೊಂತಪಾ ನಾ ನಾಳೇನೆ ವಾಪಸ್ ಹೊಂಟೆ ಅಂತಾನೆ. ಈರವ್ವಂಗೆ ಯಾವ್ದೋ ಶನಿ ಮೆಟ್ಕಂಡೈತೆ ಅಂತ ಹೆದ್ರಿಕೆ ಶುರು ಆತು. ಯಾವ್ದೋ ಮೋಹಿನಿ ಇರ್ಬೇಕು ಅಂತ್ಲೂ ಅನಿಸ್ತು. ನಾಳೇನೆ ಪೂಜಾರ್ತಾವ ಹೋಗಿ ತಾಯಿತ ಮಾಡ್ಸತೀನಿ. ಅಲ್ಲೀತಂಕ ಕಾಪಾಡೇ ಕಾಳಮ್ಮ ಅಂತ ಕೈಮುಗ್ದಲು. ಕೊನೆಗೇ ಗುಂಡಣ್ಣ ಅಪ್ಪಂತಾವ ಹೇಳ್ದ. ಅಪ್ಪ ಇಲ್ಲಿ ಇಂಟರ್ನೆಟ್ಟು ಇಲ್ಲ. ಹಂಗಾಗಿ ನಂಗೆ ಬೋರಾಗತ್ತೆ. ನಾಳೆ ಬ್ರಾಡುಬ್ಯಾಂಡು ಹಾಕ್ಸಣ ಅಂದ. ಜಗ್ಗಣ್ಣಂಗೆ ಮದ್ವೆ ಬ್ಯಾಂಡು ಗೊತ್ತಿತ್ತೇ ಹೊರ್ತು ಮಗ ಹೇಳೋ ಬ್ಯಾಂಡು ಯಾವ್ದೂ ತಲಿಗೋಗ್ಲಿಲ್ಲ. ಆದ್ರೂ ಸರಿ ಮಗ ಅಂದ. ಗುಂಡಣ್ಣ ಸ್ವಲ್ಪ ಸಮಾಧಾನ ಆದಂಗೆ ಕಾಣ್ತು. ಈರವ್ವ ಮತ್ತೆ ಎಲ್ಲಮ್ಮಂಗೆ ಕೈ ಮುಗುದ್ಲು.


ಬೆಳಗಾತು. ನಿಮ್ಕಡೇ ಬ್ರಾಡ್ಬಬ್ಯಾಂಡ್ ಕೊಡಕೇ ಬರಾಕಿಲ್ಲ. ನಿಮ್ಮೊಬ್ರಿಗೇ ಪಟ್ಣದಿಂದ ಲಾಯಿನು ತರ್ಸಾಕೆ ಆಗಕಿಲ್ಲ ಅಂದ ಫೋನೆಕ್ಸಚೇಂಜ್ ಎಂಕ್ಟೇಶ. ಗುಂಡಣ್ಣಂಗೆ ತನ್ಮೊಬೈಲು ನೆನ್ಪಾತು. ಅರೇ ಇಸ್ಕಿ, ಇದಲ್ಲೇ ಮಾಡ್ಬೋದಲ್ಲಾ. ನೀನು ನೆಟ್ಟು ಕೊಡ್ದಿದ್ರೆ ಕುದ್ರೆ ಜುಟ್ಟು, ಕತ್ತೆ ಬಾಲ ಅಂತ ಎಂಕ್ಟೇಶಂಗೆ ಶಾಪ ಹಾಕಿ ಮನೆಗೆ ಬಂದ. ಮನೇ ಹತ್ರನೇ ಟವರ್ ಆಗಿ ನೆಟ್ವರ್ಕು ಚೆನ್ನಾಗಿ ಸಿಕ್ತಿತ್ತು. ಮೊನ್ನೆ ಅಷ್ಟೇ ಹಾಕ್ಸಿದ್ದ ದುಡ್ಡಿತ್ತು. ಸರಿ ಅಂತ ಮೊಬೈಲಲ್ಲೇ ನೆಟ್ಟು ಹಾಕ್ಸಿ ಅದ್ರಿಂದ ಒಂದು ವೈರು ಕಂಪ್ಯೂಟ್ರಗೆ ಕೊಟ್ಟ. ಅವತ್ತು ಮುಗ್ದೇ ಹೋತು.೨-೩ ದಿನ ಆತು. ಸರಿಯಾಗಿ ಊಟಕ್ಕೂ ಬರಾಕಿಲ್ಲ, ತಿಂಡೀನೂ ತಿನ್ನಾಕಿಲ್ಲ. ಆ ಪೆಟ್ಗೆ ಎದ್ರು ಕೂತ್ಕಂಡು ಏನ್ಮಾಡ್ತಾನೆ ಅಂತ ಈರವ್ವ, ಜಗ್ಗಣ್ಣ ಇಬ್ರಿಗೂ ದಿಗಿಲಾತು. ಕೇಳಿದ್ರೆ ಗೆಳೆಯರ ಜೊತೆಗೆ ಮಾತಾಡ್ತೀವ್ನಿ ಅಂತಿದ್ದ. ಅದೆಂತದೋ ಚಿತ್ರಗಳು. ಅದ್ನೇ ನೋಡಿ ನಗ್ತಿರಿದ್ದ. ತಲೆ ಮೇಲೆ ಕೈಹೊತ್ಕತಿದ್ದ. ಈರವ್ವಂಗೆ ತಾಯಿತದ ನೆನಪಾತು. ತಕ್ಷಣ ಹೋಗಿ ತಾಯಿತ ತಂದು ಮಗನ ಕೈಗೆ ಕಟ್ಟಿದ್ಲು. ಆದ್ರೂ ಸರಿ ಆಗ್ಲಿಲ್ಲ. ಮನೀಗಿರ ಜನ್ರ ಜತೆ ಮಾತಾಡದು ಬಿಟ್ಟು ಮಗ ಹಿಂಗಾ ಮಾಡದು ಅಂತ ಈರವ್ವಂಗೆ ಶಾನೆ ಕ್ವಾಪ ಬಂತು.

