Saturday, March 30, 2013

ಅಪ್ಪ

ಜಾತ್ರೆ ಮಧ್ಯೆ ಒಂಟಿ ಭಾವ
ನಿನ್ನ ನೆನದೇ ಕಾಡತಾವ
ಭಾರವಾಗಿ ನೀರ ಕಣ್ಣು
ನಡೆದು ಹಿಂದಿಂದೆ

ತೆನೆದೂಗೋ ಹೊಲದಲ್ಲಿ
ನಳನಳಿಸೋ ಸಸಿ ನಾನು
ಅಳಿಸಿಹೆಯಾ ಮರೆಯಾಗಿ
ಹೊಲವ ತಂದೆ

ಮಾತ ಕಾದೇ ಮೂಕನಾದೆ
ನೀನು ಲೋಕ ದಾಟಿ ಹೋಗೆ
ಬಯ್ಯಲಿದ್ದ ಎಲ್ಲಾ ಒಬ್ಬ
ವಿಧಿಗೆ ಬಲಿಯಾಗೆ

ಏನ ಅರ್ಪಿಸಲೋ ತಂದೆ
ಬಹಳ ಕಾಡುತಿವೆ, ನೆನಪು
ಅನು ದಿನ ನಿಂದೆ..,ಪ್ರತಿ
ಕಂಪನಾ ನಿಂದೆ

4 comments:

  1. ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡ ನನ್ನಂತಹವನಿಗೆ ಅಪ್ಪನು ಇರದ ಬದುಕು ತುಂಬಾ ಚೆನ್ನಾಗಿ ಗೊತ್ತು. ತುಂಬಾ ಭಾವ ತೀವ್ರ ಕವನ.

    ಅಪ್ಪನನ್ನೂ ನೆನೆದು, ನಿಮ್ಮ ಕವನದೇ ಸಾಲು::
    ಭಾರವಾಗಿ ನೀರ ಕಣ್ಣು
    ನಡೆದು ಹಿಂದಿಂದೆ"

    ReplyDelete
  2. ಮೆಚ್ಚುಗೆಗೆ ಧನ್ಯವಾದಗಳು ಬದ್ರಿ ಸರ್ :-)
    ನಾನೂ ಅದೇ ಭಾವದಿಂದ ಬರೆದದ್ದು :-(

    ReplyDelete
  3. ಅಪ್ಪ, ಆಲದ ಮರ ಬೀಳು ಬಿಟ್ಟು ಆಳಕ್ಕೆ ತನ್ನ ಇರುವನ್ನು ಪಸರಿಸಿದ ಹಾಗೆ. ಆವರ ನೆನಪು, ನಮ್ಮ ಜೀವನದ ಮೇಲಿನ ಅವರ ಛಾಪು ಮರೆಯುವಂತದ್ದಲ್ಲ. ಚೆನ್ನಾಗಿ ವಿವರಿಸಿದ್ದೀರ ನಿಮ್ಮ ಮನದ ಭಾವನೆಗಳನ್ನ

    ReplyDelete
    Replies
    1. ಹೌದು ಶ್ರೀಕಾಂತ್ ಜೀ. ನಮ್ಮ ಇಂದಿಗೆ ಅವರ ನಿನ್ನೆಗಳೇ ಕಾರಣ.
      ಧನ್ಯವಾದಗಳು :-)

      Delete