Thursday, December 8, 2011

ಬೇಸರ

ಬೇಸರವೆ ಬೇಸರಿಸಿ ಹೊಡೆದಾಕಿ ಬೇಸರವ
ಮನದಿ ಉದಯಿಸಿತೊಂದು ನೇಸರನ ಕಿರಣ
ಎಲ್ಲ ಸುಡು,ತಿನ್ನೆಂಬ ಸ್ವಾರ್ಥಾಗ್ನಿ ತಣಿಸಲು
ಮೂಡಿದನೆ ತಾಳ್ಮೆಯ ಮಳೆಯಾಗಿ ವರುಣ|೧|

ಮೋಸ, ದ್ವೇಷ, ಹುಡುಕಿದರೆ
ಹಲದೋಷ ಸರಿಯೆಲ್ಲಿದೆ?
ಬುನಾದಿ ಸರಿಪಡಿಸೊ
ಸಮಯವೇ ಹೆಚ್ಚಾದ್ರೆ
ಮನೆ ಕಟ್ಟಿ ಗುಣನೀಡೋ ಸ್ಥಿತಿಯೆಲ್ಲಿದೆ?|೨|

ನೂರು ಮಾರಿಗಳಂತೆ ದಾರಿಹೋಕರು
ಕಂಡು ಅವಿತಿಟ್ಟ ಭೂತ ಕನ್ನಡಿ ಕಣ್ಣಿಗೆ
ಎಲ್ಲರಲೂ ಸದ್ಗುಣವೆ ಹುಡುಕಿ ಹೊರಡೆವೆನೆನ್ನು
ಬಾಳೆ ಸಕ್ಕರೆಯಂತೆ ಮುತ್ತುವವು ಯಶದಿರುವೆ|೩|

2 comments:

  1. ಚೆನ್ನಾಗಿದ್ದು ಪ್ರಶಸ್ತಿ .

    ReplyDelete
  2. ಧನ್ಯವಾದಗಳು ಕಿರಣಣ್ಣ :-)

    ReplyDelete