.
ಮಾರ್ನೇ ದಿನ ಬೆಳಗ್ಗೆ ಗುಂಡಣ್ಣ, ಅಪ್ಪಂತವ ಹೇಳ್ದ. ನಾ ಆನ್ ಲೈನು ಕೋರ್ಸು ಮಾಡ್ತೀನಿ ಅಂತ. ಜಗ್ಗಣ್ಣಂಗೆ ಕರೆಂಟು ಲೈನು, ತಾ ಹೊಡ್ದಿದ್ದ ಲೈನು ಜ್ನಪ್ತಿಗೆ ಬಂತು. ಕಿಟ್ಟಪ್ಪ ಅಲ್ಲೇ ನಿತ್ಕಂಡು ಕಿಸೀತಿದ್ದ ಏನೋ ನೆನ್ಕಂಡಗೆ. ಜಗ್ಗಂಣ್ಣಂಗೆ ಕಣ್ಣಿಗೆ ಖಾರದ ಪುಡಿ ಹಾಕ್ದಂಗಾತು. ಕಿಟ್ಟಪ್ಪಂಗೆ ಬೈದು ಹೊಲತ್ತಾವ ಬೇಲಿ ಸರಿ ಮಾಡಕ್ಕೆ ಕಳ್ಸಿದ. ಅದೆಂತದಾ ಮಗಾ ಅಂತ ಧ್ಯೈರ್ಯ ಮಾಡಿ ಕೇಳೇ ಬಿಟ್ಟ. ಮಂಗತಾವ ಎಂಥಾ ಮರ್ವಾದೆ. ಅಲ್ವರಾ? ಅದು ಒಂಥರಾ ವಿದ್ಯೆ ಅಪ್ಪಯ್ಯಾ. ಮನೇಲಿ ಕೋತ್ಕಂಡೇ ಕಲಿಬೋದಂತೆ , ಅದ್ನೆಲ್ಲಾ ಮಾಡಿದ್ರೆ ಕಂಪ್ನೀ ಅವ್ರು ಕರ್ದು ಕೆಲ್ಸ ಕೊಡ್ತಾರಂತೆ ಅಂತ ತನ್ನ ಗೆಣಿಕಾರ ಈರೇಶಿ ನಿನ್ನೇ ಅಷ್ಟೇ ಹೇಳಿದ್ನ ಹಂಗೇ ಹೇಳ್ದ. ಈಗಾಗ್ಲೇ ಯಾವ್ದೋ ಕೆಲ್ಸ ಸಿಕ್ಕೈತೆ ಅಂದಿದ್ಯಲ್ಲಾ ಮಗ್ನೇ. ಅವ್ರು ಕರಿಯ ತಾವ ಎರ್ಡು ತಿಂಗ್ಳು ಆರಾಮಾಕೆ ಮನೀಲಿರ್ಬಾದ್ರಾ ಮಗಾ ಅಂದ್ಲು ಕಾಪಿ ಕೊಡೋಕೆ ಬಂದಿದ್ದ ಈರವ್ವ. ಅವ್ಳಿಗೆ ಮಗಾ ಮತ್ತೆ ನಾಳೇನೆ ಪಟ್ಣಕ್ಕೆ ಹೊತ್ತಾನೆನೋ ಅಂತ ಹೆದ್ರಿಕೆ. ಸುಮ್ನಿರಬೇ, ಮಗಾ ಏನೋ ಕಲೀಬೇಕು ಅಂತಾನೆ. ಇದ್ಯಾ , ಬುದ್ದಿ ಎಲ್ಲಾ ನಿನ್ನಂತಾ ಹೆಬ್ಬೆಟ್ಗೆಲ್ಲಿ ಗೊತ್ತಾಗ್ಬೇಕು ಅಂತ ಜೋರು ಮಾಡದ ಜಗ್ಗಣ. ದಿನಾ ನನ್ನ ಅಳಿಸದೇ ಆತು ನಿಂಕೆಲ್ಸ. ಭೂಮಿಗೆ ಭಾರ ಕೂಳಿಗೆ ದಂಡ ಆಗಿ ನಾ ಯಾಕೆ ಉಳೀಬೇಕು. ಸಾಲಿಗೆ ಹೋಗೇ ಅಂತ ನನ್ನಪ್ಪಯ್ಯ ಮನೇ ಇಣ್ದ ಹೊಡ್ದು ಬಡ್ದು ಕಳ್ಸಿದ್ರೂ ಕಲೀಲಿಲ್ಲ. ನಂಗೆ ಹಿಂಗೆ ಆಗಾಕಾದ್ದೆ ಅಂತ ಗೊಳೋ ಅಂತ ಅಳಕಿಡ್ದು ಈರವ್ವ. ನಾನು ಮನೇ ಬಿಟ್ಟು ಈಗ್ಲೇ ಹೋಗಾಕಿಲ್ಲವ್ವ ಅಂತ ಸಮಾಧಾನ ಮಾಡೋ ಹೊತ್ಗೆ ಗುಂಡಂಗೆ ಸಾಕಾತು

ರಾತ್ರೆ ಎಲ್ಲ ಹುಡುಕ್ದ ಗುಂಡ. ಅದೆಂಥದೋ ಹಾಟ್ ಕ್ವೀನ್ ನೆಟ್ವರ್ಕು, ಬರಾಕಿಲ್ಲ ಕೂಸುಬೇಸು, ಮತ್ತೆಂದದೋ ಬಂಡಿ ಜಟಕಾ.. ಅಲ್ಲಲ್ಲಾ ಇನ್ಪಾಕುಟಕ, ಸಪ್ಪೇ ಲೋಬೊ ಹೇಳೊ ಇಚಿತ್ರದ ಹೆಸ್ರಲೆಲ್ಲಾ ಹುಡುಕ್ದ ಖರ್ಚು ಎಷ್ಟು ಅಂತ. ಹಾಟ್ ಕ್ವೀನ್ ನೆಟ್ವರ್ಕಲ್ಲಿ ಹದಿನೈದು ದಿನದ ಕೋರ್ಸ್ ಗೆ ೨೦೦ ಡಾಲರ್ ಅಂತ ಇತ್ತು. ಅಂದ್ರೆ ಹತ್ತತ್ರ ಹತ್ಸಾವ್ರ. ಅಪ್ಪಯ್ಯ ದುಡ್ಡಿಂದು ಯೋಚ್ನೆ ಮಾಡ್ಬೇಡ ಮಗಾ. ನಾನಂತೂ ಹೆಚ್ಗೆ ಓದಿಲ್ಲ. ನೀ ಎಷ್ಟು ಓದ್ತೀಯೋ ಓದು. ಜಮೀನು ಹೊಲ ಮಾರಾದ್ರೂ ಓದಿಸ್ತಿನಿ ಅಂದಿದ್ದ. ಆದ್ರೂ ಗುಂಡಣ್ಣಂಗೆ ಇದು ಭಾರೀ ಸುಲಗೆ ಅನಿಸ್ತು. ಬರಾಕಿಲ್ಲ ಕೆ ಹೋದ. ಅಲ್ಲಿ ಯಾವ್ದೋ ಪರೀಕ್ಷೆಗೆ ಎಷ್ಟು ದುಡ್ಡು ಅಂತ ಕೊಟ್ಟಿರ್ಲಿಲ್ಲ. ಒಂದೂವರೆ ಘಂಟೆ ಪರೀಕ್ಷೆ ಅಂತ ಮಾತ್ರ ಇತ್ತು.ಆದ್ರೆ ನೀವು ಪರೀಕ್ಷೆ ಬರ್ಯದಾದ್ರೆ ಅದ್ಕೆ ವೋಚರ್ ತಗಂಬೇಕು ಅಂತಿತ್ತು. ಅಲ್ಲಿ ಕೊಟ್ಟಿದ್ದ ಕೊಂಡಿ ಕುಕ್ಕಿದ. ಅದು ಕೇವಲ ೨೦೦ ಡಾಲರ್ ಅಂತು.

