Thursday, November 6, 2014

ಕರ್ನಾಟಕದ ಹೊಯ್ಸಳ ದೇಗುಲಗಳು-೪: ಚೆನ್ನಕೇಶವ ದೇವಸ್ಥಾನ, ತುರುವೇಕೆರೆ

ಅರಳಗುಪ್ಪೆಯ ದೇವಸ್ಥಾನಗಳನ್ನು ನೋಡಿದ ನಂತರ ಅಲ್ಲಿಂದ ತಿಪಟೂರಿಗೆ ಬಂದು ಊಟ ಮಾಡಿ ಅಲ್ಲಿಂದ ತುರುವೇಕೆರೆಗೆ ತೆರಳಿದೆವು. ಅರಳಗುಪ್ಪೆಯಿಂದ ತುರುವೇಕೆರೆಗೆ ೧೧:೩೦, ೧೨:೪೫ ಹೀಗೆ ಪ್ರತೀ ಘಂಟೆಗೊಮ್ಮೆಯಂತೆ ಬಸ್ಸುಗಳಿವೆ. ಬಸ್ ದರ ತಲಾ ೨೨. ಸ್ವಂತ ಗಾಡಿಯಲ್ಲಿ ಹೋಗುವುದಾದರೆ ಅರಲಗುಪ್ಪೆಯಿಂದ ತಿಪಟೂರಿಗೆ ಬರುವ ದಾರಿಯಲ್ಲಿ ಗೊಲ್ಲರಹಟ್ಟಿಯ ನಂತರ ಸಿಗುವ ತುರುವೇಕೆರೆ ಕ್ರಾಸಿನಲ್ಲೇ ಎಡಕ್ಕೆ ತಿರುಗಬಹುದು(ತಿಪಟೂರಿನ ತನಕ ಬರೋ ಅವಶ್ಯಕತೆಯಿಲ್ಲ) . ಗೊಲ್ಲರಹಟ್ಟಿ ಮತ್ತು ಈ ಕ್ರಾಸಿನ ನಂತರ ಸಿಗುವುದು ಕೊಟ್ಟಿಗೆಹಳ್ಳಿ. ಅಂದ್ರೆ ಕೊಟ್ಟಿಗೆಹಳ್ಳಿ ಸಿಕ್ತು ಅಂದ್ರೆ ಕ್ರಾಸಿಗಂತ ಮುಂದೆ ಬಂದಿದ್ದೀರ. ಹಿಂದೆ ಹೋಗಿ ತುರುವೇಕೆರೆಗೆ ಹೋಗಲು ಅಂತ ಅರ್ಥ :-) ಎಡಕ್ಕೆ ಹೋಗದೇ ಬಲಕ್ಕೆ ಹೋದರೆ ಸೀದಾ ತಿಪಟೂರಿಗೆ ಹೋಗುತ್ತಿರ.

 
Infront of the Chennakeshava Temple, Turuvekere
ಈ ದೇವಸ್ಥಾನವನ್ನು ಹೊಯ್ಸಳರಸ ಮುಮ್ಮುಡಿ ನರಸಿಂಹ ೧೨೬೩ರಲ್ಲಿ ಕಟ್ಟಿದನಂತೆ. ಸದ್ಯ ಪುರಾತತ್ವ ಇಲಾಖೆಯ ಸುಪರ್ದಿನಲ್ಲಿರುವ ಈ ದೇಗುಲ ಇಡೀ ದಿನ ತೆಗೆದಿರುವುದಿಲ್ಲ. ಮುಂಜಾನೆ ಇದು ತೆಗೆದಿದ್ದಾಗ ಹೋದರೆ ಚೆಂದ. ಇಲ್ಲದಿದ್ದರೆ ಇದರ ಬಾಗಿಲಲ್ಲಿ ಬರೆದಿರುವ ಅರ್ಚಕರ ನಂಬರಿಗೆ ಫೋನ್ ಮಾಡಿ ಅವರನ್ನು ಕರೆಯಲೂ ಬಹುದು