ಅವ ಅಯ್ಯೋ ಶಿವನೇ, ನಾವ ಭಾರತದಾಗಿದೀವ ಇಲ್ಲಾ ಫಾರಿನಲ್ಲಾ ಅಂತಂಕಡ. ಆಮೇಲೆ ಬಂಡಿ ಜಟಕಾ ಅಲ್ಲಲ್ಲಾ ಇನ್ಫಾಕುಟಕಕ್ಕೆ ಹೋದ. ಅದ್ರಲ್ಲಿ ಪರೀಕ್ಷೆಗೆ ೨೦೦ ಡಾಲರ್. ಆ ಸಾಪ್ಟವೇರ್ ಕಲ್ಸ ಜಬಾದಾರಿ ನಂದಲ್ಲಾ ಅಂತ ಇತ್ತು. ಹಂಗಾರೆ ಅದ್ನ ಪಟ್ಣಕ್ಕೆ ಹೋಗೇ ಮಾಡದು ಸರಿ ಅಂತ ಅಂದ್ಕಂಡ. ಬೆಳ್ಗಿಂದ ಕಂಪೂಟ್ರ ಮುಂದೆ ಕೂತು ಕೂತು ಕಣ್ಣೆಲ್ಲಾ ಉರೀತಿತ್ತು. ಹನ್ನೆರ್ಡೂ ವರೆ ಆಗಿತ್ತು. ಮಗೀಗೆ ಬೇಜಾರಾತ್ತದೆ ಅಂತ ಈರವ್ವ ಏನೂ ಹೇಳ್ದೆ ಮನೀಕಂಡಿದ್ಲು. ತಾನಾಗಿದ್ರೆ ಕರೆಂಟು ಬಿಲ್ಲು ಹೆಚ್ಗೆ ಬತ್ತದೆ ಅಂತ ಒಂಭತ್ಗಂಟೆಗೇ ಲೈಟಾರ್ಸೋ ಗಂಡ್ನೇ ಏನೋ ಯೋಳಿಲ್ಲ ನಾ ಏನೇಳ್ಲಿ ಅಂತ ಅಂದ್ಕಂಡ್ಲು. ಊರೆಲ್ಲಾ ಲೈಟಾಪು ಆಗಿದ್ರು ಜಗ್ಗಣ್ಣನ ಮನೆ ಲೈಟು ಆನಾಗಿದ್ದು ನೋಡಿ ಸುಮಾರು ನಾಯ್ಗಳು ಅಲ್ಲೇ ನೋಡ್ತಾ ಕುಯ್ಯೋ ಅಂತಿದ್ವು.

ಈ ಸಂಗೀತ ಕಚೇರಿಗೆ ಪಕ್ಕದ ಮನೇವ್ರೆಲ್ಲಾ ಏಳ್ತಿದ್ರು. ಪಟ್ಣದಲ್ಲಿ ಮಧ್ಯರಾತ್ರಿ ಅಂದೆ ಸಾಯ್ಕಾಲ ಅಂತೆ ಅಂತ ಕಿಟ್ಟಪ್ಪ ಹೇಳಿದ್ನ ಕೇಳ್ದವ್ರು ಗುಂಡಣ್ಣಂಗೆ ಒಳಗೊಳಗೇ ಶಾಪ ಹಾಕಿ ಹಾಳು ಕುನ್ನಿಗೊಂದು ಬಿಟ್ಟು ಮತ್ತೆ ಮಲಗ್ತಿದ್ರು. ಸ್ವಲ್ಪ ಹೊತ್ತಾದ ಮೇಲೇ ಇದೇ ಸಂಗೀತ ಮತ್ತೆ ಶುರು ಆಗೋದು. ಕೊನೀಗೆ ಲೋಬೋ ಗೆ ಹೋದ. ಅಲ್ಲಿ ದುಡ್ಡು ಕಾಸಿನ ಇವ್ರ ಇರ್ಲಿಲ್ಲ. ನಿಮ್ಮಾ ಈಮೇಲು ವಿಳಾಸ ಕೊಡಿ. ನಾವೇ ಹೇಳ್ತೀವಿ ಅಂದ್ರು. ಸರಿ ಅಂತ ಅಲ್ಲಿ ಈಮೇಲು, ಫೋನು ನಂಬರ್ರು, ರೆಸೂಮಂತೆ ಎಂಥ್ದೋ ಅದನ್ನೂ ಕೊಟ್ಟು ಮಲೀಕಂಡ. ರಾತ್ರೆ ಕನ್ಸಲ್ಲೂ ತಾ ಕೋರ್ಸ್ ಮಾಡ್ದಂಗೆ , ದೊಡ್ಡ ಕಂಪ್ನೀ ಅವ್ರೆಲ್ಲಾ ತನ್ನ ಹಳ್ಳಿಗೇ ಹುಡ್ಕಂಬಂದಗೆಲ್ಲಾ ಕನ್ಸು ಬಿತ್ತು

ಮಾರ್ನೇ ದಿನ ಅಪ್ಪಯ್ಯ , ಅವ್ವ ಹೊಲದ್ ತಾವ ಹೋಗಿದ್ರು. ಗುಂಡಣ್ಣನ ಫೋನು "ಟಚ್ ಮಿ ಟಚ್ ಮಿ ಟಚ್ ಮಿ" ಅಂತ ವಿಕಾರವಾಗಿ ಕೂಕ್ಕಂಡ್ತು. ಎತ್ತಿದ್ರೆ ಯಾವ್ದೋ ಹುಡ್ಗಿ ಧ್ವನಿ.ನಾನು ಮಿಸ್ ಹಾಲಾಹಲ ..ಅಲ್ಲಲ್ಲ ಕೋಮಲ ಲೋಬೋ ಇಂದ. ಮಿ. ಗುಂಡ್ ಅವ್ರ ಹತ್ರ ಮಾತಾಡ್ಬೋದ ಅಂತ ಇಂಗ್ಲೀಷಲ್ಲಿ ಕೇಳಿದ್ಳು. ನಾನೇಯ ಗುಂಡ ಅಂದ. ನಿಮ್ಮ ರೆಸ್ಯೂಮ್ ತುಂಬಾ ಚೆನ್ನಾಗಿದೆ. ಪರ್ಸಂಟೇಜಂತೂ ಮಾತಾಡೋ ಹಾಗೇ ಇಲ್ಲ ಅಂತ ಸ್ವಲ್ಪ ಜಾಸ್ತೀನೇ ಏರ್ಸಿದ್ಳು. ನಿಮಗೆ ಯಾವ್ದೂ ಕಂಪ್ನೀಲಿ ಕೆಲ್ಸ ಮಾಡಿದ ಅನುಭವ ಇಲ್ವಲ್ಲಾ ಅಂತ ರಾಗ ತೆಗೆದು ನೀವು ನಮ್ಮ ಆಬಾಡ್ಸಿಸ್ ಕೋರ್ಸ್ ಮಾಡ್ತೀರಾ ಅಂದ್ಳು. ಅದ್ಕೆ ಖರ್ಚು ಎಷ್ಟಾಗತ್ತೆ ಅಂದ ಗುಂಡ. ಆ ಕೋರ್ಸ್ ಅಲ್ಲಿ ಏನೇನೆಲ್ಲಾ ಇರ್ತದೆ ಅಂತ ಒಂದೆರಡು ನಿಮಿಷ್ ಅ ಮಾತಾಡಿದ ಮೇಲೆ ಟ್ರೈನಿಂಗ್ ಖರ್ಚು ೨೫,೦೦೦ ಅಂದ್ಳು

ನನ್ನ ಇಂಜಿನೀರ ಒಂದು ವರ್ಷದ ಫೀಸ್ ಕೇಳ್ತಾವ್ಳಲ್ಲಪಾ ಅಂದ್ಕಂಡ. ಅವ ಸುಧಾರ್ಸಕೋದ್ರೊಳ್ಗೆ ಸರ್ಟಿಫಿಕೇಟ್, ಎಕ್ಸ ಫೋಸರೋ ಎಂಥದೋ ಪೋರ್ಜರಿ ಎಲ್ಲಾ ಸೇರಿ ೩ ಲಕ್ಷ ಆಗ್ತದೆ, ೨೫ ದಿನ ದ ಕೋರ್ಸ್ ಅಂದ್ಳು. ಗುಂಡಣ್ಣಂಗೆ ಒಂದ್ಸಲ ಉಸ್ರು ಸಿಕ್ಕಾಕಂಡಂಗೆ ಆತು. ನಾನು ಜೀವಮಾನದಲ್ಲಿ ಇಲ್ಲೀವರ್ಗೆ ಓದಿರದೂ ಸೇರಿದ್ರೂ ಅಷ್ಟಾಗಕಿಲ್ಲ. ೨೫ ದಿನಕ್ಕೇ ಅಷ್ಟಾ ಅನುಸ್ತು. ಯಾವಾಗ ಸೇರ್ತೀರ ಅಂದ್ಳು. ಸರಿ ನೀವು ಎಲ್ಲಾ ಮಾಹಿತಿ ನನ್ನ ಈ ಮೇಲ್ ಗೆ ಕಳಿಸಿ, ನಾನೇ ಆಮೇಲೆ ಹೇಳ್ತೇನೆ ಅಂದ. ಸರಿ ಅಂತ ಖುಷಿಯಾಗೇ ಫೋನಿಟ್ಳು. ಹೋದ ಜೀವ ಬಂದಗಾತು ಗುಂಡಣ್ಣಂಗೆ. ಗೊತ್ತಿಲ್ದೇ ಇರಾ ನಂಬರಿಂದಾ ಯಾವ್ದೇ ಫೋನ್ ಬಂದ್ರೂ ಎತ್ಬಾರ್ದು ಇನ್ಮೇಲೆ ಅಂತ ಅಂದ್ಕಂಡ. ಅವಳ ಈಮೇಲ್ ಕಡೆ ತಲೆ ನೂ ಹಾಕ್ಲಿಲ್ಲ.

ಮಧ್ಯಾಹ್ನ ಮನೆಗೆ ಬಂದ ಜಗ್ಗಣ್ಣ. ಅದೇನೋ ಮಾಡ್ತೀನಿ ಅಂತಿದ್ಯಲ್ಲಾ ಮಗಾ. ಎಷ್ಟು ದುಡ್ಡು ಬೇಕೋ ಮಗಾ? ಒಂದ್ನಾಕು ಅಡ್ಕೆ ಮೂಟೆ ವ್ಯಾಪಾರಕ್ಕೆ ಹಾಕಕ್ಕೆ ಹೇಳ್ತೀನಿ ಅಂದ. ಅದೆಲ್ಲಾ ಬ್ಯಾಡ ಅಪ್ಪಯ್ಯಾ. ಓದಿ ಓದಿ ಬ್ಯಾಸರ ಆತ್ತದೆ. ನಾ ಸುಮ್ನೇ ಮನೇಕಿದ್ರೆ ನಿಂಗೆತಾರೂ ಬ್ಯಾಸರ್ವಾ ಹೇಳು ಅಂದ. ಅಂತ ಮಾತೆಲ್ಲಾ ಆಡ್ಬೇಡ ಬಂಗಾರ. ಏಟು ದಿನಾ ಬೇಕಾರು ನೀ ಇಲ್ಲೇ ಇರು. ಆರಾಮಾಗಿರು ಅಂತ ಬಂದು ಮಗೀನ ತಪ್ಕಂಡ್ಲು. ಜಗ್ಗಣ್ಣಂಗೆ ತಾನೇ ಏನೋ ಆಡಬಾರ್ದು ಆಡಿದ್ನೇನೋ, ಅಮ್ಮ ಮಗೀನ ಬೇರೆ ಮಾಡ ತರ ಆದ್ನಾ ಅಂತ ಬೇಜಾರಾತು. ಮಾರ್ನೇ ದಿನದಿಂದ ಮಗ ಹೊತ್ತಿಗೆ ಸರ್ಯಾಗಿ ಆರಾಮಾಗಿ ತಿಂದ್ಕಂಡು ತಿರುಗಾಡ್ತಾನೆ, ಮಲ್ಗತಾನೆ. ಈರವ್ವ, ಜಗ್ಗಣ್ಣಂಗೆ ಆಶ್ಚರ್ಯನೋ ಆಶ್ಚರ್ಯ. ಒಳಗೊಳಗೇ ಖುಸಿ. ಇದಾದ್ಮೇಲಿಂದ ಹಿಂಗೇ ಯಾವಾಗ್ಲೂ ಕಾಯವ್ವ , ನಮ್ಮಮ್ಮ ಅಂತ ದಿನಾನೂ ಈರವ್ವಂಗೆ ಮೂರೊತ್ತೂ ಕಾಳವ್ವನ ನೆನ್ಯೋದೆ ಕೆಲ್ಸ. ಜಗ್ಗಣ್ಣನೂ ಆರಾಮೂ. ಗುಂಡಣ್ಣ ಮನೆಹಾಳು ಐಡಿಯಾ ಕೊಟ್ಟ ತಿಪ್ಪೇಶಿಗೆ ಮನ್ಸಲ್ಲೇ ಬಯ್ತಾ ಅಪ್ಪ, ಅವ್ವಂತವ ಆರಾಮಾಗವ್ನೆ.