Sideview of the Chennakeshava temple

Back view of Chennakeshava temple

ಅರಲಗುಪ್ಪೆಯ ಶಿಲ್ಪಗಳಿಗೆ ಹೋಲಿಸಿದರೆ ಇಲ್ಲಿ ಅಷ್ಟೇನೂ ಹೆಚ್ಚು ಶಿಲ್ಪಗಳು ಕಾಣುವುದಿಲ್ಲ. ಆದ್ರೆ ಇಲ್ಲಿನ ಕಂಬಗಳಲ್ಲಿ ಸೂಕ್ಷ್ಮ ಕುಸುರಿ ಕಲೆಯನ್ನು ,ಪ್ರವೇಶದ್ವಾರದಲ್ಲಿ ಹಳಗನ್ನಡ ಶಾಸನಗಳನ್ನು ಕಾಣಬಹುದು. ಇವೇ ಇಲ್ಲಿನ ವೈಶಿಷ್ಟ್ಯ. ಮುಂಚೆಯೆಲ್ಲಾ ತುಂಬಾ ಚೆನ್ನಾಗಿತ್ತಂತೆ ಈ ದೇವಸ್ಥಾನದ ಪ್ರಾಂಗಣ(ಗ್ರಾಮಸ್ಥರಲ್ಲಿ ಕೇಳಿದಂತೆ). ಸದ್ಯಕ್ಕೆ ನಿರ್ವಹಣೆಯಿಲ್ಲದೇ  ಸುತ್ತ ಕಳೆ ಬೆಳೆದಿರುವುದನ್ನು ಕಾಣಬಹುದು :-(


ಇಲ್ಲಿಯವರೆಗೆ ನೋಡಿದ ಹೊಯ್ಸಳ ದೇವಸ್ಥಾನಗಳಂತೆ ಇಲ್ಲಿ ದೇಗುಲಕ್ಕೆ ಕಿಟಕಿಗಳಿಲ್ಲದಿರುವುದೂ ಒಂದು ವೈಶಿಷ್ಟ್ಯ !


Left side view of the Temple


at the entrance of the temple

ದೇಗುಲದ ಬಾಗಿಲಲ್ಲಿರುವ ಶಿಲಾಶಾಸನ
 
Near a temple at the entrance. You can see carvings getting spoilt with time and with mischievous visitors :-(
 
ದೇಗುಲಕ್ಕೆ ಪ್ರವೇಶಿಸಲಿರುವ ತೊಲೆಗಳ ಮೇಲೂ ಶಿಲಾಶಾಸನ. ಇಲ್ಲಿನ ಕಂಬಗಳ ಮೇಲೆ ಉಲ್ಟಾ ಬರೆದಿರುವ ಶಾಸನವೂ ಇದೆ. ಕನ್ನಡಿಯನ್ನು ಹಿಡಿದು ಅದನ್ನೋದಬೇಕು ಅಂತಾರೆ. ಆದ್ರೆ ಇಲ್ಲಿ ಸ್ವಲ್ಪ ಕತ್ತಲೆಯಿರುವುದರಿಂದ ಬ್ಯಾಟ್ರಿ ಮತ್ತು ಕನ್ನಡಿ ತಗೊಂಡು ಹೋದ್ರೆ ಓದಲು ಪ್ರಯತ್ನಿಸಬಹುದು



ಮುಂದಿನ ಭಾಗ: ಗಂಗಾಧರೇಶ್ವರ ದೇವಸ್ಥಾನ, ತುರುವೇಕೆರೆ

1 comment:

  1. ಕೂತಲ್ಲೆ ಹೊಯ್ಸಳ ದರ್ಶನ ಮಾಡ್ಸ್ತಇದ್ದೀಯ.. haha.. thanks!

    ReplyDelete