ಚಿತ್ರ ಕೃಪೆ: Google

ಗುಂಡಣ್ಣನ ಗೂ+ ಪುರಾಣ


" fb ಹೋಯ್ತು ಗೂ+ ಬಂತು ಢಂ ಢಂ ಢಂ.." ಅಂತ ಕಟ್ಟಾ ಗೂಗಲ್ ಪ್ರೇಮಿ ಗುಂಡಣ್ಣ ಕಾಲೇಜ್ ಗ್ರೌಂಡಲ್ಲಿ ಗುನುಗ್ತಿರ್ಬೇಕಿದ್ರೆ ಅವನಂಗೆ ಕೆಲಸಿಲ್ಲದ ಕೆಲ ದೋಸ್ತುಗಳು ಅಲ್ಲಿಗೆ ವಕ್ಕರಿಸಿದ್ರು. ಗುಂಡಣ್ಣ ಪೇಟೆಗೆ ಬಂದು ಅಲ್ಲಿನ ಕೆಲ ದೋಸ್ತುಗಳ ಬಾಯಲ್ಲಿ ಮಿ.ರೌಂಡ್ ಆಗಿದ್ದ. ಏನು ಮಿ.ರೌಂಡ್ ತುಂಬಾ ಖುಷಿಯಾಗಿದ್ದೀರಿ ಅಂದ್ಳು ಇಳಾದೇವಿ ಅಲಿಯಾಸ್ ಇಳಾ. ಆಗ್ದೇ ಇನ್ನೇನು ಆರ್ಕುಟು, ಜೈಕು,ವೇವು,ಬಜ್ಜು ಎಲ್ಲಾ ಆದ್ಮೇಲೆ ಹೊಸಾದು ಬಂದಿದ್ಯಲ್ಲಾ ಗೂಗಲ್ ಪ್ಲಸ್ಸು ಅದ್ರಿಂದ ಸಾಹೇಬ್ರು ಸಿಕ್ಕಾಪಟ್ಟೆ ಖುಷಿಯಾಗಿದಾರೆ ಅಂದ ಟಾಂಗ್ ತಿಪ್ಪ ಅಲಿಯಾಸ್ ಟಿಪ್ಸ್. ಆರ್ಕುಟ್ ಅನ್ನೋದನ್ನ ಆರ್ಕುಟ್ ಬಯೋಕ್ಕೊಟೇನ್ ಅನ್ನೋ ಮಹಾಶಯ ಕಂಡು ಹಿಡಿದಿದ್ದಲ್ವಾ ಮಾರಾಯ್ರೇ ಅಂತ ತನ್ನನುಮಾನ ಹೇಳ್ದ ಮಂಗಳೂರು ಮಂಜ ಅಲಿಯಾಸ್ ಮಿ.ಮ್ಯಾಂಜ್.
ಹೌದು ಆದ್ರೆ ಅವ್ನು ಈಗ ಗೂಗಲ್ ಅಲ್ಲಿ ಪ್ರಾಡಕ್ಟ್ ಮ್ಯಾನೇಜರ್. ಆರ್ಕುಟ್ ನ ಗೂಗಲ್ ಕೊಂಡ್ಕಂಡು ಸುಮಾರು ವರ್ಷ ಆಯ್ತು, ನೀವೆಲ್ಲಿದೀರಾ ಮಿ.ಮ್ಯಾಂಜ್ ಅಂದ್ಳು ಸರಸ್ವತಿ ಅಲಿಯಾಸ್ ಸರ್. ತಾನೇ ಬುದ್ದಿವಂತ ಅಂದ್ಕಂಡಿದ್ದ ಮಂಜನ ಮುಖ ಹುಳ್ಳಗಾಯ್ತು.

ಓ ಹೌದಾ? ಅದೆಂತದು ಜೈಕು ಅಂದ್ಯಲಾ ಅದೆಂತದು ಮಾರಾಯ ಅಂದ ತಿಮ್ಮ ವಿಷಯ ಬದಲಾಯಿಸಕ್ಕೆ . ಅದೂ fb ತರ ಒಂದು ಸಾಮಾಜಿಕ ತಾಣ. ಮಿಕ್ರೋ ಬ್ಲಾಗಿಂಗ್, ಲೈಫ್ ಸ್ಟ್ರೀಮ್ ಅನ್ನೋ ಸೇವೆ ಗಳನ್ನ ಟ್ವಿಟ್ಟರ್ ಗೆ ಕೊಡುತ್ತೆ ಅಂದ ತಿಪ್ಪ. ಹಂಗದ್ರೇ ಏನು ಅಂತ ಇಳಾ ಕೇಳೋದ್ರೊಳಗೆ ಅದನ್ನ 2006 ರಲ್ಲಿ ಫಿನ್ ಲ್ಯಾಂಡಿನ ಜೆರ್ರಿ ಮತ್ತೆ ಪೆಟ್ರಿ ಅನ್ನೋರು ಕಂಡು ಹಿಡಿದ್ರು ಅಂದ್ಳು ಸರು. ಅದನ್ನೂ ನಂಗೂಗಲ್ ನವ್ರು 2007 ರಲ್ಲಿ ತಂಗೊಡ್ರು. ಉಪ್ಪಿಗಿಂತ ರುಚಿ ಬೇರೆ ಇಲ್ಲ. ಗೂಗಲ್ಗಿಂತ ಬ್ರೌಸರ್ ಬೇರೆ ಇಲ್ಲ... ಅಂತ ಹಾಡೋಕೆ ಶುರು ಮಾಡ್ದ ಗುಂಡಣ್ಣ. ಎಲ್ಲ ಸ್ವಲ್ಪ ಹೊತ್ತು ಕಿವಿ ಮುಚ್ಕಂಡ್ರು.


ಗುಂಡಣ್ಣ ನಿಲ್ಸಿದ ಅಂತ ಗೊತ್ತಾದ ಮೇಲೆ ಇಳಾ ಕೇಳಿದ್ಳು. ಅದೆಂತದೋ ವೇವು ಅಂದ್ರಲಾ ಮಿ.ಟಿಪ್ಸ್ ಅದೇನು ಅಂತ. ಅದನ್ನ ಗೂಗಲ್ ನವ್ರೇ 2009 ರ ಒಂದು ಸಮ್ಮೇಳನದಲ್ಲಿ ಗೂಗಲ್ ವೇವ್ ಅಂತ ಬಿಡುಗಡೆ ಮಾಡಿದ್ರು.ಅದರ ನಿಜವಾದ ಹೆಸರು ಅಪಾಚೆ ವೇವ್ ಅಂತ ಅಂತ ಹೇಳಿ ನಿಲ್ಸೋದ್ರೋಳಗೆ ಅದ್ರಲ್ಲಿ ಮಿಂಚಂಚೆ, ತ್ವರಿತ ಸಂದೇಶ.ವಿಕಿ ಹೀಗೆ ಸಾಮಾಜಿಕ ತಾಣದ ಎಲ್ಲಾ ಸೌಲಭ್ಯನೂ ಇದೆ ಅಂದ ಗುಂಡಣ್ಣ. ಸಾಕು ಸುಮ್ನಿರ್ಲ. ಅಷ್ಟಿದ್ರೂ ಅದು ನಂ fb ಮುಂದೆ ಅದ್ಯಾಕ ನಿಲ್ಲಿಲ ಅಂತ ಟಾಂಗ್ ಕೊಟ್ಟ ತಿಪ್ಪ.

ಈ ಹುಡುಗ್ರು ಹಿಂಗೇ ಬಿಟ್ರೆ ಇಡೀ ದಿನ ಕಚ್ಚಾಡ್ತಾನೆ ಇರ್ತಾರೆ ಅಂತ ಇಳಾ, ಗೂಗಲ್ ಬಜ್ ಅಂದ್ರಲಾ ಅದೇನೇ ಸರು ಅಂದ್ಳು. ಪಾಪ ಸರೂಗೂ ಅದ್ರ ಬಗ್ಗೆ ಏನೂ ಗೊತ್ತಿರ್ಲಿಲ್ಲ. ಮಂಜನ ಕಡೆ ನೋಡಿದ್ಳು. ಮಂಜಂಗೂ ಪಾಪ ಅನುಸ್ತು. ಅದೂ ಹಿಂಗೇ ಒಂದು ಸಾಮಾಜಿಕ ತಾಣ. ಅದನ್ನ ಜೀಮೇಲ್ ಜೊತೆಗೇನೆ ಉಪಯೋಗಿಸ್ಬೋದು. ಅದ್ರಲ್ಲಿ ಕೊಂಡಿಗಳ್ನ, ಚಿತ್ರಗಳ್ನ, ವೀಡಿಯೋನ,
ಸ್ಥಿತಿ(status) , ಪ್ರತಿಕ್ರಿಯೆನ ಎಲ್ಲಾ ಹಂಚಿಕೋಬೋದು. ಅದೆಲ್ಲಾ ಸಂದೇಶದ ಒಳಪಟ್ಟಿಯಲ್ಲಿ ನೋಡ್ಬೋದು ಮಾರ್ರೇ ಅಂದ

ಸರಿ ಅಂತ ಈ ಕಡೆ ನೋಡಿದ್ರೆ ಗುಂಡಂಗೂ ತಿಪ್ಪಂಗೂ fb, ಗೂ + ಬಗ್ಗೆ ಜಗಳ ಶುರುವಾಗಿತ್ತು. ನಿಂ ಗೂಗಲ್ ಅವ್ರು fb ಲಿರೋ like ನೋಡೋ plus ಕುಕ್ಕೋ ಸೇವೆ ಶುರು ಮಾಡಿದ್ದು ಅಂದ ತಿಪ್ಪ. ಗೂಗಲ್ ಅಲ್ಲಿರೋ ಸಂಗೀತ ಸೇವೆ ನೋಡಿ fb ನಲ್ಲಿ ಸಂಗೀತ ಸೇವೆ ಪ್ರಾರಂಬಿಸಿದಾರೆ fb ನವ್ರು ಅಂದ ಗುಂಡ. ಅದ್ರ ಹೆಸ್ರು "ವೈಬ್ಸ್" ಅಂತ ಇಡ್ತಾರಂತಲಾ ಅಂತ ಸೇರಿಸಿದಳು ಇತ್ತೀಚೆಗೆ ಇಂತದ್ದೆಲ್ಲಾ ಎಲ್ಲಿಂದಲೋ ಓದಕ್ಕೆ ಶುರೋ ಮಾಡಿರೋ ಇಳಾ. ಹಾಂ ಹೌದು. ಸ್ಕೈಪೆ ಅವರ ಜೊತೆಗೆ ಸೇರಿ ವೀಡಿಯೋ ಕರೆ ಸೌಲಭ್ಯನೂ ಕೊಡ್ತಿದಾರೆ ಅಂದ ಗುಂಡ. ಕೊನೆಗೂ ಅದು ಗೂಗಲ್ ಕಾಪಿ ಅಂತ ಒಪ್ಕಂಡ್ಯಾ ಅಂತ ತಿಪ್ಪ ಕೇಳ್ಬೇಕು ಅನ್ನೋವಷ್ಟರಲ್ಲಿ ಸರು ಮಧ್ಯಸ್ತಿಕೆ ಮಾಡೋ ತರ ಮಧ್ಯ ಬಂದಳು. ಸರಿ ಗೂ+ ಅಲ್ಲಿ ಏನಿದೆ ಅಂತ ನೀವೇಳಿ ಮಿ.ರೌಂಡ್.fb ಬಗ್ಗೆ ಮಿ.ಟಿಪ್ಸ್ ಹೇಳ್ತಾರೆ. ಈ ವಿಷ್ಯದಲ್ಲಿ ನಂ ಮಧ್ಯ ಜಗಳ ಯಾಕೆ? ಎಲ್ಲಾ ಕೇಳಾದ ಮೇಲೆ ತೀರ್ಮಾನ ಮಾಡೋಣ ಅಂದ್ಳು. ಸರು ಮಾತಿಗೆ ಇಲ್ಲಾ ಅನ್ನೋಕೆ ಆಗತ್ತಾ? ಎಲ್ರೂ ಕೋಲೇ ಬಸವನ ತರ ಹೂಂ ಅಂತ ತಲೆ ಹಾಕಿದ್ರು.

ಗೂ+ ಅಲ್ಲಿ ವೃತ್ತ(circles) ಇದೆ. ಅದಕ್ಕಿರೂ animation, ಯಾರನ್ನ ಬೇಕಾದ್ರೂ ಎಳ್ದು ಹಾಕೋ ಅಂತ ಸೌಲಭ್ಯ ನಿಮ್ಮ Fb ಗೆಳೆಯರ ಪಟ್ಟಿ(friend list) ಅಲ್ಲಿ ಇಲ್ಲ ಅಂದ ಗುಂಡಣ್ಣ. fb ನಲ್ಲಿ ವೀಡಿಯೋ ಕರೆ, chatphone ಇದೆ. ಅದು ಗೂ+ ಅಲ್ಲಿ ಇಲ್ಲ ಅಂದ ತಿಪ್ಪ. ಗೂ+ ಅಲ್ಲಿ hangout ಅಂತ ಇದೆ. ಅದ್ರಲ್ಲಿ ಎಷ್ಟು ಜನನ್ನ ಬೇಕಾದ್ರೂ ಒಂದು ಗ್ರೂಪ್ ಮಾಡಿ ಒಟ್ಟಿಗೆ ಕರೆ ಮಾಡ್ಬೋದು. ಗ್ರೂಪ್ ಕರೆ ಸೌಲಭ್ಯ fb ಲಿ ಇಲ್ಲ ಅಂದ ಗುಂಡ. fb ನಲ್ಲಿ chat ಇದೆ. ಎಷ್ಟು ಜನನ್ನ ಬೇಕಾದ್ರೂ ಅದಕ್ಕೆ ಸೇರಿಸಿಕೊಳ್ಬೋದು. ಗ್ರೂಪ್ chat ಕೂಡ ಮಾಡ್ಬೋದು ಅಂದ ತಿಪ್ಪ. ಆದ್ರೆ ಗ್ರೂಪಲ್ಲಿ ಇರೋರ ಸಂಖ್ಯೆ 250 ದಾಟಿದ್ರೆ chat ತಾನಾಗೇ ನಿಶ್ಕ್ರಿಯ ಆಗುತ್ತೆ. ಗೂ+ ಅಲ್ಲಿ huddle ಅಂತ ಚಾಟ್ ಸೌಲಭ್ಯ ಇದೆ. ಅದು ಆಂಡ್ರಾಯ್ಡ ಮೊಬೈಲುಗಳಿಗೂ ಸಹಕಾರ ನೀಡುತ್ತೆ.fb ನಲ್ಲಿ ಮೊಬೈಲ್ chat ಇಲ್ಲ ಅಂದ ಗುಂಡ. fb ನಲ್ಲಿ ಆಲ್ಬಂ ಗಳಿದೆ. ಫೋಟೋ, ವೀಡಿಯೋ ಗಳನ್ನೆಲ್ಲಾ ಟ್ಯಾಗ್ ಮಾಡ್ಬೋದು. ಹುಟ್ಟಿದಬ್ಬಕ್ಕೆ, ಗೆಳೆಯರ ದಿನಕ್ಕೆ ಉಡುಗೊರೆ ಅನ್ನೋ ತರದ್ದು ಹಲವಾರು app ಗಳಿವೆ. ಯಾರು ಹೆಚ್ಚು ಲೈಕು ಕುಕ್ತಾರೆ, ಯಾರು ಹೆಚ್ಗೆ ಕಮೆಂಟ್ ಮಾಡ್ತಾರೆ ಅನ್ನೋದರ ಮೇಲೆ ಅವರಿಗಿಲ್ಲ ಬೇರೆ ಬೇರೆ ಸ್ಥಾನ ಕೊಡ್ಬೋದು ಗೊತ್ತಾ ಅಂದ ತಿಪ್ಪ. ಆದ್ರೆ ಗೂ+ ನಲ್ಲಿರೋ picassa ಆಲ್ಬಂ ನಷ್ಟು ವೇಗವಾಗಿ ನಿಂ fb ಆಲ್ಬಂ ನೋಡಕಾಗಲ್ಲ ಬಿಡಲೇ ಅಂದ ಗುಂಡ.


ಈಗ ತಿಪ್ಪಂಗೂ ತಡ್ಯಕಾಗ್ಲಿಲ್ಲ. ನಂ fb ನಲ್ಲಿ ಪ್ರಶ್ನೆಗಳಿವೆ, ಪುಟಗಳಿವೆ, ಆಟಗಳಿವೆ. ಇನ್ನೂ ಸುಮಾರು ಇದೆ ಅಂತ ತಿಪ್ಪ ಹೇಳ್ತಿರ್ಬೇಕಿದ್ರೆ cityville ಸೂಪರ್ ಅಂತ ಇಳಾ, farmville ಸೂಪರ್ ಅಂತ ಮಂಜ ಜಗಳ ಶುರು ಹಚ್ಕಂಡ್ರು. ಇದೊಳ್ಳೆ ಜಗಳ ಆಯ್ತಲ್ಲಾ ಅಂತ ಸರು ಗೊಣಗ್ತಿರಬೇಕಾದ್ರೆ ಬಸ್ ಬರ್ರ್ ಅಂದಗಾಯ್ತು. ಎಲ್ರೂ ಅಲ್ಲಿ ನೋಡಿದ್ರೆ ತಂ ಕಾಲೇಜ್ ಬಸ್ಸೇ. ಹರಟ್ತಾ ಕೂತವ್ರಿಗೆ ಸಮಯ ಆಗಿದ್ದೇ ಗೊತ್ತಾಗಿಲ್ಲ. ಬಸ್ ಹಿಡಿಯೋಕಂತ ಎಲ್ರೂ ಎದ್ನೋ ಬಿದ್ನೋ ಅಂತ ಓಡಿದ್ರು. ಯಾರು ಗೆದ್ರು ಅಂತ ಅವ್ರಿಗಂತೂ ನಿರ್ಧಾರ ಮಾಡಕ್ಕಾಗ್ಲಿಲ್ಲ. ನಂಗೂ ಆಗ್ಲಿಲ್ಲ. ಓದಿದ ನಿಮಗೆ ?

ಮಾಹಿತಿ ಮೂಲ: wikipedia.org
ಚಿತ್ರ ಮೂಲ: Google

Thursday, August 4, 2011

Is best really the best ?

When I hear people use words like "Best Friend", "Best Teacher", "Best Book" etc .. I wonder whether best is really the best? Even u may also wonder why I am wondering about it. But may understand it after reading this. Whenever we feel extremely happy at any moment we may say this is the "Best" moment in life. We can even extrend itr by saying that its the "Best" day in my life.. But if on the same day if some thing(s)


won't go in the way we expected, then we may say it is the worst day of my life.how come a day become both Best and worst at the same time? ..

That may be a ambigous question. The future is uncertain. By saying this, I don't mean that we must not enjoy the beautiful moments of present and keep on thinking, planning for the difficulties of future. I am also of the openion
of enjoying the present rather than worrieng about past and fearuing about feature. But what I meant to say is we must not limit ourselves in the achievements/failures of the present. Being awared as "best student" should not mean that he/she can do whatever wrong things from next day.Being the Best runner in a tourney need not mean
that he can be world champion always. It It is only judgement for that moment. A student who is not awarded best may have some better qualities in some other fields. An athlete who won in 200 meters may not be the best sprinter
of 100 meter in the same tourney. So, can we say that Best depends on reactions under circumstances and what we see, hear, know , understand. There may be plenty of things being the "Best" out of these.

Of course all the things in world are relative to some other things, nothing is absolute. After being titled as the "Best Sprinter" , "Fastest man on the earth", Mr Usen Bolt was asked a question about his achievement. He said that his aim was to reach 100 meters in 9.5 seconds. He couldn't achieve this time. Wil try that next time..When a famous painter was asked "which is your Best painting? " . He said "My Next One.." . What we can observe from this is they are no limiting themselves in the success of present. Of course, we need to enjoy it.But should not limit ourselves. Having one friend as "Best" from childhood should not limit ourselves from making, trusting new friends. Who knows, the new friend may grow so close, may understand you in various situations better than your "Best Friend" . . Of course your "Best" Friend also made you give next priority to your previous best and that person too..It continues and must continue. Right? It may apply in many fields of life. Why should 1 think that "I am not best dancer, not best speaker, not best painter.. " etc and stop limiting him from adventuring? Unless you are dare enough and try enough to talk infront of best orater of that time, how can u learn? how can u become Best orator? If u are satisfied with a single book as "Best Book" and wont chnage that mind set, how can enjoy other flavours? Why should we limit ourselves with our narrow mindset..

I am not meaning that those who are at the top, called as "Best" are simply there. Miracles won't happen at night.They/those are there because of their caliber, efforts , qualities in them (it). But it should not mean that, it is permanent.
they are wonderful performers in theier field. But not the best.What I mean is we can always achive in life towards our goal, We can achieve it better than those who were known as Best. Nobody might have guessed that a young man from India, Vishwanathan Anand could ever beat the Best player of a time Garry Kasparov. Its his efforts and determination made him achieve this. Suppose, Anand thought that, he is not at all equal to Best players in chess prior to learning chess itself, then ? .. One more thing is , Why should we compare ourselves with others and feel
bad. It may be better to compare with others to achieve more, get inspiration. But, why should we compare with those known as "Best" and feel bad? Every child is best to his mom. Every Dad is great to his young kid.
So, why compare? Sky is the limit. Compare with yourseleves. If I got 8 this time not nine, compare with yourself.
not with the "Best" who got 9.25 in your class. .There may be other person getting '9.5" in other class.. And who
knows you may get "10" next time, if you keep on trying..

So, After reading this long writing,what you felt? Should we call things as best? or can we call them as "good for the
moment" and enjoy the comapny of it and be open hearted to welcome and compare with things being better that?
Nothing is absolute over the journey of time and over journey of time.. Isn't it?

Tuesday, August 2, 2011

ರದ್ದಾಗೋಗಿದೆ ಗ್ಯಾಸಿನ ಕಾರ್ಡು

ಸುಖಾಸುಮ್ನೆ ನೆಟ್ಟವಗೆ ದುಡ್ಕೊಡಕೆ
ರದ್ದಾಗೋಗಿದೆ ಗ್ಯಾಸಿನ ಕಾರ್ಡು
ಗ್ಯಾಸೆಜೆನ್ಸಿಯವಂದೇ ಹೋಗಿದೆಯಂದ್ರೆ
ಇನ್ನುಳಿದ ನಮ್ಮ ಪಾಡೇನು?
ಅಂತರ್ಜಾಲದಿ ನಂಬರ ನೋಡು
ದಾಖಲೆಯಿದ್ದರೂ ಒದ್ದಾಡು, ಅದ
ಸ್ಕ್ಯಾನ್ ಮಾಡ್ಸಿ ಮಾಡಪ್ಲೋಡು|1|

ಪೇಟೆಲೆಂತೂ ನೆಟ್ಟು ಕಷ್ಟವಲ್ಲ
ಹುಡುಗರ ಕೈಲಿನ ಮೊಬೈಲಲೆಲ್ಲಾ
ನಿಮಿಷಗಳಲೇ ಕೈಗೆಟುಕುವುದಲ್ಲಾ
ಮೂಲೆಯ ಹಳ್ಳಿಯ ಪಾಡೇನು?
ಸರಿ ಕರೆಂಟೇ ಇಲ್ಲ, ನೆಟ್ಟಿನ್ನೆಲ್ಲಿ?
ರದ್ದಾದಿ ಸುದ್ದಿ ತಿಳಿವ ಬಗೆಯೇನು?